ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಕ್ಕೆ ಪ್ರೋತ್ಸಾಹ: ಎಸ್.ಡಿ.ಎಂ ಪ್ರತಿಪಾದನೆಗೆ ರಾಷ್ಟಮಟ್ಟದ ಮನ್ನಣೆ
ಭಾರತದ ಸಿಸ್ಟಮ್ ಆಫ್ ಮೆಡಿಸಿನ್ನ ರಾಷ್ಟ್ರೀಯ ಆಯೋಗದ (NCISM) ಸದಸ್ಯರು, ಪ್ರಮುಖ ಮುಖಂ ಡರು ಅಲ್ಲದೆ ಮಾನ್ಯ ರಾಜ್ಯ ಸಭಾ ಸದಸ್ಯ ಮತ್ತು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು SVYASA ಚಾನ್ಸೆಲೆರ್ ಡಾ. ಎಚ್. ಆರ್. ನಾಗೇಂದ್ರ ಭಾಗವಹಿಸಿದ್ದರು
![education](https://cdn-vishwavani-prod.hindverse.com/media/images/education.max-1280x720.jpg)
![Profile](https://vishwavani.news/static/img/user.5c7ca8245eec.png)
ಧರ್ಮಸ್ಥಳ: ಎಸ್ ಡಿ ಎಂ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್) ಸಂಸ್ಥೆ ಬಿಎನ್ ವೈಎಸ್ (ಬ್ಯಾಚುಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್) ಕೋರ್ಸ್ನ ಕೇಂದ್ರ ನಿಯಂತ್ರಣದ ಹೋರಾಟದಲ್ಲಿ ಯಶಸ್ಸು ಗಳಿಸಿದೆ. 2025ರ ಜನವರಿಯಲ್ಲಿ ಧರ್ಮಸ್ಥಳದಲ್ಲಿ ನಡೆದ ಪ್ರಮುಖ ಸಭೆಯ ನಂತರ, ನವದೆಹಲಿಯ ನಿರ್ಮಾಣ ಭವನದಲ್ಲಿ 2025ರ ಫೆ.4ರಂದು ಎರಡನೆಯ ಪ್ರಮುಖ ಸಭೆಯನ್ನು ಆಯೋಜಿಸಿತ್ತು. ಸಭೆಯಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಕ್ಕೆ ಕೇಂದ್ರ ನಿಯಂತ್ರಣದ ನಿಯಮ ಜಾರಿ ಗೊಳಿಸುವಂತೆ ಕೋರಿ ಎಸ್ ಡಿ ಎಂ ಶಿಕ್ಷಣ ಸಂಸ್ಥೆ ಮನವಿ ಮಾಡಿದ್ದು, ಕೇಂದ್ರ ಆಯುಷ್ ಮಂಡಲ ಸಂಪೂರ್ಣ ಸಮ್ಮತಿ ಸೂಚಿಸಿದೆ.
ಈ ಸಭೆಯ ಅಧ್ಯಕ್ಷತೆಯನ್ನು ಆಯುಷ್ ಮಂತ್ರಿ ಶ್ರೀ ಪ್ರತಾಪರಾವ್ ಗಣಪತ್ರಾವ್ ಜಾಧವ್ ವಹಿಸಿ ದ್ದರು. ಆಯುಷ್ ಕಾರ್ಯದರ್ಶಿ, ಭಾರತದ ಸಿಸ್ಟಮ್ ಆಫ್ ಮೆಡಿಸಿನ್ನ ರಾಷ್ಟ್ರೀಯ ಆಯೋಗದ (NCISM) ಸದಸ್ಯರು, ಪ್ರಮುಖ ಮುಖಂಡರು ಅಲ್ಲದೆ ಮಾನ್ಯ ರಾಜ್ಯ ಸಭಾ ಸದಸ್ಯ ಮತ್ತು ಎಸ್.ಡಿ. ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು SVYASA ಚಾನ್ಸೆಲೆರ್ ಡಾ. ಎಚ್. ಆರ್. ನಾಗೇಂದ್ರ ಭಾಗವಹಿಸಿದ್ದರು.
ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಪ್ರಬಲವಾದ ಪ್ರಸ್ತುತಿಗೆ ಮಂತ್ರಿ ಮಂಡಲ ಸಂಪೂರ್ಣ ಬೆಂಬಲ ವನ್ನು ವ್ಯಕ್ತಪಡಿಸಿದ್ದು, ಈ ಬೆಳವಣಿಗೆ ಎಸ್.ಡಿ.ಎಂ ಗುಣಮಟ್ಟದ ಶಿಕ್ಷಣ ಮತ್ತು ವಿಜ್ಞಾನ ಮಟ್ಟದ ಅನುಸರಿತ ಅಭ್ಯಾಸಗಳ ಸ್ಥಾಪನೆಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.
ಈ ನಿಯಂತ್ರಣವು ಶಿಕ್ಷಣದ ಪ್ರಮಾಣೀಕರಣಕ್ಕಾಗಿ ಮುಖ್ಯವಾಗಿದೆ. ಈಗಿನ ನಿಯಮಗಳಲ್ಲಿ ತಕ್ಷಣದ ಸಮಸ್ಯೆಯನ್ನು ಪರಿಹರಿಸಲು ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡಬಹುದು." ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಎಸ್ ಡಿ ಎಂ ಸಂಸ್ಥೆಯ ಈ ಪ್ರಯತ್ನವು ನೈಸರ್ಗಿಕ ವಿಜ್ಞಾನ ಮತ್ತು ಯೋಗದ ಕ್ಷೇತ್ರಗಳಲ್ಲಿ ಮಾನ ದಂಡಗಳನ್ನು ಮತ್ತು ಪ್ರಾಮಾಣಿಕತೆಗಳನ್ನು ಸ್ಥಾಪಿಸುವ ಗುರಿ ಹೊಂದಿದೆ.
ಭಾರತದ ಪಾರಂಪರಾಗತ ಶಿಕ್ಷಣ ಪದ್ಧತಿಯನ್ನು ಉತ್ತೇಜಿಸಿ, ಶಿಕ್ಷಣದ ಗುಣಮಟ್ಟ ವನ್ನು ಹೆಚ್ಚಿ ಸುವ ಎಸ್ ಡಿ ಎಂ ಪ್ರಯತ್ನಕ್ಕೆ ಇದೀಗ ರಾಷ್ಟ್ರ ಮಟ್ಟದ ಮನ್ನಣೆ ದೊರೆತಿದೆ.