R T Vittalmurthy Column: ಚಕ್ರವ್ಯೂಹದಿಂದ ಪಾರಾದರಾ ಸಿಎಂ ಸಿದ್ದು ?
ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದಲ್ಲಿ ಅಧಿಕಾರ ಹಂಚಿಕೆ ಸೂತ್ರವನ್ನು ಇಂಪ್ಲಿಮೆಂಟ್ ಮಾಡಲು ಹೋದರೆ ರಾಜಸ್ಥಾನದಲ್ಲಿ ಈ ಹಿಂದೆ ಅಶೋಕ್ ಗೆಹ್ಲೋಥ್-ಸಚಿನ್ ಪೈಲಟ್ ಮಧ್ಯೆ ಏನಾಯಿತು? ಛತ್ತೀಸ್ಘಡದಲ್ಲಿ ಭೂಪೇಶ್ ಸಿಂಗ್ ಭಗೇಲಾ ಮತ್ತು ಟಿ.ಎ.ಸಿಂಗ್ ದೇವ್ ನಡು ವಣ ಕದನ ಏನಾಯಿತು? ಅಂತ ಖರ್ಗೆಯವರಿಗೆ ಗೊತ್ತು.


ಮೂರ್ತಿಪೂಜೆ
ಆರ್.ಟಿ.ಮೂರ್ತಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳೆದ ವಾರ ಕರ್ನಾಟಕಕ್ಕೆ ಬಂದರು. ಹೀಗೆ ಬಂದ ವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಏಕತೆಯ ಮಂತ್ರ ಬೋಧಿಸಿ ಹೋದರು. ಅಂದ ಹಾಗೆ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರಿಗೆ ಖರ್ಗೆಯವರು ಏಕತೆಯ ಮಂತ್ರ ಬೋಧಿಸಿದ್ದು ಇದೇ ಮೊದಲಲ್ಲ; ರಾಜ್ಯ ಕಾಂಗ್ರೆಸ್ ಪಾಳ ಯದಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ತಳಮಳವೆದ್ದಾಗಲೆಲ್ಲ ಅವರು ಅದೇ ಕೆಲಸ ಮಾಡಿದ್ದಾರೆ.
ಹಾಗಂತ ರಾಜಕೀಯ ಬೆಳವಣಿಗೆಗಳ ಮಧ್ಯೆ ಖರ್ಗೆಯವರಿಗೆ ಸಿಎಂ ಆಗುವ ಆಸೆ ಇಲ್ಲ ವೆಂದಲ್ಲ. ವಾಸ್ತವವಾಗಿ ಕರ್ನಾಟಕದ ಸಿಎಂ ಆಗಲು ಅವರು ಸತತವಾಗಿ ಪ್ರಯತ್ನಿಸಿದ್ದಾರೆ. ಆದರೆ ಸನ್ನಿವೇಶಗಳು, ಕೈಗೆ ಬಂದ ತುತ್ತು ಅವರ ಬಾಯಿಗೆಟುಕದಂತೆ ಮಾಡಿವೆ. ಈ ಬಗ್ಗೆ ಅವರಿಗೆ ಹಳಹಳಿಕೆ ಇಲ್ಲವೆಂದಲ್ಲ, ಇವತ್ತು ಕಷ್ಟ ಹೇಳಿಕೊಳ್ಳಲು ರಾಜ್ಯ ಕಾಂಗ್ರೆಸ್ನ ಯಾವುದೇ ನಾಯಕರು ತಮ್ಮ ಬಳಿ ಬರಲಿ, ತಮಗೆ ಸಿಎಂ ಹುದ್ದೆ ಎಷ್ಟು ಬಾರಿ ಮತ್ತು ಹೇಗೆ ತಪ್ಪಿತು ಅನ್ನುವುದನ್ನು ಅವರೆದುರು ಎಳೆ ಎಳೆಯಾಗಿ ಬಿಡಿಸಿಡುತ್ತಾರೆ.
ಇದನ್ನೂ ಓದಿ: R T Vittalmurthy Column: ಕೈ ಪಾಳೆಯದಲ್ಲಿ ಕಾಣಿಸುತ್ತಿದೆ ತೃತೀಯ ಶಕ್ತಿ
ಇಂಥ ಖರ್ಗೆಯವರ ಬಳಿ ಸಿದ್ದರಾಮಯ್ಯ ಕ್ಯಾಂಪಿನವರು ಹೋಗಿ ಒಂದು ಬಗೆಯ ಆಸೆ ಹುಟ್ಟಿಸಿದರೆ, ಶಿವಕುಮಾರ್ ಕ್ಯಾಂಪಿನವರು ಹೋಗಿ ಮತ್ತೊಂದು ಬಗೆಯ ಆಸೆಯ ಬೀಜ ಬಿತ್ತಿ ಬಂದಿದ್ದಾರೆ. ಅಂದ ಹಾಗೆ, ಇತ್ತೀಚೆಗೆ ಖರ್ಗೆಯವರನ್ನು ಭೇಟಿ ಮಾಡಿದ್ದ ಸಿದ್ದು ಕ್ಯಾಂಪಿನ ಪ್ರಮುಖರಾದ ಸತೀಶ್ ಜಾರಕಿಹೊಳಿ ಮತ್ತು ಕೆ.ಎನ್.ರಾಜಣ್ಣ ಅವರು 3 ವಿಷಯಗಳನ್ನು ಸ್ಪಷ್ಟವಾಗಿ ಹೇಳಿ ಬಂದಿದ್ದರು.
ಅದೆಂದರೆ, “ಸಿದ್ದು ಸಿಎಂ ಹುದ್ದೆಯಿಂದ ಇಳಿಯಬಾರದು. ಇಳಿಯುವುದೇ ಆದರೆ ಅವರ ಜಾಗಕ್ಕೆ ನೀವು ಬರಬೇಕು. ಒಂದು ವೇಳೆ ಇದು ಸಾಧ್ಯವಾಗದೆ ಡಿಕೆಶಿ ಹೆಸರು ಮುನ್ನೆಲೆಗೆ ಬಂದರೆ ನಾವು ಪಕ್ಷ ತೊರೆಯುತ್ತೇವೆ" ಎಂಬುದು ಈ ನಾಯಕರ ಮಾತಾಗಿತ್ತು. ಇದೇ ರೀತಿ ಡಿಕೆಶಿ ಕ್ಯಾಂಪಿನವರೂ ಖರ್ಗೆಯವರ ಮುಂದೆ ಎರಡು ಪ್ರಪೋಸಲ್ಲುಗಳನ್ನು ಮಂಡಿಸಿ ಬಂದಿದ್ದಾರೆ.
ಅದೆಂದರೆ, ಅಧಿಕಾರ ಹಂಚಿಕೆ ಒಪ್ಪಂದದ ಅನುಸಾರ ಸಿಎಂ ಸಿದ್ದರಾಮಯ್ಯ ಕೆಳಗಿಳಿದು ಡಿಕೆಶಿ ಸಿಎಂ ಆಗಲಿ. ಅದೇ ರೀತಿ ಡಿಕೆಶಿ ತೆರವು ಮಾಡುವ ಡಿಸಿಎಂ ಹುದ್ದೆಗೆ ನಿಮ್ಮ ಪುತ್ರ ಪ್ರಿಯಾಂಕ್ ಖರ್ಗೆ ಬರಲಿ ಎಂಬುದು. ಇವತ್ತು ತಾವು ಸಿಎಂ ಆಗುವ, ಇಲ್ಲವೇ ತಮ್ಮ ಪುತ್ರ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಡಿಸಿಎಂ ಆಗುವ ಪ್ರಪೋಸಲ್ಲು ಖರ್ಗೆ ಯವರಿಗೆ ಇಷ್ಟವೇನೋ ಆಗಿದೆ. ಆದರೆ ಹಾಗಂತ ಅವಸರಕ್ಕೆ ಬಿದ್ದು ಆಟ ಕೆಡಿಸಿಕೊಳ್ಳುವ ಇಚ್ಛೆ ಅವರಿಗಿಲ್ಲ. ಸಾಲದೆಂಬಂತೆ ಇವತ್ತು ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕಿರುವ ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶ ಎಂಬ ಸೇನಾ ನೆಲೆಗಳನ್ನು ಕಳೆದುಕೊಂಡರೆ ಆಗುವ ಅಪಾಯವೇನು? ಎಂಬುದು ಖರ್ಗೆಯವರಿಗೆ ಗೊತ್ತಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದಲ್ಲಿ ಅಧಿಕಾರ ಹಂಚಿಕೆ ಸೂತ್ರವನ್ನು ಇಂಪ್ಲಿಮೆಂಟ್ ಮಾಡಲು ಹೋದರೆ ರಾಜಸ್ಥಾನದಲ್ಲಿ ಈ ಹಿಂದೆ ಅಶೋಕ್ ಗೆಹ್ಲೋಥ್-ಸಚಿನ್ ಪೈಲಟ್ ಮಧ್ಯೆ ಏನಾಯಿತು? ಛತ್ತೀಸ್ಘಡದಲ್ಲಿ ಭೂಪೇಶ್ ಸಿಂಗ್ ಭಗೇಲಾ ಮತ್ತು ಟಿ.ಎ.ಸಿಂಗ್ ದೇವ್ ನಡುವಣ ಕದನ ಏನಾಯಿತು? ಅಂತ ಖರ್ಗೆಯವರಿಗೆ ಗೊತ್ತು.
ನಿರ್ದಿಷ್ಟ ಅವಧಿಯ ನಂತರ ಸಚಿನ್ ಪೈಲಟ್ಗೆ ಅಧಿಕಾರ ಬಿಟ್ಟುಕೊಡಿ ಅಂತ ರಾಜಸ್ಥಾನ ದ ಸಿಎಂ ಅಶೋಕ್ ಗೆಹ್ಲೋಥ್ ಅವರಿಗೆ ಹೇಳಿದರೆ ಅವರು ಬಿಲ್ಕುಲ್ ಒಪ್ಪಲಿಲ್ಲ. ಪರಿಣಾ ಮವಾಗಿ ಕಾಂಗ್ರೆಸ್ ಹೈಕಮಾಂಡ್ಗೆ ಮುಖಭಂಗವಾಯಿತು. ಇದೇ ರೀತಿ ಕೆಲವೇ ಕಾಲದ ಹಿಂದೆ ಡಿಸಿಎಂ ಸಿಂಗ್ ದೇವ್ ಅವರಿಗೆ ಸಿಎಂಗಿರಿ ಬಿಟ್ಟುಕೊಡಿ ಎಂದರೆ ಭಗೇಲಾ ತಿರುಗೇಟು ಹೊಡೆದಿದ್ದರು.
ಹೀಗಾಗಿ ಕೆಲ ದಿನಗಳ ಹಿಂದೆ ಪಕ್ಷದ ವರಿಷ್ಠರ ಸಭೆ ನಡೆದಾಗ ಕರ್ನಾಟಕದ ರಾಜಕೀಯ ಸನ್ನಿವೇಶಗಳ ಬಗ್ಗೆ ಚರ್ಚೆಯಾಗಿದೆ. ಆಗೆಲ್ಲ ನೇರವಾಗಿ ಮಾತನಾಡಿದ ಕೆಲ ನಾಯಕರು ರಾಜಸ್ಥಾನ, ಛತ್ತೀಸ್ಘಡದ ಎಪಿಸೋಡುಗಳನ್ನು ನೆನಪಿಸಿದ್ದಾರೆ. ಅಷ್ಟೇ ಅಲ್ಲ, ನಾಳೆ ಅಧಿಕಾರ ಬಿಟ್ಟುಕೊಡಿ ಅಂತ ಸಿಎಂ ಸಿದ್ದರಾಮಯ್ಯನವರಿಗೆ ಹೇಳಿದರೆ, ಅವರು ಅಶೋಕ್ ಗೆಹ್ಲೋಥ್, ಭಗೇಲಾ ಅವರ ತರಹ ತಿರುಗಿ ಬೀಳಬಹುದು.
ಎಷ್ಟೇ ಆದರೂ ಅವರು ಮಾಸ್ ಲೀಡರ್. ಹೀಗಾಗಿ ಅಧಿಕಾರ ಬಿಟ್ಟುಕೊಡಿ ಅಂತ ಅವರಿಗೆ ಹೇಳುವುದು ಕಷ್ಟ. ಹಾಗೊಂದು ವೇಳೆ ಅವರು ತಯಾರಿದ್ದರೂ ಅವರ ಜತೆಗಿರುವವರು ಸುಮ್ಮನಿರುವುದಿಲ್ಲ. ಒಂದು ವೇಳೆ ಅವರು ತಿರುಗಿಬಿದ್ದರೆ ಕ್ರಮ ತೆಗೆದುಕೊಳ್ಳುವ ಸ್ಥಿತಿ ಯಲ್ಲಿ ನಾವೂ ಇಲ್ಲ. ಹೀಗಾಗಿ ಅಧಿಕಾರ ಬಿಟ್ಟುಕೊಡಿ ಅಂತ ಸಿದ್ದರಾಮಯ್ಯ ಅವರಿಗೆ ಹೇಳುವುದು ತುಂಬ ದುಬಾರಿಯಾಗಬಹುದು ಎಂದಿದ್ದಾರೆ.
ಯಾವಾಗ ಅವರು ಇಂಥ ಆತಂಕ ವ್ಯಕ್ತಪಡಿಸಿದರೋ, ಅದನ್ನೇ ಮನಸ್ಸಿನಲ್ಲಿಟ್ಟುಕೊಂಡ ಮಲ್ಲಿಕಾರ್ಜುನ ಖರ್ಗೆ ಮೊನ್ನೆ ಕರ್ನಾಟಕಕ್ಕೆ ಬಂದು ಏಕತೆಯ ಮಂತ್ರ ಬೋಧಿಸಿ ಹೋಗಿ ದ್ದಾರೆ.
ಚಕ್ರವ್ಯೂಹದಿಂದ ಸಿದ್ದು ಪಾರು?
ಇನ್ನು ತೆಲಂಗಾಣದ ಮುಖ್ಯಮಂತ್ರಿ ರೇವಂತರೆಡ್ಡಿ ಅವರು ತಾವು ಸಿಲುಕಿಕೊಂಡ ಚಕ್ರ ವ್ಯೂಹದ ಬಗ್ಗೆ ನೋವು ತೋಡಿಕೊಳ್ಳುವ ಕಾಲಕ್ಕೆ ಸರಿಯಾಗಿ, ಕರ್ನಾಟಕದ ಸಿಎಂ ಸಿದ್ದರಾ ಮಯ್ಯ ತಾವು ಸಿಲುಕಿಕೊಂಡ ಚಕ್ರವ್ಯೂಹದಿಂದ ಪಾರಾಗುವ ಭರವಸೆ ತೋರಿಸಿದ್ದಾರೆ. ಅಂದ ಹಾಗೆ, ರಾಜ್ಯ ಸರಕಾರಗಳ ಗ್ಯಾರಂಟಿ ಯೋಜನೆಗಳೇ ಈ ಚಕ್ರವ್ಯೂಹ. ಮೊನ್ನೆ ಸಂದ ರ್ಶನವೊಂದರಲ್ಲಿ ಮಾತನಾಡಿದ ರೇವಂತರೆಡ್ಡಿ ಅವರು, ತಾವು ಸಿಲುಕಿಕೊಂಡ ಚಕ್ರವ್ಯೂ ಹದ ಬಗ್ಗೆ ಬಹಿರಂಗವಾಗಿಯೇ ನೋವು ತೋಡಿಕೊಂಡಿದ್ದರು.
“ಇವತ್ತು ತೆಲಂಗಾಣ ಸರಕಾರ ತನ್ನ ಆದಾಯದ ಪೈಕಿ ದೊಡ್ಡ ಪಾಲನ್ನು ಸರಕಾರಿ ನೌಕ ರರ ವೇತನ, ಪಿಂಚಣಿಗೆ ಮತ್ತು ಸರಕಾರ ಮಾಡಿದ ಸಾಲದ ಮರುಪಾವತಿಗೆ ಕೊಡು ತ್ತಿದೆ. ಉಳಿದ ಸ್ವಲ್ಪ ಹಣ ಅಭಿವೃದ್ಧಿ ಕೆಲಸಕ್ಕೆ ಸಾಲುತ್ತಿಲ್ಲ" ಅನ್ನುತ್ತಾ ಗ್ಯಾರಂಟಿ ಯೋಜನೆ ಗಳನ್ನು ನಿಲ್ಲಿಸುವುದು ಒಳ್ಳೆಯದು ಎಂಬ ಇಂಗಿತ ವ್ಯಕ್ತಪಡಿಸಿದರು.
ಹೀಗೆ ಅವರು ತಮ್ಮ ಸಂಕಟ ತೋಡಿಕೊಳ್ಳುವ ಕಾಲಕ್ಕೆ ಸರಿಯಾಗಿ ಇತ್ತ ತಮ್ಮ ಹದಿ ನಾರನೇ ಬಜೆಟ್ ಮಂಡಿಸಿದ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಚಕ್ರವ್ಯೂಹದಿಂದ ಬಚಾ ವಾಗುವ ಕುರುಹು ತೋರಿಸಿzರೆ. ಅಂದ ಹಾಗೆ, ಗ್ಯಾರಂಟಿ ಯೋಜನೆಗಳೆಂಬ ಚಕ್ರವ್ಯೂಹ ದಿಂದ ತುಂಬ ಸಂಕಟಕ್ಕೊಳಗಾದವರು ರಾಜ್ಯದ ಶಾಸಕರು. ಈ ಯೋಜನೆಗಳ ಕಾರಣ ದಿಂದ ತಮ್ಮ ಕ್ಷೇತ್ರಗಳಿಗೆ ಅನುದಾನ ಸಿಗದೆ ಹೋಗಿದ್ದರಿಂದ ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರು ಬಂಡಾಯದ ಮನಸ್ಥಿತಿಗೆ ಬಂದಿದ್ದರು.
ಹಾಗಂತಲೇ ಪಕ್ಷ ಅಽಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಪ್ರತಿ ಶಾಸಕಾಂಗ ಸಭೆ ಯಲ್ಲೂ ಗುರುಗುಡುತ್ತಿದ್ದ ಶಾಸಕರು, ಹಲವು ಮಂತ್ರಿಗಳ ಮೇಲೂ ಎರಗುತ್ತಿದ್ದರು. ಸಾಲದೆಂಬಂತೆ ಬಹುತೇಕ ಮಂದಿ ಗೋವಾದ ಮುಖ್ಯಮಂತ್ರಿ, ಬಿಜೆಪಿ ನಾಯಕ ಪ್ರಮೋದ್ ಸಾವಂತ್ ಅವರ ಲಿಂಕು ಸಾಧಿಸಿ, “ಸೂಕ್ತ ಕಾಲದಲ್ಲಿ ನಾವು ನಿಮ್ಮೊಂದಿಗೆ ಬರಲು ಸಿದ್ಧ" ಎಂದಿದ್ದರು.
ಹೀಗೆ ರಾಜ್ಯ ಕಾಂಗ್ರೆಸ್ನ ಬಹುತೇಕ ಶಾಸಕರು ತಮ್ಮ ಜತೆ ಕೈ ಜೋಡಿಸಿದ್ದರಿಂದ ದಿಲ್ಲಿಯ ಬಿಜೆಪಿ ನಾಯಕರು ಕರ್ನಾಟಕ ಸರಕಾರವನ್ನು ಉರುಳಿಸುವ ಕನಸು ಕಾಣುತ್ತಿದ್ದರು. ಅವರ ಈ ಕನಸಿಗೆ ರಾಜ್ಯ ಬಿಜೆಪಿಯಲ್ಲಿನ ಅನೈಕ್ಯತೆ ಅಡ್ಡಿಯಾಗಿದ್ದು ಒಂದು ಕಡೆಯಾದರೆ, ಮತ್ತೊಂದು ಕಡೆ ಈ ಬಾರಿಯ ಬಜೆಟ್ ಮೂಲಕ ಸಿದ್ದರಾಮಯ್ಯ ಭರ್ಜರಿ ಹೊಡೆತ ಕೊಟ್ಟಿದ್ದಾರೆ.
ಅರ್ಥಾತ್, ಈ ಬಾರಿಯ ಬಜೆಟ್ನಲ್ಲಿ ರಾಜಧಾನಿ ಬೆಂಗಳೂರಿಗೆ ಎಂಟು ಸಾವಿರ ಕೋಟಿ ರುಪಾಯಿ ಕೊಟ್ಟಿರುವ ಸಿದ್ದರಾಮಯ್ಯ, ಹೆಚ್ಚುವರಿ ಬಜೆಟ್ ಮೂಲಕ ರಾಜ್ಯದ ಪ್ರತಿ ಯೊಬ್ಬ ಶಾಸಕರಿಗೂ ನಲವತ್ತರಿಂದ ಐವತ್ತು ಕೋಟಿ ರು. ಅನುದಾನ ಕೊಡಲು ಸಜ್ಜಾಗಿ ದ್ದಾರೆ. ಹೀಗೆ ಮಾಡುವ ಮೂಲಕ ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಹಣ ಹರಿದಾಡುವಂತೆ ಮಾಡಲಿರುವ ಸಿದ್ದರಾಮಯ್ಯ ಎಲ್ಲ ಕ್ಷೇತ್ರಗಳ ಶಾಸಕರಲ್ಲಿ ನೆಮ್ಮದಿ ಮೂಡಿಸಿದ್ದಾರೆ.
ಅಂದ ಹಾಗೆ, ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ಹಣ ಬಿಡುಗಡೆಯಾಗುವುದು ಎಂದರೆ, ಅ ಮೂಲಕ ಶಾಸಕರ ಶಕ್ತಿ ಹೆಚ್ಚಿಸುವುದೆಂದೇ ಅರ್ಥ. ಹೀಗೆ, ಪರದಾಡುತ್ತಿದ್ದವರಿಗೆ ಸಿದ್ದರಾ ಮಯ್ಯ ದುಡ್ಡು ಕೊಟ್ಟರೆ ಶಾಸಕರ ಅಸಮಾಧಾನ ತೊಲಗುತ್ತದೆ. ಅಷ್ಟೇ ಅಲ್ಲ, ಶಾಸಕರ ಕೈ ಬಲಪಡಿಸಲು ಸಿದ್ದರಾಮಯ್ಯ ಮುಂದಾಗಿzರೆ ಎಂದರೆ ಗ್ಯಾರಂಟಿಗಳ ಚಕ್ರವ್ಯೂಹದಿಂದ ಅವರು ಪಾರಾಗುವ ಲಕ್ಷಣ ತೋರಿದ್ದಾರೆ ಎಂದೇ ಅರ್ಥ.
ರೇಣುಕಾಚಾರ್ಯ ವಿರುದ್ಧ ಕಿಡಿ
ಈ ಮಧ್ಯೆ ಮಾಜಿ ಸಚಿವ, ಯಡಿಯೂರಪ್ಪ ಬ್ರಿಗೇಡ್ನ ಸೇನಾನಿ ಎಂ.ಪಿ.ರೇಣುಕಾಚಾರ್ಯ ಅವರಿಗೆ ಷೋಕಾಸ್ ನೋಟಿಸ್ ಕೊಡಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರಂತೆ. ಅಂದ ಹಾಗೆ, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ವಿರುದ್ಧ ಯತ್ನಾಳ್ ಗ್ಯಾಂಗು ಹೋರಾಟ ನಡೆಸಿತಲ್ಲ? ಈ ಹೋರಾಟಕ್ಕೀಗ ಹೈಕಮಾಂಡ್ ಬ್ರೇಕ್ ಹಾಕಿದೆ. ಇದಕ್ಕೆ ಪೂರಕವಾಗಿ ಯತ್ನಾಳ್ ಅವರಿಗೆ ಷೋಕಾಸ್ ನೋಟಿಸ್ ನೀಡಿರುವ ಬಿಜೆಪಿ ವರಿಷ್ಠರು, ರಾಜ್ಯಾಧ್ಯಕ್ಷ ಹುದ್ದೆಯ ವಿಚಾರದಲ್ಲಿ ಇನ್ನೊಂದು ತಿಂಗಳು ಯಾರೂ ಚಕಾರವೆತ್ತಬೇಡಿ ಅಂತ ಸೂಚಿಸಿ ದ್ದರು.
ವಿಜಯೇಂದ್ರ ಅವರೇ ಪಕ್ಷಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕೋ ಅಥವಾ ಬೇರೆ ಯವರು ಈ ಜಾಗಕ್ಕೆ ಬಂದು ಕೂರಬೇಕೋ ಎಂಬುದನ್ನು ನಿರ್ಧರಿಸಲು ನಾವೇ ಸರ್ವೆ ಮಾಡಿ ರಿಪೋರ್ಟು ತರಿಸಿಕೊಳ್ಳುತ್ತೇವೆ. ಆ ರಿಪೋರ್ಟು ಯಾರ ಪರವಾಗಿದೆಯೋ, ಅವರೇ ಪಕ್ಷವನ್ನು ಮುನ್ನಡೆಸುತ್ತಾರೆ. ಅಲ್ಲಿಯವರೆಗೆ ಯಾರೂ ಗೊಂದಲ ಸೃಷ್ಟಿಸಬೇಡಿ ಅಂತ ಅಮಿತ್ ಶಾ ಅವರೇ ಸಿಗ್ನಲ್ಲು ನೀಡಿದ್ದರು. ಆದರೆ ಇಷ್ಟಾದ ನಂತರವೂ ವಿಜಯೇಂದ್ರ ಅವರ ಪರವಾಗಿ, ಯತ್ನಾಳ್ ಗ್ಯಾಂಗಿನ ವಿರುದ್ಧ ರೇಣುಕಾಚಾರ್ಯ ಅಬ್ಬರಿಸುತ್ತಿರುವ ರೀತಿಯು ಬಿಜೆಪಿ ವರಿಷ್ಠರ ಸಿಟ್ಟಿಗೆ ಕಾರಣವಾಗಿದೆ.
ಸಾಲದೆಂಬಂತೆ ಯತ್ನಾಳ್ ಗ್ಯಾಂಗು ವರಿಷ್ಠರಿಗೆ ಮೆಸೇಜು ರವಾನಿಸಿ, “ರೇಣುಕಾಚಾರ್ಯ ಇಷ್ಟೆಲ್ಲ ಕೂಗಾಡುತ್ತಿzರೆ. ಅವರ ಕೂಗಾಟಕ್ಕೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಸಪೋರ್ಟು ಇದೆ. ಆದರೆ ಇದನ್ನೆಲ್ಲ ಪರಿಗಣಿಸದ ನೀವು ಯತ್ನಾಳ್ ಅವರಿಗೆ ಮಾತ್ರ ನೋಟಿಸ್ ಕೊಟ್ಟಿದ್ದೀರಿ. ಇದ್ಯಾವ ನ್ಯಾಯ?" ಅಂತ ಕೇಳಿದೆ. ಯಾವಾಗ ಅದು ಈ ಧರ್ಮ ಸೂಕ್ಷ್ಮದ ಮಾತನಾಡಿತೋ, ವರಿಷ್ಠರು ರೇಣುಕಾಚಾರ್ಯ ವಿರುದ್ಧ ಕೆಂಗಣ್ಣು ಬೀರಿದ್ದಾರೆ.
ಮತ್ತಿದರ ಪರಿಣಾಮವಾಗಿ ಯತ್ನಾಳ್ ತರಹವೇ ರೇಣುಕಾಚಾರ್ಯ ಅವರಿಗೂ ಷೋಕಾಸ್ ನೋಟಿಸ್ ಜಾರಿಮಾಡಲು ಸಜ್ಜಾಗಿದ್ದಾರೆ.
ಲಾಸ್ಟ್ ಸಿಪ್: ಇನ್ನು ಬೆಂಗಳೂರಿನ ಕೆ.ಆರ್.ಪುರಂನ ಕಾಂಗ್ರೆಸ್ ಕ್ಯಾಂಡಿಡೇಟ್ ಒಬ್ಬರು ರಾಜಧಾನಿಯ ಪವರ್ ಫುಲ್ ನಾಯಕರೊಬ್ಬರ ಬಳಿ ಹೋಗಿದ್ದರಂತೆ. ಹೀಗೆ ಹೋದವರು ಸ್ಥಳೀಯ ಶಾಸಕ, ಬಿಜೆಪಿಯ ಭೈರತಿ ಬಸವರಾಜು ಅವರ ವಿರುದ್ಧ ದೂರು ನೀಡಿದ್ದಾರೆ. “ಸರ್, ಭೈರತಿ ಬಸವರಾಜು ಅವರ ಹೊಡೆತಕ್ಕೆ ಸ್ಥಳೀಯ ಕಾಂಗ್ರೆಸ್ ನಾಯಕರು ಸುಸ್ತಾಗಿ ಹೋಗಿದ್ದಾರೆ. ನೀವು ಏನಾದರೂ ಮಾಡಿ ಅವರ ನಟ್ಟು-ಬೋಲ್ಟು ಟೈಟು ಮಾಡಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯ ಹೊತ್ತಿಗೆ ನಾವು ಮೇಲೆದ್ದು ನಿಲ್ಲುವುದು ಕಷ್ಟ" ಎಂದಾಗ ರಾಜಧಾನಿಯ ಪವರ್ ಫುಲ್ ನಾಯಕರು, “ಏನೇ ಇರಲಿ, ನೀವು ಭೈರತಿ ಬಸವ ರಾಜು ಅವರ ಜತೆ ಹೊಂದಿಕೊಂಡು ಹೋಗಿ" ಎಂದಿದ್ದಾರೆ.
ಈ ಮಾತು ಕೇಳಿ ಸ್ಥಳೀಯ ನಾಯಕರು ದಂಗುಬಡಿದು ನಿಂತರೆ, ಮಾತು ಮುಂದುವರಿಸಿದ ಪವರ್ ಫುಲ್ ನಾಯಕರು, “ನಾಳೆ ಸಿಎಂ ಆಗಲು ನನಗೆ ಶಾಸಕರ ಬೆಂಬಲ ಕಡಿಮೆಯಾದರೆ ಭೈರತಿ ಬಸವರಾಜು ನನ್ನ ಜತೆ ನಿಲ್ಲುತ್ತಾರೆ. ಹೀಗಿರುವಾಗ ಅವರೊಂದಿಗೆ ಮನಸ್ತಾಪ ಮಾಡಿಕೊಳ್ಳಬೇಡಿ ಹೋಗಿ" ಎಂದಿದ್ದಾರೆ.