ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತದ ಮೇಲೆ ದಾಳಿ ಮಾಡುವುದಾಗಿ ಪಾಕ್ ರಕ್ಷಣಾ ಸಚಿವ ಬೆದರಿಕೆ; ಕೋಲ್ಕತ್ತಾ ಟಾರ್ಗೆಟ್ ಅಂದಿದ್ಯಾಕೆ?

Pakistan-India tensions: ಯಾವುದೇ ದುಸ್ಸಾಹಸಕ್ಕೆ ಮುಂದಾದರೆ ಭಾರತದ ವಿರುದ್ಧ ತೀವ್ರ ಪ್ರತಿಕ್ರಿಯೆ ನೀಡುವುದಾಗಿ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಪ್ರಚೋದನೆ ಉಂಟಾದರೆ ಪಾಕಿಸ್ತಾನವು ಕೋಲ್ಕತ್ತಾವನ್ನು ಗುರಿಯಾಗಿಸಬಹುದು ಎಂದು ಅವರು ಹೇಳಿದ್ದಾರೆ. ನಾವು ಕೋಲ್ಕತ್ತಾವನ್ನು ಟಾರ್ಗೆಟ್ ಮಾಡಲಿದ್ದೇವೆ ಎಂದು ಆಸಿಫ್ ಹೇಳಿದರು.

ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ (ಸಂಗ್ರಹ ಚಿತ್ರ)

ಇಸ್ಲಾಮಾಬಾದ್, ಏ.5: ಯಾವುದೇ ದುಸ್ಸಾಹಸಕ್ಕೆ ಮುಂದಾದರೆ ಭಾರತದ ವಿರುದ್ಧ ತೀವ್ರ ಪ್ರತಿಕ್ರಿಯೆ ನೀಡುವುದಾಗಿ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ (Khawaja Asif) ಎಚ್ಚರಿಕೆ ನೀಡಿದ್ದಾರೆ. ಯಾವುದೇ ಪ್ರಚೋದನೆ ಉಂಟಾದರೆ ಪಾಕಿಸ್ತಾನವು (Pakistan) ಕೋಲ್ಕತ್ತಾವನ್ನು ಗುರಿಯಾಗಿಸಬಹುದು ಎಂದು ಅವರು ಹೇಳಿದ್ದಾರೆ. ಸಿಯಾಲ್ಕೋಟ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತವು ಫಾಲ್ಸ್ ಫ್ಲ್ಯಾಗ್ ಕಾರ್ಯಾಚರಣೆ (false flag operation) ನಡೆಸುವ ಸಾಧ್ಯತೆ ಇದೆ ಎಂದು ಕೂಡ ಆರೋಪಿಸಿದರು.

ಈ ಬಾರಿ ಭಾರತ ಯಾವುದೇ ಕಾರ್ಯಾಚರಣೆಯನ್ನು ನಡೆಸಲು ಪ್ರಯತ್ನಿಸಿದರೆ, ದೇವರ ಇಚ್ಛೆಯಂತೆ, ನಾವು ಕೋಲ್ಕತ್ತಾವನ್ನು ಟಾರ್ಗೆಟ್ ಮಾಡಲಿದ್ದೇವೆ ಎಂದು ಆಸಿಫ್ ಹೇಳಿದರು. ಸ್ಥಳೀಯ ಕಾರ್ಯಕರ್ತರು ಅಥವಾ ಭಾರತೀಯ ವಶದಲ್ಲಿರುವ ಪಾಕಿಸ್ತಾನಿಗಳನ್ನು ಬಳಸಿಕೊಂಡು ಘಟನೆಯನ್ನು ರೂಪಿಸುವ ಸೂಚನೆಗಳಿವೆ ಎಂದು ಆಸಿಫ್ ಹೇಳಿದರು. ಆದರೆ ಆರೋಪವನ್ನು ಬೆಂಬಲಿಸಲು ಯಾವುದೇ ಪುರಾವೆಗಳನ್ನು ಒದಗಿಸಲಿಲ್ಲ.

ಆದರೆ, ಈ ಹೇಳಿಕೆಯನ್ನು ಬೆಂಬಲಿಸಲು ಆಸಿಫ್ ಯಾವುದೇ ಪುರಾವೆಗಳನ್ನು ಒದಗಿಸಿಲ್ಲ. ಯಾವುದೇ ದಾಳಿಗೆ ಪಾಕಿಸ್ತಾನದ ಪ್ರತಿಕ್ರಿಯೆ ತ್ವರಿತ, ನಿರ್ಣಾಯಕ ಎಂದು ಅವರು ಹೇಳಿದ್ದರು.

ಭಾರತದ ವಿರುದ್ಧ ಕಾರ್ಯಾಚರಿಸುವ ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ಈಗಲೂ ಆಶ್ರಯ ನೀಡುತ್ತಿದೆ; ಅಮೆರಿಕದ ವರದಿಯಲ್ಲಿದೆ ಬೆಚ್ಚಿ ಬೀಳಿಸುವ ಅಂಶ

ಪಾಕಿಸ್ತಾನದಿಂದ ಯಾವುದೇ ದುರಂತ ಸಂಭವಿಸಿದರೆ ಅಭೂತಪೂರ್ವ ಮತ್ತು ನಿರ್ಣಾಯಕ ಪ್ರತಿಕ್ರಿಯೆ ಉಂಟಾಗುತ್ತದೆ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಸಿದ ನಂತರ ಆಸಿಫ್ ಅವರ ಹೇಳಿಕೆಗಳು ಬಂದಿವೆ. ಕಳೆದ ವರ್ಷ ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯ ನಂತರ ಉದ್ವಿಗ್ನತೆ ಉಂಟಾಗಿದ್ದು, ಇದು ಭಾರತ ಮತ್ತು ಪಾಕಿಸ್ತಾನದ ನಡುವೆ ನಾಲ್ಕು ದಿನಗಳ ಸಂಘರ್ಷಕ್ಕೆ ಕಾರಣವಾಯಿತು.

ಇರಾನ್ ಯುದ್ಧದ ಮಧ್ಯೆ ಪಾಕಿಸ್ತಾನದಿಂದ ಭಾರತದ ವಿರುದ್ಧ ಸಂಚು

ಇರಾನ್ ಯುದ್ಧದ ನಡುವೆ ಯಾವುದೇ ದುಸ್ಸಾಹಸಕ್ಕೆ ಪ್ರಯತ್ನಿಸದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದರು. 2025ರ ಭಯಾನಕ ಪಹಲ್ಗಾಮ್ ದಾಳಿ ಮತ್ತು ಭಾರತದ ಆಪರೇಷನ್ ಸಿಂದೂರ್‌ ಕಾರ್ಯಾಚರಣೆಯ ಮೊದಲ ವಾರ್ಷಿಕೋತ್ಸವಕ್ಕೆ ಕೆಲವೇ ದಿನಗಳಿರುವಾಗ ರಕ್ಷಣಾ ಸಚಿವರು ಈ ಸಂದೇಶ ರವಾನಿಸಿದ್ದರು.

ಕೇರಳದಲ್ಲಿ ಆಯೋಜಿಸಿದ ಸೈನಿಕ್ ಸಮ್ಮಾನ್ ಸಮ್ಮೇಳನದಲ್ಲಿ ಏಪ್ರಿಲ್ 2ರಂದು ಮಾತನಾಡಿದ್ದ ರಾಜನಾಥ್, ಮಧ್ಯಪ್ರಾಚ್ಯದಲ್ಲಿನ ಪ್ರಕ್ಷುಬ್ಧತೆಯ ಲಾಭವನ್ನು ಪಡೆದು ಪಾಕಿಸ್ತಾನ ತೊಂದರೆ ಕೊಡಲು ಪ್ರಯತ್ನಿಸಿದರೆ ಭಾರತದ ಪ್ರತಿಕ್ರಿಯೆ ಕಠಿಣವಾಗಿರುತ್ತದೆ ಎಂದು ಗುಡುಗಿದ್ದರು.

ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಪಾಕಿಸ್ತಾನವು ಒಂದು ರೀತಿಯ ದುಸ್ಸಾಹಸಕ್ಕೆ ಪ್ರಯತ್ನಿಸುವ ಸಾಧ್ಯತೆ ಇದೆ. ಅದು ಸಂಭವಿಸಿದಲ್ಲಿ ಭಾರತದ ಪ್ರತಿಕ್ರಿಯೆ ಕಠಿಣವಾಗಿರುತ್ತದೆ ಎಂದು ರಾಜನಾಥ್ ಸಿಂಗ್ ಖಡಕ್ ಸಂದೇಶ ನೀಡಿದ್ದರು. ಅಲ್ಲದೆ, ಆಪರೇಷನ್ ಸಿಂದೂರ್ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎಂದು ಒತ್ತಿ ಹೇಳಿದ್ದರು.