ಗರ್ಭಾಶಯದ ಅಸಹಜ ರಕ್ತಸ್ರಾವ ಕುರಿತು ಉಚಿತ ಆಯುರ್ವೇದ ಸಮಾಲೋಚನೆ ಮತ್ತು ಚಿಕಿತ್ಸಾ ಶಿಬಿರ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಉಡುಪಿ ಇವರ ವತಿಯಿಂದ ಗರ್ಭಾಶಯದ ಆಸಹಜ ರಕ್ತಸ್ರಾವ (Abnormal Uterine Bleeding – AUB) ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗಾಗಿ ಉಚಿತ ಆಯುರ್ವೇದ ಸಮಾಲೋಚನೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.
-
ಉಡುಪಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಉಡುಪಿ ಇವರ ವತಿಯಿಂದ ಗರ್ಭಾಶಯದ ಅಸಹಜ ರಕ್ತಸ್ರಾವ (Abnormal Uterine Bleeding – AUB) ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗಾಗಿ ಉಚಿತ ಆಯುರ್ವೇದ ಸಮಾಲೋಚನೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.
ಗರ್ಭಾಶಯದ ಅಸಹಜ ರಕ್ತಸ್ರಾವ (AUB) ಎಂದರೆ, ಋತುಚಕ್ರದ ನಿಯಮಿತ ಸಮಯ ದಲ್ಲಿ ಅಥವಾ ಎರಡು ಋತುಚಕ್ರಗಳ ಮಧ್ಯದಲ್ಲಿ ಗರ್ಭಾಶಯದಿಂದ ಅಧಿಕ ಪ್ರಮಾಣದ ಹಾಗೂ ದೀರ್ಘಕಾಲದ ರಕ್ತಸ್ರಾವವಾಗುವುದು. ಈ ಸಮಸ್ಯೆ ಮಹಿಳೆಯರ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಒತ್ತಡಕ್ಕೂ ಕಾರಣವಾಗುತ್ತದೆ.
ಇದನ್ನೂ ಓದಿ: Health Tips: ನಿತ್ಯದ ಆರೋಗ್ಯಕ್ಕೆ ಈ ತರಕಾರಿಗಳನ್ನು ಸೇವಿಸಲು ಮರೆಯಬೇಡಿ!
AUB ಸಮಸ್ಯೆಯ ಸಾಮಾನ್ಯ ಲಕ್ಷಣಗಳು:
1.ಋತುಚಕ್ರದ ಸಮಯದಲ್ಲಿ ಅಧಿಕ ಪ್ರಮಾಣದ ರಕ್ತಸ್ರಾವ
2.ಸಾಮಾನ್ಯಕ್ಕಿಂತ ಹೆಚ್ಚು ದಿನಗಳವರೆಗೆ ನಡೆಯುವ ಅಥವಾ ತೀವ್ರ ಹೊಟ್ಟೆನೋವಿನಿಂದ ಕೂಡಿದ ಋತುಸ್ರಾವ
3.ಋತುಚಕ್ರದ ಮಧ್ಯದಲ್ಲೇ ಅನಿಯಮಿತ ರಕ್ತಸ್ರಾವ
4.ಅಧಿಕ ರಕ್ತಸ್ರಾವದಿಂದ ಉಂಟಾಗುವ ರಕ್ತಹೀನತೆ, ದೌರ್ಬಲ್ಯ ಮತ್ತು ದಣಿವು
ಈ ರೀತಿಯ ಲಕ್ಷಣಗಳನ್ನು ಅನುಭವಿಸುತ್ತಿರುವ ಮಹಿಳೆಯರು ತಜ್ಞರ ಸಲಹೆ ಪಡೆಯು ವುದು ಅತ್ಯಂತ ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಶಿಬಿರದ ಪ್ರಮುಖ ಪ್ರಯೋಜನಗಳು:
1.ಅನುಭವಸಂಪನ್ನ ಸ್ತ್ರೀರೋಗ ತಜ್ಞರಿಂದ ಉಚಿತ ಆಯುರ್ವೇದ ಸಮಾಲೋಚನೆ
2.ಅರ್ಹ ಮಹಿಳೆಯರಿಗೆ ಉಚಿತ ರಕ್ತ ಪರೀಕ್ಷೆ ಮತ್ತು ಸ್ಕ್ಯಾನಿಂಗ್ ಸೌಲಭ್ಯ
3.ಆಯ್ಕೆಯಾದ ಮಹಿಳೆಯರಿಗೆ 4 ತಿಂಗಳುಗಳ ಕಾಲ ಉಚಿತ ಆಯುರ್ವೇದ ಔಷಧ ವಿತರಣೆ
ಶಿಬಿರದ ವಿವರಗಳು:
ಅರ್ಹ ವಯಸ್ಸು: 18 ರಿಂದ 40 ವರ್ಷಗಳು
ಸಮಯ: ಬೆಳಿಗ್ಗೆ 10.00 ರಿಂದ ಸಂಜೆ 4.00 (ಸೋಮವಾರದಿಂದ ಶನಿವಾರದವರೆಗೆ)
ಸ್ಥಳ: ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ಹೊರರೋಗಿ ವಿಭಾಗ ಸಂಖ್ಯೆ–1,
ಎಸ್.ಡಿ.ಎಮ್. ಆಯುರ್ವೇದ ಆಸ್ಪತ್ರೆ, ಉಡುಪಿ
ಆರೋಗ್ಯದ ಬಗ್ಗೆ ಮೌನ ವಹಿಸುವ ಬದಲು ಸಮಯೋಚಿತ ಚಿಕಿತ್ಸೆ ಪಡೆಯಬೇಕು ಎಂಬ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. ಆಸಕ್ತ ಮಹಿಳೆಯರು ಈ ಅವಕಾಶ ವನ್ನು ಸದುಪಯೋಗಪಡಿಸಿಕೊಳ್ಳುವಂತೆ ಆಸ್ಪತ್ರೆಯ ಆಡಳಿತ ಮಂಡಳಿ ಮನವಿ ಮಾಡಿದೆ.