ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

bigg boss

ʻಬಿಗ್‌ ಬಾಸ್‌ʼ ಗೆದ್ದ ಮೇಲೆ ಗಿಲ್ಲಿ ನಟನಿಗೆ ಸಿಕ್ಕಿತ್ತು ʻಕಾಟೇರʼ ಡೈರೆಕ್ಟರ್‌ ತರುಣ್‌ ಸುಧೀರ್‌ ಕಡೆಯಿಂದ ಅತ್ಯಮೂಲ್ಯ ಸಲಹೆ

ʻಬಿಗ್ ಬಾಸ್ʼ ವಿನ್ನರ್ ಗಿಲ್ಲಿ ನಟನಿಗೆ ತರುಣ್ ಸುಧೀರ್ ಹೇಳಿದ ಕಿವಿಮಾತೇನು?

ಗಿಲ್ಲಿ ನಟ ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರ ಗೆಲುವಿನ ನಂತರ ಸಖತ್ ಬ್ಯುಸಿಯಾಗಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಅವರು ಗಿಲ್ಲಿ ನಟನಿಗೆ ಅಮೂಲ್ಯ ಸಲಹೆಗಳನ್ನು ನೀಡಿದ್ದು, ನಟನೆಗಿಂತ ಹೆಚ್ಚಾಗಿ ಬರವಣಿಗೆ ಮತ್ತು ನಿರ್ದೇಶನದತ್ತ ಗಮನ ಹರಿಸಲು ಸೂಚಿಸಿದ್ದಾರೆ. ಬಿಗ್ ಬಾಸ್ ಯಶಸ್ಸಿನ ನಂತರ ಉಂಟಾಗುತ್ತಿರುವ ಒತ್ತಡವನ್ನು ಸಂಭ್ರಮದ ಭಾಗವಾಗಿ ಸ್ವೀಕರಿಸುವಂತೆ ಗಿಲ್ಲಿಗೆ ತರುಣ್ ಕಿವಿಮಾತು ಹೇಳಿದ್ದಾರೆ.

ಸಿನಿಮಾ ನಿರ್ದೇಶಕನಾಗುವ ಗಿಲ್ಲಿ ನಟನ ಕನಸು ಎಲ್ಲಿಗೆ ಬಂತು? ʻಬಿಗ್‌ ಬಾಸ್‌ ವಿನ್ನರ್‌ʼ ಡೈರೆಕ್ಟರ್‌ ಆಗೋದು ಯಾವಾಗ?

ಬಿಗ್ ಬಾಸ್ ವಿನ್ನರ್ 'ಗಿಲ್ಲಿ' ನಟ ಸಿನಿಮಾ ನಿರ್ದೇಶನ ಮಾಡೋದ್ಯಾವಾಗ?

ಬಿಗ್ ಬಾಸ್ ವಿಜೇತ ಗಿಲ್ಲಿ ನಟ ನಾಯಕನಾಗಿ ನಟಿಸಿರುವ 'ಸೂಪರ್ ಹಿಟ್' ಸಿನಿಮಾ ಫೆಬ್ರವರಿ 27 ರಂದು ಬಿಡುಗಡೆಯಾಗುತ್ತಿದೆ. ಈ ಮಧ್ಯೆ ತಮ್ಮ ನಿರ್ದೇಶನದ ಕನಸಿನ ಬಗ್ಗೆ ಮಾತನಾಡಿರುವ ಗಿಲ್ಲಿ ನಟ, ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. "ನಿರ್ದೇಶನ ಎಂಬುದು ದೊಡ್ಡ ಜವಾಬ್ದಾರಿ" ಅಂತಲೂ ಅವರು ಹೇಳಿದ್ದಾರೆ.

Bigg Boss Kannada 12: ಮತ್ತೆ ಒಂದಾದ ಬಿಗ್‌ಬಾಸ್ ಸ್ಪರ್ಧಿಗಳು; ಅಶ್ವಿನಿ ಮಸ್ತ್‌ ಡ್ಯಾನ್‌, ಗಿಲ್ಲಿ ಭರ್ಜರಿ ಕಾಮಿಡಿ!

ಮತ್ತೆ ಒಂದಾದ ಬಿಗ್‌ಬಾಸ್ ಸ್ಪರ್ಧಿಗಳು; ಅಶ್ವಿನಿ ಮಸ್ತ್‌ ಡ್ಯಾನ್‌!

Gilli Nata: ಬಿಗ್‌ ಬಾಸ್‌ ಸೀಸನ್‌ 12 ಮುಗಿದು ಹಲವು ದಿನಗಳ ಕಳೆದರೂ ಇನ್ನೂ ಅದರ ಹವಾ ನಿಂತಿಲ್ಲ. ಆಗಾಗ ಸ್ಪರ್ಧಿಗಳು ಸಂದರ್ಶನ ಮೂಲಕ ದರ್ಶನ ಮಾಡುತ್ತಲೇ ಇದ್ದಾರೆ. ಗಿಲ್ಲಿ ಕಾಮಿಡಿಗೆ ವೀಕ್ಷಕರು ಫಿದಾ ಆಗಿದ್ದರು. ಇದೀಗ ಮತ್ತೆ ಬಿಗ್‌ಬಾಸ್ ಮನೆ ಸ್ಪರ್ಧಿಗಳೆಲ್ಲಾ ಒಂದ್ಕಡೆ ಸೇರಿ ಮಸ್ತ್ ಎಂಜಾಯ್ ಮಾಡಿದ್ದಾರೆ. ಕಾರ್ಯಕ್ರಮದ ಹೆಸರು ‘ದೊಡ್ಮನೆ ಹಬ್ಬ . ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ʻಗಿಲ್ಲಿ ನಟನಿಗೆ ಕೇಳಿದಷ್ಟು ಸಂಭಾವನೆ ಕೊಟ್ಟಿದ್ದೀವಿ, ಆದ್ರೂ ಪ್ರಮೋಷನ್‌ ಮಾಡ್ತಿಲ್ಲʼ; ಬಿಗ್‌ ಬಾಸ್‌ ವಿನ್ನರ್‌ ವಿರುದ್ಧ ದಿಢೀರ್‌ ಅಂತ ಫಿಲ್ಮ್‌ ಚೇಂಬರ್‌ಗೆ ದೂರು!

ಗಿಲ್ಲಿ ನಟನ ವಿರುದ್ಧ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ನಿರ್ಮಾಪಕ

Gilli Actor Controversy: 'ಸರ್ಕಾರಿ ಶಾಲೆ H8' ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ, ಈಗ ಚಿತ್ರದ ಪ್ರಚಾರ ಕಾರ್ಯಗಳಿಗೆ ಅಸಹಕಾರ ತೋರುತ್ತಿದ್ದಾರೆಂದು ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಕೇಳಿದಷ್ಟು ಸಂಭಾವನೆ ಪಡೆದೂ ಕರೆ ಸ್ವೀಕರಿಸುತ್ತಿಲ್ಲ ಮತ್ತು ಸಿನಿಮಾ ಬಿಡುಗಡೆಯ ದಿನವೂ ಪ್ರಮೋಷನ್‌ಗೆ ಬರುತ್ತಿಲ್ಲ ಎಂದು ನಿರ್ಮಾಪಕರು ಗಂಭೀರ ಆರೋಪ ಮಾಡಿದ್ದಾರೆ.

ʻಬಿಗ್‌ ಬಾಸ್‌ʼ ಶೋನಿಂದ ಹೊರಬರುತ್ತಿದ್ದಂತೆಯೇ ಗುಡ್‌ ನ್ಯೂಸ್‌ ನೀಡಿದ ಅಭಿಷೇಕ್ ಶ್ರೀಕಾಂತ್

ʻಬಿಗ್ ಬಾಸ್ʼನಿಂದ ಹೊರಬಂದ ಬಳಿಕದ ಸಿಹಿ ಸುದ್ದಿ ನೀಡಿದ ಅಭಿಷೇಕ್ ಶ್ರೀಕಾಂತ್

ಬಿಗ್ ಬಾಸ್ ಸ್ಪರ್ಧಿ ಅಭಿಷೇಕ್ ಶ್ರೀಕಾಂತ್ ಅವರು ತಮ್ಮ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ಮೈಸೂರು ಮೂಲದ ಪ್ರಶಾಂತ್ ಎಂ.ಎಲ್. ನಿರ್ದೇಶನದ ಫೆಬ್ರವರಿ 30 ಹೆಸರಿನ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರದಲ್ಲಿ ಅಭಿಷೇಕ್ ಮೊದಲ ಬಾರಿಗೆ ಹಾರರ್ ಮಾದರಿಯ ಕಥೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಅಂದು ಮಚ್ಚು, ಇಂದು ಸಿಗರೇಟು; ʻಬಿಗ್‌ ಬಾಸ್‌ʼ ಖ್ಯಾತಿಯ ರಜತ್‌ ವಿರುದ್ಧ ಮೈಸೂರಿನಲ್ಲಿ ದೂರು ದಾಖಲು!

'ಬಿಗ್ ಬಾಸ್' ರಜತ್ ಹೊಸ ರೀಲ್ಸ್‌ ವಿವಾದ; ದೂರು ದಾಖಲು!

Rajath Bujji Controversy: ಬಿಗ್‌ ಬಾಸ್‌ ಖ್ಯಾತಿಯ ರಜತ್‌ ವಿರುದ್ಧ ಮೈಸೂರಿನ ಪಾರಂಪರಿಕ ಹಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅನುಮತಿ ಇಲ್ಲದೆ ಸಿಗರೇಟು ಸೇದುತ್ತಾ ರೀಲ್ಸ್ ಮಾಡಿದ ಆರೋಪ ಕೇಳಿಬಂದಿದೆ. ಈ ಹಿಂದೆ ಲಾಂಗು ಹಿಡಿದು ಜೈಲು ಸೇರಿದ್ದ ರಜತ್, ಈಗ ಮತ್ತೆ ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ ತೋರಿದ್ದಾರೆಂದು ಕರ್ನಾಟಕ ಸೇನಾ ಪಡೆ ಲಕ್ಷ್ಮಿಪುರಂ ಠಾಣೆಯಲ್ಲಿ ದೂರು ನೀಡಿದೆ.

Rakshitha Shetty: ಇಂದಿಗೂ ಆ ನೋವು ಮನಸ್ಸಿನಲ್ಲಿ ಉಳಿದಿದೆ! ರಕ್ಷಿತಾ ಶೆಟ್ಟಿ ಪೋಸ್ಟ್

ಇಂದಿಗೂ ಆ ನೋವು ಮನಸ್ಸಿನಲ್ಲಿ ಉಳಿದಿದೆ! ರಕ್ಷಿತಾ ಶೆಟ್ಟಿ ಪೋಸ್ಟ್

Bigg Boss Kannada 12: ಬಿಗ್‌ ಬಾಸ್‌ ಸೀಸನ್‌ 12 ರಲ್ಲಿ ಮೊದಲ ರನ್ನರ್​ ಅಪ್​ ಆದ ಬಳಿಕ, ಹಲವಾರು ಕಾರ್ಯಕ್ರಮಗಳು, ಸಂದರ್ಶನಗಳು ಎಂದೆಲ್ಲಾ ಸಖತ್ ಬ್ಯೂಸಿಯಾಗಿದ್ದ ರನ್ನರ್ ಅಫ್ ರಕ್ಷಿತಾ ಶೆಟ್ಟಿ ಇದೀಗ ಸ್ವಲ್ಪ ಫ್ರೀ ಆದಂತೆ ಕಂಡುಬಂದಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ, ತಮ್ಮ ಬಿಗ್‌ಬಾಸ್ ಮನೆಯ ಪಯಣದ ಬಗ್ಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಭಾವನೆಗಳು, ಬಾಂಧವ್ಯ ಮತ್ತು ಅನೇಕ ನೆನಪುಗಳಿಂದ ಕಟ್ಟಿದ ಮನೆ ಅದು ಎಂದು ರಕ್ಷಿತಾ ಶೆಟ್ಟಿ ಹೇಳಿಕೊಂಡಿದ್ದಾರೆ.

Gilli Nata:  ದುಡ್ಡು ಇರೋರನ್ನ ಮಾತ್ರ ಗಿಲ್ಲಿ ಮೀಟ್‌ ಆಗ್ತಾರೆ; ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಗಂಭೀರ ಆರೋಪ

ಟ್ಯಾಟೂ ಹಾಕಿಸಿಕೊಂಡ ಫ್ಯಾನ್​ ಗಿಲ್ಲಿ ಬಗ್ಗೆ ಗಂಭೀರ ಆರೋಪವಿದು!

Gilli Nata Fan: ಬಿಗ್ ಬಾಸ್ 12 ಟ್ರೋಫಿ ಗೆದ್ದ ಕ್ಷಣದಿಂದಲೇ ಗಿಲ್ಲಿ ನಟನ ಕ್ರೇಜ್ ಹೆಚ್ಚಾಗಿದೆ. ಸಿನಿಮಾತಾರೆಯರು, ರಾಜಕಾರಣಿಗಳು, ವಿವಿಧ ರಿಯಾಲಿಟಿ ಶೋಗಳು, ಸಮಾರಂಭಗಳು, ಕಾರ್ಯಕ್ರಮಗಳಿಗೆ ಗಿಲ್ಲಿ ನಟ ಅತಿಥಿಯಾಗಿದ್ದಾರೆ. ಗಿಲ್ಲಿ ಸದ್ಯ ಕೈಗೆ ಸಿಗೋದು ಕಷ್ಟವೇ ಆಗಿದೆ. ಆದರೀಗ ಗಿಲ್ಲಿಗೆ ಅಭಿಮಾನವೇ ಸಮಸ್ಯೆಯಾಗಿರುವಂತಿದೆ. ಗಿಲ್ಲಿ ಫೋಟೋ ಹಚ್ಚೆ ಹಾಕಿಸಿಕೊಂಡ ಅಭಿಮಾನಿ ಗಿಲ್ಲಿ ಅಭಿಮಾನಿಗಳನ್ನು ಗೌರವಿಸುವುದಿಲ್ಲ ಎಂದು ಹಲವು ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ಆರೋಪಿಸಿದ್ದಾರೆ.

ಮೊದಲ ಕಾರು ಖರೀದಿಸಿದ ಖುಷಿಗೆ ಕಣ್ಣೀರಿಟ್ಟ ʻಬಿಗ್‌ ಬಾಸ್‌ʼ ಖ್ಯಾತಿಯ ಶ್ರುತಿ ಪ್ರಕಾಶ್‌; ಈ ಕಾರಿನ ಬೆಲೆ ಎಷ್ಟು ಗೊತ್ತಾ?

ಮೊದಲ ಕಾರು ಖರೀದಿಸಿ ಭಾವುಕರಾದ ʻಬಿಗ್ ಬಾಸ್ʼ ಖ್ಯಾತಿಯ ಶ್ರುತಿ ಪ್ರಕಾಶ್!

ಶ್ರುತಿ ಪ್ರಕಾಶ್‌ ಅವರು ತಮ್ಮ ಹತ್ತು ವರ್ಷಗಳ ಪರಿಶ್ರಮದ ಫಲವಾಗಿ ಮೊದಲ ಕಾರನ್ನು ಖರೀದಿಸಿ ಭಾವುಕರಾಗಿದ್ದಾರೆ. ಸ್ಕೋಡಾ ಸ್ಲಾವಿಯಾ ಮಾಂಟೆ ಕಾರ್ಲೋ ಆವೃತ್ತಿಯ ಐಷಾರಾಮಿ ಕಾರಿನ ಓನರ್‌ ಆಗಿರುವ ಅವರು, ಮುಂಬೈನಲ್ಲಿ ತಾವು ನಡೆಸಿದ ಹೋರಾಟವನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಎಲ್ರಿಗಿಂತ ಮುಂಚೆ ಗಿಲ್ಲಿ ನಟನ ಬಗ್ಗೆ ಭವಿಷ್ಯ ನುಡಿದಿದ್ದ ಜಗ್ಗೇಶ್‌; ಗೆದ್ದ ಪಳಾರ್‌ಗೆ ಸನ್ಮಾನಿಸಿದ ʻನವರಸ ನಾಯಕʼ

ಗಿಲ್ಲಿ ಬಗ್ಗೆ ಜಗ್ಗೇಶ್ ಹೇಳಿದ್ದ ಭವಿಷ್ಯ ಸತ್ಯ; ಗೆದ್ದ ಪಳಾರ್‌ಗೆ ಸನ್ಮಾನ!

ಬಿಗ್‌ ಬಾಸ್‌ ವಿಜೇತ ಗಿಲ್ಲಿ ನಟನ ಕುರಿತು ನವರಸ ನಾಯಕ ಜಗ್ಗೇಶ್ ಅವರು ವರ್ಷಗಳ ಹಿಂದೆಯೇ ನುಡಿದಿದ್ದ ಭವಿಷ್ಯ ಈಗ ನಿಜವಾಗಿದೆ. "ನೀನು ಮುಂದೆ ಬಾಡಿಗಾರ್ಡ್‌ಗಳ ಮಧ್ಯೆ ಓಡಾಡುವಷ್ಟು ಬೆಳೆಯುತ್ತೀಯಾ" ಎಂದು ಜಗ್ಗೇಶ್ ಅಂದು ಹೇಳಿದ್ದರು. ಈಗ ಬಿಗ್ ಬಾಸ್ ಗೆದ್ದು ಬಂದ ಗಿಲ್ಲಿಯನ್ನು ಜಗ್ಗೇಶ್ ಮನೆಗೆ ಕರೆಸಿ ಪೇಟ ತೊಡಿಸಿ ಸನ್ಮಾನಿಸಿದ್ದಾರೆ.

ಚಂದನವನದ ತ್ರಿಮೂರ್ತಿಗಳ ಆಶೀರ್ವಾದ ಪಡೆದ ಗಿಲ್ಲಿ ನಟ; ದಿಗ್ಗಜರ ಪುಣ್ಯಭೂಮಿಯಲ್ಲಿ ಬಿಗ್‌ ಬಾಸ್‌ 12 ವಿನ್ನರ್

ಚಂದನವನದ ದಿಗ್ಗಜರ ಪುಣ್ಯಭೂಮಿಗೆ ಗಿಲ್ಲಿ ನಟ ಭೇಟಿ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ವಿಜೇತರಾದ ಗಿಲ್ಲಿ ನಟ ಅವರು ಚಂದನವನದ ತ್ರಿಮೂರ್ತಿಗಳಾದ ಡಾ. ರಾಜ್‌ಕುಮಾರ್‌, ಡಾ. ವಿಷ್ಣುವರ್ಧನ್‌ ಮತ್ತು ಡಾ. ಅಂಬರೀಷ್ ಅವರ ಪುಣ್ಯಭೂಮಿಗಳಿಗೆ ಭೇಟಿ ನೀಡಿ, ಅವರ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ.

Dog Satish : 80 ಜನರ ಮೇಲೆ ಕೇಸ್, 8 ಜನರು ಅರೆಸ್ಟ್ ; ಬೆದರಿಕೆ ಹಾಕಿದವರ ವಿರುದ್ಧ ಸತೀಶ್‌ ದೂರು

ಬೆದರಿಕೆ ಹಾಕಿದವರ ವಿರುದ್ಧ ಡಾಗ್‌ ಸತೀಶ್‌ ದೂರು

Bigg Boss Satish: ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಡಾಗ್ ಸತೀಶ್ ಬಿಗ್‌ ಬಾಸ್‌ ಮನೆಗಿಂತ ಹೊರಗಡೆ ಟ್ರೋಲ್‌ ಆಗಿದ್ದೇ ಹೆಚ್ಚು. ಕೆಲವರು ಸತೀಶ್ ಅವರಿಗೆ ಕೊಲೆ ಬೆದರಿಕೆ ಹಾಕುವ ಮಟ್ಟಕ್ಕೆ ಹೋಗಿದ್ದರು ಅಂತ ಸ್ವತಂ ಸತೀಶ್‌ ಅವರೇ ಮಾಧ್ಯಮವೊಂದಕ್ಕೆ ನೇರ ಹೇಳಿಕೆ ನೀಡಿದ್ದಾರೆ. 80 ಜನರ ಮೇಲೆ ಕೇಸ್ಹಾ ಕಿದ್ದೇನೆ. ಅದರಲ್ಲಿ 8 ಜನರು ಅರೆಸ್ಟ್ ಆಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

Gilli Nata:  ಬಡವನ ಮುಖವಾಡ ಅಂದವ್ರಿಗೆ ಗಿಲ್ಲಿ ಖಡಕ್ ಕೌಂಟರ್

ಬಡವನ ಮುಖವಾಡ ಅಂದವ್ರಿಗೆ ಗಿಲ್ಲಿ ಖಡಕ್ ಕೌಂಟರ್

Gilli Bigg Boss Kannada 12: ಗಿಲ್ಲಿ ನಟ ಅವರು ಅಪಾರವಾದ ಜನಪ್ರಿಯತೆ ಸಂಪಾದಿಸಿದ್ದಾರೆ. ಹೋದಲ್ಲಿ ಬಂದಲ್ಲಿ ಜನರು ಮುತ್ತಿಕೊಳ್ಳುತ್ತಿದ್ದಾರೆ. ಶುಕ್ರವಾರ ಬೆಂಗಳೂರಿನಲ್ಲಿ ಚಿನ್ನದ ಅಂಗಡಿ ಉದ್ಘಾಟನೆಗೆ ಹೋದಾಗ ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಬಿಗ್ ಬಾಸ್​​ಗೆ ಹೋಗುವಾಗ ಗಿಲ್ಲಿ ನಟನಿಗೆ ಇನ್​​​ಸ್ಟಾಗ್ರಾಮ್​​ನಲ್ಲಿ ಇದ್ದಿದ್ದು ಕೇವಲ 1 ಲಕ್ಷ ಹಿಂಬಾಲಕರು. ಈಗ ಆ ಸಂಖ್ಯೆ 2 ಮಿಲಿಯನ್ ತಲುಪಿದೆ. 20 ಲಕ್ಷ ಹಿಂಬಾಲಕರನ್ನು ಸಂಪಾದಿಸಿ ಅವರು ದಾಖಲೆ ಬರೆದಿದ್ದಾರೆ.

ಬಿಗ್‌ ಬಾಸ್‌ಗೆ ಹೋಗೋದಕ್ಕೂ ಮುನ್ನ ಗಿಲ್ಲಿ ನಟ ʻಪಿಆರ್‌ʼ ನೇಮಕ ಮಾಡಿದ್ದು ನಿಜ! ಆದರೆ, ಇಲ್ಲೊಂದು ಟ್ವಿಸ್ಟ್ ಇದೆ!

ಗಿಲ್ಲಿ ನಟನ ಗೆಲುವಿನ ಹಿಂದೆ PR ತಂತ್ರವಿದೆಯಾ? ಆರೋಪಗಳಿಗೆ ಖಡಕ್ ಉತ್ತರ!

ಬಿಗ್‌ ಬಾಸ್‌ ಕನ್ನಡ 12 ವಿಜೇತ ಗಿಲ್ಲಿ ನಟ ಅವರು ತಮ್ಮ ಗೆಲುವಿನ ಹಿಂದೆ 'ಪಿಆರ್' ತಂತ್ರವಿದೆ ಎಂಬ ಆರೋಪಕ್ಕೆ ತೆರೆ ಎಳೆದಿದ್ದಾರೆ. ತಮಗೆ ಪಿಆರ್ ಪದದ ಅರ್ಥವೇ ಗೊತ್ತಿರಲಿಲ್ಲ ಎಂದು ಹೇಳಿರುವ ಅವರು, ಕೇವಲ ಇನ್‌ಸ್ಟಾಗ್ರಾಮ್ ಪೋಸ್ಟ್ ಹಾಗೂ ಕ್ಯಾಪ್ಷನ್‌ಗಳ ನಿರ್ವಹಣೆಗಾಗಿ ಮಾತ್ರ ಒಂದು ಟೀಮ್ ನೇಮಿಸಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಮನೆಗೆ ಕರೆಸಿ ಗಿಲ್ಲಿ ನಟನಿಗೆ 10 ಲಕ್ಷ ರೂ. ನೀಡಿದ ಸುದೀಪ್;‌ ಬಿಗ್‌ ಬಾಸ್‌ ವಿನ್ನರ್‌ಗೆ ʻಕಿಚ್ಚʼ ಕೊಟ್ಟ ಸಲಹೆ ಏನು ಗೊತ್ತಾ?

Bigg Boss 12: ಗಿಲ್ಲಿಯನ್ನು ಮನೆಗೆ ಕರೆಸಿ 10 ಲಕ್ಷ ರೂ. ನೀಡಿದ ಸುದೀಪ್!

Bigg Boss Kannada 12 Winner: ಬಿಗ್‌ ಬಾಸ್‌ ಗೆದ್ದ ಗಿಲ್ಲಿ ನಟನಿಗೆ ಕಿಚ್ಚ ಸುದೀಪ್ ಅವರು ತಾವೇ ಘೋಷಿಸಿದಂತೆ 10 ಲಕ್ಷ ರೂಪಾಯಿ ನಗದು ಬಹುಮಾನವನ್ನು ಹಸ್ತಾಂತರಿಸಿದ್ದಾರೆ. ಗಿಲ್ಲಿಯನ್ನು ತಮ್ಮ ಮನೆಗೆ ಆಹ್ವಾನಿಸಿದ ಸುದೀಪ್, ಹಣದ ಜೊತೆಗೆ ಜೀವನದ ದೊಡ್ಡ ಪಾಠವನ್ನು ಬೋಧಿಸಿದ್ದಾರೆ.

Ugramm Manju Marriage: ಧರ್ಮಸ್ಥಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಉಗ್ರಂ ಮಂಜು

ಧರ್ಮಸ್ಥಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಉಗ್ರಂ ಮಂಜು

Ugram Manju: ಕನ್ನಡದ ಜನಪ್ರಿಯ ಪೋಷಕ ನಟ, ಮಾಜಿ ಬಿಗ್​​ಬಾಸ್ ಕನ್ನಡ ಸ್ಪರ್ಧಿ ಆಗಿರುವ ಉಗ್ರಂ ಮಂಜು ವೈವಾಹಿಕ ಜೀವನಕ್ಕೆ (ಜ.23) ಕಾಲಿಟ್ಟಿದ್ದಾರೆ. ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಗುರು, ಹಿರಿಯ ಆಶೀರ್ವಾದದೊಂದಿಗೆ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಧರ್ಮಸ್ಥಳದ (dharmasthala) ಮಹೋತ್ಸವ ಭವನದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಆಪ್ತರು ಭಾಗಿಯಾಗಿದ್ದರು.

Kavya Shaiva: ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದು ಇಷ್ಟ ಆಗಿಲ್ಲ; ಕಾವ್ಯ

ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದು ಇಷ್ಟ ಆಗಿಲ್ಲ; ಕಾವ್ಯ

Bigg Boss Kannada 12: ಬಿಗ್ ಬಾಸ್ ಸೀಸನ್ 12ರ 4ನೇ ರನ್ನರ್ ಅಪ್ ಕಾವ್ಯ ಶೈವ (Kavya Shaiva) ಹೊರಹೊಮ್ಮಿದ್ದರು. ಬಿಗ್‌ಬಾಸ್‌ ಕನ್ನಡ ಸೀಸನ್‌ನಲ್ಲಿ ಗಮನ ಸೆಳೆದ ಜೋಡಿ ಅಂದರೆ ಗಿಲ್ಲಿ–ಕಾವ್ಯ ಜೋಡಿ. ಮನೆಯೊಳಗೆ ಗಿಲ್ಲಿ ಸದಾ ಕಾವ್ಯ ಅವರೊಂದಿಗೆ ಹಾಸ್ಯಭರಿತ ಮಾತುಗಳು, ಜೋಕ್‌ಗಳು ಹಾಗೂ ಸ್ನೇಹಪೂರ್ಣ ವರ್ತನೆಯ ಮೂಲಕ ಗಮನ ಸೆಳೆಯುತ್ತಿದ್ದರು. ಇದರಿಂದಾಗಿ ಇಬ್ಬರ ನಡುವಿನ ಆತ್ಮೀಯತೆ ವೀಕ್ಷಕರಿಗೆ ಮೆಚ್ಚುಗೆಯಾಯಿತು. ಇದೀಗ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ʻಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ, ಹೊಸ ದಾರಿ ಕಡೆ ಮುಖ ಮಾಡುವ ಹೊತ್ತುʼ; ಕನ್ನಡಿಗರಿಗೆ ಧನ್ಯವಾದ ಹೇಳಿದ ಗಿಲ್ಲಿ ನಟ

ʻನನ್ನ ಬಗ್ಗೆ ಒಂದೇ ಒಂದು ನೆಗೆಟಿವ್ ವಿಡಿಯೋ ನೋಡಿಲ್ಲʼ- ಗಿಲ್ಲಿ ನಟ

Bigg Boss 12 Winner Gilli Nata: ಸಾಮಾಜಿಕ ಜಾಲತಾಣದಲ್ಲಿ ಗಿಲ್ಲಿ ನಟ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ತಮಗೆ ಬೆಂಬಲ ನೀಡಿದ ಸೈನಿಕರು, ಆಟೋ ಚಾಲಕರು ಮತ್ತು ಕನ್ನಡಿಗರಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಅಭಿಮಾನಿಗಳು ತಮ್ಮ ಹೆಸರಿನ ಹಚ್ಚೆ ಹಾಕಿಸಿಕೊಂಡಿರುವುದು ಹಾಗೂ ಸಂಕ್ರಾಂತಿಯಂದು ಹೋರಿಗಳ ಮೇಲೆ ಚಿತ್ರ ಬಿಡಿಸಿ ಗೌರವಿಸಿದ್ದಕ್ಕೆ ಭಾವುಕರಾಗಿದ್ದಾರೆ.

Suraj Singh: ಗಿಲ್ಲಿ-ಅಶ್ವಿನಿ ಫೈಟ್ ಬಗ್ಗೆ ಸೂರಜ್ ನೇರ ಮಾತು!

ಗಿಲ್ಲಿ-ಅಶ್ವಿನಿ ಫೈಟ್ ಬಗ್ಗೆ ಸೂರಜ್ ನೇರ ಮಾತು!

Ashwini Gowda Gilli Nata: ಬಿಗ್ ಬಾಸ್ ಮೂಲಕ ಮಿಂಚಿದ ಸೂರಜ್ , ಈಗ 'ಪವಿತ್ರ ಬಂಧನ' ಧಾರಾವಾಹಿಯ ನಾಯಕರಾಗಿದ್ದಾರೆ. ಬಾಣಸಿಗರಾಗಿದ್ದ ಅವರು ಮಾಡೆಲಿಂಗ್ ನಂತರ ಬಿಗ್ ಬಾಸ್ ಪ್ರವೇಶಿಸಿ ಜನಪ್ರಿಯತೆ ಗಳಿಸಿದರು. ಸೂರಜ್ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನವೂ ಹೈಲೈಟ್ ಆದರು. `ಪವಿತ್ರ ಬಂಧನ’ ಧಾರಾವಾಹಿಯಲ್ಲಿ ಸೂರಜ್ ಅವರು ದೇವದತ್ ದೇಶ್​ಮುಖ್ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ತಿಲಕ್ ಗೌಡ ಪಾತ್ರದಲ್ಲಿ ಯಶಸ್ ಗೌಡ ಕಾಣಿಸಿಕೊಂಡಿದ್ದಾರೆ.

Rakshitha Shetty: ಬಂಗುಡೆ ಮೀನು ಹಿಡಿದು ಸಂಭ್ರಮಿಸಿದ ರಕ್ಷಿತಾ ಶೆಟ್ಟಿ; ಹುಟ್ಟೂರಿನಲ್ಲಿ ಭರ್ಜರಿ ಸ್ವಾಗತ

ಬಂಗುಡೆ ಮೀನು ಹಿಡಿದು ಸಂಭ್ರಮಿಸಿದ ರಕ್ಷಿತಾ ಶೆಟ್ಟಿ

Bigg Boss Kannada: ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಗಿಲ್ಲಿ ನಟ ವಿನ್‌ ಆದರೆ ರಕ್ಷಿತಾ ಶೆಟ್ಟಿ ರನ್ನರ್‌ ಅಪ್‌ ಆದರು. ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಹಾಗೂ ರಕ್ಷಿತಾ ಜೋಡಿಗೆ ಸಖತ್‌ ಫಿದಾ ಆಗಿದ್ರು ವೀಕ್ಷಕರು. ಅದರಂತೆ ಈ ಜೋಡಿಯೇ ವಿನ್ನರ್‌, ರನ್ನರ್‌ ಆಗಿದ್ದಾರೆ. ಇಷ್ಟೂ ದಿನ ಸಂದರ್ಶನದಲ್ಲೇ ಬ್ಯುಸಿಯಾದ ರಕ್ಷಿತಾ ಈಗ ಹುಟ್ಟೂರಿಗೆ ಹೋಗಿದ್ದಾರೆ. ಅಲ್ಲಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಬಂಗುಡೆ ಮೀನು ಹಿಡಿದು ಸಂಭ್ರಮಿಸಿದ್ದಾರೆ ರಕ್ಷಿತಾ.

Mutant Raghu: ರಘು ತೂಕದಲ್ಲಿ ಇಷ್ಟೊಂದು ಬದಲಾವಣೆನಾ? ಫ್ಯಾನ್ಸ್‌ ಶಾಕ್‌

ರಘು ತೂಕದಲ್ಲಿ ಇಷ್ಟೊಂದು ಬದಲಾವಣೆನಾ? ಫ್ಯಾನ್ಸ್‌ ಶಾಕ್‌

Raghu Bigg Boss kannada: ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಗಿಲ್ಲಿ, ರಘು ಹಾಗೂ ರಕ್ಷಿತಾ ಪ್ರಮುಖ ಹೈಲೈಟ್‌ ಆಗಿದ್ದರು. ರಘು ಅವರು ಬಿಗ್‌ ಬಾಸ್‌ ಬರೋ ಮುಂಚೆಯೇ ಸಖತ್‌ ಫೇಮ್‌ ಅಲ್ಲಿ ಇದ್ದವರು. ಪವರ್‌ ಲಿಫ್ಟಿಂಗ್‌ ಕ್ರೀಡೆಯಲ್ಲಿ ಕರ್ನಾಟಕ ಹಾಗೂ ಭಾರತದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ ಇವರಿಗೆ ಕರ್ನಾಟಕ ಸರ್ಕಾರ 2022 ರಲ್ಲಿ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವವಿಸಿದೆ.ಪವರ್‌ ಲಿಫ್ಟಿಂಗ್‌ ಕ್ರೀಡೆಯಲ್ಲಿ ಈ ಮಹತ್ವದ ಪ್ರಶಸ್ತಿ ಸ್ವೀಕರಿಸಿದ ರಾಜ್ಯದ ಮೊಟ್ಟ ಮೊದಲ ಪವರ್‌ ಲಿಫ್ಟರ್‌ ಎಂಬ ಕೀರ್ತಿಗೆ ಕೂಡ ರಾಘವೇಂದ್ರ ಹೊಂಡದಕೇರಿ ಭಾಜನರಾಗಿದ್ದರು.

Bigg Boss Kannada 12: ಗಿಲ್ಲಿ ನಿಜವಾದ ಬಡವ ಅಲ್ಲ ಎಂದಿದ್ದ ಅಶ್ವಿನಿ;  ಧನುಷ್ ತಿರುಗೇಟು!

ಗಿಲ್ಲಿ ನಿಜವಾದ ಬಡವ ಅಲ್ಲ ಎಂದಿದ್ದ ಅಶ್ವಿನಿ; ಧನುಷ್ ತಿರುಗೇಟು!

Dhanush Gowda: ಬಿಗ್‌ ಬಾಸ್‌ ಫಿನಾಲೆ ಅಲ್ಲಿ ಟಾಪ್‌ 6 ಹಂತದಲ್ಲಿ ಗಿಲ್ಲಿ ನಟ, ಕಾವ್ಯ ಶೈವ, ರಘು, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಹಾಗೂ ಧನುಷ್ ಗೌಡ ಇದ್ದರು. ಈ 6 ಸ್ಪರ್ಧಿಗಳ ಪೈಕಿ ಮೊದಲು ಔಟ್ ಆದವರು ಧನುಷ್ ಗೌಡ. ಧನುಷ್ ಗೌಡಗೆ 6ನೇ ಸ್ಥಾನ ಲಭಿಸಿತ್ತು. ‘ಬಿಗ್ ಬಾಸ್’ ಬಾಯಿಂದಲೇ ‘ಗ್ರ್ಯಾಂಡ್ ಟಾಸ್ಕ್ ಮಾಸ್ಟರ್ ಎಂದು ಕರೆಯಿಸಿಕೊಂಡಿದ್ದ ಧನುಷ್ ಗೌಡ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ಇದೀಗ ವಿಶ್ವವಾಣಿ ಸಂದರ್ಶನದಲ್ಲಿ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

Bigg Boss Kannada 12: PR ಇಲ್ಲದೇ ಇಲ್ಲಿ ತನಕ ಬಂದೆ! ಗಿಲ್ಲಿ ಬಗ್ಗೆ ಧ್ರುವಂತ್‌ ಹೇಳಿದ್ದೇನು?

PR ಇಲ್ಲದೇ ಇಲ್ಲಿ ತನಕ ಬಂದೆ! ಗಿಲ್ಲಿ ಬಗ್ಗೆ ಧ್ರುವಂತ್‌ ಹೇಳಿದ್ದೇನು?

Dhruvanth: ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಗಿಲ್ಲಿ ನಟ ವಿನ್ನರ್‌ ಆಗಿದ್ದಾರೆ. ಇದೀಗ ಮನೆಯ ಎಲ್ಲ ಸ್ಪರ್ಧಿಗಳು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಧ್ರುವಂತ್ ಅವರು ಸಾಕಷ್ಟು ಚರ್ಚೆ ಆಗಿದ್ದರು. ಅವರಿಗೆ ಸೀಸನ್ ಚಪ್ಪಾಳೆಯನ್ನು ಸುದೀಪ್ ನೀಡಿದರು. ನಂತರ ಇದಕ್ಕೆ ಟೀಕೆ ಸಿಕ್ಕಿದ್ದರಿಂದ ವಾರದ ಚಪ್ಪಾಳೆ ಎಂದು ಕಲರ್ಸ್ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಬದಲಾಯಿಸಿತ್ತು. ಇದೀಗ ವಿಶ್ವವಾಣಿ ಜೊತೆ ಮಾತನಾಡಿದ್ದಾರೆ ಧ್ರುವಂತ್‌.

Ashwini Gowda: ಸುದೀಪ್‌ ಅವರು ನನ್ನ ಕೈ ಬಿಡ್ತಾರೆ ಅಂತ ಅಂದುಕೊಂಡಿರಲಿಲ್ಲ! ಅಶ್ವಿನಿ ಗೌಡ

ಸುದೀಪ್‌ ಅವರು ನನ್ನ ಕೈ ಬಿಡ್ತಾರೆ ಅಂತ ಅಂದುಕೊಂಡಿರಲಿಲ್ಲ! ಅಶ್ವಿನಿ ಗೌಡ

Sudeep: ಬಿಗ್‌ ಬಾಸ್‌ ಸೀಸನ್‌ 12ರ ವಿನ್ನರ್‌ (Winner) ಗಿಲ್ಲಿ ಆಗಿದ್ದಾರೆ. ಬಿಗ್‌ ಬಾಸ್‌ ಶುರು ಆದಾಗಿನಿಂದಲೂ ಅಶ್ವಿನಿ ಗೌಡ ಹಾಗೂ ಗಿಲ್ಲಿ ಮಧ್ಯೆ ,ಮಾತಿನ ಚಕಮಕಿ ನಡೆಯುತ್ತಲೇ ಇತ್ತು. ಅಶ್ವಿನಿ ಇದೀಗ ಶಾಕಿಂಗ್ ಹೇಳಿಕೆ ನೀಡಿದ್ದಾರೆ. BBK 12ರ ಒಟ್ಟಾರೆ ವೋಟ್​​​ ನಂಬರ್ ಆಚೆ ಬಂದರೆ ನಾನೇ ವಿನ್ನರ್ ಎಂದು ಅಶ್ವಿನಿ ಗೌಡ ಸವಾಲು ಹಾಕಿದ್ದಾರೆ. ಗಿಲ್ಲಿಯನ್ನು ವಿನ್ನರ್ ಎಂದು ಒಪ್ಪಿಕೊಳ್ಳಲು ಅಶ್ವಿನಿ ಗೌಡ ಅವರು ಸಿದ್ಧವಾಗಿಲ್ಲ. ಗಿಲ್ಲಿ ಬಗ್ಗೆ ಅಸಮಾಧನ ಹೊರ ಹಾಕಿದ್ದಾರೆ.

Loading...