ಚಿಕ್ಕಬಳ್ಳಾಪುರ : ಸತ್ಯ ಸಾಯಿ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ದೇಶದ ದೊಡ್ಡ ಹುದ್ದೆಗಳಲ್ಲಿ ಸೇವೆ ಮಾಡುವ ಮೂಲಕ ವ್ಯವಸ್ಥೆ ಯ ಭಾಗವಾಗಲಿದ್ದಾರೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಆಶಯ ವ್ಯಕ್ತಪಡಿಸಿದ್ದಾರೆ.
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವ'ದ ೮೩ನೇ ದಿನವಾದ ಗುರುವಾರ ಆಶೀರ್ವಚನ ನೀಡಿದ ಸದ್ಗುರು, ಇವರೆಲ್ಲರೂ ಉತ್ತಮ ಮತ್ತು ಬಲವಾದ ವ್ಯವಸ್ಥೆಗಳನ್ನು ನಿರ್ಮಿಸಬೇಕು ಎಂದು ಹೇಳಿದರು.
ಜಾಗತಿಕ ಸಾಂಸ್ಕೃತಿಕ ಉತ್ಸವದಲ್ಲಿ ಪ್ರತಿದಿನ ಜಗತ್ತಿನ ವಿವಿಧ ಕ್ಷೇತ್ರಗಳಲ್ಲಿನ ಸಾಧಕರು, ಗಣ್ಯರನ್ನು ಗುರುತಿಸಿ ವೇದಿಕೆಯ ಮೇಲೆ ಕೂರಿಸಿ ಅವರ ಕಥೆಗಳನ್ನು ಕೇಳುತ್ತಿದ್ದೇವೆ. ಇದರಿಂದ ಮುಂದಿನ ಪೀಳಿಗೆ ಸ್ಪೂರ್ತಿಯನ್ನು ಪಡೆಯುತ್ತಿದೆ. ಜೆತೆಗೆ ವಿದ್ಯಾರ್ಥಿಗಳಿಗೆ ಸಮಾಜ, ದೇವರ ಕಡೆಗೆ ಇರಬೇಕಾದ ದೊಡ್ಡ ಕರ್ತವ್ಯಗಳನ್ನು ನೆನಪಿಸುತ್ತದೆ, ಅದಕ್ಕಾ ಗಿಯೇ ಸ್ಫೂರ್ತಿ ಎಂಬುದೇ ಒಂದು ದೊಡ್ಡ ಕೊಡುಗೆಯಾಗಿದೆ.
ಇದನ್ನೂ ಓದಿ: Sadhguru Shri Madhusudan Sai: ಯಶಸ್ಸಿಗೆ ಯಾವುದೇ ಶಾರ್ಟ್ಕಟ್ ಇರುವುದಿಲ್ಲ: ಸದ್ಗುರು ಶ್ರೀ ಮಧುಸೂದನ ಸಾಯಿ
ಭಾರತ ಮೂಲಭೂತವಾಗಿ ಬಲಿಷ್ಠವಾಗಿದೆ. ಯುವಕರನ್ನು ಮುಂದಕ್ಕೆ ಕೊಂಡೊಯ್ಯಲು ಸಾಧಕರು ಇರುವುದರಿಂದ ದೇಶವು ಇನ್ನೂ ಬಹಳ ಮುಂದೆ ಹೋಗುತ್ತದೆ. ನಾವು ಉತ್ತಮ ವ್ಯವಸ್ಥೆಯನ್ನು ಹೊಂದಿರುವುದು ಇಡೀ ಆರ್ಥಿಕತೆಗೆ ಸಹಾಯ ಮಾಡುತ್ತಿದೆ. ನಮ್ಮ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ದೊಡ್ಡ ಹುದ್ದೆಗಳಿಗೆ ಹೋಗುವ ವಿಶ್ವಾಸ, ನಂಬಿಕೆ ಇದೆ ಎಂದರು.
ಅತಿಥಿ ದೇಶ ಟರ್ಕಿಯ ಬಗ್ಗೆ ಮಾತನಾಡಿದ ಸದ್ಗುರು, ಟರ್ಕಿ ಅತ್ಯಂತ ಸುಂದರ ದೇಶ ವಾಗಿದ್ದು, ಅಲ್ಲಿನ ಜನ, ಆಹಾರ, ಸಂಗೀತವನ್ನು ಎಲ್ಲರೂ ಇಷ್ಟಪಡುತ್ತಾರೆ. ಅನೇಕ ವ್ಯಾಪಾರಿಗಳು ಟರ್ಕಿಯ ಮಾರ್ಗವಾಗಿ ಏಷ್ಯಾದಿಂದ ಯುರೋಪ್ ಗೆ ಹೋಗುತ್ತಾರೆ. ಟರ್ಕಿಯ ಮಾರುಕಟ್ಟೆಗಳು ಬಹಳ ಹಳೆಯದಾಗಿದ್ದು ಭಾರತದಿಂದ ಯುರೋಪ್ ಗೆ ಈ ದೇಶದ ಮೂಲಕ ಮಸಾಲೆ ಪದಾರ್ಥಗಳು ಹೋಗುತ್ತವೆ, ಯುರೋಪ್ನ ಅನೇಕ ಸರಕುಗಳು ಟರ್ಕಿ ಮಾರ್ಗವಾಗಿ ಭಾರತಕ್ಕೆ ಬರುತ್ತವೆ. ಈ ಮಾರುಕಟ್ಟೆ ವ್ಯವಸ್ಥೆ ಇಂದಿಗೂ ಅಸ್ತಿತ್ವ ದಲ್ಲಿದೆ. ಸಾಧ್ಯವಾದಾಗಲೆಲ್ಲಾ ಭೇಟಿ ನೀಡಬಹುದಾದ ಸುಂದರವಾದ ದೇಶವಾಗಿದೆ. ಪ್ರತಿ ಬಾರಿ ಹೋದಾಗ ತುಂಬಾ ಸಂತೋಷದ ಪ್ರವಾಸಗಳನ್ನು ಮಾಡಿದ್ದೇವೆ. ಬರುವ ವರ್ಷ ಗಳಲ್ಲಿ ಟರ್ಕಿಗೆ ಭೇಟಿ ನೀಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.
ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್ ನ ಸಂಸ್ಥಾಪಕರು, ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಮೋತಿಲಾಲ್ ಓಸ್ವಾಲ್, ರವಿ ರಾಜನ್ ಅಂಡ್ ಕಂಪನಿಯ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ಪಾಲುದಾರರಾದ ಸೇತುರತ್ನಂ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ' ನೀಡಿ ಗೌರವಿಸಲಾಯಿತು. ಈಚ್ ಒನ್ ಎಜುಕೇಟ್ ಒನ್ ಸ್ಕಾಲರ್ ಶಿಪ್ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತಿರುವ ಕರ್ಣಾಟಕ ಬ್ಯಾಂಕ್ಗೆ 'ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಬ್ಯಾಂಕ್ ನ ಕಾನೂನು ವಿಭಾಗದ ಪ್ರಧಾನ ವ್ಯವಸ್ಥಾಪಕ ರವಿಚಂದ್ರನ್ ಎಸ್, ಮುಖ್ಯ ವ್ಯವಸ್ಥಾಪಕರಾದ ಪಲ್ಲವಿ ಟಿ.ಎಸ್. ಪ್ರಶಸ್ತಿ ಸ್ವೀಕರಿಸಿದರು.
ಟರ್ಕಿ ದೇಶದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಪ್ರೊಫೆಸರ್ ಡಾ.ಅಪ್ಸೆ÷್ಕಂಡಿ ಯೋಸ್ ಕಲಾಂಗೋಸ್ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ' ನೀಡಿ ಗೌರವಿಸಲಾಯಿತು.
ಟರ್ಕಿ ಪ್ರನಿಧಿ ಉಮಿತ್ ಸಿಲೆ ಅವರು ತಮ್ಮ ದೇಶದ ಕಲೆ, ಸಂಸ್ಕೃತಿ, ಸಂಗೀತ, ನೃತ್ಯ, ಕ್ರೀಡೆ, ಭಾಷೆ, ಪ್ರಸಿದ್ಧ ತಾಣಗಳು, ಖಾದ್ಯಗಳು, ಸಾಂಪ್ರದಾಯಿಕ ಉಡುಪು, ಆಧ್ಯಾತ್ಮ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದರೆ, ಮತ್ತೊಬ್ಬ ಪ್ರತಿನಿಧಿ ನಾಝ್ ಕುಲ್ಹಾನ್ಸಿ ಅವರು ತಮ್ಮ ಜೀವನದಲ್ಲಿ ಆಧ್ಯಾತ್ಮಿಕ ಬದಲಾವಣೆಯ ಅನುಭವವನ್ನು ಹಂಚಿಕೊಂಡರು.