ಬಿಗ್ ಬಾಸ್ ಮನೆಯಲ್ಲಿ ‘ಗಾಂಚಾಲಿ’ ವಿಷಯ
Bigg Boss Kannada: ಒಂಟಿ-ಜಂಟಿಗಳ ಮಧ್ಯೆ ಜಗಳ ತಾರಕಕ್ಕೇರಿದೆ. ನಿಯಮ ಉಲ್ಲಂಘನೆಯ ವಿಚಾರದಲ್ಲಿ ಎರಡೂ ತಂಡಗಳ ನಡುವೆ ವಾಗ್ವಾದ ನಡೆದಿದೆ. ಅರಸ ಅರಸಿಯರ ಸೇವೆ ಮಾಡದವರಿಗೆ ನಾವ್ಯಾಕೆ ಊಟ ಹಾಕ್ಬೇಕು ಎಂದು ಒಂಟಿಗಳ ಮೇಲೆ ಜಂಟಿಗಳು ರೇಗಾಡಿದ್ದಾರೆ.
ದೊಡ್ಮನೆಯಲ್ಲಿ ಮೂರನೇ ವಾರಕ್ಕೆ ಮೊದಲ ಫಿನಾಲೆ ನಡೆಯಲಿದೆ ಎಂದು ಈಗಾಗಲೇ ಬಿಗ್ ಬಾಸ್ ಹೇಳಿದ್ದಾರೆ. ಇದಕ್ಕೆ ಮೊದಲ ಫಿನಾಲೆ ಕಂಟೆಂಡರ್ ಆಗಿ ಮೊದಲ ವಾರದಲ್ಲಿ ಆಯ್ಕೆ ಆಗಿರುವುದು ಏಕೈಕ ಕಂಟೆಸ್ಟೆಂಟ್ ಕಾಕ್ರೋಚ್ ಸುಧಿ. ಸದ್ಯ ಇವರಿಗೆ ಮಹಾ ಅಧಿಕಾರವೊಂದು ಬಿಗ್ ಬಾಸ್ ನೀಡಿದ್ದಾರೆ. ದೊಡ್ಮನೆಯಲ್ಲಿ ಕಾಕ್ರೋಚ್ ಸುಧಿ ಈಗ ಅಸುರಾಧಿಪತಿ ಆಗಿದ್ದಾರೆ.
ಬಹಳಷ್ಟು ಟ್ವಿಸ್ಟ್-ಟರ್ನ್ ಮೂಲಕ ಸಾಗಿದ ಮೊದಲ ವಾರದ ಬಗ್ಗೆ ಸುದೀಪ್ ಏನು ಹೇಳಬಹುದು?, ಯಾರಿಗೆ ಚಪ್ಪಾಳೆ ನೀಡಬಹುದು?, ಯಾರಿಗೆ ತಮ್ಮ ಸೈಲ್ನಲ್ಲೇ ಖಡಕ್ ವಾರ್ನಿಂಗ್ ನೀಡಬಹುದು ಎಂಬುದು ಕುತೂಹಲ ಮೂಡಿಸಿದೆ. ಇದೀಗ ಕಲರ್ಸ್ ಇಂದಿನ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನ ಒಂದು ಸಣ್ಣ ಝಲಕ್ ಬಿಡುಗಡೆ ಮಾಡಿದೆ.
ಈ ಬಾರಿಯ ನಾಮಿನೇಷನ್ನಲ್ಲಿ ಎಲ್ಲರ ಗಮನ ಸೆಳೆದಿದ್ದು ಮಲ್ಲಮ್ಮ. ಟಾಸ್ಕ್ ಬರಲಿ ಅಥವಾ ಸುಮ್ಮನೆ ನಿಂತುಕೊಳ್ಳಲಿ ಈ ಮೊದಲ ವಾರದಲ್ಲಿ ಮಲ್ಲಮ್ಮ ಫುಲ್ ಮಿಂಚಿದ್ದಾರೆ. ಟಾಸ್ಕ್ನಲ್ಲಿ ಪ್ಯಾಂಟ್ ಹಾಕಿ ಯುವಕರೂ ನಾಚುವಂತೆ ಆಟವಾಡಿದ್ದಾರೆ. ಸ್ವತಃ ಬಿಗ್ ಬಾಸ್ ಅವರಿಗೇ ಮಲ್ಲಮ್ಮನ ಮಾತು ಕೇಳಿ ಸುಸ್ತಾಗಿದೆ. ನಾಮಿನೇಷನ್ನಲ್ಲೂ ಮಲ್ಲಮ್ಮ ಎಲ್ಲರ ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದಾರೆ.
Dog Sathish Remuneration: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಡಾಗ್ ಸತೀಶ್ ಅವರು ಚಂದ್ರಪ್ರಭ ಜೊತೆ ಜಂಟಿ ಗುಂಪಿನಲ್ಲಿದ್ದಾರೆ. ಇವರು ಡಾಗ್ ಬ್ರೀಡರ್ ಆಗಿದ್ದಾರೆ. ಬೀದಿ ನಾಯಿಗಳು, ಕ್ರಾಸ್ ಬ್ರೀಡ್ ಎಂದು ವಿವಿಧ ರೀತಿಯ ನಾಯಿಯನ್ನು ಖರೀದಿ ಮಾಡುತ್ತಾರೆ. ಹಾಗಾದರೆ ಬಿಗ್ ಬಾಸ್ನಲ್ಲಿ ಇವರಿಗೆ ಸಿಗುತ್ತಿರುವ ಸಂಭಾವನೆ ಎಷ್ಟು?, ಇಲ್ಲಿದೆ ನೋಡಿ ಮಾಹಿತಿ.
Crocroch Sudi Dhanush Fight: ಸುಧಿ ಕೋಪಗೊಂಡಿದ್ದಾರೆ. ಇದಕ್ಕೆಲ್ಲ ಮೈನ್ ಕಾರಣ ಧನು. ಸುಮ್ನೆ ಕಿರುಚಿಕೊಳ್ಳುತ್ತ ಇದ್ದೀರಿ ಓ ಅಂತ.. ಆಗಲ್ಲ ಅಂದ್ರೆ ಹೇಳಿ.. ನಮ್ಗೆ ಕೇಳಿಸ್ತಾ ಇಲ್ಲ ಬಿಗ್ ಬಾಸ್.. ನಮ್ಗೆ ಕೆಲ್ಸ ಗೊತ್ತಿಲ್ಲ.. ಸೈಡ್ನಲ್ಲಿ ನಿತ್ಕೊಂಡು ನೋಡ್ತಾ ಇರ್ತೀವಿ ಅಂತ ಹೇಳಿ ಎಂದು ಸುಧಿ ಸಿಟ್ಟಾಗಿದ್ದಾರೆ.
ಗಿಲ್ಲಿ ನಟ ಹಾಗೂ ಅಶ್ವಿನಿ ನಡುವೆ ಪದೇ ಪದೇ ಜಗಳ ಆಗುತ್ತಿದೆ. ಹಾಲ್ನಲ್ಲಿ ನಡೆದ ಈ ಜಗಳ ಇದೀಗ ಬಾತ್ರೂಮ್ ಏರಿಯಾಕ್ಕೂ ಬಂದಿದೆ. ಗಿಲ್ಲಿ-ಕಾವ್ಯಾ ಬಾತ್ ರೂಮ್ ಏರಿಯಾ ಕ್ಲೀನ್ ಮಾಡುತ್ತಿರುತ್ತಾರೆ. ಇವರನ್ನು ಕ್ಲೀನ್ ಮಾಡಿಸುವ ಕೆಲಸ ಒಂಟಿ ತಂಡದ್ದು. ಹೀಗಾಗಿ ಇವರಿಬ್ಬರು ಹೇಗೆ ಕ್ಲೀನ್ ಮಾಡುತ್ತಾರೆ ಎಂದು ನೋಡಿ ಕೊಳ್ಳಲು ಅಶ್ವಿನಿ ಬಂದಿದ್ದಾರೆ.
ಕಳೆದ ಸೀಸನ್ನಲ್ಲಿ ಸ್ವರ್ಗ- ನರಕ ಇದ್ದಂತೆ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಒಂಟಿ ವರ್ಸಸ್ ಜಂಟಿ ಕಾನ್ಸೆಪ್ಟ್ ಇದೆ. ಈ ಕಾನ್ಸೆಪ್ಟ್ ಅದೆಷ್ಟು ದಿನ ನಡೆಯುತ್ತೋ ಗೊತ್ತಿಲ್ಲ. ಆದರೆ, ಈ ಬಾರಿ ಒಬ್ಬರು ವಿನ್ನರ್ ಆಗಬಹುದು ಅಥವಾ ಇಬ್ಬರು ಸಹ ವಿನ್ನರ್ ಆಗಬಹುದು ಎಂಬ ಸೂಚನೆಯನ್ನ ಸ್ವತಃ ಬಿಗ್ ಬಾಸ್ ನೀಡಿದ್ದಾರೆ.
ಜಾನ್ವಿ ತಮ್ಮ ಮಾಜಿ ಪತಿ ಕಾರ್ತಿಕ್ ಅವರಿಂದ ಡಿವೋರ್ಸ್ ಪಡೆದಿದ್ದರು. ಸದ್ಯ ಜಾನ್ವಿ ಹಾಗೂ ಇವರ ಮಗ ಇಬ್ಬರೇ ಇದ್ದಾರೆ. ಇವರ ವಿಚ್ಛೇದನ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಪೋಸ್ಟ್ ಹರಿದಾಡುತ್ತಲೇ ಇತ್ತು. ಇದೀಗ ಮೊದಲ ಬಾರಿ ಬಿಗ್ ಬಾಸ್ ಶೋನಲ್ಲಿ ಜಾನ್ವಿ ಮಲ್ಲಮ್ಮ ಮುಂದೆ ವಿಚ್ಛೇದನ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
Ashwini Gowda Bigg Boss: ಧಾರಾವಾಹಿ ಮತ್ತು ಸಿನಿಮಾ ಜಗತ್ತಿನ ಖ್ಯಾತ ನಟಿ, ನಿರ್ಮಾಪಕಿ, ಕನ್ನಡ ಪರ ಹೋರಾಟಗಾರ್ತಿ ಅಶ್ವಿನಿ ಗೌಡ ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿದ್ದಾರೆ. 18ನೇ ಸ್ಪರ್ಧಿಯಾಗಿ ಇವರು ಮನೆಯೊಳಗೆ ಕಾಲಿಟ್ಟರು. ಇದೀಗ ಇವರ ಕುರಿತು ಇಂಟ್ರೆಸ್ಟಿಂಗ್ ವಿಚಾರವೊಂದು ವೈರಲ್ ಆಗುತ್ತಿದೆ.
ಮಲ್ಲಮ್ಮ ಅವರನ್ನು ಬಿಗ್ ಬಾಸ್ ಕನ್ಫೆಷನ್ ರೂಮ್ಗೆ ಕರೆದಿದ್ದು, ಇಲ್ಲೂ ಮಲ್ಮಮ್ಮನ ಮಾತು ಕೇಳಿ ಬಿಗ್ ಬಾಸ್ಗೆ ತಲೆಕೆಟ್ಟೋಗಿದೆ. ‘ಮಲ್ಲಮ್ಮ ಕನ್ಫೆಷನ್ ರೂಮ್ಗೆ ಬನ್ನಿ’ ಎಂದು ಬಿಗ್ ಬಾಸ್ ಹೇಳಿದ್ದಾರೆ. ರೂಮ್ ಒಳಗೆ ಕಾಲಿಟ್ಟ ತಕ್ಷಣ ಅವರಿಗೆ ಎಲ್ಲಿ ಹೋಗಬೇಕೆಂದು ತಿಳಿದಿಲ್ಲ. ನಮಸ್ತೆ ಸರ್ ಎಂದು ಹೇಳುತ್ತ ಡೋರ್ ಹಾಕಿ ತೆಗೆದು ಮಾಡಿದರು.
‘‘ಈ ಮುಂಚೆ ತಿಳಿಸಿದಂತೆ ಸೀಸನ್ 12 ಒಂದರ ವಿರುದ್ಧ ಎರಡು.. ಡಬಲ್ ಟ್ವಿಸ್ಟ್ಗಳ ಸೀಸನ್ನಲ್ಲಿ ಫಿನಾಲೆ ಕೂಡ ಡಬಲ್.. ಯಾರಿಗೆ ಗೊತ್ತು ವಿನ್ನರ್ ಕೂಡ ಡಬಲ್ ಆಗಬಹುದು’’ ಎಂದು ಬಿಗ್ ಬಾಸ್ ಕೊನೆಯಲ್ಲಿ ಹೇಳುವ ಮೂಲಕ ಸ್ಪರ್ಧಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಈ ವಿಚಾರ ಕೇಳಿ ಮನೆಯ ಸದಸ್ಯರಿಗೆ ಢವ-ಢವ ಶುರುವಾಗಿದೆ.
Star Fashion 2025: ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ನ ಆರಂಭದ ಎಪಿಸೋಡ್ನಲ್ಲಿ ಸೆಲೆಬ್ರೆಟಿ ಡಿಸೈನರ್ ಭರತ್ ಸಾಗರ್ ವಿಶೇಷ ಔಟ್ಫಿಟ್ನಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಏನಿದು ಸ್ಪೆಷಲ್ ಔಟ್ಫಿಟ್ಸ್? ಇದರ ವಿಶೇಷತೆಯೇನು? ಈ ಕುರಿತಂತೆ ಖುದ್ದು ಡಿಸೈನರ್ ವಿಶ್ವವಾಣಿ ಟಿವಿ ಸ್ಪೆಷಲ್ಗೆ ವಿವರಿಸಿದ್ದಾರೆ.