ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಒಂಬತ್ತು ವರ್ಷದ ಮಗುವಿನ ಅಪರೂಪದ ಗಡ್ಡೆಯು ಕಿಮೋಥೆರಪಿಯಿಂದ ಗುಣ, ಪ್ರಮುಖ ಶಸ್ತ್ರಚಿಕಿತ್ಸೆಯಿಂದ ತಪ್ಪಿಸಿಕೊಂಡ ಮಗು

ಗೆಡ್ಡೆಯ ಗಾತ್ರ ಮತ್ತು ಅದು ಇದ್ದ ಜಾಗವು ಈ ಪ್ರಕರಣವನ್ನು ಅತ್ಯಂತ ಸಂಕೀರ್ಣಗೊಳಿಸಿತ್ತು. ಏಕೆಂದರೆ ಅದು ಪ್ರಮುಖ ನರಗಳ ಹತ್ತಿರದಲ್ಲೇ ಇತ್ತು. ಒಂದು ವೇಳೆ ಆರಂಭದಲ್ಲೇ ಅದಕ್ಕೆ ದೊಡ್ಡ ಶಸ್ತ್ರಚಿಕಿತ್ಸೆ ಮಾಡಿದ್ದರೆ, ಅದು ಮಗುವಿನ ದೀರ್ಘಕಾಲದ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುವ ಅಪಾಯವಿತ್ತು

ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯ ವೈದ್ಯರು ಅನಂತಪುರದ ಒಂಬತ್ತು ತಿಂಗಳ ಹೆಣ್ಣು ಮಗುವಿನ ಬೆನ್ನಿನ ಕೆಳಭಾಗದಲ್ಲಿ ಕಾಣಿಸಿಕೊಂಡಿದ್ದ ಅಪರೂಪದ ಜೀವಾಣು ಕೋಶದ ಗೆಡ್ಡೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ. ಎರಡು ಮೂರು ತಿಂಗಳುಗಳಿಂದ ಮಗುವಿನ ಬೆನ್ನಿನಲ್ಲಿ ವೇಗವಾಗಿ ಬೆಳೆಯುತ್ತಿದ್ದ ಗಡ್ಡೆಯನ್ನು ಗಮನಿಸಿದ ಕುಟುಂಬಸ್ಥರು ನಂತರ ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದರು. ಇಮೇಜಿಂಗ್, ಬಯಾಪ್ಸಿ ಮತ್ತು ಟ್ಯೂಮರ್ ಮಾರ್ಕರ್ ವಿಶ್ಲೇಷಣೆ ಸೇರಿದಂತೆ ಮುಂದಿನ ತಪಾಸಣೆಗಳು ಈ ಅಪರೂಪದ ಕಾಯಿಲೆಯನ್ನು ಖಚಿತಪಡಿಸಿದ್ದವು.

ಗೆಡ್ಡೆಯ ಗಾತ್ರ ಮತ್ತು ಅದು ಇದ್ದ ಜಾಗವು ಈ ಪ್ರಕರಣವನ್ನು ಅತ್ಯಂತ ಸಂಕೀರ್ಣಗೊಳಿಸಿತ್ತು. ಏಕೆಂದರೆ ಅದು ಪ್ರಮುಖ ನರಗಳ ಹತ್ತಿರದಲ್ಲೇ ಇತ್ತು. ಒಂದು ವೇಳೆ ಆರಂಭದಲ್ಲೇ ಅದಕ್ಕೆ ದೊಡ್ಡ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದರೆ, ಅದು ಮಗುವಿನ ದೀರ್ಘಕಾಲದ ಬೆಳವಣಿಗೆಯ ಮೇಲೆ ದುಷ್ಪರಿ ಣಾಮ ಬೀರುವ ಅಪಾಯವಿತ್ತು. ಈ ಹಿನ್ನೆಲೆಯಲ್ಲಿ, ವಿವಿಧ ವಿಭಾಗಗಳ ತಜ್ಞ ವೈದ್ಯರು ನಡೆಸಿದ ಚರ್ಚೆಯ ನಂತರ, ತಂಡವು ಮೊದಲು ನಿಯಮಾವಳಿ ಆಧಾರಿತ ಕೀಮೋಥೆರಪಿಯನ್ನು ಆರಂಭಿಸಲು ನಿರ್ಧರಿಸಿತು. ಚಿಕಿತ್ಸೆಯನ್ನು ಸುರಕ್ಷಿತವಾಗಿ ನೀಡಲು ಮಗುವಿಗೆ ಕೀಮೋ ಪೋರ್ಟ್ ಅನ್ನು ಅಳವಡಿಸಲಾಯಿತು.

ಇದನ್ನೂ ಓದಿ: Health Benefits Of Spinach: ಕಣ್ಣಿನ ಶಕ್ತಿ ಹೆಚ್ಚಿಸಲು, ತೂಕ ಇಳಿಸಲು, ಫಳಫಳ ಹೊಳೆಯುವ ಚರ್ಮ ಪಡೆಯಲು ಪಾಲಕ್ ಸೇವಿಸಿ; ಈ ಮ್ಯಾಜಿಕ್‌ ಸೊಪ್ಪಿನ ಪ್ರಯೋಜನ ಒಂದೆರಡಲ್ಲ

ಮೊದಲ ಎರಡು ಚಿಕಿತ್ಸಾ ಹಂತಗಳಲ್ಲೇ ಗೆಡ್ಡೆಯು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿತು ಮತ್ತು ಚಿಕಿತ್ಸೆ ಮುಂದುವರಿದಂತೆ ಗಡ್ಡೆಯ ಗಾತ್ರವು ಗಣನೀಯವಾಗಿ ಕಡಿಮೆಯಾಯಿತು. ಆರು ಹಂತಗಳ ಕೀಮೋಥೆರಪಿ ಪೂರ್ಣಗೊಂಡ ನಂತರ, ಎಂಆರ್‌ಐ ಸ್ಕ್ಯಾನ್‌ ಗಳು ಗೆಡ್ಡೆಯು ಸಂಪೂರ್ಣವಾಗಿ ಕರಗಿರುವುದನ್ನು ಖಚಿತಪಡಿಸಿದವು. ಇದು ಯಾವುದೇ ದೀರ್ಘಕಾಲದ ನರಸಂಬಂಧಿ ತೊಂದರೆ ಗಳು ಉಂಟಾಗದಂತೆ, ಉಳಿದಿದ್ದ ಸಣ್ಣ ಭಾಗವನ್ನು ಶಸ್ತ್ರಚಿಕಿತ್ಸೆಯ ಮೂಲಕ ಅತ್ಯಂತ ಸುಲಭ ವಾಗಿ ತೆಗೆದು ಹಾಕಲು ವೈದ್ಯರಿಗೆ ನೆರವಾಯಿತು.

ಚಿಕಿತ್ಸೆಯ ಸಮಯದಲ್ಲಿ ಮಗು ಚೆನ್ನಾಗಿ ಚೇತರಿಸಿಕೊಂಡಿತು; ಹಸಿವು, ಉತ್ಸಾಹದ ಮಟ್ಟ ಮತ್ತು ತೂಕದಲ್ಲಿ ಉತ್ತಮ ಸುಧಾರಣೆ ಕಂಡುಬಂದಿತು. ಚಿಕಿತ್ಸೆ ಪೂರ್ಣಗೊಂಡು ಸುಮಾರು ಒಂದು ವರ್ಷ ಕಳೆದಿದ್ದರೂ, ಮಗು ಈಗ ಸಂಪೂರ್ಣವಾಗಿ ರೋಗಮುಕ್ತವಾಗಿದೆ. ಅಲ್ಲದೆ, ವಯಸ್ಸಿಗೆ ತಕ್ಕಂತೆ ಸಾಮಾನ್ಯವಾಗಿ ನಡೆಯುವುದು ಮತ್ತು ಓಡುವುದೂ ಸೇರಿದಂತೆ ಎಲ್ಲಾ ಬೆಳವಣಿಗೆಯ ಹಂತಗಳನ್ನು ಯಶಸ್ವಿಯಾಗಿ ತಲುಪಿದೆ.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯ ಹಿರಿಯ ಕ್ಲಿನಿಕಲ್ ಹೆಮಟಾಲಜಿಸ್ಟ್ ಮತ್ತು ಮಕ್ಕಳ ಆಂಕಾಲಜಿಸ್ಟ್ ಡಾ. ನೀಮಾ ಭಟ್ ಅವರು, "ಗೆಡ್ಡೆ ಇದ್ದ ಜಾಗದ ಕಾರಣದಿಂದಾಗಿ ಆರಂಭದಲ್ಲೇ ಶಸ್ತ್ರಚಿಕಿತ್ಸೆ ಮಾಡುವುದು ಅತ್ಯಂತ ಕಷ್ಟಕರವಾಗಿತ್ತು. ಇದರಿಂದ ಪ್ರಮುಖ ನರಗಳ ಮೇಲೆ ಪರಿಣಾಮ ಬೀರುವ ಮತ್ತು ದೀರ್ಘಕಾಲದ ಅಂಗವೈಕಲ್ಯಕ್ಕೆ ಕಾರಣವಾಗುವ ಸಾಧ್ಯತೆಯೂ ಇತ್ತು.

ಸಾಮಾನ್ಯವಾಗಿ ಜರ್ಮ್ ಸೆಲ್ ಗೆಡ್ಡೆಗಳು ಕೀಮೋಥೆರಪಿಗೆ ಬಹಳ ಚೆನ್ನಾಗಿ ಸ್ಪಂದಿಸುವುದರಿಂದ, ನಾವು ಮೊದಲು ಚಿಕಿತ್ಸೆಯನ್ನು ಪ್ರಾರಂಭಿಸಲು ನಿರ್ಧರಿಸಿದೆವು. ಇದು ಗೆಡ್ಡೆಯ ಗಾತ್ರವು ಗಣನೀಯವಾಗಿ ಕುಗ್ಗಲು ಕಾರಣವಾಯಿತು. ಇದರಿಂದಾಗಿ ನಂತರ ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆ ಯನ್ನಷ್ಟೇ ಮಾಡಲು ಸಾಧ್ಯವಾಯಿತು ಮತ್ತು ಮಗು ಸಹಜವಾಗಿ ಬೆಳೆಯಲು ಹಾಗೂ ಅಭಿವೃದ್ಧಿ ಹೊಂದಲು ನೆರವಾಯಿತು. ಇಂತಹ ಪ್ರಕರಣಗಳು ಆರಂಭಿಕ ಹಂತದಲ್ಲೇ ರೋಗನಿರ್ಣಯ ಮಾಡುವುದು ಮತ್ತು ವಿವಿಧ ವಿಭಾಗಗಳ ತಜ್ಞ ವೈದ್ಯರು ಒಟ್ಟಾಗಿ ಸಹಯೋಗದ ಚಿಕಿತ್ಸೆ ನೀಡುವುದರ ಮಹತ್ವವನ್ನು ಎತ್ತಿ ತೋರಿಸುತ್ತವೆ," ಎಂದಿದ್ದಾರೆ.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯು ಪ್ರಸ್ತುತ 50ಕ್ಕೂ ಹೆಚ್ಚು ಮಕ್ಕಳ ಹೆಮಟಾಲಜಿ ಮತ್ತು ಆಂಕಾಲಜಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಇಮ್ಯುನೊಥೆರಪಿ, ಟಾರ್ಗೆಟೆಡ್ ಥೆರಪಿ ಮತ್ತು ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟೇಶನ್ ಒಳಗೊಂಡಂತೆ ಸುಧಾರಿತ ಚಿಕಿತ್ಸೆಗಳನ್ನು ಒದಗಿಸುತ್ತಿದೆ. ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನೇಕ ಮಕ್ಕಳು ಅತ್ಯಂತ ಕನಿಷ್ಠ ದೀರ್ಘಕಾಲದ ಅಡ್ಡಪರಿಣಾಮಗಳೊಂದಿಗೆ ಅತ್ಯುತ್ತಮವಾಗಿ ಗುಣಮುಖರಾಗಿದ್ದಾರೆ.