ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮದ್ಯಪಾನ ಶಂಕೆ: ಟೇಕ್‌ಆಫ್‌ಗೂ ಮುನ್ನ ಏರ್ ಇಂಡಿಯಾ ವಿಮಾನದಿಂದ ಪೈಲಟ್‌ ಕೆಳಕ್ಕೆ

ಮದ್ಯಪಾನ ಮಾಡಿದ ಶಂಕೆಯ ಹಿನ್ನೆಲೆಯಲ್ಲಿ ಟೇಕ್‌ಆಫ್‌ಗೆ ಕೆಲವೇ ಕ್ಷಣಗಳ ಮುನ್ನ ಏರ್ ಇಂಡಿಯಾ ವಿಮಾನದ ಪೈಲಟ್‌ ಅನ್ನು ಕೆನಡಾದ ವ್ಯಾಂಕೂವರ್‌ನಲ್ಲಿ ವಿಮಾನದಿಂದ ಕೆಳಗಿಳಿಸಿದ ಘಟನೆ ನಡೆದಿದೆ. ಡಿಸೆಂಬರ್ 23ರಂದು ಈ ಘಟನೆ ನಡೆದಿದ್ದು, AI186 ವಿಮಾನದ ಪೈಲಟ್‌ನಿಂದ ಮದ್ಯದ ವಾಸನೆ ಬರುತ್ತಿದೆ ಎಂಬ ಮಾಹಿತಿ ಲಭಿಸಿದ ಬಳಿಕ ಕೆನಡಾ ವಿಮಾನಯಾನ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಒಟ್ಟಾವ, ಜ. 1: ಮದ್ಯಪಾನ ಮಾಡಿದ ಶಂಕೆ ಹಿನ್ನೆಲೆಯಲ್ಲಿ ಟೇಕ್‌ಆಫ್‌ಗೆ ಕೆಲವ ಕ್ಷಣಗಳ ಮುಂಚೆ ಏರ್ ಇಂಡಿಯಾ (Air India) ಪೈಲಟ್‌ನನ್ನು ವಿಮಾನದಿಂದ ಕೆಳಗೆ ಇಳಿಸಿದ ಘಟನೆ ಕೆನಾಡ (Canada)ದ ವ್ಯಾಂಕೂವರ್‌ (Vancouver)ನಲ್ಲಿ ನಡೆದಿದೆ. ಡಿಸೆಂಬರ್ 23ರಂದು ಈ ಘಟನೆ ನಡೆದಿದ್ದು, AI186 ಏರ್ ಇಂಡಿಯಾ ವಿಮಾನದ ಪೈಲಟ್‌ ಬಾಯಿಯಿಂದ ಮದ್ಯದ ವಾಸನೆ ಬಂರುತ್ತಿದೆ ಎಂಬ ಮಾಹಿತಿ ಪಡೆಯುತ್ತಿದ್ದಂತೆ ವಿಮಾನಯಾನ ಸಂಸ್ಥೆ ಈ ಕ್ರಮ ಕೈಗೊಂಡಿದೆ. ಕೆನಡ ವಿಮಾನಯಾನ ಅಧಿಕಾರಿಗಳು ಟೇಕ್‌ಆಫ್‌ಗೂ ಮುನ್ನ ಪೈಲಟ್‌ನನ್ನು ವಿಮಾನದಿಂದ ಕೆಳಗಿಳಿಸಲಾಗಿದೆ. ಇದರಿಂದಾಗಿ ದೆಹಲಿಗೆ ತೆರಳಬೇಕಿದ್ದ ವಿಮಾನವು ವಿಳಂಬವಾಗಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.

ಏರ್ ಇಂಡಿಯಾ ಮಾಹಿತಿ ಪ್ರಕಾರ, “ಮದ್ಯದ ವಾಸನೆ” ಬಂದ ಹಿನ್ನೆಲೆ ಪೈಲಟ್‌ನನ್ನು ವಿಮಾನದಿಂದ ಇಳಿಸಲಾಯಿತು. ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸಿದ್ದು, ಏರ್ ಇಂಡಿಯಾದಿಂದಲೂ ಆಂತರಿಕ ತನಿಖೆ ಆರಂಭವಾಗಿದೆ. ಕೆನಡ ಅಧಿಕಾರಿಗಳು ವಿಶೇಷವಾಗಿ ಪೈಲಟ್‌ಗಳು ಸುರಕ್ಷಿತವಾಗಿ ಕರ್ತವ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಅವರನ್ನು ಹೆಚ್ಚಿನ ವಿಚಾರಣೆಗೆ ಕರೆದೊಯ್ಯಲಾಗಿದೆ.

“ಸುರಕ್ಷತಾ ನಿಯಮಾವಳಿಗಳ ಪ್ರಕಾರ, ವಿಮಾನವನ್ನು ನಡೆಸಲು ಪರ್ಯಾಯ ಪೈಲಟ್‌ರನ್ನು ನಿಯೋಜಿಸಲಾಯಿತು. ಬೇರೆ ಪೈಲಟ್‌ನನ್ನು ಗುರುತಿಸಿ ನಿಯೋಜಿಸುವ ಪ್ರಕ್ರಿಯೆಗೆ ಸಮಯ ತಗುಲಿದ್ದರಿಂದ ವಿಮಾನ ವಿಳಂಬವಾಗಿ ಹಾರಾಟ ಆರಂಭಿಸಿತು" ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಯ ನಡುವೆಯೂ, ಟೇಕ್‌ಆಫ್‌ಗೆ ಮುನ್ನ ಎಲ್ಲ ಸುರಕ್ಷತಾ ಮಾನದಂಡಗಳು ಕೈಗೊಳ್ಳಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮಗಳು ಅಗತ್ಯವಾಗಿದ್ದವು ಎಂದು ಏರ್ ಇಂಡಿಯಾ ಪುನರುಚ್ಚರಿಸಿದೆ.

ಹೊಸ ವರ್ಷದ ಸಂಭ್ರಮದಲ್ಲಿದ್ದಾಗಲೇ ಸ್ವಿಸ್ ಬಾರ್‌ನಲ್ಲಿ ಭಾರೀ ಸ್ಫೋಟ

“ವಿಮಾನ ಟೇಕ್ ಆಫ್ ವಿಳಂಬದಿಂದಾಗಿ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಏರ್ ಇಂಡಿಯಾ ವಿಷಾದ ವ್ಯಕ್ತಪಡಿಸುತ್ತದೆ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ” ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ವಿಳಂಬದ ಅವಧಿಯಲ್ಲಿ ಪ್ರಯಾಣಿಕರಿಗೆ ಉಪಹಾರ ಮತ್ತು ಅಗತ್ಯ ಸೌಕರ್ಯ ಒದಗಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಸುಖಕರ ಪ್ರಯಾಣವೇ ನಮ್ಮ ಮೊದಲ ಆದ್ಯತೆ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.

ಅಲ್ಲದೇ ಸ್ಯಾಂಪಲ್‌ ಪರೀಕ್ಷೆಯ ಫಲಿತಾಂಶ ಬರುವವರೆಗೆ, ಆ ಪೈಲಟ್‌ನನ್ನು ವಿಮಾನ ಹಾರಾಟ ಕರ್ತವ್ಯಗಳಿಂದ ಅಮಾನತು ಮಾಡಲಾಗಿದೆ. ಯಾವುದೇ ನಿಯಮಗಳು ಉಲ್ಲಂಘನೆಗೆ ಏರ್ ಇಂಡಿಯಾ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತದೆ. ನಿಯಮ ಉಲ್ಲಂಘನೆ ದೃಢಪಟ್ಟರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಏರ್ ಇಂಡಿಯಾ ಭರವಸೆ ನೀಡಿದೆ. "ಯಾವುದೇ ಸಂದರ್ಭಗಳಲ್ಲೂ ಸುರಕ್ಷತೆಯೇ ಏರ್ ಇಂಡಿಯಾದ ಮೊದಲ ಆದ್ಯತೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಹಾಗೂ ಅಗತ್ಯವಿದ್ದರೆ ಆಂತರಿಕ ಕ್ರಮಗಳನ್ನು ಮರು ಪರಿಶೀಲಿಸಲಾಗುತ್ತದೆ ಮತ್ತು ಪ್ರಯಾಣಿಕರ ವಿಶ್ವಾಸವನ್ನು ಕಾಯ್ದುಕೊಳ್ಳಲಾಗುತ್ತದೆ" ಸಂಸ್ಥೆ ತಿಳಿಸಿದೆ.