Chikkaballapur News:: ಡಿಸ್ಕವರಿ ವಿಲೇಜ್ನಲ್ಲಿ ಪೌರಕಾರ್ಮಿಕರ ದಿನಾಚರಣೆ ಆಯೋಜಿಸಿದ ನಗರಸಭೆ
ನಗರದ ಸ್ವಚ್ಛತೆ ಮತ್ತು ನಾಗರೀಕರ ಆರೋಗ್ಯಕ್ಕಾಗಿ ವರ್ಷದ 365 ದಿನಗಳೂ ಶ್ರಮಿಸುವ ಪೌರಕಾರ್ಮಿಕರ ಅಕಂಳಕ ಸೇವೆಗೆ ಬೆಲೆ ಕಟ್ಟಲಾಗುವುದಿಲ್ಲ. ಇದನ್ನು ಮನ ಗಂಡ ಚಿಕ್ಕಬಳ್ಳಾಪುರ ನಗರಾಡಳಿತ ಪೌರಕಾರ್ಮಿಕರ ದಿನಾಚರಣೆಯನ್ನು ಡಿಸ್ಕವರಿ ವಿಲೇಜ್ನಲ್ಲಿ ಆಚರಿಸುವ ಮೂಲಕ ಈ ವರ್ಗದ ಸೇವೆಯನ್ನು ಸ್ಮರಿಸುವ ಕೆಲಸವನ್ನು ಮಾಡಿರುವುದು ನಾಗರೀಕ ವಲಯದ ಪ್ರಶಂಸೆಗೆ ಪಾತ್ರವಾಗಿದೆ.

ನಗರ ಹೊರವಲಯ ಡಿಸ್ಕವರಿ ವಿಲೇಜ್ನಲ್ಲಿ ನಡೆದ ಪೌರಕಾರ್ಮಿಕರ ೧೦ ನೇ ದಿನಾಚರಣೆಯಲ್ಲಿ ನಿವೃತ್ತರನ್ನು ಸನ್ಮಾನಿಸಿ ನಿವೃತ್ತಿ ಜೀವನಕ್ಕೆ ಶುಭ ಕೋರಲಾಯಿತು. -

ಚಿಕ್ಕಬಳ್ಳಾಪುರ : ನಗರದ ಸ್ವಚ್ಛತೆ ಮತ್ತು ನಾಗರೀಕರ ಆರೋಗ್ಯಕ್ಕಾಗಿ ವರ್ಷದ 365 ದಿನಗಳೂ ಶ್ರಮಿಸುವ ಪೌರಕಾರ್ಮಿಕರ ಅಕಂಳಕ ಸೇವೆಗೆ ಬೆಲೆ ಕಟ್ಟಲಾಗುವುದಿಲ್ಲ. ಇದನ್ನು ಮನ ಗಂಡ ಚಿಕ್ಕಬಳ್ಳಾಪುರ ನಗರಾಡಳಿತ ಪೌರಕಾರ್ಮಿಕರ ದಿನಾಚರಣೆಯನ್ನು ಡಿಸ್ಕವರಿ ವಿಲೇಜ್ನಲ್ಲಿ ಆಚರಿಸುವ ಮೂಲಕ ಈ ವರ್ಗದ ಸೇವೆಯನ್ನು ಸ್ಮರಿಸುವ ಕೆಲಸವನ್ನು ಮಾಡಿರುವುದು ನಾಗರೀಕ ವಲಯದ ಪ್ರಶಂಸೆಗೆ ಪಾತ್ರವಾಗಿದೆ.
ಹೌದು ಚಿಕ್ಕಬಳ್ಳಾಪುರ ನಗರಸಭೆಯ ಆಡಳಿತ ಮಂಗಳವಾರ ವಿಶ್ವಪೌರಕಾರ್ಮಿಕರ ದಿನಾಚರಣೆ ಯನ್ನು ಸಾಂಪ್ರದಾಯಿಕವಾಗಿ ನಗರಸಭೆ ಆವರಣದಲ್ಲಿ ಆಚರಿಸುವ ಬದಲಿಗೆ ನಂದಿ ಬೆಟ್ಟದ ತಪ್ಪಲಿನಲ್ಲಿರುವ ಪ್ರತಿಷ್ಟಿತ ಡಿಸ್ಕವರಿ ವಿಲೇಜ್ನಲ್ಲಿ ಆಚರಿಸಿ ಗಮನ ಸೆಳೆದಿದೆ.
ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಟ್ಟು ಪೌರಕಾರ್ಮಿಕರ ಕುಟುಂಬಗಳನ್ನು ಈ ದಿನ ಅವರ ಸೇವೆಗೆ ಒಂದುದಿನ ವಿರಾಮ ನೀಡಿ ಅವರನ್ನೆಲ್ಲಾ ಡಿಸ್ಕವರಿ ವಿಲೇಜ್ಗೆ ಆಹ್ವಾನಿಸಿ ಮನರಂಜನಾ ಕಾರ್ಯಕ್ರಮ, ಕ್ರೀಡಾಕೂಟ,ಸ್ವಿಮ್ಮಿಂಗ್ ಇತ್ಯಾದಿಗಳಲ್ಲಿ ತೊಡಗಿಸುವ ಮೂಲಕ ಏಕತಾನತೆಯ ಬದುಕಿಗೆ ಒಂದು ದಿನವಾದರೂ ವಿರಾಮ ನೀಡುವುದು ಆ ಮೂಲಕ ಪೌರ ಕಾರ್ಮಿಕ ರಲ್ಲಿ ಜೀವನೋತ್ಸಾಹ ಹೆಚ್ಚುವಂತೆ ಮಾಡುವಲ್ಲಿ ನಗರಾಡಳಿತ ಸಂಪೂರ್ಣವಾಗಿ ಯಶಸ್ವಿಯಾಯಿತು.
ಇದನ್ನೂ ಓದಿ: Chikkaballapur News: ಸಾಮಾಜಿಕ ಆರ್ಥಿಕ ಸಮೀಕ್ಷೆಯಲ್ಲಿ ಗೊಲ್ಲ ಎಂದೇ ನಮೂದಿಸಿ: ಕೆ.ಎಂ.ಮುನೇಗೌಡ ಮನವಿ
ಮಧ್ಯಾಹ್ನ ಅವರಿಗೆ ಇಷ್ಟದ ಊಟವನ್ನು ಉಣಬಡಿಸುವ ಮೂಲಕ ಶ್ರಮಜೀವಿಗಳ ಹೊಟ್ಟೆ ತಣ್ಣಗಿರಲಿ ಎಂಬ ಸಂದೇಶವನ್ನು ಸಮಾಜಕ್ಕೆ ಸಾರುವ ಮೂಲಕ ಪೌರಕಾರ್ಮಿಕರ ದಿನಾಚರಣೆ ಯನ್ನು ಹೀಗೂ ಆಚರಿಸಬಹುದು ಎಂಬ ಸಂದೇಶವನ್ನು ರವಾನಿಸಲಾಯಿತು.
ಇದೇ ಸಂದರ್ಭದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ನಗರಸಭಾ ಅಧ್ಯಕ್ಷ ಎ.ಗಜೇಂದ್ರ ನಗರದ ಆರೋಗ್ಯ ಕಾಪಾಡಲು ವರ್ಷವಿಡೀ ಅಹರ್ನಿಶಿ ಶ್ರಮಿಸುತ್ತಿರುವ ಪೌರ ಕಾರ್ಮಿಕರು ನಾಗರೀಕರ ಆರೋಗ್ಯ ಕಾಪಾಡುವ ನಿಜವಾದ ಸೇನಾನಿಗಳು. ಸೂರ್ಯೋದಯಕ್ಕೂ ಮುನ್ನವೇ ಬೀದಿಗಿಳಿಯುವ ಇವರು ನಗರ ಬೀದಿಬೀದಿಗಳಲ್ಲಿ ಹರಡಿರುವ ಕಸವನ್ನು ಗುಡಿಸಿ ಸ್ವಚ್ಛಮಾಡುವ ಜತೆಗೆ ಮನೆಮನೆಗೆ ತೆರಳಿ ಹಸಿಕಸ ಹೊಣಕಸ ಸಂಗ್ರಹಿಸುವ ಕೆಲಸವನ್ನು ಒಂದು ದಿನವೂ ಬಿಡದೆ ಮಾಡುತ್ತಿದ್ದಾರೆ. ಇಂತಹ ಪೌರ ಕಾರ್ಮಿಕರ ದಿನವನ್ನು ವಿಶಿಷ್ಟವಾಗಿ ಆಚರಿಸ ಬೇಕು ಎಂಬ ಉದ್ದೇಶದಿಂದ ಎಲ್ಲಾ 31 ವಾರ್ಡುಗಳ ಸದಸ್ಯರು, ಆಯುಕ್ತರು, ಎಲ್ಲಾ ಸಿಬ್ಬಂದಿ ಯನ್ನು ಇಲ್ಲಿಗೆ ಆಹ್ವಾನಿಸಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.

ನಂದಿಬೆಟ್ಟದ ತಪ್ಪಲಿನಅಲ್ಲಿ ಪ್ರಕೃತಿಯ ಮಡಿಲಿನಲ್ಲಿಯೇ ವಿಭಿನ್ನವಾದ ಪರಿಸರದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಆಯೋಜನೆ ಮಾಡುವ ಮೂಲಕ ಶ್ರಮಿಕ ಕುಟುಂಬಗಳಿಗೆ ಗೌರವ ಸಲ್ಲಿಸುವ ಕೆಲಸ ಮಾಡಿದ್ದೇವೆ.ಅವರೂ ಕೂಡ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಲವಲವಿಕೆಯಿಂದ ಭಾಗಿಯಾಗಿ ಸಂತೋಷಪಟ್ಟಿದ್ದಾರೆ.ಭಗವAತ ಈ ಕುಟುಂಬಗಳಿಗೆ ಆರೋಗ್ಯ ಭಾಗ್ಯದ ಜತೆಗೆ ಎಲ್ಲವನ್ನೂ ಕರುಣಿಸಲಿ ಎಂದು ಇದೇ ವೇಳೆ ಹಾರೈಸಿ ಶುಭ ಕೋರಿದರು.
ನಾಗರಾಜ್ ಮಾತನಾಡಿ ಪೌರಕಾರ್ಮಿಕರ ದಿನಾಚರಣೆಯನ್ನು ಡಿಸ್ಕವರಿ ವಿಲೇಜ್ನಲ್ಲಿ ಆಯೋಜಿಸಿ ರುವುದು ಸಂತೋಷ ತಂದಿದೆ.ನಗರಸಭೆಗೆ ಒಳ್ಳೆಯ ಆಯುಕ್ತರು ಬಂದಿದ್ದಾರೆ.ಎಲ್ಲರೂ ಕೂಡಿ ನಗರಸಭೆಯ ಘನತೆ ಗೌರವ ಕಾಪಾಡಲು ಶ್ರಮಿಸೋಣ.ಪೌರಕಾರ್ಮಿಕರ ಅಗತ್ಯಗಳನ್ನು ಕಾಲ ಕಾಲಕ್ಕೆ ಪೂರೈಸೋಣ,ಸರಕಾರಿ ಸೌಲತ್ತುಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡೋಣ ಎಂದರು.
ಹಿರಿಯ ಸದಸ್ಯೆ ನಿರ್ಮಲಾ ಪ್ರಭು ಮಾತನಾಡಿ, ಇದೊಂದು ವಿಭಿನ್ನ ಕಾರ್ಯಕ್ರಮ. ನನ್ನ ಅನುಭವದ 20 ವರ್ಷದಲ್ಲಿ ಈ ರೀತಿಯ ಕಾರ್ಯಕ್ರಮ ಯಾರೂ ಮಾಡಿರಲಿಲ್ಲ. ಪೌರ ಕಾರ್ಮಿಕರು ಇದೇ ಜೀವನ ಎಂದು ಭಾವಿಸಿ ಬದುಕನ್ನು ಅಸಹನೀಯ ಮಾಡಿಕೊಳ್ಳದೆ, ನಿತ್ಯವೂ ತಮ್ಮ ಬದುಕಲ್ಲಿ ಸಂತೋಷ ಕಾಣಬೇಕು. ಉದ್ಯೋಗದ ಜತೆಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಗರಸಭಾ ಸದಸ್ಯ ಯತೀಶ್ ಮಾತನಾಡಿ, ಜಿಲ್ಲಾ ಕೇಂದ್ರದ ಪೌರಕಾರ್ಮಿಕರ ಕೆಲಸ ಜಿಲ್ಲೆ ನೋಡುತ್ತಿರುತ್ತದೆ.ಸಮಸ್ಯೆಗಳನ್ನು ನಿಮ್ಮ ಮೇಸ್ತ್ರಿಗಳು, ಹೆಲ್ತ್ ಇನ್ಸ್ಪೆಕ್ಟರ್ ಮೇಲಾಧಿಕಾರಿಗಳಿಗೆ ತನ್ನಿ, ಅದನ್ನು ಬಹಿರಂಗ ಮಾಡಬೇಡಿ.ಕೆಲಸದ ಬಗ್ಗೆ ಪಫಾಲೋ ಮಾಡಿ.ಸರಕಾರಿ ಸೌಲಭ್ಯಗಳನ್ನು ಕೇಳಿ ಪಡೆಯಿರಿ.ಕೆಲಸ ಪ್ರಾಮಾಣಿಕತೆಯಿಂದ ಮಾಡಿ,ನಗರಸಭೆಯ ಗೌರವ ಕಾಪಾಡಿ ಎಂದು ಹೇಳಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯಚಾರಿ ಮಾತನಾಡಿ ನಗರದ ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿ ಕರಿಗಾಗಿ ಮಾಡುತ್ತಿರುವುದು ದಿನಾಚರಣೆ ಅಲ್ಲ ಬದಲಿಗೆ ಇದೊಂದು ಹಬ್ಬವಾಗಿದೆ. ಎಲ್ಲರಿಗೂ ಹಬ್ಬದ ಶುಭಾಶಯಗಳು ಎಂದು ಮಾತು ಮುಗಿಸಿದರು.
ಪೌರ ಕಾರ್ಮಿಕ ಲೋಡರ್ ಚಂದ್ರ ಮಾತನಾಡಿ ನಗರಸಭೆ ಆಡಳಿತ ನಮಗೆ ನೀಡುವ ಸಂಬಳ ವನ್ನು ನೇರ ಪಾವತಿ ಮೂಲಕ ನೀಡುವಂತಾದರೆ ತುಂಬಾ ಅನುಕೂಲ ಆಡಲಿದೆ. ಇದನ್ನು ಮಾಡಿಸಿ ಕೊಡಿ ಎಂದು ಮನವಿ ಮಾಡಿದರು.
ಪೌರಕಾರ್ಮಿಕ ಸುರೇಶ್ ಮಾತನಾಡಿ ಔಟ್ ಸೋರ್ಸ್ ಕಾರ್ಮಿಕರ ಯೋಗಕ್ಷೇಮ ಕಾಪಾಡಲು ನಗರಾಡಳಿತ ಮುಂದಾಗಬೇಕಿದೆ.ಹತ್ತಾರು ವರ್ಷಗಳಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸು ತ್ತಿರುವ ಪೌರಕಾರ್ಮಿಕರಿಗೆ ವಸತಿ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದರು.
ಇದೇ ವೇಳೆ ನಾರ ನಾರಾಯಣಮೂರ್ತಿ, ಸತ್ಯನಾರಾಯಣ ಎಂಬ ಇಬ್ಬರು ಸೇವಾ ನಿವೃತ್ತ ನೌಕರರಿಗೆ ಆತ್ಮೀಯವಾಗಿ ಸನ್ಮಾನಿಸುವ ಮೂಲಕ ನಿವೃತ್ತಿ ಜೀವನಕ್ಕೆ ಶುಭ ಕೋರಲಾಯಿತು.
ಈ ವೇಳೆ ಸದಸ್ಯರಾದ ಮಂಜುನಾಥಾಚಾರಿ, ನರಸಿಂಹಮೂರ್ತಿ, ಮುನಿರಾಜು, ಸತೀಶ್, ಅಣ್ಣಮ್ಮ, ಭಾಗ್ಯಮ್ಮ,ಆಯುಕ್ತರಾದ ಮನ್ಸೂರ್ ಅಲಿ ಮತ್ತಿತರರು ಇದ್ದರು.