ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

bigg boss

Bigg Boss Kannada 12: ಬಿಗ್ ಬಾಸ್‌ ಫಿನಾಲೆ ಯಾವಾಗ? ಫಿನಾಲೆಗೆ ಎಂಟ್ರಿ ಕೊಡೋದು ಎಷ್ಟು ಸ್ಪರ್ಧಿಗಳು?

ಬಿಗ್ ಬಾಸ್‌ ಫಿನಾಲೆ ಯಾವಾಗ? ಎಂಟ್ರಿ ಕೊಡೋದು ಎಷ್ಟು ಸ್ಪರ್ಧಿಗಳು?

Bigg Boss Kannada Finale: ಬಿಗ್‌ ಬಾಸ್‌ ಕೊನೆಯ ಹಂತದಲ್ಲಿ ಇದೆ. ಈಗಾಗಲೇ ಟಿಕೆಟ್‌ ಫಿನಾಲೆ ರೇಸ್‌ ಕೂಡ ಆರಂಭವಾಗಿದ್ದು, ಈ ಬಾರಿ ಕಪ್‌ ಗೆಲ್ಲೋದು ಯಾರು ಎಂಬ ಕುತೂಹಲ ಹೆಚ್ಚಾಗಿದೆ. ಜನವರಿ 17 ಹಾಗೂ 18ರಂದು ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಅದಕ್ಕೂ ಮೊದಲು ಎಷ್ಟು ಎಲಿಮಿನೇಷನ್ ನಡೆಯುತ್ತದೆ? ಬಹುಮಾನ ಕೊಡೋದು ಏನು? ಫಿನಾಲೆ ಯಾವ ರೀತಿಯಲ್ಲಿ ನಡೆಯುತ್ತದೆ ಎಂಬ ಬಗ್ಗೆ ಚರ್ಚೆಗಳು ಆಗುತ್ತಿವೆ.

Bigg Boss Kannada 12: ಸ್ವಸ್ತಿಕ್ ಚಿಕಾರಾ ಜೊತೆ ಕಾವ್ಯ ಹೋಲಿಕೆ! ಟ್ರೋಲ್‌ ಆಗ್ತಿರೋದೇಕೆ ಕಾವು?

ಸ್ವಸ್ತಿಕ್ ಚಿಕಾರಾ ಜೊತೆ ಕಾವ್ಯ ಹೋಲಿಕೆ! ಟ್ರೋಲ್‌ ಆಗ್ತಿರೋದೇಕೆ ಕಾವು?

Kavya Shaiva: ಬಿಗ್‌ ಬಾಸ್‌ ಇನ್ನೇನು ಕೊನೆಯ ಹಂತ ತಲುಪುತ್ತಿದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಬಿಗ್‌ ಬಾಸ್‌ ಅಂದರೆ ಕೇವಲ ಟಾಸ್ಕ್‌, ವ್ಯಕ್ತಿತ್ವ ಮಾತ್ರವಲ್ಲ. ಇಲ್ಲಿ ಸಖತ್‌ ಮನರಂಜನೆ ಇದೆ. ಬಿಗ್‌ ಬಾಸ್‌ ಆರಂಭವಾದ ಬಳಿಕ ಮೊದಲಿಗೆ ಆಕ್ಟಿವ್‌ ಆಗೋದು ಟ್ರೋಲ್‌ ಪೇಜ್‌ಗಳು . ಒಂದು ಸಣ್ಣ ಹಿಂಟ್‌ ಸಿಕ್ಕರೆ ಸಾಕು ಟ್ರೋಲ್‌ ಮಾಡಿ ಬಿಡ್ತಾರೆ. ಇದೀಗ ಕಾವ್ಯ ಶೈವ ಪರಿಸ್ಥಿತಿ ಅದೇ ಆಗಿದೆ. ಕಾವ್ಯ ಅವರನ್ನ ಆರ್‌ಸಿಬಿ ಸ್ವಸ್ತಿಕ್ ಚಿಕಾರ ಜೊತೆ ಹೋಲಿಕೆ ಮಾಡಿ ಟ್ರೋಲ್‌ ಮಾಡ್ತಿದ್ದಾರೆ. ಏನಿದು ಅಸಲಿ ಮ್ಯಾಟರ್‌?

Bigg Boss Kannada 12: ಗಿಲ್ಲಿಯನ್ನ ಸೋಲಿಸಿದ ಧ್ರುವಂತ್‌! ʻಟಾಸ್ಕ್ ಆಡೋಕೆ ಬರಲ್ಲ' ಅಂತ ಹೀಯಾಳಿಸಿದ ರಾಶಿಕಾ

ಗಿಲ್ಲಿಯನ್ನ ಸೋಲಿಸಿದ ಧ್ರುವಂತ್‌! ಹೀಯಾಳಿಸಿದ ರಾಶಿಕಾ

Rashika Shetty: ಬಿಗ್‌ ಬಾಸ್‌ ಫಿನಾಲೆ ಸಮೀಪಿಸುತ್ತಿದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ‘ಟಿಕೆಟ್ ಟು ಫಿನಾಲೆ’ ಟಾಸ್ಕ್ ನಡೆಯುತ್ತಿದೆ. ಗೆಲ್ಲುವವರು ಫಿನಾಲೆಯ ಟಿಕೆಟ್ ಓಟಕ್ಕೆ ಆಯ್ಕೆ ಆಗುತ್ತಾರೆ. ಧನುಷ್‌ ಕ್ಯಾಪ್ಟನ್‌ ಆದ ಕಾರಣ ಈಗಾಗಲೇ ಓಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಹೀಗಾಗಿ ಧನುಷ್‌ ಅವರಿಗೆ ಬಿಗ್‌ ಬಾಸ್‌ ಒಂದು ಟ್ವಿಸ್ಟ್‌ ಕೊಟ್ಟಿದ್ದರು. ಒಬ್ಬರನ್ನು ಟಾಸ್ಕ್​​ನಿಂದ ಹೊರಗಿಡಲು ಯಾರನ್ನು ಆಯ್ಕೆ ಮಾಡ್ತೀರಿ? ಎಂದು. ಆಗ ಧ್ರುವಂತ್‌ ಎಂದರು. ಆ ಬಳಿಕ ಧ್ರುವಂತ್‌ಗೂ ಬಿಗ್‌ ಬಾಸ್‌ ಟ್ವಿಸ್ಟ್‌ ಕೊಟ್ಟರು.

Bigg Boss Kannada 12: ʻಮುಖವಾಡ ಬೇಗ ಬದಲಾಗತ್ತೆʼ; ಅಶ್ವಿನಿಗೆ ರಕ್ಷಿತಾ ಭರ್ಜರಿ ಕೌಂಟರ್‌!

ʻಮುಖವಾಡ ಬೇಗ ಬದಲಾಗತ್ತೆʼ; ಅಶ್ವಿನಿಗೆ ರಕ್ಷಿತಾ ಭರ್ಜರಿ ಕೌಂಟರ್‌!

Ashwini Gowda: ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಸದ್ಯ ಈಗ ‘ಟಿಕೆಟ್ ಟು ಫಿನಾಲೆ’ ಟಾಸ್ಕ್ ನಡೆಯುತ್ತಿದೆ. ಟಾಸ್ಕ್​​ನಲ್ಲಿ ಗೆಲ್ಲುವವರು ಫಿನಾಲೆ ಓಟಕ್ಕೆ ಆಯ್ಕೆ ಆಗುತ್ತಾರೆ. ಧ್ರುವಂತ್ ಮತ್ತು ಗಿಲ್ಲಿ ನಟ ನಡುವೆ ಪೈಪೋಟಿ ಬೆಳೆಯಿತು. ಮೊದಲ ಹಂತದಲ್ಲೇ ಧ್ರುವಂತ್ ಅವರು ಗಿಲ್ಲಿಯನ್ನು ಸೋಲಿಸಿದರು. ಗಿಲ್ಲಿ ಸದ್ಯ ಅವರು ‘ಟಿಕೆಟ್ ಟು ಟಾಪ್ 6’ ಆಟದಿಂದ ಹೊರಗೆ ಉಳಿಯುವಂತಾಗಿದೆ. ಇದೀಗ ಹೊಸ ಪ್ರೋಮೋ ಔಟ್‌ ಆಗಿದೆ. ರಕ್ಷಿತಾ ಸಖತ್‌ ಆಗಿ ಅಶ್ವಿನಿಗೆ ಕೌಂಟರ್‌ ಕೊಟ್ಟಿದ್ದಾರೆ.

Bigg Boss Kannada 12: ರಕ್ಷಿತಾಗೆ ಟಾಸ್ಕ್ ಅರ್ಥ ಆಗಲ್ವಾ? ಬೆಂಬಲಕ್ಕೆ ಬಂದ ಗಿಲ್ಲಿ ಮೇಲೆ ರಾಶಿಕಾ ಗರಂ

Bigg Boss Kannada 12: ರಕ್ಷಿತಾಗೆ ಟಾಸ್ಕ್ ಅರ್ಥ ಆಗಲ್ವಾ?

Rakshitha Shetty: ಬಿಗ್​​ಬಾಸ್ ಕನ್ನಡ ಸೀಸನ್ 12 ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದೆ. ಮನೆಯಲ್ಲಿ ಕೇವಲ ಎಂಟು ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಬಿಗ್​​ಬಾಸ್, ಟಾಸ್ಕ್​​ಗಳ ಮೇಲೆ ಟಾಸ್ಕ್​​ಗಳನ್ನು ಕೊಡುತ್ತಿದ್ದಾರೆ. 'ಟಿಕೆಟ್ ಟು ಫಿನಾಲೆ' ಟಾಸ್ಕ್‌ಗಾಗಿ ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ನಡೆದಿದೆ. ಮೂರು ಸದಸ್ಯರವುಳ್ಳ ಎರಡು ತಂಡಗಳನ್ನು ಮೊದಲು ರಚಿಸಿಕೊಳ್ಳಬೇಕು. ಇದಕ್ಕೆ ರಕ್ಷಿತಾ ನಾನೇ ಆಡುತ್ತೇನೆ ಎಂದಿದ್ದಾರೆ. ಆದರೆ ಈ ಬಗ್ಗೆ ರಾಶಿಕಾ ತಕರಾರು ಎತ್ತಿದ್ದಾರೆ.

100 ದಿನ ಪೂರೈಸಿದ ʻಬಿಗ್‌ ಬಾಸ್‌ʼ ಕನ್ನಡ ಸೀಸನ್ 12; ಇನ್ನೆಷ್ಟು ಸ್ಪರ್ಧಿಗಳಿದ್ದಾರೆ? ನಾಮಿನೇಟ್‌ ಆಗಿರುವವರು ಯಾರು?

100 ದಿನ ಪೂರೈಸಿದ ಬಿಗ್ ಬಾಸ್ ಕನ್ನಡ 12; ಸ್ಪರ್ಧಿಗಳಿಗೆ ನಾಮಿನೇಷನ್‌ ಶಾಕ್!

Bigg Boss Kannada 12: ಬಿಗ್ ಬಾಸ್ ಕನ್ನಡ 12 ಸದ್ಯ 100 ದಿನಗಳನ್ನು ಪೂರೈಸಿದ್ದು, ಮನೆಯಲ್ಲಿ ಕೇವಲ 8 ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ಕಳೆದ ವಾರ ಸ್ಪಂದನಾ ಅವರು 99 ದಿನಗಳ ಕಾಲ ಮನೆಯಲ್ಲಿದ್ದು ಹೊರಬಂದಿದ್ದಾರೆ. ಈ ವಾರ ಕ್ಯಾಪ್ಟನ್ ಧನುಷ್ ಅವರನ್ನು ಹೊರತುಪಡಿಸಿ ಉಳಿದ ಏಳೂ ಮಂದಿ ನಾಮಿನೇಟ್ ಆಗಿದ್ದು, ಫಿನಾಲೆ ಹಂತ ತಲುಪಲು ಎಲ್ಲರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

Bigg Boss Kannada 12: ಗಿಲ್ಲಿಯನ್ನು ಕೊಚ್ಚೆ ಎಂದು ಕರೆದ ಅಶ್ವಿನಿ! ತಾರಕಕ್ಕೇರಿದ ಕಿತ್ತಾಟ

ಗಿಲ್ಲಿಯನ್ನು ಕೊಚ್ಚೆ ಎಂದು ಕರೆದ ಅಶ್ವಿನಿ! ತಾರಕಕ್ಕೇರಿದ ಕಿತ್ತಾಟ

Gilli Nata: ಬಿಗ್‌ ಬಾಸ್‌ ಶುರುವಾದಾಗಿನಿಂದಲೂ ಅಶ್ವಿನಿ ಹಾಗೂ ಗಿಲ್ಲಿಗೆ ಅಷ್ಟಕಷ್ಟ. ಹಾವು ಮುಂಗುಸಿ ಥರ ಕಿತ್ತಾಡುತ್ತಲೇ ಇರುತ್ತಾರೆ. ಇದೀಗ ನಾಮಿನೇಶನ್‌ ವೇಳೆಯೂ ಅದೇ ಆಗಿದೆ. ಗಿಲ್ಲಿಗೆ ಅಶ್ವಿನಿ ಗೌಡ ನೇರವಾಗಿ ಗಿಲ್ಲಿಗೆ ವಾರ್ನ್ ಮಾಡಿದ್ದಾರೆ. ‘ನಿನ್ನ ಟೈಮ್ ಸ್ಟಾರ್ಟ್ ಆಗಿದೆ’ ಎಂದು ಅಶ್ವಿನಿ ಅವರು ಗಿಲ್ಲಿಗೆ ಎಚ್ಚರಿಕೆ ನೀಡಿದರು. ಇದಕ್ಕೆ ಗಿಲ್ಲಿ ತಲೆಕೆಡಿಸಿಕೊಳ್ಳಲಿಲ್ಲ.

Bigg Boss Kannada 12: ʻಅಶ್ವಿನಿ ಗೌಡ 2.O ವರ್ಷನ್ ನಾಟಕʼ! ಏಕವಚನಕ್ಕೆ ತಿರುಗಿದ ಕಾವ್ಯ-ಅಶ್ವಿನಿ ಗೌಡ ಜಗಳ

ಏಕವಚನಕ್ಕೆ ತಿರುಗಿದ ಕಾವ್ಯ-ಅಶ್ವಿನಿ ಗೌಡ ಜಗಳ

Kavya Shaiva: ಬಿಗ್‌ ಬಾಸ್‌ ಸೀಸನ್‌ 12ರ ಕೊನೆಯ ನಾಮಿನೇಶನ್‌ ಪ್ರಕ್ರಿಯೆ ನಿನ್ನೆ ನಡೆದಿದೆ. ಧನುಷ್‌ ಬಿಟ್ಟು ಉಳಿದ ಎಲ್ಲ ಸದಸ್ಯರು ನಾಮಿನೇಟ್‌ ಆಗಿದ್ದಾರೆ. ಸ್ಪರ್ಧಿಗಳ ಮಧ್ಯೆ ಕಾರಣ ಕೊಡುವಾಗ, ಜಗಳಗಳು ತಾರಕಕ್ಕೇರಿತ್ತು. ಅದರಲ್ಲೂ ಕಾವ್ಯ ಹಾಗೂ ಅಶ್ವಿನಿ ಅವರು ಒಬ್ಬರಿಗೊಬ್ಬರು ಏಕವಚನ ಬಳಕೆ ಮಾಡಿದ್ದಾರೆ. ಕಾವ್ಯ ಅವರು ನೇರವಾಗಿ ಅಶ್ವಿನಿ ಅವರಿಗೆ ಅಶ್ವಿನಿ ಗೌಡ 2.O ವರ್ಷನ್ ನಾಟಕ ಎಂದು ಆರೋಪಿಸಿದರು.

Bigg Boss Kannada 12: ಮೊದಲ ಫಿನಾಲೆ ಟಿಕೆಟ್‌ ಪಡೆಯಲು ಸೋತು ಹೋದ್ರಾ ಗಿಲ್ಲಿ? `ಮಾತಿನ ಮಲ್ಲ'ನಿಗೆ ಧ್ರುವಂತ್‌ ಚಾಲೆಂಜ್‌!

ಮೊದಲ ಫಿನಾಲೆ ಟಿಕೆಟ್‌ ಪಡೆಯಲು ಸೋತು ಹೋದ್ರಾ ಗಿಲ್ಲಿ?

Gilli Nata: ಬಿಗ್ ‌ಬಾಸ್‌ ಸೀಸನ್‌ 12ರ ಫಿನಾಲೆ ಇನ್ನೇನು ಸಮೀಪಿಸಲು ಕೆಲವೇ ದಿನಗಳು ಬಾಕಿ ಇವೆ. ಕೊನೆಯ ನಾಮಿನೇಶನ್‌ ಪ್ರಕ್ರಿಯೆ ಕೂಡ ಮುಕ್ತಾಯಗೊಂಡಿದೆ. ಸ್ಪರ್ಧಿಗಳ ಮಧ್ಯೆ ಈಗ ಪೈಪೋಟಿ ಜೋರಾಗಿದೆ. ರಾಶಿಕಾ ಶೆಟ್ಟಿ, ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ ಶೈವ, ಧನುಷ್, ರಕ್ಷಿತಾ ಶೆಟ್ಟಿ, ಮ್ಯಾಟೆಂಟ್ ರಘು ಅವರು ನಾಮಿನೇಟ್‌ ಆಗಿದ್ದಾರೆ. ಇದೀಗ ಫಿನಾಲೆ ಟಿಕೆಟ್‌ ಯಾರಿಗೆ ಸಿಗುತ್ತೆ ಎಂಬುದೇ ಕುತೂಹಲ.ಮೊದಲ ಟಿಕೆಟ್‌ ಪಡೆಯುವ ಮುಂದಿನ ಟಾಸ್ಕ್‌ಗಳಿಂದ ಗಿಲ್ಲಿ ಔಟ್‌ ಆಗ್ತಾರಾ?

Bigg Boss Kannada 12: ಮನೆಯಿಂದ ಹೊರಗೆ ಒಬ್ಬನೇ ಬಾ ಇದೆ ನಿಂಗೆ!  ಧ್ರುವಂತ್‌ಗೆ ನೇರ ಸವಾಲ್‌ ಹಾಕಿದ ರಘು, ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ಸ್ಪರ್ಧಿಗಳು

ಮನೆಯಿಂದ ಹೊರಗೆ ಒಬ್ಬನೇ ಬಾ! ಧ್ರುವಂತ್‌ಗೆ ನೇರ ಸವಾಲ್‌ ಹಾಕಿದ ರಘು

Raghu: ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ. ಫಿನಾಲೆ ಹತ್ತಿರವಾಗುತ್ತಿದ್ದಂತೆ ಸ್ಪರ್ಧಿಗಳ ನಡುವೆ ವಾದ ವಿವಾದಗಳೂ ಹೆಚ್ಚಾಗುತ್ತಿವೆ. ಇನ್ನೇನು ಬಿಗ್‌ ಬಾಸ್‌ ಮುಗಿಯಲು ಎರಡು ವಾರ ಬಾಕಿ ಇವೆ. ಆದರೂ ಧ್ರುವಂತ್‌ ಹಾಗೂ ರಘು ನಡುವೆ ಜಗಳ ಅಂತ್ಯವಾದಂತೆ ಕಾಣುತ್ತಿಲ್ಲ. ಬಿಗ್‌ಬಾಸ್ ನಾಮಿನೇಷನ್ ಪ್ರಕ್ರಿಯೆಯಲ್ಲಿ, ಧ್ರುವಂತ್ ನೀಡಿದ ಕಾರಣಗಳಿಂದ ರಘು ತೀವ್ರವಾಗಿ ಆಕ್ರೋಶಗೊಂಡಿದ್ದಾರೆ. ತನ್ನ ಅಡುಗೆಯನ್ನು ಟೀಕಿಸಿದ್ದಕ್ಕೆ ಕೆಂಡಾಮಂಡಲರಾದ ರಘು , ಮನೆಯಿಂದ ಹೊರಗೆ ಒಬ್ಬನೇ ಬಾ ಎಂದು ಧ್ರುವಂತ್‌ಗೆ ನೇರ ಸವಾಲು ಹಾಕಿದ್ದಾರೆ.

Bigg Boss Kannada 12: ಅಶ್ವಿನಿ ಗೌಡಗೆ ಮತ್ತೆ ಕಾಲೆಳೆದ ಗಿಲ್ಲಿ ನಟ; ಈ ಬಾರಿ ಸಾಥ್‌ ನೀಡಿದ ರಾಶಿಕಾ ಶೆಟ್ಟಿ!

ʻಕ್ಯಾಪ್ಟನ್ ಆಗೋ ಯೋಗ್ಯತೆ ಇಲ್ಲʼ; ಅಶ್ವಿನಿಗೆ ಗಿಲ್ಲಿ - ಕಾವ್ಯ ಟಕ್ಕರ್!

Gilli Nata vs Ashwini: ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅಶ್ವಿನಿ ಗೌಡ ಅವರನ್ನು ಅಣಕಿಸುವ ಮೂಲಕ ಹೊಸ ಸಂಚಲನ ಮೂಡಿಸಿದ್ದಾರೆ. ಅಶ್ವಿನಿ ಅವರು ಧ್ರುವಂತ್ ಬಳಿ ರಕ್ಷಣೆ ಕೇಳುವುದನ್ನು ಇಮಿಟೇಟ್ ಮಾಡಿದ ಗಿಲ್ಲಿಗೆ ರಾಶಿಕಾ ಮತ್ತು ಕಾವ್ಯ ಧ್ವನಿಗೂಡಿಸಿದ್ದಾರೆ. ಇದರಿಂದ ಕೆರಳಿದ ಅಶ್ವಿನಿ, "ನೀವು ಕ್ಯಾಪ್ಟನ್ ಆಗಿ ಏನು ದಬಾಕ್ಕಿದ್ದೀರಿ ಅಂತ ಗೊತ್ತು" ಎಂದು ತಿರುಗೇಟು ನೀಡಿದ್ದಾರೆ.

ʻದಿ ಡೆವಿಲ್‌ʼ ಚಿತ್ರದಲ್ಲಿ ನಟಿಸಿದ್ದರ ಬಗ್ಗೆ ಖುಷಿಯಾಗಿರುವ ಗಿಲ್ಲಿ ನಟ; ʻಬಿಗ್‌ ಬಾಸ್‌ʼ ಮನೆಯ ಸ್ಪರ್ಧಿಗಳ ಜೊತೆ ಸಂತಸ ಹಂಚಿಕೊಂಡಿದ್ದ ʻಮಾತಿನ ಮಲ್ಲʼ

ʻಬಿಗ್ ಬಾಸ್ʼ ಮನೆಯೊಳಗೆ The Devil ಬಗ್ಗೆ ಹೇಳಿ ಸಂಭ್ರಮಿಸಿದ್ದ ಗಿಲ್ಲಿ ನಟ!

Gilli Nata in The Devil: ಬಿಗ್ ಬಾಸ್ ಮನೆಯ ಪ್ರಬಲ ಸ್ಪರ್ಧಿ ಗಿಲ್ಲಿ ನಟ, ದರ್ಶನ್ ಅಭಿನಯದ 'ದಿ ಡೆವಿಲ್' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಬಿಡುಗಡೆಯ ಬಗ್ಗೆ ಅವರು ಮನೆಯೊಳಗೆ ದಿನ ಎಣಿಸುತ್ತಿದ್ದರು ಎಂದು ಸ್ಪಂದನಾ ತಿಳಿಸಿದ್ದಾರೆ. ಅಲ್ಲದೆ, ತಮ್ಮ ಪಾತ್ರ ಚಿಕ್ಕದಾದರೂ ಇಂಟರ್ವಲ್‌ನಲ್ಲಿ ದೊಡ್ಡ ಟ್ವಿಸ್ಟ್ ನೀಡಲಿದೆ ಎಂದು ಗಿಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು ಎಂದು ಸ್ಪಂದನಾ ತಿಳಿಸಿದ್ದಾರೆ.

ʻಬಿಗ್‌ ಬಾಸ್‌ʼ ಸ್ಪರ್ಧಿಗಳಿಗೆ ʻರೆಡ್‌ ಕಾರ್ಡ್‌ʼ ಕೊಟ್ರೆ ಏನಾಗುತ್ತೆ ಗೊತ್ತಾ? ಇದನ್ನ ನಿರೂಪಕರು ಕೊಡುವುದು ಏಕೆ?

ʻಬಿಗ್ ಬಾಸ್ʼ ಸ್ಪರ್ಧಿಗಳಿಗೆ ರೆಡ್ ಕಾರ್ಡ್ ಕೊಟ್ಟರೆ ಮುಂದೇನಾಗುತ್ತೆ?

Bigg Boss Red Card Rules: ತಮಿಳು ಬಿಗ್ ಬಾಸ್ ಸೀಸನ್ 9ರಲ್ಲಿ ವಿಜೆ ಪಾರ್ವತಿ ಮತ್ತು ಕಮ್ರುದ್ದೀನ್ ಅಮಾನವೀಯವಾಗಿ ನಡೆದುಕೊಂಡಿದ್ದಕ್ಕಾಗಿ ನಿರೂಪಕ ವಿಜಯ್ ಸೇತುಪತಿ ರೆಡ್ ಕಾರ್ಡ್ ನೀಡಿ ಹೊರಹಾಕಿದ್ದಾರೆ. ಈ ರೆಡ್ ಕಾರ್ಡ್ ಎನ್ನುವುದು ಸ್ಪರ್ಧಿಯೊಬ್ಬರ ಸಂಭಾವನೆಯನ್ನು ಕಸಿದುಕೊಳ್ಳುವುದಲ್ಲದೆ, ಅವರನ್ನು ಶೋನಿಂದ ಕಪ್ಪುಪಟ್ಟಿಗೆ (Blacklist) ಸೇರಿಸುತ್ತದೆ.

Gilli Nata: ಗಿಲ್ಲಿ ಔಟ್‌ ಆದ ಎಂದು ಕುಣಿದು ಕುಪ್ಪಳಿಸಿದ ಡಾಗ್​ ಸತೀಶ್;  ಪಾರ್ಟಿ ಅರೇಂಜ್, ಹಲವರಿಂದ ಟೀಕೆ

ಗಿಲ್ಲಿ ಔಟ್‌ ಆದ ಎಂದು ಕುಣಿದು ಕುಪ್ಪಳಿಸಿದ ಡಾಗ್​ ಸತೀಶ್!

Dog satish: ಬಿಗ್‌ಬಾಸ್‌ ಕನ್ನಡ ಸೀಸನ್‌-12ರ ಹೈಲೈಟ್‌ಗಳಲ್ಲಿ ಗಿಲ್ಲಿ ಕೂಡ ಒಬ್ಬರು. ಸೋಷಿಯಲ್‌ ಮೀಡಿಯಾದಲ್ಲಿ ಗಿಲ್ಲಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಕ್ರೇಜ್‌ ಕೂಡ ಜಾಸ್ತಿ ಇದೆ. ಗಿಲ್ಲಿಯೇ ಈ ಬಿಗ್‌ಬಾಸ್‌ ವಿನ್ನರ್‌ ಎಂದು ಈಗಾಗಲೇ ಹಲವರು ಭವಿಷ್ಯವೂ ನುಡಿದಿದ್ದಾರೆ. ಗಿಲ್ಲಿ ಜೊತೆಗೆ ಬಿಗ್‌ಬಾಸ್‌ ಮನೆಯಲ್ಲಿ ಕೆಲ ವಾರಗಳ ಕಾಲ ಇದ್ದು ಎಲಿಮಿನೇಟ್‌ ಆದ ಸ್ಪರ್ಧಿ ಡಾಗ್‌ ಸತೀಶ್‌ ಹಲವು ಸಂದರ್ಶನಗಳಲ್ಲಿ ಗಿಲ್ಲಿ ಬಗ್ಗೆ ಕೆಟ್ಟದ್ದಾಗಿ ಕಮೆಂಟ್‌ ಮಾಡಿದ್ದೂ ಇದೆ. ಗಿಲ್ಲಿ ಎಷ್ಟು ಕೆಟ್ಟವನು ಅಂದ್ರೆ ಲೈಫಲ್ಲಿ ನಾನು ಅವನಷ್ಟು ಕೆಟ್ಟವನನ್ನ, ಕೊಳಕನನ್ನ, ಕಳ್ಳನನ್ನ ನೋಡೇ ಇಲ್ಲ ಎಂದಿದ್ದರು. ಆದರೀಗ ಗಿಲ್ಲಿ ಹೊರ ಹೋಗಿದ್ದಾರೆ ಎಂದು ಅವರು ಸಂಭ್ರಮಿಸಿದ್ದಾರೆ.

Bigg Boss Kannada 12: ಒರಗಿಕೊಳ್ಳೋಕೆ ರಘು ತೊಡೆ, ಹೆಗಲು ಬೇಕು! ರಾಶಿಕಾ ವಿರುದ್ಧ ಅಶ್ವಿನಿ ಹೇಳಿಕೆ, ಫ್ಯಾನ್ಸ್‌ ಗರಂ

ಒರಗಿಕೊಳ್ಳೋಕೆ ರಘು ತೊಡೆ, ಹೆಗಲು ಬೇಕು! ರಾಶಿಕಾ ವಿರುದ್ಧ ಅಶ್ವಿನಿ ಹೇಳಿಕೆ

Rashika Shetty: ಬಿಗ್‌ ಬಾಸ್‌ ಸೀಸನ್‌ 12ರ ಸೂಪರ್‌ ಸಂಡೇ ವಿಥ್‌ ಬಾದ್‌ಷಾ ಸುದೀಪ ಸಂಚಿಕೆ ಮಸ್ತ್‌ ಆಗಿದೆ. ಮನೆಯ ಸದಸ್ಯರಿಗೆ ಸುದೀಪ್‌ ಅವರು ಒಂದು ಚಟುವಟಿಕೆ ನೀಡಿದ್ದರು. ಅದೇನೆಂದರೆ, ಮನೆಯೊಳಗೆ ಇರುವ ಪಂಚಿಂಗ್‌ ಬ್ಯಾಗ್‌ಗೆ ಪಂಚ್‌ ಮಾಡಬೇಕು, ಅದರ ಮೇಲೆ ಮನೆಯ ಸದಸ್ಯರ ಫೋಟೋವನ್ನು ಹಚ್ಚಿ, ಮನಸ್ಸಿಲ್ಲಿ ಏನು ಹೇಳಬೇಕೋ ಎಂದಿರುತ್ತೋ, ಅದನ್ನು ಮುಖಕ್ಕೆ ಹೊಡೆದಂತೆ ಹೇಳಬೇಕು ಈ ವೇಳೆ ಅಶ್ವಿನಿ ಅವರು ಬೇಕಬಿಟ್ಟಿ ರಾಶಿಕಾ ಬಗ್ಗೆ ಮಾತನಾಡಿದ್ದಾರೆ ಎಂಬ ಆರೋಪ ಸೋಷಿಯಲ್‌ ಮೀಡಿಯಾದಲ್ಲಿ ವ್ಯಕ್ತವಾಗಿದೆ. ರಾಶಿಕಾ ಬಗ್ಗೆ ಅಶ್ವಿನಿ ಹೇಳಿದ ಮಾತು ಫ್ಯಾನ್ಸ್‌ಗೂ ಬೇಸರ ತರಿಸಿದೆ.

Bigg Boss Kannada 12: ರಾಶಿಕಾ - ರಕ್ಷಿತಾ ನಡುವೆ ಹೊಡೆದಾಟ; ನಾಮಿನೇಶನ್‌ ವೇಳೆ ಭರ್ಜರಿ ಕೂಗಾಟ

ರಾಶಿಕಾ - ರಕ್ಷಿತಾ ನಡುವೆ ಹೊಡೆದಾಟ! ಕಾರಣ ಇದು

Rashika Shetty: ಬಿಗ್‌ ಬಾಸ್‌ ಮನೆಯಿಂದ ಸ್ಪಂದನಾ ಔಟ್‌ ಆಗಿದ್ದಾರೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಹೆಚ್ಚಾಗಿದೆ. ಇನ್ನು ಫಿನಾಲೆ ವೀಕ್‌ಗೆ ಒಂದೇ ವಾರ ಇದೆ ಎಂದು ಸುದೀಪ್‌ ಕೂಡ ಘೋಷಣೆ ಮಾಡಿದ್ದಾರೆ. ಅದಕ್ಕೂ ಮುಂಚೆ ಈಗ ನಾಮಿನೇಶನ್‌ ಪ್ರಕ್ರಿಯೆ ನಡೆದಿದೆ. ಈ ವೇಳೆ ರಕ್ಷಿತಾ ಹಾಗೂ ರಾಶಿಕಾ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡಿದ್ದಾರೆ.

Bigg Boss Kannada 12: ಬಿಗ್‌ ಬಾಸ್‌ ಮನೆಯಿಂದ ಸ್ಪಂದನಾ ಸೋಮಣ್ಣ ಔಟ್‌

ಬಿಗ್‌ ಬಾಸ್‌ ಮನೆಯಿಂದ ಸ್ಪಂದನಾ ಸೋಮಣ್ಣ ಔಟ್‌

Spandana: ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಲ್ಲಿ ಸ್ಪಂದನಾ ಸೋಮಣ್ಣ ಬಿಗ್‌ ಬಾಸ್‌ ಮನೆಯಿಂದ ಔಟ್‌ ಆಗಿದ್ದಾರೆ. ಈ ಮೊದಲೇ ಎಲಿಮಿನೇಟ್ ಆಗಬೇಕಿತ್ತು ಎಂಬ ಅಭಿಪ್ರಾಯ ಸೋಷಿಯಲ್‌ ಮೀಡಿಯಾದಲ್ಲಿ ಕೇಳಿ ಬಂದಿತ್ತು. ಅಲ್ಲದೇ ಬಿಗ್ ಬಾಸ್ ಮನೆ ಒಳಗಿನ ಸ್ಪರ್ಧಿಗಳು ಕೂಡ ಈ ಕುರಿತು ಮಾತನಾಡಿದ್ದರು. ಈ ವಾರ ಸ್ಪಂದನಾ ಸೋಮಣ್ಣ ನಾಮಿನೇಟ್ ಆಗಿ ಈಗ ಔಟ್‌ ಆಗಿದ್ದಾರೆ.

Bigg Boss Kannada 12: ಗಿಲ್ಲಿ ಮಾಡೋ ಕಿತಾಪತಿ ರಕ್ಷಿತಾಗೆ ಸಿಕ್ಕಾಪಟ್ಟೆ ಇಷ್ಟ ಅಂತೆ! ಕಿಚಾಯಿಸಿದ ಕಿಚ್ಚ

ಗಿಲ್ಲಿ ಮಾಡೋ ಕಿತಾಪತಿ ರಕ್ಷಿತಾಗೆ ಸಿಕ್ಕಾಪಟ್ಟೆ ಇಷ್ಟ ಅಂತೆ!

Gilli Nata: ಬಿಗ್ ಬಾಸ್ ಆಟದಲ್ಲಿ ಗಿಲ್ಲಿ ನಟ ಅವರು ವೀಕ್ಷಕರ ಫೇವರಿಟ್ ಆಗಿದ್ದಾರೆ. ಗಿಲ್ಲಿ ಬಗ್ಗೆ ರಕ್ಷಿತಾ ಶೆಟ್ಟಿ ಅವರು ಮೊದಲಿನಿಂದಲೂ ಆಸಕ್ತಿ ಹೊಂದಿದ್ದಾರೆ. ಕಿಚ್ಚ ಸುದೀಪ್ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ‘ಕಾವ್ಯಾ ಯಾವಾಗಲೂ ಗಿಲ್ಲಿ ಪಕ್ಕನೇ ಕುಳಿತುಕೊಳ್ಳುತ್ತಾರೆ’ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ. ‘ಇದನ್ನೆಲ್ಲ ನೋಡಿ ಕಾವ್ಯಾ ಎಂಜಾಯ್ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ರಕ್ಷಿತಾಗಂತೂ ಸ್ವಲ್ಪ ಉರಿಯುತ್ತೆ ಎಂದಿದ್ದರು. ಇದೀಗ ಮತ್ತೊಂದು ಪ್ರೋಮೋ ಔಟ್‌ ಆಗಿದೆ. ಗಿಲ್ಲಿ ಮಾಡೋ ಕೀತಾಪತಿ ರಕ್ಷಿತಾಗೆ ತುಂಬಾ ಇಷ್ಟ ಅಂತ ಹೇಳಿಕೊಂಡಿದ್ದಾರೆ.

Bigg Boss Kannada 12: ಅಬ್ಬಬ್ಬಾ! ಧ್ರುವಂತ್‌ ಮೇಲೆ ರಕ್ಷಿತಾ ಶೆಟ್ಟಿಗೆ ಎಷ್ಟೊಂದು ಕೋಪ! ಸಿಕ್ಕಿದ್ದೇ ಚಾನ್ಸ್‌ ಅಂತ ಫುಲ್‌ ಪಂಚ್!‌

ʻಅಸಹ್ಯ ಅನ್ನೋಕೆ ನೀವ್ಯಾರು?ʼ; ಧ್ರುವಂತ್ ಮೇಲೆ ಅಬ್ಬರಿಸಿದ ರಕ್ಷಿತಾ ಶೆಟ್ಟಿ

Bigg Boss 12 Promo: ಬಿಗ್ ಬಾಸ್ ಕನ್ನಡ 12ರ ಇಂದಿನ (ಜನವರಿ 4) ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ 'ಪಂಚಿಂಗ್ ಬ್ಯಾಗ್' ಚಟುವಟಿಕೆ ನೀಡಿದ್ದಾರೆ. ಈ ಟಾಸ್ಕ್‌ನಲ್ಲಿ ರಕ್ಷಿತಾ ಶೆಟ್ಟಿ ಅವರು ಧ್ರುವಂತ್ ವಿರುದ್ಧ ಅಬ್ಬರಿಸಿದ್ದು, ಪಂಚಿಂಗ್ ಬ್ಯಾಗ್ ಕಿತ್ತುಹೋಗುವಷ್ಟು ಜೋರಾಗಿ ಹೊಡೆದಿದ್ದಾರೆ.

Bigg Boss Kannada 12: ಮತ್ತೆ ʻಬಿಗ್‌ ಬಾಸ್‌ʼ ವೇದಿಕೆಗೆ ಬಂದ ಮಾಳು ನಿಪನಾಳ್‌ಗೆ ಖಡಕ್‌ ಪ್ರಶ್ನೆ ಕೇಳಿದ ʻಕಿಚ್ಚʼ ಸುದೀಪ್‌!

ಬಿಗ್ ಬಾಸ್ ಮನೆಯೊಳಗೆ ಯಾಕೆ ಸುಮ್ಮನಿದ್ರಿʼ; ಮಾಳುಗೆ ಕಿಚ್ಚ ಸುದೀಪ್ ಪ್ರಶ್ನೆ

Bigg Boss Kannada 12 Maalu Nipanal: ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದ ಮಾಳು ನಿಪನಾಳ್ ಅವರಿಗೆ ಸುದೀಪ್ ಕಿವಿಮಾತು ಹೇಳಿದ್ದಾರೆ. "ಹೊರಗಡೆ ಅಷ್ಟೊಂದು ಮಾತನಾಡುತ್ತಿರುವ ನೀವು ಮನೆಯೊಳಗೆ ಯಾಕೆ ಮೌನವಾಗಿದ್ರಿ?" ಎಂದು ಸುದೀಪ್ ಪ್ರಶ್ನಿಸಿದಾಗ ಮಾಳು ಅದಕ್ಕೆ ಉತ್ತರಿಸಿದ್ದಾರೆ.

Bigg Boss Kannada 12:  ಕಿಚ್ಚನ ಮುಂದೆ ಮೌನವಾಗಿ ಇದ್ದಿದ್ದು ಗಿಲ್ಲಿಯ ತಂತ್ರಗಾರಿಕೆಯೇ? ಕಾವು ಬಿಟ್ಟುಕೊಡಲಿಲ್ಲ ಏಕೆ?

ಕಿಚ್ಚನ ಮುಂದೆ ಮೌನವಾಗಿ ಇದ್ದಿದ್ದು ಗಿಲ್ಲಿಯ ತಂತ್ರಗಾರಿಕೆಯೇ?

Sudeep: ಬಿಗ್‌ ಬಾಸ್‌ ವೀಕೆಂಡ್‌ ಪಂಚಾಯ್ತಿಯಲ್ಲಿ ಈ ವಾರ ಪ್ರಮುಖ ಹೈಲೈಟ್‌ ಗಿಲ್ಲಿ ನಟ ಆಗಿದ್ದರು. ಕಿಚ್ಚ ಸುದೀಪ್‌ ಅವರೇ ಗಿಲ್ಲಿ ಕ್ಯಾಪ್ಟನ್ಸಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಮನೆಯಲ್ಲಿ ಉಳಿದವರಿಗೆ ಆಟ ಇನ್ನೂ ಅರ್ಥ ಆಗಿಲ್ಲ ಅಂತ ಮನವರಿಕೆ ಮಾಡಿ ಕೊಟ್ಟಿದ್ದಾರೆ. ಇದರ ಜೊತೆಗೆ ನಾಮಿನೇಶನ್‌ ವಿಚಾರಕ್ಕೂ ಗಿಲ್ಲಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ ಕಿಚ್ಚ. ಕಾವ್ಯ ನಾಮಿನೇಟ್‌ ಮಾಡಲು ನೀವೇ 5 ಕಾರಣವನ್ನು ಕೊಡಿ ಎಂದಾಗ ಗಿಲ್ಲಿ ಮೌನವಾಗೇ ಇದ್ದರು. ಈ ಬಾರಿ ಸುದೀಪ್ ಎದುರು ಗಿಲ್ಲಿ ಮೌನವಾಗಿ ಇದ್ದಿದ್ದು ಕೂಡ ಒಂದು ಬಗೆಯ ತಂತ್ರಗಾರಿಕೆ ಎಂಬುದು ಕೆಲವು ನೆಟ್ಟಿಗರ ಅಭಿಪ್ರಾಯ. ಈ ಬಗ್ಗೆ ಪೋಸ್ಟ್‌ ವೈರಲ್‌ ಆಗುತ್ತಿದೆ.

Bigg Boss Kannada 12: ನಿಮ್ಮನ್ನು ಬಿಗ್‌ ಬಾಸ್‌ ಹೊರಗೆ ಏಕೆ ಕಳುಹಿಸಿಲ್ಲ? ಕಾವ್ಯಾಗೆ ಕಿಚ್ಚನ ಖಡಕ್‌ ಪ್ರಶ್ನೆ

ಕಾವ್ಯ ನಿಮ್ಮನ್ನು ಬಿಗ್‌ ಬಾಸ್‌ ಹೊರಗೆ ಏಕೆ ಕಳುಹಿಸಿಲ್ಲ? ಕಿಚ್ಚನ ಪ್ರಶ್ನೆ

Kavya: ಬಿಗ್‌ ಬಾಸ್‌ ಅಂದರೆನೇ ನಿಯಮ. ನಿಯಮ ಅಂದರೆ ಬಿಗ್‌ ಬಾಸ್‌. ಯಾವುದೇ ನಿಯಮ ಉಲ್ಲಂಘನೆ ಆದ್ರೂ ಬಿಗ್‌ ಬಾಸ್‌ ಆ ಕ್ಷಣಕ್ಕೆ ನಿರ್ಧಾರ ತೆಗೆದುಕೊಳ್ತಾರೆ. ಫ್ಯಾಮಿಲಿ ವೀಕ್‌ ಸಂದರ್ಭದಲ್ಲಿ ಕಾವ್ಯ ಮನೆಯವರು ಬಿಗ್‌ ಬಾಸ್‌ ವಾರ್ನಿಂಗ್‌ ಕೊಟ್ಟಿದ್ದರು, ಪದೇ ಪದೇ ತಪ್ಪು ಮಾಡಿದ್ದರು. ಆ ಬಳಿಕ ಅವರನ್ನು ಹೊರಗೆ ಕೂಡ ಕಳಿಸಿದ್ದರು ಬಿಗ್‌ ಬಾಸ್‌. ಈ ಬಗ್ಗೆ ಎಪಿಸೋಡ್‌ ಶುರುವಾಗ್ತದ್ದಂತೆ ಸುದೀಪ್‌ ಪ್ರಸ್ತಾಪಿಸಿದ್ದಾರೆ. ನಿಮ್ಮನ್ನು ಹೊರಗೆ ಏಕೆ ಕಳುಹಿಸಿಲ್ಲ ಎಂಬುದೇ ನನ್ನ ಪ್ರಶ್ನೆ ಎಂದು ನೇರವಾಗಿ ಕಾವ್ಯಗೆ ಹೇಳಿದ್ದಾರೆ ಸುದೀಪ್‌.

Bigg Boss Kannada 12: ಬನಿಯನ್ನೇ ಹಾಕ್ಕೊಂಡು ಇದ್ರು ಬದುಕುತ್ತಿರುವುದು ರಾಜನ ರೀತಿ! ಗಿಲ್ಲಿ ಗುಟ್ಟು ರಿವೀಲ್‌ ಮಾಡಿದ ಕಿಚ್ಚ

ಗಿಲ್ಲಿ ಫುಲ್‌ ಪ್ರಿಪೇರ್ ಆಗಿ ಬಂದಿದ್ದಾರಾ? ಸುದೀಪ್ ಅಚ್ಚರಿ ಹೇಳಿಕೆ

Gilli Nata: ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಈ ವೀಕೆಂಡ್‌ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್‌ ಅವರು ಗಿಲ್ಲಿ ಕ್ಯಾಪ್ಟನ್ಸಿ ಬಗ್ಗೆ ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲ ನಾಮಿನೇಶನ್‌ ವೇಳೆ ಕಾವ್ಯ ಅವರ ಬಗ್ಗೆ ಪಕ್ಷಪಾತ ಮಾಡಿರೋ ಬಗ್ಗೆಯೂ ಚರ್ಚಿಸಿದ್ದಾರೆ. ಗಿಲ್ಲಿ ರೀತಿ ಯಾರು ಕೂಡ ಬಿಗ್‌ಬಾಸ್ ಆಟ ಅರ್ಥ ಮಾಡಿಕೊಂಡಿಲ್ಲ ಎಂದೂ ಹೇಳಿದ್ದಾರೆ. ಕ್ಯಾಪ್ಟೆನ್ಸಿ ಚರ್ಚೆ, ಇತರೆ ಸದಸ್ಯರು ಕ್ಯಾಪ್ಟನ್​​ಗಳಾಗಿದ್ದಾಗ ಗಿಲ್ಲಿಯ ವರ್ತನೆ, ಗಿಲ್ಲಿ ಕ್ಯಾಪ್ಟನ್ ಆಗಿದ್ದಾಗ ಅವರ ವರ್ತನೆ ಎರಡರ ವ್ಯತ್ಯಾಸದ ಬಗ್ಗೆಯೂ ಹೇಳಿದ್ದಾರೆ.

Bigg Boss Kannada 12: ಗಿಲ್ಲಿ ಪಕ್ಕ ಹೋಗಿ ಕಾವ್ಯಾ ಕೂರ್ತಾರೆ ಎಂದ ರಕ್ಷಿತಾ; ನಿಮಗಂತೂ ಪಕ್ಕಾ ಉರಿಯತ್ತೆ ಎಂದ ಕಿಚ್ಚ!

ಗಿಲ್ಲಿ ಪಕ್ಕ ಕಾವ್ಯಾ ಕೂರ್ತಾರೆ ಎಂದ ರಕ್ಷಿತಾ! ಕಿಚ್ಚ ರಿಯಾಕ್ಷನ್‌ ಏನು?

Rakshitha: ಬಿಗ್‌ ಬಾಸ್‌ ಮನೆಯಲ್ಲಿ ಕಾವ್ಯ ಹಾಗೂ ಗಿಲ್ಲಿ ನಟ ಸಖತ್‌ ಹೈಲೈಟ್‌ ಆಗಿರೋ ಜೋಡಿ. ಆದರೆ ಈ ವೀಕೆಂಡ್‌ನಲ್ಲಿ ಗಿಲ್ಲಿ ಮಾಡಿದ ನಾಮಿನೇಶನ್‌ ಎಡವಟ್ಟಿಗೆ ಕಿಚ್ಚ ಕ್ಲಾಸ್‌ ಕೂಡ ತೆಗೆದುಕೊಂಡಿದ್ದಾರೆ. ಇದೆಲ್ಲದರ ಹೊರತಾಗಿ ಗಿಲ್ಲಿ ಮೇಲೆ ರಕ್ಷಿತಾಗೆ ಪಾಸೆಸಿವ್‌ನೆಸ್‌ ಇರೋದು ಗೊತ್ತೇ ಇರುವ ವಿಚಾರ. ಸಾಕಷ್ಟು ಬಾರಿ ತೋರಿಸಿಕೊಂಡಿದ್ದಾರೆ. ಇದೀಗ ಕಿಚ್ಚ ಅವರೇ ಈ ಬಗ್ಗೆ ರಕ್ಷಿತಾಗೆ ಪರೋಕ್ಷವಾಗಿ ಹೇಳಿದ್ದಾರೆ.

Loading...