ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗಾಜಾದಲ್ಲಿ ಇಸ್ರೇಲಿ ಸೈನಿಕರ ಕ್ರೂರ ಕೃತ್ಯ; ಮಗುವಿಗೆ ಸಿಗರೇಟಿನಿಂದ ಸುಟ್ಟು, ಕಾಲಿಗೆ ಮೊಳೆ ಚುಚ್ಚಿ ಹಿಂಸೆ?

Brutal act by Israeli soldiers: ಮಧ್ಯ ಗಾಜಾದಲ್ಲಿ 18 ತಿಂಗಳ ಬಾಲಕನೊಬ್ಬನಿಗೆ ಇಸ್ರೇಲಿ ಪಡೆಗಳು ಚಿತ್ರಹಿಂಸೆ ನೀಡಿದ ಅಮಾನವೀಯ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಮಗುವನ್ನು ಅಲ್ಲೇ ಬಿಟ್ಟು ತೆರಳುವಂತೆ ಬಾಲಕನ ತಂದೆಗೆ ಸೂಚಿಸಲಾಗಿತ್ತು. ಈ ವೇಳೆ ಮಗುವಿಗೆ ಸಿಗರೇಟಿನಿಂದ ಸುಟ್ಟು, ಕಾಲಿಗೆ ಮೊಳೆ ಚುಚ್ಚಿ ಕ್ರೂರ ಕೃತ್ಯ ಎಸಗಲಾಗಿದೆ ಎನ್ನಲಾಗಿದ್ದು, ಮಗುವಿನ ಮೇಲಿರುವ ಗಾಯದ ಗುರುತಗಳಿರುವ ದೃಶ್ಯದ ವಿಡಿಯೊ ವೈರಲ್ ಆಗಿದೆ.

ಸಾಂದರ್ಭಿಕ ಚಿತ್ರ

ಗಾಜಾ, ಮಾ.27: ಮಧ್ಯ ಗಾಜಾದಲ್ಲಿ (Gaza) 18 ತಿಂಗಳ ಬಾಲಕನೊಬ್ಬನಿಗೆ ಇಸ್ರೇಲಿ ಪಡೆಗಳು (Israeli soldiers) ಚಿತ್ರಹಿಂಸೆ ನೀಡಿ, ಆತನ ತಂದೆಯಿಂದ ತಪ್ಪೊಪ್ಪಿಗೆ ಪತ್ರ ಬರೆಯಿಸುವಂತೆ ಒತ್ತಾಯಿಸಿವೆ ಎಂದು ಪ್ಯಾಲೆಸ್ಟೈನ್ ಟಿವಿ ವರದಿ ಮಾಡಿದೆ. ವರದಿಯ ಪ್ರಕಾರ, ಕರೀಮ್ ಎಂದು ಗುರುತಿಸಲಾದ ಮಗುವನ್ನು ಅವನ ತಂದೆ ಒಸಾಮಾ ಅಬು ನಾಸರ್ ಅವರೊಂದಿಗೆ ಅಲ್-ಮಘಾಜಿ ನಿರಾಶ್ರಿತರ ಶಿಬಿರದ ಬಳಿ ಬಂಧಿಸಲಾಗಿತ್ತು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆಗುತ್ತಿರುವ ದೃಶ್ಯಗಳಲ್ಲಿ ಮಗುವಿನ ದೇಹದ ಮೇಲೆ ಗಾಯಗಳನ್ನು ತೋರಿಸಿವೆ.

ಇತ್ತೀಚೆಗೆ ಜೀವನೋಪಾಯಕ್ಕಾಗಿ ನಂಬಿಕೊಂಡಿದ್ದ ಕುದುರೆಯ ಸಾವಿನಿಂದ ಅಬು ನಾಸರ್ ಭಾವನಾತ್ಮಕವಾಗಿ ಆಘಾತಕ್ಕೊಳಗಾಗಿದ್ದರು. ತನ್ನ ಚಿಕ್ಕ ಮಗನನ್ನು ಸರಬರಾಜು ಖರೀದಿಸಲು ಕರೆದುಕೊಂಡು ಹೋಗುತ್ತಿದ್ದಾಗ, ಮನೆಯ ಬಳಿ ಇಸ್ರೇಲಿ ಗುಂಡಿನ ದಾಳಿ ನಡೆಯಿತು. 18 ತಿಂಗಳ ಮಗುವನ್ನು ನೆಲದ ಮೇಲೆ ಬಿಟ್ಟು ಮಿಲಿಟರಿ ಚೆಕ್‌ಪಾಯಿಂಟ್ ಕಡೆಗೆ ನಡೆಯಲು ಸೈನಿಕರು ಅವರಿಗೆ ಆದೇಶಿಸದರು ಎಂದು ಹೇಳಲಾಗಿದೆ. ಅಲ್ಲಿ ಆತನನ್ನು ವಿವಸ್ತ್ರಗೊಳಿಸಿ ವಿಚಾರಣೆ ನಡೆಸಲಾಯಿತು.

ವಿಚಾರಣೆಯ ಸಮಯದಲ್ಲಿ, ಇಸ್ರೇಲಿ ಪಡೆಗಳು ಮಗುವನ್ನು ಅವನ ತಂದೆಯ ಸಮ್ಮುಖದಲ್ಲಿ ಚಿತ್ರಹಿಂಸೆ ನೀಡಿವೆ ಎನ್ನಲಾಗಿದೆ. ಬಾಲಕನ ಕಾಲಿನಲ್ಲಿ ಸಿಗರೇಟಿನಿಂದ ಸುಟ್ಟ ಗಾಯಗಳು ಮತ್ತು ಮೊಳೆಯನ್ನು ಚುಚ್ಚಿ ಉಂಟಾದ ಗಾಯಗಳನ್ನು ದೃಢಪಡಿಸಿದೆ.

ಬಾಲಕನ ದೇಹದ ಮೇಲಿರುವ ಗಾಯದ ಗುರುತುಗಳ ವಿಡಿಯೊ:



ಸುಮಾರು ಹತ್ತು ಗಂಟೆಗಳ ನಂತರ ಮಗು ಕರೀಮ್‌ನನ್ನು ಬಿಡುಗಡೆ ಮಾಡಲಾಯಿತು. ಅಲ್-ಮಘಾಜಿಯಲ್ಲಿರುವ ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿಯ ಮೂಲಕ ಅವರ ಕುಟುಂಬಕ್ಕೆ ಮರಳಿದ್ದಾನೆ. ಆದರೆ, ಬಾಲಕನ ತಂದೆ ಇಸ್ರೇಲಿ ವಶದಲ್ಲಿದ್ದಾರೆ. ತಂದೆಯ ಬಿಡುಗಡೆಗೆ ಮಧ್ಯಪ್ರವೇಶಿಸುವಂತೆ ಸಂಬಂಧಿಕರು ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. ಅವರಿಗೆ ತುರ್ತಾಗಿ ನಿರಂತರ ವೈದ್ಯಕೀಯ ಆರೈಕೆಯ ಅಗತ್ಯವಿದೆ ಎಂದು ಹೇಳಿದ್ದಾರೆ.

"ಮಾನವೀಯತೆ ಎಂದಿಗೂ ಸಂಘರ್ಷಕ್ಕೆ ಬಲಿಯಾಗಬಾರದು"; ಗಾಜಾ ಯೋಜನೆಗೆ ಅಸ್ತು ಎಂದ ಪ್ರಧಾನಿ

ಜಗತ್ತಿನಲ್ಲಿ ಎಲ್ಲಿಯೂ ಯಾವುದೇ ಮಗುವಿಗೂ ಇಂತಹ ಕ್ರೌರ್ಯ ಉಂಟಾಗಬಾರದು. ವಿಶೇಷವಾಗಿ ಅಮೆರಿಕದ ತೆರಿಗೆದಾರರ ಹಣದಿಂದ ನಡೆಯುವಂತಹುದಾದರೆ ಅದು ಇನ್ನಷ್ಟು ಅಸಹ್ಯಕರ. ಇಂತಹ ಕ್ರಮಗಳು ಅಂತಾರಾಷ್ಟ್ರೀಯ ಕಾನೂನುಗಳಿಗೆ ಹಾಗೂ ಮಾನವೀಯ ಮೌಲ್ಯಗಳಿಗೂ ವಿರುದ್ಧವಾದ ಗಂಭೀರ ಉಲ್ಲಂಘನೆಗಳಾಗಿವೆ ಎಂದು ಐಸಿಎಆರ್ ಹೇಳಿದೆ.

ನಮ್ಮ ದೇಶವು ಈ ಅಪರಾಧಗಳಲ್ಲಿ ತನ್ನ ಪಾಲ್ಗೊಳ್ಳುವಿಕೆಯನ್ನು ಅಂತ್ಯಗೊಳಿಸಬೇಕು. ಅಮೆರಿಕದ ತೆರಿಗೆದಾರರ ಹಣವನ್ನು ಮಕ್ಕಳ ಹಿಂಸೆ ಅಥವಾ ಹತ್ಯೆಗೆ ಬಳಸಲಾಗದಂತೆ ನೋಡಿಕೊಳ್ಳುವುದು ಕಾಂಗ್ರೆಸ್‌ನ ಜವಾಬ್ದಾರಿಯಾಗಿದೆ. ಮನಸ್ಸಾಕ್ಷಿ ಇರುವ ಪ್ರತಿಯೊಬ್ಬ ಶಾಸಕರೂ ನಿಯಂತ್ರಣ ತಪ್ಪಿರುವ ಇಸ್ರೇಲಿ ಆಡಳಿತಕ್ಕೆ ನೀಡಲಾಗುತ್ತಿರುವ ಸೈನಿಕ ಸಹಾಯವನ್ನು ನಿಲ್ಲಿಸಲು ಮತ ಹಾಕಬೇಕು ಎಂದು ಅದು ತಿಳಿಸಿದೆ.

ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಈ ಸುದ್ದಿಯನ್ನು ಹಂಚಿಕೊಂಡು ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಇರಾನ್ ಮಾನವೀಯತೆಗಾಗಿ ಹೋರಾಡುತ್ತಿದೆ. ಜಗತ್ತು ಗಾಜಾದೊಂದಿಗೆ ಮತ್ತು ಈ ವಸಾಹತುಶಾಹಿ ಭಯೋತ್ಪಾದಕ ಆಡಳಿತದ ವಿರುದ್ಧವಾಗಿದೆ. ಅದು ಮಕ್ಕಳ ಮೇಲೆ ಚಿತ್ರಹಿಂಸೆ ನೀಡುವವರ ಜೊತೆ ನಿಂತಿದೆ ಎಂದು ಬರೆದಿದ್ದಾರೆ.

ಅಕ್ಟೋಬರ್ 2025 ರಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದ ಜಾರಿಗೆ ಬಂದ ನಂತರ ಗಾಜಾದಾದ್ಯಂತ ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಕನಿಷ್ಠ 677 ಪ್ಯಾಲೆಸ್ಟೀನಿಯರು ಪ್ರಾಣ ಕಳೆದುಕೊಂಡಿದ್ದು, 1,813 ಜನರು ಗಾಯಗೊಂಡಿದ್ದಾರೆ.