ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಾರ್ಕಿನ್ಸನ್ಸ್ ರೋಗದ ಕುರಿತು ಅರಿವು: ರೋಗಲಕ್ಷಣಗಳನ್ನು ಮೊದಲೇ ಕಂಡುಕೊಳ್ಳಲು ಮತ್ತು ಜೀವನ ಬದಲಾಯಿಸುವ ಚಿಕಿತ್ಸೆಗಳನ್ನು ಪಡೆಯಲು ತಜ್ಞರ ಕರೆ

ಪಾರ್ಕಿನ್ಸನ್ಸ್ ರೋಗವು ಗಂಭೀರ, ಕೇಂದ್ರ ನರಮಂಡಲದ ಕ್ಷೀಣಗೊಳ್ಳುವ ಸಮಸ್ಯೆಯಾಗಿದ್ದು ಮೆದುಳಿ ನಲ್ಲಿ ಡೋಪಮೈನ್ ಉತ್ಪಾದಿಸುವ ನ್ಯೂರಾನ್ ಗಳು ಕ್ರಮೇಣ ನಷ್ಟವಾಗುತ್ತವೆ, ಇದರಿಂದ ಚಲನೆ ಮತ್ತು ಸಹಯೋಗ ದುರ್ಬಲಗೊಳ್ಳುತ್ತದೆ. ನಿರ್ದಿಷ್ಟ ಕಾರಣವು ಅಗೋಚರವಾಗಿದ್ದರೂ ಪರಿಣಿತರು ಅನುವಂಶಿಕ ಮತ್ತು ಪಾರಿಸರಿಕ ಅಂಶಗಳ ಸಂಯೋಜನೆಯಿಂದ ಉಂಟಾಗುತ್ತದೆ ಎಂದು ನಂಬಿದ್ದಾರೆ.

ಬೆಂಗಳೂರು: ಜಗತ್ತು ವಿಶ್ವ ಪಾರ್ಕಿನ್ಸನ್ಸ್ ದಿನ(World Parkinson's Day)ವನ್ನು ಆಚರಿಸು ತ್ತಿರುವಾಗ ನರರೋಗ ತಜ್ಞರು, ನ್ಯೂರೋ ಸರ್ಜನ್ನರು ಮತ್ತು ರೋಗಿಯ ಹಿತ ಕಾಯುವ ಸಮೂಹ ಗಳು ಜಾಗತಿಕವಾಗಿ 10 ಮಿಲಿಯನ್ ಜನರನ್ನು ಕಾಡುತ್ತಿರುವ ಮತ್ತು ವಿಶ್ವದಾದ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಗತಿ ಪರ ನರಸಂಬಂಧಿ ಕಾಯಿಲೆ ಪಾರ್ಕಿನ್ಸನ್ಸ್ ರೋಗದ ಕುರಿತು ಅರಿವು, ಮೊದಲೇ ರೋಗಪರೀಕ್ಷೆ ಮತ್ತು ಚಿಕಿತ್ಸೆಯ ಲಭ್ಯತೆ ಕುರಿತು ತುರ್ತು ಕ್ರಮ ಕೈಗೊಳ್ಳಲು ಆಗ್ರಹಿಸಿವೆ.

ಇದರ ಗಮನಾರ್ಹ ಮತ್ತು ಹೆಚ್ಚುತ್ತಿರುವ ಹೊರೆಯ ನಡುವೆಯೂ ಪಾರ್ಕಿನ್ಸನ್ಸ್ ರೋಗವನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವುದು, ರೋಗಪರೀಕ್ಷೆ ಮಾಡದಿರುವುದು ಮತ್ತು ಅಸಮರ್ಪಕವಾಗಿ ಚಿಕಿತ್ಸೆ ನೀಡು ವುದು ಮುಂದುವರಿದಿದೆ.

ಪಾರ್ಕಿನ್ಸನ್ಸ್ ರೋಗವು ಗಂಭೀರ, ಕೇಂದ್ರ ನರಮಂಡಲದ ಕ್ಷೀಣಗೊಳ್ಳುವ ಸಮಸ್ಯೆಯಾಗಿದ್ದು ಮೆದುಳಿನಲ್ಲಿ ಡೋಪಮೈನ್ ಉತ್ಪಾದಿಸುವ ನ್ಯೂರಾನ್ ಗಳು ಕ್ರಮೇಣ ನಷ್ಟವಾಗುತ್ತವೆ, ಇದರಿಂದ ಚಲನೆ ಮತ್ತು ಸಹಯೋಗ ದುರ್ಬಲಗೊಳ್ಳುತ್ತದೆ. ನಿರ್ದಿಷ್ಟ ಕಾರಣವು ಅಗೋಚರವಾಗಿದ್ದರೂ ಪರಿಣಿತರು ಅನುವಂಶಿಕ ಮತ್ತು ಪಾರಿಸರಿಕ ಅಂಶಗಳ ಸಂಯೋಜನೆಯಿಂದ ಉಂಟಾಗುತ್ತದೆ ಎಂದು ನಂಬಿದ್ದಾರೆ. ಈ ರೋಗವು 60 ಮೀರಿದ ವ್ಯಕ್ತಿಗಳಿಗೆ ಬಾಧಿಸುತ್ತದೆ, ಆದಾಗ್ಯೂ 50ಕ್ಕಿಂತ ಕಡಿಮೆ ವಯಸ್ಸಿನವರಲ್ಲೂ ಶೇ.10ರಿಂದ ಶೆ.15ರಷ್ಟು ಪ್ರಕರಣಗಳು ಕಂಡು ಬರುತ್ತಿದ್ದು ಅದಕ್ಕೆ ಎಲ್ಲ ವಯೋಮಾನದವರಿಗೆ ಅರಿವು ಮೂಡಿಸುವ ಅಗತ್ಯವಿದೆ.

ಇದನ್ನೂ ಓದಿ: Health Tips: ಬೇಸಗೆಯಲ್ಲಿ ಮೂಗಿನಲ್ಲಿ ರಕ್ತ ಬರುವುದೇಕೆ? ಇದಕ್ಕೇನು ಪರಿಹಾರ?

ಪಾರ್ಕಿನ್ಸನ್ಸ್ ಮೋಟಾರ್ ರೋಗಲಕ್ಷಣಗಳನ್ನು ಉಂಟು ಮಾಡುತ್ತದೆ, ಇದಲ್ಲದೆ ಮೋಟಾರ್ ಅಲ್ಲದ ರೋಗಲಕ್ಷಣಗಳು ಕೂಡಾ ಜೀವನದ ಗುಣಮಟ್ಟಕ್ಕೆ ಪರಿಣಾಮ ಬೀರುತ್ತವೆ. ಇವುಗಳಲ್ಲಿ ಖಿನ್ನತೆ, ಆತಂಕ, ನಿದ್ರೆಯ ತೊಂದರೆಗಳು, ಅರಿವಿನ ಸಮಸ್ಯೆ, ವಾಸನೆ ನಷ್ಟ, ಮಲಬದ್ಧತೆ ಮತ್ತು ಆಟೊಮೊನಿಕ್ ಕಾರ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಗಳು ಮೋಟಾರ್ ಸಮಸ್ಯೆ ಕಾಣಿಸಿಕೊಳ್ಳುವ ಬಹಳ ಮುಂಚೆಯೇ ಇರುತ್ತವೆ. ಆದ್ದರಿಂದ ಮೊದಲೇ ಕಂಡುಕೊಳ್ಳುವುದು ಮತ್ತು ಮಧ್ಯಪ್ರವೇಶ ಮಾಡುವುದು ಅಗತ್ಯ.

ಈ ಕುರಿತು ಕಿಮ್ಸ್ ಆಸ್ಪತ್ರೆಯ ಹೆಡ್ ಆಫ್ ಸ್ಟೀರಿಯೊಟ್ಯಾಕ್ಟಿಕ್ ಅಂಡ್ ಫಂಕ್ಷನಲ್ ನ್ಯೂರೋ ಸರ್ಜರಿಯ ನಿರ್ದೇಶಕ ಮತ್ತು ಸೀನಿಯರ್ ಕನ್ಸಲ್ಟೆಂಟ್ ಡಾ. ರಘುರಾಮ್ ಗೋಪಾಲಕೃಷ್ಣನ್, “ಪಾರ್ಕಿನ್ಸನ್ಸ್ ರೋಗದ ಅರಿವು ಅತ್ಯಂತ ಮುಖ್ಯವಾಗಿದೆ, ಏಕೆಂದರೆ ಇದು ಹಲವಾರು ವ್ಯಕ್ತಿಗಳನ್ನು ಬಾಧಿಸುವ ನರಸಂಬಂಧಿ ರೋಗವೆಂದು ಗುರುತಿಸಲಾಗಿದೆ. ಪ್ರಾರಂಭಿಕ ಹಂತದ ಚಿಕಿತ್ಸೆಗೆ ಔಷಧ ಗಳು ಮುಖ್ಯವಾಗಿದ್ದರೂ ಕಾಲ ಕಳೆದಂತೆ ಹಲವಾರು ರೋಗಿಗಳು ಅದರ ಪರಿಣಾಮ ಕಡಿಮೆ ಯಾಗುವುದನ್ನು ಅನುಭವಿಸುವುದಲ್ಲದೆ ರೋಗಲಕ್ಷಣ ನಿಯಂತ್ರಣದಲ್ಲಿ ಏರಿಳಿತಗಳು ಕಂಡು ಬರುತ್ತವೆ.

ಡೀಪ್ ಬ್ರೈನ್ ಸ್ಟಿಮುಲೇಷನ್ (ಡಿಬಿಎಸ್) ನಂತಹ ಸುಧಾರಿತ ಚಿಕಿತ್ಸೆಗಳು ನಡುಕ, ಬಿಗಿತ ಮತ್ತು ಚಲನೆಯ ಸಂಕಷ್ಟಗಳಲ್ಲಿ ಗಮನಾರ್ಹ ಸುಧಾರಣೆ ನೀಡುತ್ತವೆ. ಅಡಾಪ್ಟಿವ್ ಡಿಬಿಎಸ್ ಸಿಸ್ಟಮ್ಸ್ ರೋಗಿಯ ಚಟುವಟಿಕೆ ಮತ್ತು ಮೆದುಳಿನ ಸಂಕೇತಗಳನ್ನು ಆಧರಿಸಿ ಸ್ವಯಂಚಾಲಿತವಾಗಿ ಪ್ರಚೋದನೆಯನ್ನು ಹೊಂದಿಸಿಕೊಳ್ಳುತ್ತದೆ. ಮುಂದುವರಿದ ಪಾರ್ಕಿನ್ಸನ್ಸ್ ರೋಗದಿಂದ ಬಳಲು ತ್ತಿರುವ ರೋಗಿಗಳು ಭರವಸೆ ಕಳೆದುಕೊಳ್ಳಬೇಕಿಲ್ಲ.

ಈ ಚಿಕಿತ್ಸೆಗಳು ಸ್ವಾತಂತ್ರ್ಯ ತಂದುಕೊಡುತ್ತವೆ ಮತ್ತು ಪ್ರತಿನಿತ್ಯದ ಕೆಲಸವನ್ನು ಸುಧಾರಿಸುತ್ತವೆ. ನರರೋಗ ತಜ್ಞರು ಮತ್ತು ನ್ಯೂರೋ ಸರ್ಜನ್ನರ ಸಕಾಲಿಕ ಭೇಟಿ ಹಾಗೂ ಸುಧಾರಿತ ಚಿಕಿತ್ಸೆಗಳಿಗೆ ಸಕಾಲಿಕ ಮೌಲ್ಯಮಾಪನವು ಜೀವನದ ಗುಣಮಟ್ಟದಲ್ಲಿ ಅರ್ಥಪೂರ್ಣ ಬದಲಾವಣೆ ತರಬಲ್ಲದು” ಎಂದರು.