ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪೌರಾಯುಕ್ತ ಪಟ್ಟ ಒಂದೇ ದಿನ; ವಿಶ್ವವಾಣಿ ವರದಿ ಉಲ್ಲೇಖಿಸಿ ವಿಧಾನ ಪರಿಷತ್‌ನಲ್ಲಿ ರಮೇಶಬಾಬು ಕಿಡಿ

ಚಿಕ್ಕನಾಯಕನಹಳ್ಳಿ ಪುರಸಭೆ ಮುಖ್ಯಾಧಿಕಾರಿ ಮಂಜಮ್ಮ ಅವರು ಪೌರಾಯುಕ್ತರಾಗಿ ಪದೋನ್ನತಿ ಪಡೆದಿದ್ದರು. ನಿಯಮದಂತೆ ಅವರು ಹೊಸ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಬೇಕಿತ್ತು. ಆದರೆ, ಕೇವಲ ಒಂದು ದಿನ ಪೌರಾಯುಕ್ತರಾಗಿ, ಮರುದಿನವೇ ತಮಗೆ ಲಾಭದಾಯಕವಾಗಿರುವ ಹಳೆಯ ಹುದ್ದೆಗೆ ವಾಪಸ್ ಬಂದಿದ್ದಾರೆ. ಈ ಬಗ್ಗೆ ಸದನದಲ್ಲಿ ಎಂಎಲ್‌ಸಿ ರಮೇಶಬಾಬು ಆಕ್ರೋಶ ಹೊರಹಾಕಿದ್ದಾರೆ.

ಎಂಎಲ್‌ಸಿ ರಮೇಶಬಾಬು (ಸಂಗ್ರಹ ಚಿತ್ರ)

ಚಿಕ್ಕನಾಯಕನಹಳ್ಳಿ: ಪೌರಾಡಳಿತ ಇಲಾಖೆಯ ಅಧಿಕಾರಿಯೊಬ್ಬರು ಬಡ್ತಿ ಪಡೆದು ಕೇವಲ ಒಂದು ದಿನ ಅಧಿಕಾರ ಚಲಾಯಿಸಿ, ಮರು ದಿನವೇ ಹಳೆಯ ಹುದ್ದೆಗೆ ಮರಳಿರುವ ವಿಲಕ್ಷಣ ಸಂಬಳದ ಹಗರಣ ವಿಧಾನಪರಿಷತ್ತಿನಲ್ಲಿ ಬುಧವಾರ ಪ್ರತಿಧ್ವನಿಸಿತು. ಆಡಳಿತ ಪಕ್ಷದ ಸದಸ್ಯರಾದ ರಮೇಶಬಾಬು ಅವರು ವಿಶ್ವವಾಣಿ ಪತ್ರಿಕೆಯ ವರದಿಯನ್ನು ಉಲ್ಲೇಖಿಸಿ, ಚಿಕ್ಕನಾಯಕನಹಳ್ಳಿ ಪುರಸಭೆಯ (Chikkanayakanahalli Town Municipal Council) ಭ್ರಷ್ಟಾಚಾರ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ಪ್ರಸ್ತಾಪಿಸಿದ ರಮೇಶಬಾಬು ಅವರು, ವಿಶ್ವವಾಣಿ ಪತ್ರಿಕೆಯು ವ್ಯವಸ್ಥೆಯ ಅಣಕವನ್ನು ಬಯಲಿಗೆಳದಿದೆ. ಮುಖ್ಯಾಧಿಕಾರಿ ಮಂಜಮ್ಮ ಅವರು ಪೌರಾಯುಕ್ತರಾಗಿ ಪದೋನ್ನತಿ ಪಡೆದಿದ್ದಾರೆ. ನಿಯಮದಂತೆ ಅವರು ಹೊಸ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಬೇಕಿತ್ತು. ಆದರೆ, ಕೇವಲ ಒಂದು ದಿನ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ, ಮರುದಿನವೇ ತಮಗೆ ಲಾಭದಾಯಕವಾಗಿರುವ ಹಳೆಯ ಹುದ್ದೆಗೆ ವಾಪಸ್ ಬಂದಿದ್ದಾರೆ. ಇದು ಕೇವಲ ಉನ್ನತ ಶ್ರೇಣಿ ಗಿಟ್ಟಿಸಿಕೊಳ್ಳಲು ಮಾಡಿದ ತಂತ್ರವಲ್ಲವೇ? ಎಂದು ಪ್ರಶ್ನಿಸಿದರು.

ಚಿಕ್ಕನಾಯಕನಹಳ್ಳಿ ಪುರಸಭೆಯಲ್ಲಿ ನಡೆದಿದೆ ಎನ್ನಲಾದ ಹತ್ತಾರು ಕೋಟಿ ದುರುಪಯೋಗವಾಗಿರುವ ಬಗ್ಗೆ ಲೆಕ್ಕ ಪರಿಶೋಧನಾ ವರದಿ ಬಂದಿದ್ದರೂ ಪುರಸಭೆ ಅದನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದೆ. ಅನೇಕ ಕಾಮಗಾರಿಗಳು ಅಪೂರ್ಣವಾಗಿದ್ದು, ಭ್ರಷ್ಟಚಾರ ತಾಂಡವವಾಡುತ್ತಿದೆ ಎಂದು ಎಂದು ನೇರ ಆರೋಪ ಮಾಡಿದರು. ಪುರಸಭೆ ಮುಖ್ಯಾಧಿಕಾರಿ ಅತ್ಯಂತ ಬೇಜಾವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಸಭೆಗಳಿಗೆ ಹಾಜರಾಗುತ್ತಿಲ್ಲ. ಸಾರ್ವಜನಿಕರ ಅಥವಾ ಜನಪ್ರತಿನಿಧಿಗಳ ಫೋನ್ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಇಂತಹ ಅಧಿಕಾರಿಗಳಿಂದ ಆಡಳಿತ ಯಂತ್ರ ಕುಸಿದಿದೆ ಎಂದು ಆಕ್ರೋಶ ಹೊರಹಾಕಿದರು.

_Chikkanayakanahalli Town Municipal Council

ಮಹಾಲಕ್ಷ್ಮೀ ಮದ್ದರಲಕ್ಷ್ಮೀ ಕ್ಷೇತ್ರಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳ ಭೇಟಿ

ಹಗರಣದ ತೀವ್ರತೆಯನ್ನು ಪರಿಗಣಿಸಿ ಸಚಿವರು ಕಚೇರಿಗೆ ಭೇಟಿ ನೀಡಿ, ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕು. ಅಡಿಟ್ ವರದಿಯನ್ನು ಹೊರತೆಗೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೇವಲ ಸಂಬಳಕ್ಕಾಗಿ ಬಡ್ತಿ ಪಡೆದು ಹಳೆ ಹುದ್ದೆಗೆ ಮರಳಿರುವ ಅಧಿಕಾರಿಯ ಪದೋನ್ನತಿಯನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು. ಆಡಳಿತ ಪಕ್ಷದ ಸದಸ್ಯರೇ ಪತ್ರಿಕಾ ವರದಿ ಹಿಡಿದು ಸರಕಾರದ ನಡೆಯನ್ನು ಪ್ರಶ್ನಿಸಿದ್ದು, ಸದನದಲ್ಲಿ ತೀವ್ರ ಕುತೂಹಲ ಮೂಡಿಸಿತಲ್ಲದೆ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು.