IND vs ENG: ʻಭಾರತ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಈ ಇಬ್ಬರ ಫಾರ್ಮ್ ಮುಖ್ಯʼ-ಸುರೇಶ್ ರೈನಾ!
Suresh Raina on Virat Kohli-Rohit Sharma: ಇಂಗ್ಲೆಂಡ್ ಒಡಿಐ ಸರಣಿ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡದ ಯಶಸ್ವಿಯಾಗಬೇಕೆಂದರೆ ಹಿರಿಯ ಬ್ಯಾಟ್ಸ್ಮನ್ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಫಾರ್ಮ್ ತುಂಬಾ ಮುಖ್ಯವಾಗುತ್ತದೆ ಎಂದು ಮಾಜಿ ಆಲ್ರೌಂಡರ್ ಸುರೇಶ್ ರೈನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Raina on Kohli-Rohit

ನವದೆಹಲಿ: ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC Champions Trophy) ಟೂರ್ನಿಯಲ್ಲಿ ಭಾರತ ತಂಡ ಯಶಸ್ಸು ಗಳಿಸಬೇಕಾದರೆ ಹಿರಿಯ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್ ಫಾರ್ಮ್ ನಿರ್ಣಾಯಕವಾಗಲಿದೆ ಎಂದು ಮಾಜಿ ಆಲ್ರೌಂಡರ್ ಸುರೇಶ್ ರೈನಾ ಹೇಳಿದ್ದಾರೆ. 2025 ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಪಾಕಿಸ್ತಾನದ ಆತಿಥ್ಯದಲ್ಲಿ ಫೆಬ್ರವರಿ 19 ರಿಂದ ಮಾರ್ಚ್ 9ರವೆರೆಗೆ ನಡೆಯಲಿದೆ. ಭಾರತ ತಂಡದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ.
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಸುರೇಶ್ ರೈನಾ, "2023ರ ಏಕದಿನ ವಿಶ್ವಕಪ್ ನಂತರ ರೋಹಿತ್ ಶರ್ಮಾ ಅವರ ಸ್ಟ್ರೈಕ್ ರೇಟ್ ಬಹಳಷ್ಟು ಸುಧಾರಿಸಿದೆ. ಅಂದಿನಿಂದ, ಅವರು 119-120 ಸ್ಟ್ರೈಕ್ ರೇಟ್ನಲ್ಲಿ ಸ್ಕೋರ್ ಮಾಡಿದ್ದಾರೆ. ಭಾರತದ ಅತ್ಯುತ್ತಮ ಒಡಿಐ ಬ್ಯಾಟ್ಸ್ಮನ್ಗಳಲ್ಲಿ ಅವರೂ ಒಬ್ಬರು," ಎಂದು ಗುಣಗಾನ ಮಾಡಿದ್ದಾರೆ.
IND vs ENG: ಇಂಗ್ಲೆಂಡ್ ಏಕದಿನ ಸರಣಿಯ ಭಾರತ ತಂಡದಲ್ಲಿ ವರುಣ್ ಚಕ್ರವರ್ತಿಗೆ ಸ್ಥಾನ!
"ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಹಿಂದಿನ ದಾಖಲೆಯನ್ನು ನೋಡಿದಾಗ, ನಿಮಗೆ ಅದು ನಿಮಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತದೆ ಎಂದು ನಾನು ಹೇಳುತ್ತೇನೆ. ಅವರು ಒಬ್ಬರಿಗೊಬ್ಬರು ಚೆನ್ನಾಗಿ ಬೆಂಬಲಿಸುತ್ತಾರೆ ಮತ್ತು ಇಬ್ಬರೂ ದೊಡ್ಡ ಇನಿಂಗ್ಸ್ ಆಡುವ ಕೌಶಲ್ವನ್ನು ಹೊಂದಿದ್ದಾರೆ. ಅವರು ಉತ್ತಮ ಪ್ರದರ್ಶನ ನೀಡಿದರೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಅಭಿಯಾನಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ," ಎಂದು ಸಿಎಸ್ಕೆ ಮಾಜಿ ಆಲ್ರೌಂಡರ್ ಶ್ಲಾಘಿಸಿದ್ದಾರೆ.
ಎಲ್ಲರ ಕಣ್ಣು ಜಡೇಜಾ ಮತ್ತು ಕುಲ್ದೀಪ್ ಮೇಲೆ
ಭಾರತ ತಂಡವು ಟೂರ್ನಿಯ ಗುಂಪು ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿಯಾದ ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶದೊಂದಿಗೆ ಕಾದಾಟ ನಡೆಸಲಿದೆ. ಸ್ಪಿನ್ ವಿಭಾಗ ಮತ್ತು ತಂಡದ ಸಂಯೋಜನೆಯ ಬಗ್ಗೆ ಮಾತನಾಡಿದ ರೈನಾ, "(ರವೀಂದ್ರ) ಜಡೇಜಾ ಏಕದಿನ ಪಂದ್ಯಗಳಲ್ಲಿ ಬಹಳ ಪರಿಣಾಮಕಾರಿಯಾಗಿರುವುದರಿಂದ ಅವರು ಖಂಡಿತವಾಗಿಯೂ ಆಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಕುಲ್ದೀಪ್ (ಯಾದವ್) ಗಾಯಗೊಂಡ ನಂತರ ಯಾವುದೇ ಪಂದ್ಯಗಳನ್ನು ಆಡಿಲ್ಲ ಆದರೆ ನಮ್ಮಲ್ಲಿ ಅಕ್ಷರ್ ಪಟೇಲ್ ಕೂಡ ಇದ್ದಾರೆ, ಅವರು ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.," ಎಂದು ತಿಳಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿ; ಭಾರತ ತಂಡದಲ್ಲಿ ಒಂದು ಮಹತ್ವದ ಬದಲಾವಣೆ ಸಾಧ್ಯತೆ!
"ದುಬೈ ಪಿಚ್ಗಳು ವೇಗದ ಬೌಲರ್ಗಳಿಗೆ ಚಲನೆಯನ್ನು ಒದಗಿಸುತ್ತವೆ ಆದರೆ ಸ್ಪಿನ್ ಬೌಲರ್ಗಳು ಸಹ ಪ್ರಮುಖ ಪಾತ್ರ ವಹಿಸುತ್ತಾರೆ. ಆದ್ದರಿಂದ ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಅತ್ಯುತ್ತಮ ಫಾರ್ಮ್ನಲ್ಲಿರಬೇಕು. ರೋಹಿತ್ ಶರ್ಮಾ ಆಯ್ಕೆ ಮಾಡಿದ ತಂಡದ ಸಂಯೋಜನೆ ಮುಖ್ಯವಾಗಿರುತ್ತದೆ," ಎಂದು ರೈನಾ ಹೇಳಿದ್ದಾರೆ.
ಇಂಗ್ಲೆಂಡ್ ಒಡಿಐ ಕೊಹ್ಲಿ-ರೋಹಿತ್ಗೆ ಮುಖ್ಯ
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ತವರಿನಲ್ಲಿ ಆಡಲಿದ್ದು, ಕೊಹ್ಲಿ ಮತ್ತು ರೋಹಿತ್ರಂತಹ ಆಟಗಾರರಿಗೆ ಪ್ರತಿಷ್ಠಿತ ಟೂರ್ನಿಗೂ ಮುನ್ನ ಮೈದಾನದಲ್ಲಿ ಸ್ವಲ್ಪ ಸಮಯ ಕಳೆಯಲು ಅವಕಾಶ ಸಿಗುತ್ತದೆ ಎಂದು ರೈನಾ ನಂಬಿದ್ದಾರೆ.
ಮೂರು ಏಕದಿನ ಪಂದ್ಯಗಳು ನಾಗ್ಪುರ, ಅಹಮದಾಬಾದ್ ಮತ್ತು ಕಟಕ್ನಲ್ಲಿ ನಡೆಯಲಿವೆ, ಅಲ್ಲಿ ಸಾಂಪ್ರದಾಯಿಕವಾಗಿ ದೊಡ್ಡ ಸ್ಕೋರ್ಗಳು ದಾಖಲಾಗುತ್ತವೆ. ಮುಂಬರುವ ಸರಣಿಯ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡ ರೈನಾ, ರೋಹಿತ್ ಆರಂಭದಿಂದಲೇ ಬೌಲರ್ಗಳ ಮೇಲೆ ದಾಳಿ ಮಾಡುವುದನ್ನು ಮುಂದುವರಿಸಬೇಕು. ಏಕೆಂದರೆ 2023ರ ಕೊನೆಯ ಒಡಿಐ ವಿಶ್ವಕಪ್ನಲ್ಲಿಯೂ ಸಹ ಅವರಿಗೆ ಯಶಸ್ಸು ಸಿಕ್ಕಿತು ಎಂದು ಹೇಳಿದರು.