ಶಿರಸಿ: ಕರ್ನಾಟಕ ಕೃಷಿ ತಂತ್ರಜ್ಞರ ಸಂಸ್ಥೆಯು ಜಾಗತಿಕ ಆಹಾರ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಂಡ ರಾಷ್ಟ್ರಮಟ್ಟದ ಜೇನು ಕೃಷಿ ಕುರಿತ ವಿಚಾರ ಸಂಕಿರಣದಲ್ಲಿ ಜೇನು ಕೃಷಿಯಲ್ಲಿ ಅಪರಿಮಿತ ಸಾಧನೆ ಮಾಡಿ ಅನೇಕ ಉಪ ಉತ್ಪನ್ನಗಳನ್ನೂ ಪರಿಚಯಿಸಿದ ತಜ್ಞ ಮಧುಕೇಶ್ವರ ಹೆಗಡೆ ಕಲ್ಲಳ್ಳಿಮನೆ ಅವರನ್ನು ಗೌರವಿಸಲಾಯಿತು.
ಇದನ್ನೂ ಓದಿ: Sirsi News: ಹೇಳಿಕೆ ತಿರುಚಿ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿರುವುದು ವಿಷಾಧನೀಯ
ಇದೇ ವೇಳೆ ಅವರು ಜೇನು ಮಹತ್ವ ಹಾಗೂ ಅದರ ಉಪ ಉತ್ಪನ್ನ ಕುರಿತು ವಿಶೇಷ ಉಪನ್ಯಾಸ ಕೂಡ ನೀಡಿದರು.
ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆ ಹಿರಿಯ ಹೆಚ್ಚುವರಿ ನಿರ್ದೇಶಕ ಡಾ.ನಂದಾ ಎಸ್., ಕಪೆಕ್ ನಿರ್ದೇಶಕ ಸಿ.ಎನ್.ಶಿವಪ್ರಕಾಶ್, ತೋಟಗಾರಿಕಾ ವಿವಿಯ ಡೀನ್ ಮೋಹನ ನಾಯ್ಕ, ಸಂಸ್ಥೆ ಅಧ್ಯಕ್ಷ ಎ.ಬಿ.ಪಾಟೀಲ ಇತರರು ಇದ್ದರು.