ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ಉಂಟಾಗಿದ್ದ ಶಿಷ್ಟಾಚಾರ ಉಲ್ಲಂಘನೆ ಗೊಂದಲಕ್ಕೆ ಸಿದ್ದಗಂಗಾ ಶ್ರೀಗಳು (Siddalinga Swamiji) ತೆರೆ ಎಳೆದಿದ್ದಾರೆ. ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ. ದೆಹಲಿ ಮಟ್ಟದಲ್ಲಿ ಸಚಿವಿ ಜೋಶಿ, ವಿ. ಸೋಮಣ್ಣನವರು ಪಾಪ ಬಹಳ ಪ್ರಯತ್ನ ಪಟ್ಟರು. ರಾಷ್ಟ್ರಪತಿಗಳ ಅಧಿಕಾರಿಗಳ ಮಟ್ಟದಲ್ಲಿ ಸ್ಪಂದನೆ ಇಲ್ಲ ಅನ್ನೊದನ್ನು ಬಿಟ್ಟರೆ, ಇಲ್ಲಿ ಯಾರನ್ನೂ ದೂಷಣೆ ಮಾಡುವ ಅಗತ್ಯ ಇಲ್ಲ ಎಂದು ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.