ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿದೇಶ

ಪಾಕಿಸ್ತಾನದಲ್ಲಿ ಖ್ಯಾತ ಪರ್ವತಾರೋಹಿ ನಿರ್ಮಲ್ ಪುರ್ಜಾ ದುರ್ಮರಣ; ಸಾವಿಗೆ ಕಾರಣವಾಗಿದ್ದೇನು?

ಪಾಕಿಸ್ತಾನದಲ್ಲಿ ಖ್ಯಾತ ಪರ್ವತಾರೋಹಿ ನಿರ್ಮಲ್ ಪುರ್ಜಾ ಸಾವು

Mountaineer Nirmal Purja Dies: ಖ್ಯಾತ ನೇಪಾಳಿ-ಬ್ರಿಟಿಷ್ ಪರ್ವತಾರೋಹಿ ನಿರ್ಮಲ್ ಪುರ್ಜಾ ಪಾಕಿಸ್ತಾನದ ಬ್ರಾಡ್ ಪೀಕ್‌ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ಮೃತಪಟ್ಟಿದ್ದಾರೆ ಎಂದು ಅವರು ಸಹ-ಮಾಲೀಕರಾಗಿದ್ದ ಸಾಹಸಯಾತ್ರೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಪರ್ವತಾರೋಹಣ ದಂಡಯಾತ್ರೆಯಲ್ಲಿ ಭಾಗಿಯಾಗಿದ್ದ ವೇಳೆ, ಅವರಿದ್ದ ತಂಡದ ಮೇಲೆ ಹಿಮಕುಸಿತ ಸಂಭವಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮುಂದಿನ ವರ್ಷ ಪಾಕಿಸ್ತಾನಕ್ಕೆ ಭೇಟಿ? ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತ SCO ಸುಮ್ಮಿಟ್?

ಇಸ್ಲಾಮಾಬಾದ್‌ಗೆ ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಹ್ವಾನ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಶೀಘ್ರದಲ್ಲೇ ಇಸ್ಲಾಮಾಬಾದ್‌ಗೆ ಆಹ್ವಾನಿಸಲಾಗುವುದು ಎಂದ ಪಾಕಿಸ್ತಾನ ಹೇಳಿದೆ. 2027ರ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಗಾಗಿ ಅವರನ್ನು ಪಾಕಿಸ್ತಾನಕ್ಕೆ ಆಹ್ವಾನಿಸಲಾಗುವುದು. ಈ ಸಭೆಗೆ ಭಾರತ ಸೇರಿದಂತೆ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಆಹ್ವಾನ ನೀಡಲಾಗುತ್ತದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

ಬಲೂಚಿಸ್ತಾನದ ಕಲ್ಲಿದ್ದಲು ಗಣಿಯಲ್ಲಿ ಭಾರಿ ಸ್ಫೋಟ: 32 ಮಂದಿ ಸಾವು

ಬಲೂಚಿಸ್ತಾನದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ

ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದ ಹೊರವಲಯದಲ್ಲಿ ಗುರುವಾರ ಕಲ್ಲಿದ್ದಲು ಗಣಿಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಇದರಿಂದ ಸುಮಾರು 32 ಮಂದಿ ಸಾವನ್ನಪ್ಪಿದ್ದು, 10 ಕ್ಕೂ ಹೆಚ್ಚು ಮಂದಿ ಭೂಗತದಲ್ಲಿ ಸಿಲುಕಿಕೊಂಡಿದ್ದಾರೆ. ಮೀಥೇನ್ ಅನಿಲದ ಶೇಖರಣೆಯಿಂದ ಸ್ಫೋಟ ಉಂಟಾಗಿದೆ ಎಂದು ಸರ್ಕಾರಿ ಗಣಿ ನಿರೀಕ್ಷಕ ಘನಿ ಬಲೋಚ್ ತಿಳಿಸಿದ್ದಾರೆ.

ಮತ್ತೆ ಬಾಲ ಬಿಚ್ಚಿದ ಚೀನಾ; ಲಡಾಖ್-ಅರುಣಾಚಲ ಪ್ರದೇಶ ಗಡಿ ಬಳಿ ಭಾರತದತ್ತ ಮುಖ ಮಾಡಿ ಜೆ-20 ಯುದ್ಧ ವಿಮಾನಗಳ ನಿಯೋಜನೆ

ಭಾರತ ಗಡಿ ಬಳಿ ಚೀನಾದ ಶಕ್ತಿ ಪ್ರದರ್ಶನ

J-20 Stealth Jets: ಭಾರತ-ಚೀನಾ ಗಡಿಯಲ್ಲಿನ LAC ಸಮೀಪ ಚೀನಾ ತನ್ನ ಅತ್ಯಾಧುನಿಕ ಜೆ-20 ಸ್ಟೆಲ್ತ್ ಯುದ್ಧ ವಿಮಾನಗಳನ್ನು ಹೋಟಾನ್ ಹಾಗೂ ಡ್ಯಾಮ್‌ಶುಂಗ್ ವಾಯುನೆಲೆಗಳಲ್ಲಿ ನಿಯೋಜಿಸಿದೆ. ಉಪಗ್ರಹ ಚಿತ್ರಗಳು ಈ ಬೆಳವಣಿಗೆಯನ್ನು ಬಹಿರಂಗಪಡಿಸಿದ್ದು, ಗಡಿಯಲ್ಲಿ ಚೀನಾದ ಸೇನಾ ಸನ್ನದ್ಧತೆ ಹೆಚ್ಚುತ್ತಿರುವುದನ್ನು ಸೂಚಿಸುತ್ತವೆ.

ಇರಾನ್ ಮೇಲೆ ಜೋರ್ಡಾನ್ ಪ್ರತೀಕಾರದ ದಾಳಿ ಆರಂಭಿಸಿದ ಅಮೆರಿಕ; ಹೊರ್ಮುಜ್‌ನಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಳ

ಇರಾನ್ ಮೇಲೆ ಅಮೆರಿಕ ದಾಳಿ: ಭೀಕರ ಯುದ್ಧದ ಆತಂಕ

ಜೋರ್ಡಾನ್ ಮೇಲೆ ಇರಾನ್ ದಾಳಿ ನಡೆಸಿದ ಬಳಿಕ ಪ್ರತೀಕಾರವಾಗಿ ಅಮೆರಿಕವು ಇರಾನ್ ಮೇಲೆ ಡ್ರೋನ್ ದಾಳಿಯನ್ನು ನಡೆಸಿದೆ. ಇದು ಹೊರ್ಮುಜ್ ಸಲಸಂಧಿಯಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದ್ದು, ಭೀಕರ ಯುದ್ಧದ ಆತಂಕವನ್ನು ಉಂಟು ಮಾಡಿದೆ. ಜೋರ್ಡಾನ್‌ನಲ್ಲಿನ ಯುಎಸ್ ಮಿಲಿಟರಿ ನೆಲೆಗಳ ಮೇಲೆ ಇರಾನ್ ಬುಧವಾರ ದಾಳಿ ನಡೆಸಿದ ಬಳಿಕ ಅಮೆರಿಕ ಸೇನಾ ಪಡೆಗಳು ಪ್ರತೀಕಾರದ ದಾಳಿಯನ್ನು ಪ್ರಾರಂಭಿಸಿವೆ.

ಪ್ರತಿಭಟನೆ ವೇಳೆ ರಷ್ಯಾದಲ್ಲಿದ್ದರೂ ಬಿಹಾರದ ಯುವಕನ ಹೆಸರಲ್ಲಿ ಪ್ರಕರಣ: ಪೊಲೀಸರಿಂದ ನಡೆಯಿತಾ ಯಡವಟ್ಟು?

ರಷ್ಯಾದಲ್ಲಿರುವ ಯುವಕನ ವಿರುದ್ಧ ಬಿಹಾರದಲ್ಲಿ ಪ್ರಕರಣ? ವಿಡಿಯೊ ವೈರಲ್

NEET Protest: ರಷ್ಯಾದಲ್ಲಿ ನಾಲ್ಕು ತಿಂಗಳಿಂದ ವಾಸವಾಗಿರುವುದಾಗಿ ಹೇಳಿರುವ ಬಿಹಾರದ ಯುವಕ ಮೊಹಮ್ಮದ್ ಸದಾಕತ್, ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆ ಪ್ರಕರಣದಲ್ಲಿ ತನ್ನ ಹೆಸರನ್ನು ಅನ್ಯಾಯವಾಗಿ ಸೇರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಪ್ರತಿಭಟನೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದಾಗಿ ಬಿಹಾರ ಸರ್ಕಾರ ಘೋಷಿಸಿದೆ.

ಭಾರತ, ಚೀನಾಕ್ಕೆ ಶೇಕಡಾ 100 ಸುಂಕ: ಅಮೆರಿಕ ಸೆನೆಟ್‌ನಲ್ಲಿ ರಷ್ಯಾ, ಇರಾನ್ ಮೇಲಿನ ನಿರ್ಬಂಧಕ್ಕೆ ಮಸೂದೆ ಮಂಡನೆ

ರಷ್ಯಾ, ಇರಾನ್ ಮೇಲೆ ನಿರ್ಬಂಧ ಮಸೂದೆ ತರಲು ಮುಂದಾದ ಅಮೆರಿಕ

ರಷ್ಯಾ ಮತ್ತು ಇರಾನ್ ಮೇಲೆ ನಿರ್ಬಂಧ ವಿಧಿಸುವ ಮಸೂದೆ ಮಂಡನೆಗೆ ಅಮೆರಿಕ ಸೆನೆಟ್ ಮುಂದಾಗಿದೆ. ಭಾರತ, ಚೀನಾ ಮೇಲೆ ಶೇಕಡಾ 100ರಷ್ಟು ಸುಂಕ ವಿಧಿಸುವ ರಷ್ಯಾ ನಿರ್ಬಂಧ ಮಸೂದೆಯನ್ನು ಅಮೆರಿಕ ಸೆನೆಟ್ ಮುಂದಿಟ್ಟಿದೆ. ಈ ಮಸೂದೆಯು ವಿಶೇಷವಾಗಿ ರಷ್ಯಾದ ತೈಲ ಮತ್ತು ಅನಿಲದ ಖರೀದಿದಾರ ರಾಷ್ಟ್ರಗಳ ಮೇಲೆ ಪರಿಣಾಮ ಬೀಳಲಿದೆ.

24 ಗಂಟೆಗಳಲ್ಲಿ 20ಕ್ಕೂ ಹೆಚ್ಚು ಕಾಶ್ಮೀರಿಗಳ ಸಾವು; ಪಿಒಕೆಯಲ್ಲಿ ಪಾಕಿಸ್ತಾನ ಸೇನೆಯ ಅಟ್ಟಹಾಸ

ಪಾಕಿಸ್ತಾನ ಸೇನೆಯ ಅಟ್ಟಹಾಸ; ಪಿಒಕೆಯ ರಸ್ತೆಗಳಲ್ಲಿ ಬೀಳುತ್ತಿದೆ ಹೆಣ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸೇನಾ ಪಡೆಯು ನಡೆಸಿರುವ ದೌರ್ಜನ್ಯದಿಂದ ಕಳೆದ 24 ಗಂಟೆಗಳಲ್ಲಿ 20ಕ್ಕೂ ಹೆಚ್ಚು ಕಾಶ್ಮೀರಿಗಳು ಸಾವನ್ನಪ್ಪಿದ್ದಾರೆ. ಪಿಒಕೆಯಲ್ಲಿ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ ಬಳಿಕ ಸ್ಥಳೀಯರ ಮೇಲೆ ಪೊಲೀಸ್ ದೌರ್ಜನ್ಯವು ಹೆಚ್ಚಾಗಿದ್ದು, ಈವರೆಗೆ 80ಕ್ಕೂ ಹೆಚ್ಚು ಮಂದಿಯನ್ನು ಕೊಲ್ಲಲಾಗಿದೆ ಎನ್ನಲಾಗಿದೆ.

ಜಪಾನ್‌ನಲ್ಲಿ 7.1 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ; ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೊ ವೈರಲ್‌

ಜಪಾನ್‌ನಲ್ಲಿ 7.1 ತೀವ್ರತೆಯ ಭೂಕಂಪ

Japan Earthquake: ಜಪಾನ್‌ನ ಕ್ಯುಶು ದ್ವೀಪದ ಕುಮೊಮೋಟೊ ಪ್ರಾಂತ್ಯದಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ. ಹಲವು ಪ್ರಾಂತ್ಯಗಳಲ್ಲಿ ತುರ್ತು ಎಚ್ಚರಿಕೆ ಘೋಷಿಸಲಾಗಿದ್ದು, ಕರಾವಳಿ ಪ್ರದೇಶದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಅಧಿಕಾರಿಗಳು ಹಾನಿಯ ಪ್ರಮಾಣವನ್ನು ಪರಿಶೀಲಿಸುತ್ತಿದ್ದು, ಮರುಕಂಪಗಳ ಸಾಧ್ಯತೆಯ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದಿರಲು ತಿಳಿಸಿದ್ದಾರೆ.

ಹೆಜ್ಬೊಲ್ಲಾಗೆ ಇರಾನ್‌ ಬೆಂಬಲ; ಇಸ್ರೇಲ್‌-ಅಮೇರಿಕ ವಿರುದ್ದ ಜಿಹಾದ್‌ಗೆ ಕರೆ ನೀಡಿದ ಮೊಜ್ತಬಾ ಖಮೇನಿ

ಅಮೆರಿಕ-ಇಸ್ರೇಲ್ ವಿರುದ್ಧ ಜಿಹಾದ್‌ಗೆ ಕರೆ ನೀಡಿದ ಖಮೇನಿ

Mojtaba Khamenei: ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಮೊಜ್ತಬಾ ಖಮೇನಿ, ಹೆಜ್ಬೊಲ್ಲಾಗೆ ತಮ್ಮ ದೇಶದ ಅಚಲ ಬೆಂಬಲವನ್ನು ಘೋಷಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ವಿರುದ್ಧ "ಜಿಹಾದ್ ಮತ್ತು ಪ್ರತಿರೋಧವೇ ಏಕೈಕ ದಾರಿ" ಎಂದು ಹೇಳಿರುವ ಅವರು, ಲೆಬನಾನ್ ಮೇಲಿನ ಇಸ್ರೇಲ್ ದಾಳಿ ಸಂಪೂರ್ಣ ನಿಲ್ಲಿಸಿದರೆ ಮಾತ್ರ ಅಮೆರಿಕದೊಂದಿಗೆ ಸಂಘರ್ಷ ಅಂತ್ಯಗೊಳ್ಳಬಹುದು ಎಂದು ಹೇಳಿದ್ದಾರೆ.

ಯುನೆಸ್ಕೋ ವಿಶ್ವ ಪರಂಪರೆ ತಾಣ ಪಟ್ಟಿಗೆ ಸಾರನಾಥ ಸೇರ್ಪಡೆ; ಇದೊಂದು ಹೆಮ್ಮೆಯ ಕ್ಷಣ ಎಂದ ಪ್ರಧಾನಿ ಮೋದಿ

ಸಾರನಾಥ ಯುನೆಸ್ಕೋ ವಿಶ್ವ ಪರಂಪರೆ ತಾಣ ಪಟ್ಟಿಗೆ ಸೇರ್ಪಡೆ

ಉತ್ತರ ಪ್ರದೇಶದ ಪ್ರಾಚೀನ ಬೌದ್ಧ ತಾಣವಾದ 'ಸಾರಾನಾಥ' ವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲಾಗಿದೆ. ಈ ಮೂಲಕ ಇದು ಭಾರತದ 45ನೇ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಈ ಕುರಿತು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತ ಪಡಿಸಿ ಇದೊಂದು ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ.

ಜಪಾನ್‌ ಪ್ರವಾಸದ ಅಪೂರ್ವ ಅನುಭವಕ್ಕೆ ಅಡಿಗಾಸ್‌ ಯಾತ್ರಾ ಸಾಥ್

ಜಪಾನ್‌ ಪ್ರವಾಸದ ಅಪೂರ್ವ ಅನುಭವಕ್ಕೆ ಅಡಿಗಾಸ್‌ ಯಾತ್ರಾ ಸಾಥ್!

Adigas Yatra: ಜಪಾನ್ ಎಂದರೆ ಕೇವಲ ಒಂದು ದೇಶವಲ್ಲ, ಅದೊಂದು ವಿಸ್ಮಯ ಲೋಕ. ಪ್ರಾಚೀನ ಸಂಪ್ರದಾಯಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಇಲ್ಲಿ ಕೈಕೈ ಹಿಡಿದು ಸಾಗುತ್ತವೆ. ಜಪಾನ್‌ನ ಸಾಂಸ್ಕೃತಿಕ ಮತ್ತು ಆಹಾರ ವೈವಿಧ್ಯದ ರಾಜಧಾನಿ ಎಂಬ ಹೆಗ್ಗಳಿಕೆಗೆ ಒಸಾಕಾ ಪಾತ್ರವಾಗಿದೆ. ಜಪಾನ್‌ನಲ್ಲಿ ನೀವು ನೋಡಬೇಕಾದ ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ತಿಳಿಯೋಣ.

ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ; 12 ಸೈನಿಕರು ಸೇರಿ 15 ಮಂದಿ ಬಲಿ

ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ; 12 ಸೈನಿಕರು ಸಾವು

ವಾಯುವ್ಯ ಪಾಕಿಸ್ತಾನದಲ್ಲಿ ಗುರುವಾರ ರಾತ್ರಿ ಭದ್ರತಾ ಚೆಕ್‌ಪೋಸ್ಟ್‌ಗೆ ಸ್ಫೋಟಕಗಳಿಂದ ತುಂಬಿದ ವಾಹನವೊಂದು ಡಿಕ್ಕಿ ಹೊಡೆದಿದ್ದು, ಸೈನಿಕರು, ಪೊಲೀಸರು ಮತ್ತು ಸರ್ಕಾರಿ ಸಿಬ್ಬಂದಿ ಸೇರಿದಂತೆ 15 ಜನರು ಸಾವನ್ನಪ್ಪಿದ್ದಾರೆ ಎಂದು ಪಾಕ್‌ ಸೇನೆ ಶುಕ್ರವಾರ ತಿಳಿಸಿದೆ. ದಾಳಿಗೆ ಪ್ರತೀಕಾರವಾಗಿ, 12 ಉಗ್ರಗಾಮಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಹಿತ್ಯೋತ್ಸವ– 2026: ವಿದ್ಯಾರಣ್ಯ ಕನ್ನಡ ಕೂಟದಿಂದ  ಶಿಕಾಗೋದಲ್ಲಿ ಸಾಹಿತ್ಯ, ಸಂಸ್ಕೃತಿ ಹಾಗೂ ಭಾಷೆ ಸೊಗಡಿನ ಅನಾವರಣ

ವಿದ್ಯಾರಣ್ಯ ಕನ್ನಡ ಕೂಟ ಸಾಹಿತ್ಯೋತ್ಸವ

ವಿದ್ಯಾರಣ್ಯ ಕನ್ನಡ ಕೂಟದ ವತಿಯಿಂದ ಶಿಕಾಗೋದಲ್ಲಿ “ಸಾಹಿತ್ಯೋತ್ಸವ – 2026” ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು. ಇಂಡಿಯಾ ಹಬ್‌ನಲ್ಲಿ ಇತ್ತೀಚೆಗೆ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಭಾಷೆಯ ಸೊಗಡನ್ನು ಅನಾವರಣಗೊಳಿಸಲಾಗಿದ್ದು, ಅಪಾರ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಯಿತು.

ಶೇಖ್ ಹಸೀನಾ ಮರಳುವ ಮುನ್ಸೂಚನೆ ಬೆನ್ನಲ್ಲೇ ಬಾಂಗ್ಲಾದೇಶ ಅಧ್ಯಕ್ಷ ಶಹಾಬುದ್ದೀನ್ ರಾಜೀನಾಮೆ ಸಾಧ್ಯತೆ

ಬಾಂಗ್ಲಾದೇಶ ಅಧ್ಯಕ್ಷ ಶಹಾಬುದ್ದೀನ್ ರಾಜೀನಾಮೆ ಸಾಧ್ಯತೆ

ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಈ ವರ್ಷಾಂತ್ಯಕ್ಕೆ ಢಾಕಾಕ್ಕೆ ಮರಳುವ ಯೋಜನೆಯನ್ನು ವ್ಯಕ್ತಪಡಿಸಿದ ಬೆನ್ನಲ್ಲೇ ಬಾಂಗ್ಲಾದೇಶದ ರಾಜಕೀಯದಲ್ಲಿ ತಲ್ಲಣ ಉಂಟಾಗಿದೆ. ಬಾಂಗ್ಲಾದೇಶ ಅಧ್ಯಕ್ಷ ಶಹಾಬುದ್ದೀನ್ ಅವರು ತಮ್ಮ ಅಧಿಕಾರಾವಧಿ ಮುಗಿಯುವ ಮೊದಲೇ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಭಾರತಕ್ಕೆ ಮತ್ತೊಂದು ಹೊಸ ಸವಾಲು; ಜೆನೆರಿಕ್ ಔಷಧಗಳ ಮೇಲೆ ಶೇಕಡಾ 200ರಷ್ಟು ಸುಂಕ ಘೋಷಿಸಿದ ಡೊನಾಲ್ಡ್ ಟ್ರಂಪ್

ಜೆನೆರಿಕ್ ಔಷಧಗಳ ಮೇಲೆ ಸುಂಕ ವಿಧಿಸಿದ ಅಮೆರಿಕ

ಜೆನೆರಿಕ್ ಔಷಧಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶೇಕಡಾ 200ರಷ್ಟು ಸುಂಕ ವಿಧಿಸಿದ್ದಾರೆ. ಇದು ಈಗ ಭಾರತದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶ್ವದ ಅತಿ ದೊಡ್ಡ ಜೆನೆರಿಕ್ ಔಷಧಿಗಳ ಪೂರೈಕೆದಾರ ರಾಷ್ಟ್ರಗಳಲ್ಲಿ ಒಂದಾದ ಭಾರತವು ಅಮೆರಿಕಕ್ಕೆ ಔಷಧಗಳ ಅತಿ ದೊಡ್ಡ ರಫ್ತುದಾರ ಕೂಡ ಆಗಿದೆ.

"ಬ್ಯಾಗ್ ಕಿತ್ತು ಡ್ರೆಸ್ ಎಳೆದರು": ಸೆರ್ಬಿಯಾ ಪ್ರವಾಸದದಲ್ಲಿ ಎದುರಾದ ನರಕದ ಅನುಭವ ವಿವರಿಸಿದ ಭಾರತೀಯ ಮಹಿಳೆ

ವಿದೇಶದಲ್ಲಿ ಭಾರತೀಯ ಮಹಿಳೆಗೆ ಕಿರುಕುಳ: ವಿಡಿಯೊ ನೋಡಿ

Viral News: ವಿದೇಶದಲ್ಲಿ ರಜಾ ದಿನವನ್ನು ಕಳೆಯಬೇಕೆಂದು ಹೋದ ಭಾರತೀಯ ದಂಪತಿಗೆ ಭೀಕರ ಅನುಭವ ಎದುರಾಗಿದೆ. ಸೆರ್ಬಿಯಾಕ್ಕೆ ತೆರಳಿದ ಕೆಲವೇ ಸಮಯದಲ್ಲಿ ಅಲ್ಲಿನ ಸ್ಥಳೀಯರಿಂದ ನರಕಯಾತನೆ ಅನುಭವಿಸಿದೆವು ಎಂದು ದಂಪತಿ ಬೇಸರ ಹೊರ ಹಾಕಿದ್ದಾರೆ. ವ್ಲಾಗ್‌ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದು, ತನ್ನ ಡ್ರೆಸ್ ಎಳೆಯಲು ಪ್ರಯತ್ನಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಭಯೋತ್ಪಾದನೆಗೆ ಶಾಶ್ವತ ತೆರೆ ಬಿದ್ದರೆ ಮಾತ್ರ ಸಿಂಧು ಜಲ ಒಪ್ಪಂದ: ಪಾಕಿಸ್ತಾನಕ್ಕೆ ಭಾರತದ ಖಡಕ್ ಸಂದೇಶ

ಸಿಂಧು ಜಲ ಒಪ್ಪಂದ ಪುನರಾರಂಭಕ್ಕೆ ಉಗ್ರವಾದವೇ ಅಡ್ಡಿ: ಭಾರತ

Indus Waters Treaty: ಸಿಂಧು ಜಲ ಒಪ್ಪಂದವು ಈಗಿನ ರೂಪದಲ್ಲಿ ಮತ್ತೆ ಜಾರಿಗೆ ಬರುವುದಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಪಾಕಿಸ್ತಾನ ಗಡಿ ದಾಟಿ ನಡೆಯುತ್ತಿರುವ ಭಯೋತ್ಪಾದನೆಯನ್ನು ಶಾಶ್ವತವಾಗಿ ನಿಲ್ಲಿಸಿದರೆ ಮಾತ್ರ ಹೊಸ ಚೌಕಟ್ಟಿನಲ್ಲಿ ಜಲ ಹಂಚಿಕೆ ಕುರಿತು ಮಾತುಕತೆ ಸಾಧ್ಯ ಎಂದು ಭಾರತ ಸ್ಪಷ್ಟಪಡಿಸಿದೆ.

ಆಪರೇಷನ್ ಸಿಂದೂರ್ ಭಾರತದ ದೊಡ್ಡ ಯಶಸ್ಸು ಎಂದ ಇಮ್ರಾನ್ ಖಾನ್ ಸಹೋದರಿಗೆ ಸಮನ್ಸ್ ಜಾರಿ

ಪಾಕಿಸ್ತಾನ ಸೇನಾ ವೈಫಲ್ಯ ಮರೆಮಾಡಲು ಯತ್ನ: ಇಮ್ರಾನ್ ಖಾನ್ ಸಹೋದರಿ

ಆಪರೇಷನ್ ಸಿಂದೂರ್ ಭಾರತದ ಬಹುದೊಡ್ಡ ಯಶಸ್ಸು. ಇದರಲ್ಲಿ ಪಾಕಿಸ್ತಾನ ಸೇನೆ ತನ್ನ ವೈಫಲ್ಯವನ್ನು ಮರೆ ಮಾಡಲು ಪ್ರಯತ್ನಿಸಿದೆ ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಹೋದರಿ ನೊರೀನ್ ನಿಯಾಜಿ ಹೇಳಿದ್ದಾರೆ. ಅವರ ಈ ಹೇಳಿಕೆಯ ಬಳಿಕ ಪಾಕಿಸ್ತಾನದ ರಾಷ್ಟ್ರೀಯ ಸೈಬರ್ ಅಪರಾಧ ತನಿಖಾ ಸಂಸ್ಥೆ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.

ಉಕ್ರೇನ್‌ನಲ್ಲಿ ಸರಕು ಹಡಗಿನ ಮೇಲೆ ದಾಳಿ; ನಾಲ್ವರು ಭಾರತೀಯರು ಸಾವು

ರಷ್ಯಾ ದಾಳಿಗೆ 4 ಭಾರತೀಯರು ಬಲಿ

ಉಕ್ರೇನ್‌ನ ಒಡೆಸಾ ಬಂದರಿನಿಂದ ಹೊರಟಿದ್ದ MV Golden Leo ವಾಣಿಜ್ಯ ಹಡಗಿನ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ನಾಲ್ವರು ಭಾರತೀಯ ಸಿಬ್ಬಂದಿ ಮೃತಪಟ್ಟಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಂತ್ರಸ್ತರಿಗೆ ನೆರವು ಒದಗಿಸುತ್ತಿದೆ. ಈ ದಾಳಿಯು ಕಪ್ಪು ಸಮುದ್ರ ಪ್ರದೇಶದಲ್ಲಿ ಹೆಚ್ಚುತ್ತಿರುವ ರಷ್ಯಾ-ಉಕ್ರೇನ್ ಸಂಘರ್ಷದ ತೀವ್ರತೆಯನ್ನು ಮತ್ತೊಮ್ಮೆ ಬಿಂಬಿಸಿದೆ.

ಇರಾನ್ ಮೇಲೆ ಅಮೆರಿಕದಿಂದ ಮತ್ತೆ ವೈಮಾನಿಕ ದಾಳಿ; ಬಹ್ರೇನ್, ಕುವೈತ್ ಗುರಿಯಾಗಿಸಿಕೊಂಡು ಎದಿರೇಟು ನೀಡಿದ ಇರಾನ್‌: ಪಶ್ಚಿಮ ಏಷ್ಯಾದಲ್ಲಿ ಮತ್ತೆ ಬಾಂಬ್‌ ಮೊರೆತ

ಇರಾನ್ ಮೇಲೆ ಅಮೆರಿಕದಿಂದ ಮತ್ತೆ ವೈಮಾನಿಕ ದಾಳಿ

US Launches Airstrikes on Iran: ಇರಾನ್ ಮೇಲೆ ಅಮೆರಿಕ ಮತ್ತೆ ವೈಮಾನಿಕ ದಾಳಿ ನಡೆಸಿದೆ. ಹೋರಾಟವನ್ನು ಶಾಶ್ವತವಾಗಿ ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಕಳೆದ ತಿಂಗಳ ಮಧ್ಯಂತರ ಒಪ್ಪಂದವು ಮುರಿದುಬಿದ್ದ ಹಿನ್ನೆಲೆಯಲ್ಲಿ ಮತ್ತು ಹೊರ್ಮುಜ್ ಜಲಸಂಧಿಯ ಮೂಲಕ ಸಾಗಣೆಯು ಸ್ಥಗಿತಗೊಂಡಿದ್ದರಿಂದ ಪಶ್ಚಿಮ ಏಷ್ಯಾ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಸಾಕ್ಷಿಯಾಗುತ್ತಿದೆ.

ಜೋರ್ಡಾನ್ ಮೇಲೆ ಇರಾನ್ ದಾಳಿ: ಅಮೆರಿಕ ಸೈನಿಕರಿಬ್ಬರು ಸಾವು, ಓರ್ವ ನಾಪತ್ತೆ

ಜೋರ್ಡಾನ್‌ನಲ್ಲಿ ಇಬ್ಬರು ಅಮೆರಿಕನ್ ಸೈನಿಕರು ಸಾವು

ಇರಾನ್ ದಾಳಿಯಿಂದ ಜೋರ್ಡಾನ್‌ನಲ್ಲಿ ಇಬ್ಬರು ಅಮೆರಿಕನ್ ಸೈನಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕಳೆದ ಫೆಬ್ರವರಿಯಲ್ಲಿ ಯುಎಸ್ ಮತ್ತು ಇರಾನ್ ನಡುವೆ ಸಂಘರ್ಷ ಪ್ರಾರಂಭವಾದ ಮೇಲೆ ಈವರೆಗೆ ಅಮೆರಿಕನ್ ಮಿಲಿಟರಿಯ 16 ಮಂದಿ ಸಾವನ್ನಪ್ಪಿದ್ದಾರೆ. 430ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ತಿಳಿಸಿದೆ.

ಅಮೆರಿಕದ ವಿರುದ್ಧ ಕಿಡಿ ಕಾರಿದ ಇರಾನ್‌: ಡೊನಾಲ್ಡ್‌ ಟ್ರಂಪ್‌ ಕುಟುಂಬದ ಶವಪೆಟ್ಟಿಗೆ ಚಿತ್ರವಿರುವ ಬ್ಯಾನರ್ ಪ್ರದರ್ಶನ

ಟ್ರಂಪ್ ಕುಟುಂಬ ಗುರಿಯಾಗಿಸಿ ಇರಾನ್‌ನ ಹೊಸ ಬ್ಯಾನರ್

"Blood For Blood": ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಕುಟುಂಬವನ್ನು ಶವಪೆಟ್ಟಿಗೆಯಲ್ಲಿರುವಂತೆ ಚಿತ್ರಿಸಿರುವ ಹೊಸ ಪ್ರಚೋದನಾತ್ಮಕ ಬ್ಯಾನರ್ ಅಳವಡಿಸಲಾಗಿದೆ. ʼರಕ್ತಕ್ಕೆ ರಕ್ತʼ ಎಂಬ ಘೋಷಣೆಯೊಂದಿಗೆ ಪ್ರದರ್ಶಿಸಲಾದ ಈ ಬ್ಯಾನರ್ ಅಮೆರಿಕ ವಿರುದ್ಧದ ಪ್ರತೀಕಾರದ ಸಂದೇಶವೆಂದು ಪರಿಗಣಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಜಾಗತಿಕ ಗಮನ ಸೆಳೆದಿದೆ. ಮತ್ತೊಂದೆಡೆ, ಇರಾನ್ ಪ್ರತೀಕಾರದ ಎಚ್ಚರಿಕೆ ನೀಡಿದ್ದರೆ, ಟ್ರಂಪ್ ಕೂಡ ಇರಾನ್ ವಿರುದ್ಧ ಕಠಿಣ ಸೇನಾ ಕ್ರಮದ ಸಾಧ್ಯತೆ ಬಗ್ಗೆ ಚಿಂತನಬೆ ನಡೆಸುತ್ತಿದ್ದಾರೆ.

ಮುಂದುವರಿದ ಅಮೆರಿಕ ದಾಳಿ; ಇನ್ನು ಮುಂದೆ ಯಾವುದೇ ದೇಶದ ಗಡಿಗಳು ಸುರಕ್ಷಿತವಾಗಿರುವುದಿಲ್ಲ: ಟೆಹರಾನ್ ಎಚ್ಚರಿಕೆ

ಇರಾನ್ ಮೇಲೆ ಮುಂದುವರಿದ ಅಮೆರಿಕ ದಾಳಿ

ಕಳೆದ ಫೆಬ್ರವರಿ 28ರಿಂದ ಪ್ರಾರಂಭವಾಗಿರುವ ಇರಾನ್ ಮತ್ತು ಯುಎಸ್ ನಡುವಿನ ಸಂಘರ್ಷ ಮತ್ತೊಮ್ಮೆ ತೀವ್ರಗೊಳ್ಳುವ ಆತಂಕ ಉಂಟು ಮಾಡಿದೆ. ಈಗಾಗಲೇ ಕದನ ಮುಕ್ತಾಯ ಒಪ್ಪಂದವನ್ನು ಎರಡು ಪಕ್ಷಗಳು ಮುರಿದಿದ್ದು, ದಾಳಿ, ಪ್ರತಿದಾಳಿಗಳು ತೀವ್ರಗೊಂಡಿವೆ. ಇನ್ನೆರಡು ದಿನಗಳಲ್ಲಿ ಅಮೆರಿಕ ದಾಳಿಯನ್ನು ನಿಲ್ಲಿಸದೇ ಇದ್ದರೆ ಪ್ರತಿಕಾರದ ದಾಳಿಯನ್ನು ಪ್ರಾರಂಭಿಸುವುದಾಗಿ ಇರಾನ್ ಎಚ್ಚರಿಕೆಯನ್ನು ನೀಡಿದೆ.

Loading...