ಬೆಂಗಳೂರು: ಹಿಂದೂ ಸಂಪ್ರದಾಯದಲ್ಲಿ (Hindu Tradition) ವಾರದ ಪ್ರತಿದಿನವೂ ವಿಭಿನ್ನ ದೇವತೆಗಳಿಗೆ ಸಮರ್ಪಿತವಾಗಿರುತ್ತದೆ. ಅದೇ ರೀತಿಯಾಗಿ ಶನಿವಾರವನ್ನು(Saturday) ಆಂಜನೇಯ ಸ್ವಾಮಿಯ(Lord Anjaneya) ಆರಾಧನೆಗೆ ವಿಶೇಷವಾಗಿ ಮಹತ್ವ ನೀಡಲಾಗುತ್ತದೆ. ಈ ದಿನಗಳಲ್ಲಿ ಭಕ್ತಿಯಿಂದ ಪೂಜೆ ಮಾಡಿದರೆ ಜೀವನದಲ್ಲಿ ಶುಭಫಲಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ. ಆಂಜನೇಯನನ್ನು ಆರಾಧಿಸುವುದರಿಂದ ಕೈಗೊಂಡ ಕಾರ್ಯಗಳು ಯಶಸ್ವಿಯಾಗುತ್ತವೆ ಎಂದು ಭಕ್ತರು ನಂಬುತ್ತಾರೆ. ಬಜರಂಗಬಲಿಯನ್ನು ಪೂಜಿಸಿದರೆ ಶಕ್ತಿ, ಜ್ಞಾನ ಮತ್ತು ಧೈರ್ಯ ಲಭಿಸುತ್ತದೆ ಎಂದು ಹೇಳಲಾಗುತ್ತದೆ.
ಸಂಕಟಮೋಚನ ಹನುಮಂತನ ಆರಾಧನೆ ವ್ಯಕ್ತಿಯ ಎಲ್ಲಾ ರೀತಿಯ ಕಷ್ಟಗಳನ್ನು ದೂರ ಮಾಡುತ್ತದೆ ಎಂಬ ನಂಬಿಕೆಯಿದೆ. ವಿಶೇಷವಾಗಿ ಕೆಲವು ಮಂತ್ರಗಳನ್ನು ಪಠಿಸುವುದರಿಂದ ಹೆಚ್ಚಿನ ಫಲಿತಾಂಶ ದೊರೆಯುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರಗಳಲ್ಲಿ (Astro Tips) ಹೇಳಲಾಗಿದೆ. ಹಾಗಾದರೆ ಯಾವ ಮಂತ್ರಗಳನ್ನು ಜಪಿಸಬೇಕು ಎಂಬುದನ್ನು ನೋಡೋಣ.
ಆಂಜನೇಯ ಸ್ವಾಮಿಯ ಶಕ್ತಿಯುತ ಮಂತ್ರಗಳು:
ಶತ್ರು ನಿವಾರಣೆಗೆ: '
'ಓಂ ನಮೋ ಹನುಮತೇ ರುದ್ರಾವತಾರಾಯ ರಾಮಸೇವಕಾಯ ರಾಮಭಕ್ತಿತತ್ಪರಾಯ ರಾಮಹೃದಯಾಯ| ಲಕ್ಷ್ಮಣಶಕ್ತಿ ಭೇದನಿವಾವರಣಾಯ ಲಕ್ಷ್ಮಣರಕ್ಷಕಾಯ ದುಷ್ಟನಿಬರ್ಹಣಾಯ ರಾಮದೂತಾಯ ಸ್ವಾಹಾ||''
ಧನ ಲಾಭಕ್ಕಾಗಿ:
''ಅಜಂನಗರ್ಭ ಸಂಭೂತ ಕಪೀಂದ್ರ ಸಚಿವೋತ್ತಮ| ರಾಮಪ್ರಿಯ ನಮಸ್ತುಭ್ಯಂ ಹನುಮಾನ್ ರಕ್ಷ ಸರ್ವದಾ||''
ಅಡೆತಡೆ ನಿವಾರಣೆಗೆ:
''ಅತುಲಿತಬಲಧಾಮಂ ಹೇಮಶೈಲಭದೇಹಂ, ದನುಜವನಕೃಷಾನುಂ ಜ್ಞಾನಿನಾಮಗ್ರಗಣ್ಯಂ| ಸಕಲಗುಣನಿಧಾನಂ ವಾನರಾಣಾಮಧೀಶಂ, ರಘುಪತಿ ಪ್ರಿಯ ಭಕ್ತಂ ವಾತಜಾತಂ ನಮಾಮಿ||''
ಸಂಕಟಗಳಿಂದ ಮುಕ್ತಿ ಪಡೆಯಲು
''ಆದಿದೇವ ನಮಸ್ತುಭ್ಯಂ ಸಪ್ತಸಪ್ತೇ ದಿವಾಕರ| ತ್ವಂ ರವೇ ತಾರಯ ಸ್ವಾಸ್ಮಾನಸ್ಮಾತ್ಸಂಸಾರ ಸಾಗರಾತ್||''
Astro Tips: ಶುಕ್ರವಾರ ಈ ಕ್ರಮಗಳನ್ನ ಅನುಸರಿಸಿದ್ದರೆ ಸಿಗುತ್ತದೆ ಲಕ್ಷ್ಮಿ ಕೃಪೆ : ಹಣದ ಸಮಸ್ಯೆಯೂ ಪರಿಹಾರ ಆಗಲಿದೆ
ಮಾನಸಿಕ ಶಾಂತಿಗಾಗಿ:
''ಮಂಗಳ ಭವನ ಅಮಂಗಳಹಾರೀ ದ್ರವಹು ಸೋ ದಶರಥ ಅಜೀರ ವಿಹಾರಿ||''
ಆರೋಗ್ಯಕ್ಕಾಗಿ:
''ಓಂ ಹನುಮತೇ ನಮಃ''
ಈ ಮಂತ್ರಗಳನ್ನು ಭಕ್ತಿಯಿಂದ ಜಪಿಸಿದರೆ ಜೀವನದಲ್ಲಿನ ವಿವಿಧ ಸಮಸ್ಯೆಗಳು ದೂರವಾಗುತ್ತವೆ ಮತ್ತು ಶುಭಫಲಗಳು ಲಭಿಸುತ್ತವೆ ಎಂಬ ಭರವಸೆ ಇದೆ. ನಿಯಮಿತವಾಗಿ ಪಠಿಸುವುದರಿಂದ ಮನಸ್ಸಿಗೆ ಶಾಂತಿ ಮತ್ತು ಆತ್ಮಬಲ ಹೆಚ್ಚುತ್ತದೆ.
ಮಂತ್ರ ಜಪದ ಮಹತ್ವ:
ಮಂತ್ರಗಳು ಶಬ್ದಶಕ್ತಿಯ ರೂಪವಾಗಿದ್ದು, ಅವು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುತ್ತವೆ. ನಿಯಮಿತವಾಗಿ ಜಪಿಸುವುದರಿಂದ ಮನಸ್ಸಿನ ಅಶಾಂತಿ ಕಡಿಮೆಯಾಗುತ್ತದೆ ಮತ್ತು ಆತ್ಮಬಲ ಹೆಚ್ಚುತ್ತದೆ. ವಿಶೇಷವಾಗಿ “ಓಂ ಹನುಮತೇ ನಮಃ” ಎಂಬ ಸರಳ ಮಂತ್ರವನ್ನು ದಿನವೂ ಜಪಿಸಿದರೆ ಮನಸ್ಸಿಗೆ ಶಾಂತಿ ಮತ್ತು ಧೈರ್ಯ ಸಿಗುತ್ತದೆ.
ಪೂಜೆ ಮಾಡುವ ಸರಿಯಾದ ವಿಧಾನ:
ಬೆಳಿಗ್ಗೆ ಸ್ನಾನ ಮಾಡಿ ಶುದ್ಧ ಮನಸ್ಸಿನಿಂದ ಪೂಜೆ ಪ್ರಾರಂಭಿಸಬೇಕು
ಕೆಂಪು ಹೂವುಗಳು ಮತ್ತು ವಸ್ತ್ರಗಳನ್ನು ಅರ್ಪಿಸುವುದು ಶುಭ
ಬೆಲ್ಲ, ಕಡಲೆಕಾಳು ಅಥವಾ ಬಾಳೆಹಣ್ಣು ನೈವೇದ್ಯವಾಗಿ ಇಡಬಹುದು
ಹನುಮಾನ್ ಚಾಲೀಸಾ ಅಥವಾ ಮಂತ್ರಗಳನ್ನು ಕನಿಷ್ಠ 11 ಅಥವಾ 21 ಬಾರಿ ಜಪಿಸುವುದು ಉತ್ತಮ
ಶನಿವಾರದಂದು ಎಳ್ಳೆಣ್ಣೆ ದೀಪ ಹಚ್ಚುವುದು ವಿಶೇಷ ಫಲ ನೀಡುತ್ತದೆ
ಈ ರೀತಿ ಭಕ್ತಿಯಿಂದ ಆಂಜನೇಯ ಸ್ವಾಮಿಯ ಆರಾಧನೆ ಮತ್ತು ಮಂತ್ರ ಜಪ ಮಾಡುವುದರಿಂದ ಜೀವನದಲ್ಲಿ ಧೈರ್ಯ, ಶಕ್ತಿ ಮತ್ತು ಶ್ರೇಯಸ್ಸು ದೊರೆಯುತ್ತದೆ ಎಂದು ನಂಬಲಾಗಿದೆ.