ಬೆಂಗಳೂರು: ಸಿಎಂ ಬದಲಾವಣೆ ವಿಚಾರದ ಬಗ್ಗೆ ಸದನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಹೈಕಮಾಂಡ್ ಎಲ್ಲಿವರೆಗೂ ಸಿಎಂ ಆಗಿರಿ ಎನ್ನುವರೋ ಅಲ್ಲಿವರೆಗೆ ಸಿಎಂ ಆಗಿರ್ತೇನೆ ಎಂದರು. ಈ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ನಿಮ್ಮ ಪಕ್ಕದಲ್ಲಿರುವವವರು ಕೂಡ ತುಂಬಾ ಕನಸುಗಳು ಇಟ್ಟುಕೊಂಡಿರುತ್ತಾರೆ ಎಂದು ವ್ಯಂಗ್ಯವಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಅಶೋಕ್ ನೀನು ಏನೇ ಕಿತಾಪತಿ ಮಾಡಿದರೂ ನಮ್ಮ ಪಕ್ಷದವರು ಅದಕ್ಕೆ ಮನ್ನಣೆ ಕೊಡಲ್ಲ. ಸಿಎಂ ಆಗಬೇಕು ಎಂದು ನಿನಗೂ ಕನಸು ಇರುತ್ತೆ, ಬೇರೆಯವರಿಗೂ ಕನಸು ಇರುತ್ತೆ. ನೋಡು ಅಲ್ಲಿ ವಿಜಯೇಂದ್ರ ಕಾಯ್ತಾ ಕೂತಿದ್ದಾರೆ. ನೀನು ಏನೇ ಮಾಡಿದರೂ ವಿಜಯೇಂದ್ರ ಯಾರಿಗೂ ಸೀಟ್ ಬಿಡಲ್ಲ ಎಂದು ನಗುತ್ತಲೇ ಹೇಳಿದರು. ಇಬ್ಬರು ನಾಯಕರ ಮಾತುಗಳು ಸದನವನ್ನು ನಗೆಗಡಲಲ್ಲಿ ತೇಲಿಸಿತು.