ಬೆಂಗಳೂರು: ಇಎಸ್ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ರಾಜಾಜಿನಗರ ಆವರಣ ದಲ್ಲಿ ಸಮುದಾಯ ವೈದ್ಯಕೀಯ ವಿಭಾಗದಿಂದ ಇಂಡಿಯನ್ ಅಸೋಸಿಯೇಶನ್ ಆಫ್ ಪ್ರಿವೆಂಟಿವ್ ಅಂಡ್ ಸೋಶಿಯಲ್ ಮೆಡಿಸಿನ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಹಯೋಗದಲ್ಲಿ “ಒನ್ ವರ್ಲ್ಡ್, ಒನ್ ಹೆಲ್ತ್ – ಮಾನವ, ಪ್ರಾಣಿ ಮತ್ತು ಪರಿಸರ ಕ್ಷೇಮಕ್ಕಾಗಿ ಏಕತೆ” ಎಂಬ ವಿಷಯಾಧಾರಿತ ಜಾಗೃತಿ ವಾಕ್ಥಾನ್ ಆಯೋಜಿಸಲಾಯಿತು.
ಇದನ್ನೂ ಓದಿ: Bangalore Flat Rent: ಬೆಂಗಳೂರಿನಲ್ಲಿ 2 ಬಿಎಚ್ಕೆ ಫ್ಲ್ಯಾಟ್ಗೆ 20 ಸಾವಿರ ಬಾಡಿಗೆ, 30 ಲಕ್ಷ ಅಡ್ವಾನ್ಸ್ ಕೇಳಿದ ಮಾಲೀಕ!
ಕಾರ್ಯಕ್ರಮವನ್ನು , ಅಕಾಡೆಮಿಕ್ ರಿಜಿಸ್ಟ್ರಾರ್ ಡಾ. ಸುಚಿತ್ರಾ ಉದ್ಘಾಟಿಸಿದರು. ಉಪ ವೈದ್ಯಕೀಯ ಮೇಲ್ವಿಚಾರಕರಾದ ಡಾ. ಶಾಂತಿನಿ ಕೆ, ಮತ್ತು ಡಾ. ಸುರೇಶ್ ಕೆ. ಕುಂಭಾರ, ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು
ಈ ವಾಕ್ಥಾನ್ನ ಉದ್ದೇಶ ಮಾನವ, ಪ್ರಾಣಿ ಹಾಗೂ ಪರಿಸರ ಆರೋಗ್ಯಗಳ ಪರಸ್ಪರ ಅವಲಂಬನೆ ಕುರಿತು ಜಾಗೃತಿ ಮೂಡಿಸುವುದು ಮತ್ತು ಸಮಗ್ರ ಆರೋಗ್ಯದ ಮಹತ್ವವನ್ನು ತಿಳಿಸುವುದಾಗಿತ್ತು
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಶಿಕ್ಷಕ ವರ್ಗ, ವೈದ್ಯಕೀಯ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಉತ್ಸಾಹದಿಂದ ಭಾಗವಹಿಸಿದರು.