ನವದೆಹಲಿ,ಜೂ.25: ಬೆಳಗ್ಗೆ ಎದ್ದ ತಕ್ಷಣ ಹೆಚ್ಚಿನವರಿಗೆ ಟೀ,ಕಾಫಿ ಕುಡಿಯುವ ಅಭ್ಯಾಸ ಇರುತ್ತದೆ. ಆದರೆ ಇದರ ಬದಲಿಗೆ ಖಾಲಿ ಹೊಟ್ಟೆಗೆ ನೀವು ಜೀರಿಗೆ ನೀರು (Jeera Water) ಕುಡಿದರೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಭಾರತೀಯ ಜನ ಸಂಖ್ಯೆಯ ಸುಮಾರು 16 ರಿಂದ 32% ರಷ್ಟು ಜನರು ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯಿಂದ ಬಳಲುತ್ತಿದ್ದಾರೆ.ಅಡ್ವಾನ್ಸ್ ಆಫ್ ಇಂಟಿಗ್ರೇಟಿವ್ ಮೆಡಿಸಿನ್ನಲ್ಲಿನ ಸಂಶೋಧನೆಯ ಪ್ರಕಾರ ಜೀರಾ ನೀರು ಇದಕ್ಕೆ ಒಂದು ಅತ್ಯುತ್ತಮವಾದ ಪರಿಹಾರ ಕ್ರಮವಾಗಿದೆ. ಜೀರಾ ನೀರು ಲಿವರ್ನಲ್ಲಿ ಕೊಬ್ಬು ಸಂಗ್ರಹವಾಗುವು ದನ್ನು ತಡೆದು, ಜೀರ್ಣಕ್ರಿಯೆಯನ್ನು ಹೇಗೆ ಸುಧಾರಿಸುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:
ಜೀರಿಗೆ ಬೀಜಗಳು ಜೀರ್ಣಕಾರಿ ಕಿಣ್ವ ಚಟುವಟಿಕೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ. ಇದು ದೇಹವು ಕೊಬ್ಬುಗಳು, ಪ್ರೋಟೀನ್ಗಳು ಮತ್ತು ಕಾರ್ಬೋಹೈಡ್ರೇಟ್ಗ ಳನ್ನು ಪರಿಣಾಮಕಾರಿ ರೀತಿಯಲ್ಲಿ ಒಡೆಯಲು ಸಹಾಯ ಮಾಡುತ್ತದೆ. ಹೊಟ್ಟೆ ಉಬ್ಬುವುದು ಮತ್ತು ಅಜೀರ್ಣದಂತಹ ಸಾಮಾನ್ಯ ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ರಾಮ ಬಾಣವಾಗಿದೆ.
Vishwavani Health: ಉಪಹಾರಕ್ಕೆ ಇಡ್ಲಿ ಸಾಂಬಾರ್ ಬೆಸ್ಟ್; ವೈದ್ಯರು ಹೀಗೆನ್ನುವುದೇಕೆ?
ಚಯಾಪಚಯ ಕ್ರಿಯೆಯನ್ನು ಬೆಂಬಲಿಸುತ್ತದೆ:
ಜೀರಾ ನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ದೇಹದ ತೂಕ ಮತ್ತು ಒಟ್ಟಾರೆ ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡಿ ಇನ್ಸುಲಿನ್ ಮಟ್ಟವನ್ನು ಕೂಡ ತಡೆಯುತ್ತದೆ.
ಉತ್ಕರ್ಷಣ ನಿರೋಧಕ ಸಮೃದ್ಧವಾಗಿದೆ:
ಜೀರಿಗೆ ಬೀಜಗಳು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಹಲವು ಸಂಯುಕ್ತಗಳನ್ನು ಹೊಂದಿವೆ. ಜೀವಕೋಶದ ವಯಸ್ಸಾಗುವಿಕೆಯನ್ನು ಹೆಚ್ಚಿಸುತ್ತದೆ. ಇದು ಚಯಾಪಚಯ ಕ್ರಿಯೆಗೆ ನೇರವಾಗಿ ಸಂಬಂಧಿಸಿರುವ ಕೋರ್ ಮೆಟಾಬಾಲಿಕ್ ಸಿಂಡ್ರೋಮ್ ಗುರುತುಗಳನ್ನು ಸುಧಾರಿಸುತ್ತದೆ.
ಖಾಲಿ ಹೊಟ್ಟೆಯಲ್ಲಿ ಜೀರಾ ನೀರನ್ನು ಕುಡಿಯುವುದು ಏಕೆ?
ಖಾಲಿ ಹೊಟ್ಟೆಯಲ್ಲಿ ಜೀರಾ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಪ್ರಯೋಜನಕಾರಿ ಸಂಯುಕ್ತಗಳು ಉತ್ತಮವಾಗಿ ಹೀರಲ್ಪಡುತ್ತವೆ. ಆದರೆ ಅದರ ಪ್ರಮಾಣವನ್ನು ಮಿತ ಗೊಳಿಸಬೇಕು, ಏಕೆಂದರೆ ಜೀರಾ ನೀರನ್ನು ಅತಿಯಾಗಿ ಸೇವಿಸಿದಾಗ ಅಡ್ಡಪರಿಣಾಮಗಳು ಉಂಟಾಗಬಹುದು.
ಜೀರಿಗೆ ನೀರು ತಯಾರಿಸುವುದು ಹೇಗೆ?
ಒಂದು ಚಮಚ ಜೀರಿಗೆಯನ್ನು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಿಡಿ ಅಥವಾ ಬೆಳಗ್ಗೆ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿಕೊಂಡು ಉಗುರುಬೆಚ್ಚಗಿರುವಾಗಲೇ ಕುಡಿಯಿರಿ.