ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Scholarship Distribution: ಬಿಲ್ಲವಾಸ್ ಕತಾರ್‌ನಿಂದ 100 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ವಿತರಣೆ

Billawas Qatar: ಬಿಲ್ಲವಾಸ್ ಕತಾರ್ ವತಿಯಿಂದ ಮಂಗಳೂರಿನ ಕುದ್ರೋಳಿಯ ಶ್ರೀ ವಿಶ್ವನಾಥ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರ್ಹ 100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಗಣ್ಯರು, ಸಮುದಾಯದ ಮುಖಂಡರು, ಪೋಷಕರು ಮತ್ತು ವಿದ್ಯಾರ್ಥಿಗಳ ಸ್ಫೂರ್ತಿದಾಯಕ ಸಹಭಾಗಿತ್ವದೊಂದಿಗೆ ಸಭೆಯು ಎಲ್ಲರ ಗಮನ ಸೆಳೆಯಿತು.

ಮಂಗಳೂರಿನ ಕುದ್ರೋಳಿಯಲ್ಲಿ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ.

ಮಂಗಳೂರು: ಶಿಕ್ಷಣವನ್ನು ಬೆಂಬಲಿಸುವ ಮತ್ತು ಮುಂದಿನ ಪೀಳಿಗೆಯನ್ನು ಸಬಲೀಕರಣಗೊಳಿಸುವ ಮಹತ್ವದ ಹೆಜ್ಜೆಯಾಗಿ ಬಿಲ್ಲವಾಸ್ ಕತಾರ್, ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರ ಮತ್ತು ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಕುದ್ರೋಳಿಯ ಶ್ರೀ ವಿಶ್ವನಾಥ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಅರ್ಹ 100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

Billawas Qatar scholarship (2)

ಸಮಾರಂಭದ ಅಧ್ಯಕ್ಷತೆಯನ್ನು ಬಿಲ್ಲವಾಸ್ ಕತಾರ್‌ನ ಅಧ್ಯಕ್ಷೆ ಅಪರ್ಣ ಶರತ್ ವಹಿಸಿದ್ದರು. ಇವರ ಬಹು ಪ್ರತಿಭಾ ನಾಯಕತ್ವವು ಮತ್ತು ವೈವಿಧ್ಯಮಯ ದೃಷ್ಟಿಕೋನವು ಸಮುದಾಯದ ಬೆಳವಣಿಗೆಯ ಒಂದು ಉದಾರ ಮನೋಭಾವದ ಉದಾಹರಣೆಯಾಗಿತ್ತು. ಅವರ ಉಪಸ್ಥಿತಿಯು ಯುವ ಫಲಾನುಭವಿಗಳಿಗೆ ಪ್ರೇರಣೆ ಮತ್ತು ಪ್ರೋತ್ಸಾಹವನ್ನು ನೀಡಿತು.

Billawas Qatar scholarship (1)

ಈ ಕಾರ್ಯಕ್ರಮದ ಮುಖ್ಯಾಂಶವೆಂದರೆ, ಕೆಡೆಟ್ ಲಿಶಾ ಡಿ.ಸುವರ್ಣ ಅವರ ಅತ್ಯುತ್ತಮ ರಾಷ್ಟ್ರೀಯ ಸಾಧನೆಗಳಿಗಾಗಿ ಅವರನ್ನು ಸನ್ಮಾನಿಸಲಾಯಿತು. ಗಣರಾಜ್ಯೋತ್ಸವ ಶಿಬಿರವನ್ನು (RDC) ಯಶಸ್ವಿಯಾಗಿ ಪೂರ್ಣಗೊಳಿಸಿದ ದೇಶದ ಅಗ್ರ ಐದು ಕೆಡೆಟ್‌ಗಳಲ್ಲಿ ಅವರು ಒಬ್ಬರಾಗಿದ್ದರು. ಕರ್ನಾಟಕ-ಗೋವಾ ನಿರ್ದೇಶನಾಲಯದಿಂದ 'ಅತ್ಯುತ್ತಮ ಕೆಡೆಟ್ ನೌಕಾಪಡೆ (ಸೀನಿಯರ್ ವಿಂಗ್)' ಎಂಬ ವಿಶಿಷ್ಟ ಬಿರುದನ್ನು ಗಳಿಸಿರುವರು. ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರಿಂದ ಪ್ರತಿಷ್ಠಿತ ಅಖಿಲ ಭಾರತ 'ಅತ್ಯುತ್ತಮ ಧ್ವಜ ಪ್ರದೇಶ ಬ್ರೀಫರ್' ಪ್ರಶಸ್ತಿಯನ್ನು ಸ್ವೀಕರಿಸುವ ಮೂಲಕ ಅವರು ಮತ್ತಷ್ಟು ಸ್ವರ್ಣ ಗರಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವರು.

Billawas Qatar scholarship (3)

ಸಮಾರಂಭದಲ್ಲಿ ಒಟ್ಟು 100 ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳನ್ನು ನೀಡಲಾಯಿತು. ಈ ವಿದ್ಯಾರ್ಥಿವೇತನಗಳು ಹಣಕಾಸಿನ ನೆರವಿಗಿಂತ ಹೆಚ್ಚಿನದಾಗಿದ್ದು, ಅವು ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯದಲ್ಲಿ ಭರವಸೆ, ಪ್ರೋತ್ಸಾಹ ಮತ್ತು ನಂಬಿಕೆಯನ್ನು ದೃಢಿಕರಿಸುತ್ತವೆ. ಅನೇಕ ಕುಟುಂಬಗಳಿಗೆ, ಈ ಬೆಂಬಲವು ನಿರ್ಣಾಯಕ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತದೆ. ಆರ್ಥಿಕ ಹೊರೆಗಳನ್ನು ಕಡಿಮೆ ಮಾಡುತ್ತದೆ ಮತ್ತು ನಿರಂತರ ಶಿಕ್ಷಣವನ್ನು ಸಕ್ರಿಯಗೊಳಿಸುತ್ತದೆ.

Billawas Qatar scholarship (4)

ವಿದ್ಯಾರ್ಥಿಗಳು ತಮ್ಮ ಪೋಷಕರ ಸಮ್ಮುಖದಲ್ಲಿ ವಿದ್ಯಾರ್ಥಿವೇತನವನ್ನು ಪಡೆದರು. ಈ ಸುಸಂದರ್ಭವು ಹೆಮ್ಮೆ ಮತ್ತು ಕೃತಜ್ಞತೆಯ ಭಾವನೆಯಿಂದ ತುಂಬಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಷಣಕಾರರು, ವಿದ್ಯಾರ್ಥಿಗಳು ಒದಗಿಸಲಾದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು, ತಮ್ಮ ಗುರಿಗಳ ಮೇಲೆ ಗಮನಹರಿಸಲು ಮತ್ತು ಶ್ರೇಷ್ಠತೆಗಾಗಿ ಶ್ರಮಿಸಲು ಪ್ರೋತ್ಸಾಹಿಸಿದರು. ಸಾಮೂಹಿಕ ಕೊಡುಗೆಗಳು, ಶಾಶ್ವತ ಬದಲಾವಣೆಯನ್ನು ಉಂಟುಮಾಡಬಹುದು ಎಂದು ಒತ್ತಿ ಹೇಳಿ, ಶೈಕ್ಷಣಿಕ ಸಹಾಯಧನ ಬೆಂಬಲಿಸುವುದನ್ನು ಮುಂದುವರಿಸಲು ಅವರು ಸಮಾಜಕ್ಕೆ ಕರೆ ನೀಡಿದರು.

Billawas Qatar scholarship (5)

ಈ ಕಾರ್ಯಕ್ರಮವು ಹೃದಯಸ್ಪರ್ಶಿ ಭಾಷಣದೊಂದಿಗೆ ಮುಕ್ತಾಯವಾಯಿತು, ಸಮುದಾಯಗಳು ಉಪಕಾರದ ದೃಷ್ಟಿಕೋನದೊಂದಿಗೆ ಒಟ್ಟುಗೂಡಿದಾಗ, ಜೀವನವನ್ನು ಸಕಾರಾತ್ಮಕವಾಗಿ ಪರಿವರ್ತಿಸಬಹುದು ಎಂಬ ಬಲವಾದ ಸಂದೇಶವನ್ನು ಬಿಟ್ಟುಹೋಯಿತು. ವಿದ್ಯಾರ್ಥಿಗಳ ನಗು, ಅವರ ಕುಟುಂಬಗಳ ಹೆಮ್ಮೆ ಮತ್ತು ಗಣ್ಯರಿಂದ ಪ್ರೋತ್ಸಾಹವು ಹಾಜರಿದ್ದ ಎಲ್ಲರಿಗೂ ಸ್ಮರಣೀಯ ಮತ್ತು ಸ್ಫೂರ್ತಿದಾಯಕ ಅನುಭವವನ್ನು ನೀಡಿತು.

Billawas Qatar scholarship (6)

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಜಯರಾಜ್ ಎಚ್. ಸೋಮಸುಂದರಂ, ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಮಂಗಳೂರಿನ ಮಾನಶಾಂತಿ ಮಾನಸಿಕ ಆರೋಗ್ಯ ಕೇಂದ್ರದ ಡಾ. ರಮೀಳಾ ಶೇಖರ್, ಬಿಲ್ಲವಾಸ್ ಕತಾರ್ ಸ್ಥಾಪಕ ಅಧ್ಯಕ್ಷ ದಿವಾಕರ ಪೂಜಾರಿ, ಮಂಗಳೂರಿನ ಶ್ರೀ ಗುರು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸೀತಾರಾಮ್. ಎಚ್ ಮತ್ತಿತರರು ಉಪಸ್ಥಿತರಿದ್ದರು.

Billawas Qatar scholarship (7)