ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿದೇಶ

ಕದನ ವಿರಾಮ ಘೋಷಣೆಯ ಕೆಲವೇ ಗಂಟೆಗಳಲ್ಲಿ ಹೊರ್ಮುಜ್‌ನಿಂದ ಭಾರತದತ್ತ ಹೊರಟ ಹಡಗಿನ ಮೇಲೆ ಮತ್ತೆ ಇರಾನ್ ದಾಳಿ

ಹೊರ್ಮುಜ್‌ನಲ್ಲಿ 2 ಹಡಗುಗಳ ಮೇಲೆ ಇರಾನ್ ದಾಳಿ

Iran attacks two ships: ಪಾಕಿಸ್ತಾನದಲ್ಲಿ ಯೋಜಿತ ಕದನ ವಿರಾಮ ಮಾತುಕತೆಗಳು ವಿಫಲವಾದ ಕಾರಣ, ಹೊರ್ಮುಜ್ ಜಲಸಂಧಿಯಲ್ಲಿ ಇರಾನ್, ಎರಡು ಕಂಟೇನರ್ ಹಡಗುಗಳ ಮೇಲೆ ಗುಂಡು ಹಾರಿಸಿದೆ. ಈ ಹಡಗುಗಳ ಪೈಕಿ ಗುಜರಾತ್‌ನತ್ತ ತೆರಳುತ್ತಿತ್ತು ಎನ್ನಲಾಗಿದೆ. ಈ ಕ್ರಮವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್–ಅಮೆರಿಕ ನಡುವೆ ಇರುವ ಕದನ ವಿರಾಮವನ್ನು ಅನಿರ್ದಿಷ್ಟವಾಗಿ ವಿಸ್ತರಿಸಿರುವ ಕೆಲವೇ ಗಂಟೆಗಳ ನಂತರ ನಡೆದಿದೆ.

“ಅಮೆರಿಕ ಪರ ಒಲವು”: ಪಾಕಿಸ್ತಾನದ ಡಬಲ್ ಗೇಮ್‌ ಖಂಡಿಸಿದ ಇರಾನ್

ಪಾಕಿಸ್ತಾನದ ಡಬಲ್ ಗೇಮ್‌ ಖಂಡಿಸಿದ ಇರಾನ್

Iran criticizes Pakistan: ಅಮೆರಿಕ-ಇರಾನ್ ಸಂಘರ್ಷದಲ್ಲಿ ಪಾಕಿಸ್ತಾನದ ಮಧ್ಯವರ್ತಿ ಪಾತ್ರದ ಮೇಲೆ ಇರಾನ್ ಗರಂ ಆಗಿದೆ. ಇರಾನ್ ಸರ್ಕಾರ ನಿಯಂತ್ರಿತ ದೂರದರ್ಶನವು, ಪಾಕಿಸ್ತಾನದ ಡಬಲ್ ಗೇಮ್ ಆಟದ ವಿರುದ್ಧ ನೇರ ದಾಳಿ ನಡೆಸಿದೆ. ಇಸ್ಲಾಮಾಬಾದ್‌ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ, ಅದರ ನಡೆಯನ್ನು ಪ್ರಶ್ನಿಸಿದೆ.

ಬಾಲಿಯ ರೆಸಾರ್ಟ್‌ನಲ್ಲಿ ಕದ್ದು ಮಾಡಿ ಸಿಕ್ಕಿಬಿದ್ದ ಭಾರತೀಯ ಪ್ರವಾಸಿಗರು: ವಿದೇಶದಲ್ಲಿ ನಮ್ಮ ದೇಶದ ಮಾನ ಹರಾಜು ಹಾಕಿದವರ ವಿರುದ್ಧ ನೆಟ್ಟಿಗರು ಕಿಡಿ

ಬಾಲಿ ರೆಸಾರ್ಟ್‌ನಿಂದ ಭಾರತೀಯ ಪ್ರವಾಸಿಗರಿಂದ ಕಳ್ಳತನ: ನೆಟ್ಟಿಗರು ಕಿಡಿಕಿಡಿ

Viral Video: ಭಾರತವು ಆತಿಥ್ಯಕ್ಕೆ ಹೆಸರುವಾಸಿಯಾಗಿದ್ದರೂ ಕೆಲವೊಂದು ವ್ಯಕ್ತಿಗಳ ಸಾರ್ವಜನಿಕ ಸ್ಥಳದ ಅಸಭ್ಯ ವರ್ತನೆ ಭಾರತದ ಹೆಸರನ್ನೇ ಹಾಳುಗೆಡುವುವಂತೆ ಮಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬಾಲಿ ರೆಸಾರ್ಟ್‌ನಲ್ಲಿ ಭಾರತೀಯ ಪ್ರವಾಸಿಗರ ಗುಂಪೊಂದು ಕಳವು ಮಾಡಿರುವ ಘಟನೆ ನಡೆದಿದೆ. ರೆಸಾರ್ಟ್‌ ಸಿಬ್ಬಂದಿ ನಡೆಸಿದ ಪರಿಶೀಲನೆ ನಡೆಸಿದ ವೇಳೆ ಈ ವೇಳೆ ಇದು ಬೆಳಕಿಗೆ ಬಂದಿದೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ.

ಶಾಂತಿ ಮಾತುಕತೆ ಇರಾನ್ ಅಸಹಕಾರ: ಇಸ್ಲಾಮಾಬಾದ್ ಪ್ರವಾಸ ಮುಂದೂಡಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್

ಶಾಂತಿ ಮಾತುಕತೆಗೆ ಬ್ರೇಕ್: ಅಮೆರಿಕ–ಇರಾನ್ ಉದ್ವಿಗ್ನತೆ ಮತ್ತಷ್ಟು ತೀವ್ರ

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ತಗ್ಗಿಸಲು ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಶಾಂತಿ ಮಾತುಕತೆ ಅನಿಶ್ಚಿತವಾಗಿ ಮುಂದುವರಿದಿದೆ. ಇರಾನ್ ಸ್ಪಷ್ಟ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಇಸ್ಲಾಮಾಬಾದ್ ಪ್ರವಾಸ ಮುಂದೂಡಲಾಗಿದೆ. ಅಮೆರಿಕದ ನಿಲುವನ್ನು ಇರಾನ್ ಟೀಕಿಸಿದ್ದು, ಹೊರ್ಮುಜ್ ಜಲಸಂಧಿಯ ನೌಕಾ ಚಟುವಟಿಕೆಗಳನ್ನು ಗಂಭೀರವಾಗಿ ವಿರೋಧಿಸಿದೆ. ಗಡುವು ಸಮೀಪಿಸುತ್ತಿದ್ದರೂ ಮಾತುಕತೆ ಸ್ಪಷ್ಟತೆ ಇಲ್ಲದಿರುವುದು ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ಹೊರ್ಮುಜ್ ಜಲಸಂಧಿ ಮತ್ತೆ ತೆರೆಯುವ ಬಗ್ಗೆ ಮಾತುಕತೆ; ಇಂಗ್ಲೆಂಡ್‌-ಫ್ರಾನ್ಸ್ ನೇತೃತ್ವದಲ್ಲಿ 30ಕ್ಕೂ ಹೆಚ್ಚು ದೇಶಗಳಿಂದ ಸಭೆ

ಹೊರ್ಮುಜ್ ಜಲಸಂಧಿ ಮತ್ತೆ ತೆರೆಯುವ ಬಗ್ಗೆ ಮಾತುಕತೆ

Strait of Hormuz: ಹೊರ್ಮುಜ್ ಜಲಸಂಧಿಯಲ್ಲಿ ನೌಕಾಯಾನವನ್ನು ಸುರಕ್ಷಿತವಾಗಿಸಲು ಬ್ರಿಟನ್ ಮತ್ತು ಫ್ರಾನ್ಸ್ ನೇತೃತ್ವದ ಅಂತಾರಾಷ್ಟ್ರೀಯ ಮಿಷನ್‌ಗೆ ಸೇರುವ ಸಿದ್ಧತೆ ನಡೆಸುತ್ತಿದ್ದೇವೆ ಎಂದು ಕಳೆದ ವಾರವೇ ಹನ್ನೆರಡಕ್ಕೂ ಹೆಚ್ಚು ದೇಶಗಳು ತಿಳಿಸಿವೆ. ವಾಷಿಂಗ್ಟನ್‌ಗೆ ಸಂದೇಶ ಕಳುಹಿಸುವ ಉದ್ದೇಶದಿಂದ ಈ ಸಭೆ ಆಯೋಜಿಸಲಾಗಿದೆ ಎನ್ನಲಾಗಿದೆ.

US- Iran war ceasefire: ಕದನವಿರಾಮ ವಿಸ್ತರಿಸಿದ ‌ಡೊನಾಲ್ಡ್ ಟ್ರಂಪ್‌, ಹೊರ್ಮುಜ್‌ ದಿಗ್ಬಂಧನ ಮುಂದುವರಿಕೆ

ಕದನವಿರಾಮ ವಿಸ್ತರಿಸಿದ ಟ್ರಂಪ್‌, ಹೊರ್ಮುಜ್ ದಿಗ್ಬಂಧನ ಮುಂದುವರಿಕೆ

ಮೊದಲಿಗೆ ಎರಡು ವಾರಗಳ ಕಾಲ ಇರಬೇಕಿದ್ದ ಈ ಯುದ್ಧ ವಿರಾಮದ ಅವಧಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನಿರ್ದಿಷ್ಟವಾಗಿ ಮುಂದೂಡಿದರು. ಆದರೆ, ಇರಾನ್‌ನ ಬಂದರುಗಳ ಮೇಲೆ ಅಮೆರಿಕ ಹೇರಿದ ನಿರ್ಬಂಧ (blockade) ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ಅಮೆರಿಕ-ಇರಾನ್ ಕದನ ವಿರಾಮ ನಾಳೆಗೆ ಅಂತ್ಯ: ಡೊನಾಲ್ಡ್‌ ಟ್ರಂಪ್ ಗಡುವು ವಿಸ್ತರಿಸುವರೇ ಅಥವಾ ಬಾಂಬ್ ಮಳೆ ಸುರಿಸುವರೇ? ಆತಂಕದಲ್ಲಿ ಜಗತ್ತು

ಅಮೆರಿಕ-ಇರಾನ್ ಕದನ ವಿರಾಮಕ್ಕೆ ನಾಳೆ ಅಂತ್ಯ; ಮುಂದೇನಾಗಲಿದೆ?

ಅಮೆರಿಕ-ಇರಾನ್ ಕದನ ವಿರಾಮವು ಏಪ್ರಿಲ್ 22ಕ್ಕೆ ಅಂದರೆ ನಾಳೆ ಅಂತ್ಯಗೊಳ್ಳಲಿದ್ದು, ಟ್ರಂಪ್ ಗಡುವು ವಿಸ್ತರಿಸುವ ಬದಲು ಬಾಂಬ್ ದಾಳಿ ಪುನರಾರಂಭಿಸುವ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆ ಜಾಗತಿಕ ರಾಜಕೀಯದ ಗಮನ ಸೆಳೆದಿದೆ.

Russian Circus: ಸರ್ಕಸ್‌ ಪ್ರದರ್ಶನದ ವೇಳೆ ಭಯಾನಕ ಘಟನೆ: ಪ್ರೇಕ್ಷಕರತ್ತ ಜಿಗಿದ ಹುಲಿ

ಸರ್ಕಸ್‌ ಪ್ರದರ್ಶನದ ವೇಳೆ ಪ್ರೇಕ್ಷಕರತ್ತ ಜಿಗಿದ ಹುಲಿ: ವಿಡಿಯೊ ವೈರಲ್‌

Viral Video: ರಷ್ಯಾದಲ್ಲಿ ನಡೆದ ಸರ್ಕಸ್ ಪ್ರದರ್ಶನದ ವೇಳೆ ಹುಲಿಯೊಂದು ಪ್ರೇಕ್ಷಕರತ್ತ ಜಿಗಿದ್ದಿದ್ದು ಜನರು ಭಯದಿಂದ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ‌. ಸದ್ಯ ಈ ಘಟನೆಯು ಸರ್ಕಸ್ ಸುರಕ್ಷತಾ ಮಾನದಂಡ ಮತ್ತು ಮನರಂಜನೆಯಲ್ಲಿ ಕಾಡು ಪ್ರಾಣಿಗಳ ಬಳಕೆಯ ಕುರಿತು ತೀವ್ರ ಚರ್ಚೆ ಹುಟ್ಟುಹಾಕಿದೆ.

ಹಾರ್ಮೊಜ್‌ನಲ್ಲಿ ಅಮೆರಿಕ ನೌಕಾ ದಿಗ್ಬಂಧನ: ಹಡಗುಗಳಿಗೆ ಗುಂಡಿನ ಎಚ್ಚರಿಕೆ ನೀಡುತ್ತಿರುವ ವಿಡಿಯೋ ಬಿಡುಗಡೆ

ಇರಾನ್ ಸುತ್ತ ಅಮೆರಿಕ ಕಠಿಣ ದಿಗ್ಬಂಧನ: ಹಡಗುಗಳ ಮೇಲೆ ಕಣ್ಗಾವಲು

ಅಮೆರಿಕವು ಇರಾನ್ ಸುತ್ತ ನೌಕಾ ದಿಗ್ಬಂಧನವನ್ನು ಇನ್ನಷ್ಟು ಕಠಿಣಗೊಳಿಸಿ, ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ಸರಕು ನೌಕೆಗಳಿಗೆ ಮೆಷಿನ್ ಗನ್ ತೋರಿಸಿ ಎಚ್ಚರಿಕೆ ನೀಡುತ್ತಿದೆ. ಅಮೆರಿಕದ ಸೆಂಟ್ರಲ್ ಕಮಾಂಡ್ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಹೆಲಿಕಾಪ್ಟರ್‌ನಿಂದ ಹಡಗುಗಳನ್ನು ತಪಾಸಣೆ ಮಾಡುವ ದೃಶ್ಯಗಳು ಕಾಣಿಸಿಕೊಂಡಿವೆ.

ಜರ್ಮನಿಯ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ; 11 ಜನರಿಗೆ ಗಂಭೀರ ಗಾಯ

ಜರ್ಮನಿಯ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ

ಜರ್ಮನಿಯ ಮೋರ್ಸ್ ನಗರದ ಡ್ಯೂಸ್‌ಬರ್ಗ್ ಪ್ರದೇಶದ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ ಭುಗಿಲೆದ್ದ ಪರಿಣಾಮ 11 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಧಾರ್ಮಿಕ ಆವರಣದೊಳಗೆ ತೆಗೆದಿದ್ದಾರೆ ಎನ್ನಲಾದ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಗುರುದ್ವಾರದ ಹಣಕಾಸು ಮತ್ತು ನಿರ್ವಹಣೆಯ ವಿವಾದಗಳಿಂದ ಘರ್ಷಣೆ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಆ್ಯಪಲ್ ಕಂಪನಿಯ ಹೊಸ ಸಿಇಒ ಆಗಿ ಜಾನ್ ಟೆರ್ನಸ್  ನೇಮಕ; ಯಾರಿವರು ಹಿನ್ನೆಲೆಯೇನು?

ಆ್ಯಪಲ್ ಕಂಪನಿಯ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ

ಟೆಕ್ ದೈತ್ಯ ಆ್ಯಪಲ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿಮ್ ಕುಕ್ ಸೆಪ್ಟೆಂಬರ್‌ನಲ್ಲಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದು ಘೋಷಿಸಿದ ಬಳಿಕ ಕಂಪನಿ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ಅವರನ್ನು ನೇಮಕ ಮಾಡಿದೆ. 2011 ರಿಂದ ಆ್ಯಪಲ್ ಅನ್ನು ಮುನ್ನಡೆಸುತ್ತಿರುವ ಟಿಮ್ ಕುಕ್ ಸೆಪ್ಟೆಂಬರ್ 1 ರಂದು ಸಿಇಒ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.

ಟೆಕ್‌ ದೈತ್ಯ ಆ್ಯಪಲ್ ಸಿಇಒ ಹುದ್ದೆಯಿಂದ ಕೆಳಗಿಳಿಯಲಿರುವ ಟಿಮ್ ಕುಕ್! ಅಧಿಕಾರ ಹಸ್ತಾಂತರ ಯಾರಿಗೆ?

ಆ್ಯಪಲ್ ಸಿಇಒ ಹುದ್ದೆಯಿಂದ ಕೆಳಗಿಳಿಯಲಿರುವ ಟಿಮ್ ಕುಕ್

Apple CEO Tim Cook: ಟೆಕ್ ದೈತ್ಯ ಆ್ಯಪಲ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿಮ್ ಕುಕ್ ಸೆಪ್ಟೆಂಬರ್‌ನಲ್ಲಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಇನ್ನು ಜಾನ್ ಟೆರ್ನಸ್ ಅವರಿಗೆ ಉನ್ನತ ಹುದ್ದೆಯನ್ನು ಹಸ್ತಾಂತರಿಸಿದೆ.

ಕದನ ವಿರಾಮ ಮಾತುಕತೆಯಲ್ಲಿ ಪ್ರಗತಿಯಾದರೆ ಇರಾನ್ ನಾಯಕರನ್ನು ಭೇಟಿ ಮಾಡುತ್ತೇನೆ ಎಂದ ಡೊನಾಲ್ಡ್ ಟ್ರಂಪ್

ಇರಾನ್ ನಾಯಕರ ಭೇಟಿಯಾಗುವ ಇಚ್ಛೆ ಇದೆ ಎಂದ ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ನಾಯಕರನ್ನು ಭೇಟಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿದರು. ಇಲ್ಲಿ ಯಾವುದೇ ರೀತಿಯ ಆಟ ನಡೆಯುತ್ತಿಲ್ಲ. ಕದನ ವಿರಾಮ ಮಾತುಕತೆಯಲ್ಲಿ ಪ್ರಗತಿ ಕಂಡು ಬಂದರೆ ಡೊನಾಲ್ಡ್ ಟ್ರಂಪ್ ಅವರು ಇರಾನ್ ನಾಯಕರನ್ನು ಮುಖಾಮುಖಿಯಾಗಿ ಭೇಟಿಯಾಗುವುದಾಗಿ ತಿಳಿಸಿದ್ದಾರೆ.

20ನೇ ಮಹಡಿಯಿಂದ ಜಿಗಿಯಲು ಯತ್ನಿಸಿದ ಯುವತಿಯನ್ನು ಅತ್ಯಂತ ಸಾಹಸಿಕವಾಗಿ ರಕ್ಷಿಸಿದ ಸಾರ್ವಜನಿಕರು; ರೋಚಕ ವಿಡಿಯೊ ವೈರಲ್‌

20ನೇ ಮಹಡಿಯಿಂದ ಜಿಗಿಯಲು ಯತ್ನಿಸಿದ ಯುವತಿ; ಕೊನೆಗೆ ಆಗಿದ್ದೇ ಪವಾಡ

Viral Video: ಯುವತಿಯೊಬ್ಬಳು 20ನೇ ಮಹಡಿಯ ಕಟ್ಟಡದಿಂದ ಜಿಗಿಯಲು ಮುಂದಾದ ಘಟನೆಯೊಂದು ನಡೆದಿದೆ. ಈ ಸಮಯದಲ್ಲಿ ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ರಕ್ಷಿಸಲಾಗಿದೆ. ಈ ಭಯಾನಕ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಭಾರತ ಚಾಣಕ್ಯ ನಡೆ: ಆರ್ಥಿಕ ಸಂಬಂಧ ವೃದ್ಧಿಗೆ ದಕ್ಷಿಣ ಕೊರಿಯಾದೊಂದಿಗೆ ಮಾತುಕತೆ

ಭಾರತ–ದಕ್ಷಿಣ ಕೊರಿಯಾ ಆರ್ಥಿಕ ಸಹಕಾರಕ್ಕೆ ಹೊಸ ದಿಕ್ಕು

ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಜೇ ಮ್ಯುಂಗ್ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದು, ಉಭಯ ದೇಶಗಳ ನಡುವಿನ ಆರ್ಥಿಕ ಮತ್ತು ವಾಣಿಜ್ಯ ಸಹಕಾರವನ್ನು ವಿಸ್ತರಿಸುವತ್ತ ಗಮನ ಹರಿಸಲಿದ್ದಾರೆ. ಎಂಟು ವರ್ಷಗಳ ನಂತರ ನಡೆಯುತ್ತಿರುವ ಈ ಭೇಟಿ ಮಹತ್ವ ಪಡೆದಿದೆ. ದ್ವಿಪಕ್ಷೀಯ ವ್ಯಾಪಾರವನ್ನು 2030ರೊಳಗೆ 50 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಹಡಗು ನಿರ್ಮಾಣ, ಕೃತಕ ಬುದ್ಧಿಮತ್ತೆ, ಹಣಕಾಸು ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವ ಸಾಧ್ಯತೆಗಳಿವೆ. ಮಧ್ಯಪ್ರಾಚ್ಯದ ಅಸ್ಥಿರತೆಯ ಹಿನ್ನೆಲೆಯಲ್ಲಿ ಭಾರತದಿಂದ ನ್ಯಾಫ್ತಾ ಪೂರೈಕೆಯನ್ನು ಹೆಚ್ಚಿಸಲು ಕೊರಿಯಾ ಕೋರಿದೆ.

ಅಮೆರಿಕ ದಿಗ್ಬಂಧನದಿಂದ ಇರಾನ್ ಮಾತುಕತೆಗೆ ಬರೋದಿಲ್ಲ ಎಂದ ಪಾಕಿಸ್ತಾನ

ಕದನ ವಿರಾಮ ಮಾತುಕತೆಗೆ ಇರಾನ್ ಬರೋದಿಲ್ಲ ಎಂದ ಪಾಕಿಸ್ತಾನ

ಕದನ ವಿರಾಮ ಮಾತುಕತೆಗೆ ಇರಾನ್ ಬರುವುದಿಲ್ಲ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಿಳಿಸಿದ್ದಾರೆ. ದೂರವಾಣಿ ಮೂಲಕ ಮಾತನಾಡಿರುವ ಅವರು, ಇರಾನ್ ಬಂದರುಗಳ ಮೇಲೆ ಅಮೆರಿಕ ವಿಧಿಸಿರುವ ದಿಗ್ಬಂಧನವು ಮಾತುಕತೆಗೆ ಅಡ್ಡಿಯಾಗಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಭಯೋತ್ಪಾದನಾ ವಿರುದ್ಧದ ತನಿಖೆಯಲ್ಲಿ ಮಹತ್ವದ ಪ್ರಗತಿ: ಪ್ರಮುಖ ಲಷ್ಕರ್ ಉಗ್ರ ಹ್ಯಾರಿಸ್ ಸೌದಿ ಅರೇಬಿಯಾದಲ್ಲಿ ಪತ್ತೆ

ಲಷ್ಕರ್ ಭಯೋತ್ಪಾದಕ ಹ್ಯಾರಿಸ್ ಸೌದಿ ಅರೇಬಿಯಾದಲ್ಲಿ ಪತ್ತೆ

Terror Probe: ಜಮ್ಮು ಮತ್ತು ಕಾಶ್ಮೀರ ಪೊಲೀಸರ ನೇತೃತ್ವದಲ್ಲಿ ನಡೆಯುತ್ತಿರುವ ಬಹು-ರಾಜ್ಯ ಭಯೋತ್ಪಾದನಾ ತನಿಖೆಯಲ್ಲಿ ಪ್ರಮುಖ ಪ್ರಗತಿಯನ್ನು ಸಾಧಿಸಲಾಗಿದೆ. ಸೌದಿ ಅರೇಬಿಯಾದಲ್ಲಿ ಪ್ರಮುಖ ಲಷ್ಕರ್-ಎ-ತೈಬಾ ಉಗ್ರ ಉಮರ್ ಹ್ಯಾರಿಸ್‌ನನ್ನು ಪತ್ತೆಹಚ್ಚಲಾಗಿದೆ. ಈತನನ್ನು ಖರ್ಗೋಶ್ ಎಂದೂ ಕರೆಯುತ್ತಾರೆ.

ಅಮೆರಿಕದೊಂದಿಗಿನ ಮಾತುಕತೆಯಿಂದ ಹಿಂದೆ ಸರಿದ ಇರಾನ್: ಶಾಂತಿ ಒಪ್ಪಂದದ ಕಥೆಯೇನು?

ಅಮೆರಿಕದೊಂದಿಗಿನ ಮಾತುಕತೆಯಿಂದ ಹಿಂದೆ ಸರಿದ ಇರಾನ್

Iran withdraws US talks: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಂಡ ಎರಡನೇ ಸುತ್ತಿನ ಮಾತುಕತೆಗಾಗಿ ಪಾಕಿಸ್ತಾನಕ್ಕೆ ತೆರಳುತ್ತಿದೆ ಎಂದು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಇರಾನ್ ಆ ಮಾತುಕತೆಗಳಿಂದ ಹಿಂದೆ ಸರಿದಿದೆ. ಈ ನಡುವೆ ಮಧ್ಯವರ್ತಿ ಪಾತ್ರ ವಹಿಸಲು ಉತ್ಸುಕವಾಗಿರುವ ಪಾಕಿಸ್ತಾನವು ಸಿದ್ಧತೆಗಳನ್ನು ತೀವ್ರಗೊಳಿಸಿದೆ.

ಹೊರ್ಮುಜ್‌ನಲ್ಲಿ ಭಾರತೀಯ ಹಡಗುಗಳ ಮೇಲೆ ಇರಾನ್ ಪಡೆಗಳಿಂದ ದಾಳಿ: ಆತಂಕದ ನಡುವೆಯೂ ಜಲಸಂಧಿ ದಾಟಿದ ನಮ್ಮ ದೇಶದ 'ದೇಶ್ ಗರಿಮಾ' ನೌಕೆ

ಹೊರ್ಮುಜ್ ಜಲಸಂಧಿ ದಾಟಿದ ಭಾರತದ ಹಡಗು

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಯುದ್ಧೋನ್ಮಾದದ ನಡುವೆ ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ಪಡೆಗಳು ಭಾರತೀಯ ವ್ಯಾಪಾರಿ ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆಯೂ ‘ದೇಶ್ ಗರಿಮಾ’ ಎಂಬ ದೇಶದ ತೈಲ ಟ್ಯಾಂಕರ್ ಯಾವುದೇ ಅಡಚಣೆ ಇಲ್ಲದೆ ಸುರಕ್ಷಿತವಾಗಿ ಜಲಸಂಧಿ ದಾಟಿ ಭಾರತದತ್ತ ಹೊರಟಿದೆ. ಜಾಗತಿಕ ತೈಲ ಸಾಗಣೆಗೆ ಪ್ರಮುಖ ಮಾರ್ಗವಾದ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿರುವುದು ಇಂಧನ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತಿದೆ.

ಹೊರ್ಮುಜ್‌ ಜಲಸಂಧಿಯಲ್ಲಿ ಇರಾನ್‌ನಿಂದ ಗುಂಡಿನ ದಾಳಿ ಬಳಿಕ ಭಾರತೀಯ ಹಡಗುಗಳಿಗೆ ಹೊಸ ಸೂಚನೆ

ಹೊರ್ಮುಜ್‌ನಲ್ಲಿ ಹಡಗುಗಳ ಭದ್ರತೆಗೆ ಹೆಚ್ಚಿನ ಆದ್ಯತೆ

ಅನುಮತಿ ಪಡೆದು ಹೊರ್ಮುಜ್‌ನಲ್ಲಿ ಜಲಸಂಧಿ ದಾಟುತ್ತಿದ್ದ ಎರಡು ಭಾರತೀಯ ಹಡಗುಗಳ ಮೇಲೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ದಾಳಿ ನಡೆಸಿದ ಮೇಲೆ ಈಗ ಅದೇ ಹಡಗುಗಳಿಗೆ ಹೊಸ ಸೂಚನೆಯನ್ನು ಭಾರತ ನೀಡಿದೆ. ಹೊರ್ಮುಜ್‌ನಲ್ಲಿ ಹಡಗುಗಳ ಹೆಚ್ಚಿನ ಭದ್ರತೆಗೆ ಭಾರತೀಯ ನೌಕಾಪಡೆ ಆದ್ಯತೆ ನೀಡುತ್ತಿದೆ.

ಜಪಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ

ಜಪಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ

earthquake in Japan: ಜಪಾನ್‌ನ ಈಶಾನ್ಯ ಕರಾವಳಿಯಲ್ಲಿ ಸೋಮವಾರ (ಏ.20) 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ. ಜಪಾನ್ ಹವಾಮಾನ ಸಂಸ್ಥೆಯ ಪ್ರಕಾರ, ಪೆಸಿಫಿಕ್ ಮಹಾಸಾಗರದಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಕರಾವಳಿಯ ಕೆಲವು ಭಾಗಗಳಲ್ಲಿ, ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ.

ದಿಗ್ಬಂಧನ ಮುರಿಯಲೆತ್ನಿಸಿದ ಇರಾನ್ ಹಡಗನ್ನು ವಶಕ್ಕೆ ಪಡೆದ ಅಮೆರಿಕ; ಕದನ ವಿರಾಮ ಕೊನೆಗೊಳ್ಳುತ್ತಿದ್ದಂತೆ ಸಮುದ್ರಕ್ಕೂ ವಿಸ್ತರಿಸಿದ ಸಂಘರ್ಷ

ಇರಾನ್ ಹಡಗು ಅಮೆರಿಕ ನೌಕಾ ಪಡೆ ವಶಕ್ಕೆ

ಹೊರ್ಮುಜ್ ನಲ್ಲಿ ಅಮರಿಕ ವಿಧಿಸಿರುವ ದಿಗ್ಬಂಧನವನ್ನು ಮುರಿಯಲೆತ್ನಿಸಿದ ಇರಾನ್ ಹಡಗನ್ನು ಅಮೆರಿಕ ನೌಕಾ ಪಡೆ ವಶಕ್ಕೆ ಪಡೆದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. ಈ ಕುರಿತು ಟ್ರುತ್ ಸೋಷಿಯಲ್ ನಲ್ಲಿ ಮಾಹಿತಿ ಹಂಚಿಕೊಂಡ ಅವರು, ಇರಾನ್ ಧ್ವಜ ಹೊತ್ತ ಟೌಸ್ಕಾ ಎಂದು ಗುರುತಿಸಲಾದ ಹಡಗನ್ನು ಒಮಾನ್ ಕೊಲ್ಲಿಯಲ್ಲಿ ಅಮೆರಿಕದ ನೌಕಾಪಡೆಯ ಯುಎಸ್ಎಸ್ ಸ್ಪ್ರೂನ್ಸ್ ತಡೆಹಿಡಿದಿದೆ ಎಂದು ಹೇಳಿದ್ದಾರೆ.

ಪಾಕ್‌ನಲ್ಲಿ ನಡೆಯಲಿದ್ದ ಎರಡನೇ ಸುತ್ತಿನ ಮಾತುಕತೆ ತಿರಸ್ಕರಿಸಿದ ಇರಾನ್‌! ಮತ್ತೆ ಯುದ್ಧ ಶುರು?

ಪಾಕ್‌ನಲ್ಲಿ ನಡೆಯಲಿದ್ದ ಎರಡನೇ ಸುತ್ತಿನ ಮಾತುಕತೆ ತಿರಸ್ಕರಿಸಿದ ಇರಾನ್‌

America- Iran: ಕಳೆದ ವಾರ ನಡೆದಿದ್ದ ಇರಾನ್‌ ಹಾಗೂ ಅಮೆರಿದ ಶಾಂತಿ ಮಾತುಕತೆ ಮುರಿದು ಬಿದ್ದಿದೆ. ಇದೀಗ ಅಮೆರಿಕದೊಂದಿಗೆ ಎರಡನೇ ಸುತ್ತಿನ ಮಾತುಕತೆಯಲ್ಲಿ ಭಾಗವಹಿಸಲು ಯೋಜಿಸುತ್ತಿಲ್ಲ ಎಂದು ಇರಾನ್ ಹೇಳಿದೆ ಎಂದು ರಾಜ್ಯ ಮಾಧ್ಯಮ ತಿಳಿಸಿದೆ.

Mass Shooting in Louisiana: ಲೂಸಿಯಾನದಲ್ಲಿ ಗುಂಡಿನ ದಾಳಿ; 1ರಿಂದ  14 ವರ್ಷದ 8 ಮಕ್ಕಳು ಸಾವು

ಲೂಸಿಯಾನದಲ್ಲಿ ಗುಂಡಿನ ದಾಳಿ; 8 ಮಕ್ಕಳು ಸಾವು

Mass Shooting: ಅಮೆರಿಕದ ಲೂಸಿಯಾನ ರಾಜ್ಯದಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ರಕ್ತದೋಕುಳಿಯೇ ಹರಿದಿದ್ದು, ದುಷ್ಕರ್ಮಿಯ ಅಟ್ಟಹಾಸಕ್ಕೆ 1 ವರ್ಷದ ಮಗು ಸೇರಿ 8 ಮಕ್ಕಳು ಬಲಿಯಾಗಿದ್ದಾರೆ. ಶ್ರೆವೆಪೋರ್ಟ್‌ನಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬಂದೂಕುಧಾರಿಯನ್ನೂ ಹೊಡೆದುರುಳಿಸಲಾಗಿದೆ.

Loading...