ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026

IPL 2027: ಕೋಲ್ಕತಾ ನೈಟ್‌ ರೈಡರ್ಸ್‌ಗೆ ಮುಂದಿನ ನಾಯಕನನ್ನು ಆರಿಸಿದ ಆಕಾಶ್‌ ಚೋಪ್ರಾ!

ಕೆಕೆಆರ್‌ಗೆ ಮುಂದಿನ ನಾಯಕನನ್ನು ಆರಿಸಿದ ಆಕಾಶ್‌ ಚೋಪ್ರಾ!

ಮಾಜಿ ಭಾರತ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಅವರು ಕೋಲ್ಕತ್ತಾ ನೈಟ್ ರೈಡರ್ಸ್‌ (ಕೆಕೆಆರ್‌) ತಂಡದ ಮುಂದಿನ ನಾಯಕನಾಗಿ ರಿಂಕು ಸಿಂಗ್‌ ಅವರನ್ನು ಆಯ್ಕೆ ಮಾಡಿದ್ದಾರೆ. ರಿಂಕು ಸಿಂಗ್‌ 2018ರಿಂದ ಕೆಕೆಆರ್‌ ತಂಡದ ಭಾಗವಾಗಿದ್ದಾರೆ. ತಂಡದೊಂದಿಗೆ ದೀರ್ಘಕಾಲದ ಅನುಭವ ಹೊಂದಿರುವ ರಿಂಕು ಅವರನ್ನು ಮುಂದಿನ ನಾಯಕನನ್ನಾಗಿ ಮಾಡುವುದು ಸೂಕ್ತ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

IPL 2027: ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮವನ್ನು ತೆಗೆಯಬೇಕೆಂದ‌ ಸುರೇಶ್‌ ರೈನಾ!

IPL 2027: ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮವನ್ನು ಟೀಕಿಸಿದ ಸುರೇಶ್‌ ರೈನಾ!

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮವನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ಟೀಕಿಸಿದ್ದಾರೆ. ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮದಿಂದ ಬ್ಯಾಟ್ಸ್‌ಮನ್‌ಗಳಿಗೆ ಲಾಭವಾಗಿದ್ದು, ಬೌಲರ್‌ಗಳ ಹೆಚ್ಚಿನ ಒತ್ತಡ ಬೀಳುತ್ತಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಆಯ್ಕೆ ಸಮಿತಿ ಸದಸ್ಯತ್ವ ಸ್ಥಾನಕ್ಕೆ ಮಿಸ್ಬಾ-ಉಲ್‌-ಹಕ್‌ ರಾಜೀನಾಮೆ!

ಪಾಕ್‌ ಆಯ್ಕೆ ಸಮಿತಿ ಸದಸ್ಯತ್ವ ಸ್ಥಾನಕ್ಕೆ ಮಿಸ್ಬಾ ಉಲ್‌ ಹಕ್‌ ರಾಜೀನಾಮೆ!

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತಿರುವ ಪಾಕಿಸ್ತಾನ ತಂಡ, ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ಎದುರು ನೋಡುತ್ತಿದೆ. ಪಿಸಿಬಿ ಆಯ್ಕೆ ಸಮಿತಿ ಸದಸ್ಯತ್ವ ಸ್ಥಾನಕ್ಕೆ ಮಿಸ್ಬಾ-ಉಲ್‌-ಹಕ್‌ ರಾಜೀನಾಮೆ ಸಲ್ಲಿಸಿದ್ದಾರೆ. ಇದೀಗ ಮೂರನೇ ಪಂದ್ಯಕ್ಕೂ ಮುನ್ನ ಪಿಸಿಬಿಯಲ್ಲಿ ಮಹತ್ವದ ಬದಲಾವಣೆಗಳು ನಡೆಯುತ್ತಿವೆ.

5 ವರ್ಷಗಳ ಬಳಿಕ ಭಾರತ ಕ್ರಿಕೆಟ್‌ ತಂಡಕ್ಕೆ ಆರ್‌ಸಿಬಿ ಸ್ಟಾರ್‌ ಕೃಣಾಲ್‌ ಪಾಂಡ್ಯಗೆ ಕಮ್‌ಬ್ಯಾಕ್‌?

5 ವರ್ಷಗಳ ಬಳಿಕ ಭಾರತ ತಂಡಕ್ಕೆ ಕೃಣಾಲ್‌ ಪಾಂಡ್ಯ ಕಮ್‌ಬ್ಯಾಕ್‌?

ಭಾರತ ಕ್ರಿಕೆಟ್ ತಂಡಕ್ಕೆ ಆರ್‌ಸಿಬಿ ಸ್ಟಾರ್ ಆಟಗಾರ ಕೃಣಾಲ್ ಪಾಂಡ್ಯ ಮರಳುವ ಸಾಧ್ಯತೆ ಇದೆ. 2021ರಲ್ಲಿ ಕೃಣಾಲ್ ಪಾಂಡ್ಯ ಭಾರತ ತಂಡದ ಪರ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಕಳೆದ ಎರಡು ಐಪಿಎಲ್‌ ಸೀಸನ್‌ಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದರ ಫಲವಾಗಿ ಕೃಣಾಲ್‌ಗೆ ಬಿಸಿಸಿಐ, ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲು ಅವಕಾಶ ನೀಡಲು ಮುಂದಾಗಿದೆ.

2027ರ ಐಪಿಎಲ್‌ ಟೂರ್ನಿಗೆ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮ ರದ್ದು? ಆ 31 ಕೊನೆಯ ದಿನಾಂಕ!

2027ರ ಐಪಿಎಲ್‌ ಟೂರ್ನಿಗೆ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮ ರದ್ದು?

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ವಿವಾದಿತ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮದ ಬಗ್ಗೆ ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ. ಬಿಸಿಸಿಐ ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳಿಂದ ಅಧಿಕೃತವಾಗಿ ಅಭಿಪ್ರಾಯ ಹಾಗೂ ಪ್ರತಿಕ್ರಿಯೆಗಳನ್ನು ಕೇಳಿದೆ. ತಂಡಗಳ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಬಿಸಿಸಿಐ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ.

IPL 2027: ರಾಜಸ್ಥಾನ್‌ ರಾಯಲ್ಸ್‌ ತಂಡದಲ್ಲಿ ಯಶಸ್ವಿ ಜೈಸ್ವಾಲ್‌  ಸ್ಥಾನಕ್ಕೆ ಅಪಾಯ?

ರಾಜಸ್ಥಾನ್‌ ರಾಯಲ್ಸ್‌ ತಂಡದಲ್ಲಿ ಜೈಸ್ವಾಲ್‌ ಸ್ಥಾನಕ್ಕೆ ಅಪಾಯ?

ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಯಶಸ್ವಿ ಜೈಸ್ವಾಲ್ ಅವರ ಭವಿಷ್ಯ 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೂ ಮುನ್ನ ಚರ್ಚೆಯ ವಿಷಯವಾಗಿದೆ. ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕೇ ಅಥವಾ ಟ್ರೇಡ್ ಮಾಡಬೇಕೇ ಎಂಬ ಬಗ್ಗೆ ವರದಿಗಳು ಹರಿದಾಡುತ್ತಿವೆ. ಆದರೆ, ಫ್ರಾಂಚೈಸಿಯಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

IPL 2027: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಇಯಾನ್‌ ಮಾರ್ಗನ್‌ ಮುಂದಿನ ಹೆಡ್‌ ಕೋಚ್‌? ಆರ್‌ ಅಶ್ವಿನ್‌ ಭವಿಷ್ಯ!

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಇಯಾನ್‌ ಮಾರ್ಗನ್‌ ಮುಂದಿನ ಹೆಡ್‌ ಕೋಚ್‌?

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಮುಂದಿನ ಹೆಡ್‌ ಕೋಚ್‌ ಆಗಿ ಇಂಗ್ಲೆಂಡ್‌ ಮಾಜಿ ನಾಯಕ ಇಯಾನ್‌ ಮಾರ್ಗನ್‌ ನೇಮಕವಾಗುವ ಸಾಧ್ಯತೆ ಇದೆ ಎಂದು ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಭವಿಷ್ಯ ನುಡಿದಿದ್ದಾರೆ. 2026ರ ಐಪಿಎಲ್‌ ಟೂರ್ನಿ ಮುಗಿದ ಬಳಿಕ ಸ್ಟೀಫನ್‌ ಫ್ಲೆಮಿಂಗ್‌ ಸಿಎಸ್‌ಕೆ ತಂಡದ ಕೋಚ್‌ ಹುದ್ದೆಯನ್ನು ತೊರೆದಿದ್ದರು.

IPL 2027: ಜಾಶ್‌ ಹೇಝಲ್‌ವುಡ್‌ ಔಟ್‌, 20ನೇ ಆವೃತ್ತಿಯ ಟೂರ್ನಿಗೆ ಆಸೀಸ್‌ ಆಟಗಾರರು ಅಲಭ್ಯ?

2027ರ ಐಪಿಎಲ್‌ ಟೂರ್ನಿಗೆ ಆಸೀಸ್‌ ಆಟಗಾರರು ಅಲಭ್ಯ?

ಮುಂದಿನ 12 ತಿಂಗಳ ಅವಧಿಯಲ್ಲಿ ಆಸ್ಟ್ರೇಲಿಯಾ ತಂಡ 20 ಟೆಸ್ಟ್‌ ಪಂದ್ಯಗಳು ಹಾಗೂ 14 ವೈಟ್-ಬಾಲ್ ಪಂದ್ಯಗಳನ್ನು ಆಡಲಿದೆ. ಭಾರತದ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿ ಮತ್ತು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ನಡುವಿನ ಅವಧಿಯಲ್ಲಿ 2027ರ ಐಪಿಎಲ್‌ ವೇಳಾಪಟ್ಟಿ ಎದುರಾಗಲಿದೆ. ಹಾಗಾಗಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಆ್ಯಶಸ್‌ ಸರಣಿಗೆ ಸಜ್ಜಾಗಲಿದೆ.

ʻಸಿಎಸ್‌ಕೆ ತಂಡದಲ್ಲಿದ್ದಾಗ ಈ ವೇಗಿ ನನಗೆ ಬೌಲ್‌ ಮಾಡಲು ನಿರಾಕರಿಸಿದ್ದರುʼ: ಚೇತೇಶ್ವರ್‌ ಪೂಜಾರ!

ತಮಗೆ ಬೌಲ್‌ ಮಾಡಲು ನಿರಾಕರಿಸಿದ್ದ ವೇಗಿಯನ್ನು ನೆನೆದ ಚೇತೇಶ್ವರ್‌ ಪೂಜಾರ!

ಭಾರತ ಟೆಸ್ಟ್‌ ತಂಡದ ಮಾಜಿ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರ ಅವರು ಆಸಕ್ತಿದಾಯಕ ಸಂಗತಿಯೊಂದನ್ನು ನೆನಪಿಸಿಕೊಂಡಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿದ್ದಾಗ, ತಮಗೆ ಬೌಲ್‌ ಮಾಡಲು ನಿರಾಕರಿಸಿದ್ದ ವೇಗದ ಬೌಲರ್‌ ಅನ್ನು ಪೂಜಾರ ರಿವೀಲ್‌ ಮಾಡಿದ್ದಾರೆ. ಆಸ್ಟ್ರೇಲಿಯಾದ ವೇಗಿ ಯಾರೆಂದು ಇಲ್ಲಿ ವಿವರಿಸಲಾಗಿದೆ.

ಪ್ರೀತಿ ಜಿಂಟಾ ಜೊತೆ ಡೇಟಿಂಗ್‌ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ ಬ್ರೆಟ್‌ ಲೀ!

ʻಪ್ರೀತಿ ಜಿಂಟಾ ಜೊತೆ ಡೇಟಿಂಗ್‌ʼ: ಸ್ಪಷ್ಟನೆ ನೀಡಿದ ಬ್ರೆಟ್‌ ಲೀ!

Brett Lee Preity Zinta Dating Rumours: ಬಾಲಿವುಡ್‌ ನಟಿ ಹಾಗೂ ಪಂಜಾಬ್‌ ಕಿಂಗ್ಸ್‌ ಓನರ್‌ ಪ್ರೀತಿ ಜಿಂಟಾ ಅವರೊಂದಿಗಿನ ಡೇಟಿಂಗ್‌ ಊಹಾಪೋಹಗಳ ಬಗ್ಗೆ ಆಸ್ಟ್ರೇಲಿಯಾ ಮಾಜಿ ವೇಗಿ ಬ್ರೆಟ್‌ ಲೀ ಪ್ರತಿಕ್ರಿಯೆ ನೀಡಿದ್ದಾರೆ. ನಾವಿಬ್ಬರೂ ಎಂದಿಗೂ ಡೇಟ್‌ ಮಾಡಿಲ್ಲ ಹಾಗೂ ನಾವು ಈಗಲೂ ಒಳ್ಳೆಯ ಸ್ನೇಹಿತರು ಎಂದು ಹೇಳಿದ್ದಾರೆ.

ಎಂಎಸ್‌ ಧೋನಿ ಅಲ್ಲವೇ ಅಲ್ಲ; ಭಾರತೀಯ ಕ್ರಿಕೆಟ್‌ ಸ್ಮಾರ್ಟೆಸ್ಟ್‌ ಮೈಂಡ್‌ ಯಾರೆಂದು ಹೆಸರಿಸಿದ ಮೊಯೀನ್‌ ಅಲಿ!

ಭಾರತೀಯ ಕ್ರಿಕೆಟ್‌ನ ಸ್ಮಾರ್ಟೆಸ್ಟ್‌ ಮೈಂಡ್‌ ಹೆಸರಿಸಿದ ಮೊಯೀನ್‌ ಅಲಿ!

ಗುಜರಾತ್‌ ಟೈಟನ್ಸ್‌ ತಂಡದ ಹೆಡ್‌ ಕೋಚ್‌ ಆಶಿಶ್‌ ನೆಹ್ರಾ ಅವರು ಪ್ರಸ್ತುತ ಭಾರತೀಯ ಕ್ರಿಕೆಟ್‌ನ ಅತ್ಯಂತ ಸ್ಮಾರ್ಟೆಸ್ಟ್‌ ಕ್ರಿಕೆಟ್‌ ಮೈಂಡ್‌ ಎಂದು ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಮೊಯೀನ್‌ ಅಲಿ ಆರಿಸಿದ್ದಾರೆ. ಆದರೆ, ಭಾರತೀಯ ಕ್ರಿಕೆಟ್‌ ಅನ್ನು ಅಗ್ರ ಸ್ಥಾನ ಏರಿಸಿದ್ದ ಎಂಎಸ್‌ ಧೋನಿಯನ್ನು ಕಡೆಗಣಿಸಿದ್ದಾರೆ.

ʻಆರ್‌ಸಿಬಿಯ ನಿಜವಾದ ರಾಣಿʼ: ಅಸ್ಸಾಂ ಪ್ರವಾಹ ಪೀಡಿತರಿಗೆ ನೆರವಾದ ಅನನ್ಯಾ ಬಿರ್ಲಾ!

ಅಸ್ಸಾಂ ಪ್ರವಾಹ ಪೀಡಿತರಿಗೆ ನೆರವಾದ ಆರ್‌ಸಿಬಿ ಓನರ್‌ ಅನನ್ಯಾ!

ಅಸ್ಸಾಂನಲ್ಲಿ ಭಾರೀ ಪ್ರವಾಹದ ಹಿನ್ನೆಲೆಯಲ್ಲಿ ಉದ್ಯಮಿ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಕೋ ಓನರ್‌ ಅನನ್ಯಾ ಬಿರ್ಲಾ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸಿದರು. ಅಲ್ಲದೆ, ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತ ಸಮುದಾಯಗಳಿಗೆ ಅಗತ್ಯ ನೆರವು ಮತ್ತು ಬೆಂಬಲವನ್ನು ನೀಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

IPL 2027: ಅಜಿಂಕ್ಯ ರಹಾನೆ ನಿವೃತ್ತಿಯಿಂದ ಕೋಲ್ಕತಾ ನೈಟ್‌ ರೈಡರ್ಸ್‌ಗೆ ಮತ್ತೊಂದು ತಲೆ ನೋವು!

ಅಜಿಂಕ್ಯ ರಹಾನೆ ನಿವೃತ್ತಿಯಿಂದ ಕೆಕೆಆರ್‌ಗೆ ಮತ್ತೊಂದು ತಲೆ ನೋವು!

ಭಾರತೀಯ ಕ್ರಿಕೆಟ್‌ನ ಹಿರಿಯ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆ ಅವರು ತಮ್ಮ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಮುಂದಿನ ನಾಯಕ ಯಾರೆಂಬ ಪ್ರಶ್ನೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೋಲ್ಕತಾ ಫ್ರಾಂಚೈಸಿ 2027ರ ಟೂರ್ನಿಯ ನಿಮಿತ್ತ ಹೊಸ ನಾಯಕ ಹುಡುಕಾಟದಲ್ಲಿ ತೊಡಗಿದೆ.

IPL 2027: ಎಲ್ಲಾ 10 ಫ್ರಾಂಚೈಸಿಗಳನ್ನು ಹಿಂದಿಕ್ಕಿ ತನ್ನ ಬ್ರ್ಯಾಂಡ್‌ ಮೌಲ್ಯವನ್ನು ಹೆಚ್ಚಿಸಿಕೊಂಡ ಆರ್‌ಸಿಬಿ!

ತನ್ನ ಬ್ರ್ಯಾಂಡ್‌ ಮೌಲ್ಯವನ್ನು ಹೆಚ್ಚಿಸಿಕೊಂಡು ದಾಖಲೆ ಬರೆದ ಆರ್‌ಸಿಬಿ!

IPL 2026: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಒಟ್ಟು ವ್ಯವಹಾರ ಮೌಲ್ಯ ಶೇ.11.4 ರಷ್ಟು ಏರಿಕೆಯಾಗಿ 1.96 ಲಕ್ಷ ಕೋಟಿಗೆ ತಲುಪಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಅತ್ಯಂತ ಮೌಲ್ಯಯುತ ಐಪಿಎಲ್ ತಂಡವಾಗಿದ್ದು, 2,982 ಕೋಟಿ ಬ್ರಾಂಡ್ ಮೌಲ್ಯವನ್ನು ಹೊಂದಿದೆ.

ಹ್ಯಾಪಿ ಬರ್ತ್‌ಡೇ ಕ್ಯಾಪ್ಟನ್‌ ಕೂಲ್‌: ಎಂಎಸ್‌ ಧೋನಿಗೆ ದಳಪತಿ ವಿಜಯ್‌ ಹೃದಯ ಸ್ಪರ್ಶಿ ಸಂದೇಶ!

ಎಂಎಸ್‌ ಧೋನಿ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ ಸಿಎಂ ವಿಜಯ್‌!

MS Dhoni Birthday: ಭಾರತ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ಹುಟ್ಟು ಹಬ್ಬಕ್ಕೆ ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್‌ ಶುಭಾಶಯ ಕೋರಿದ್ದಾರೆ. ತಮ್ಮ ನಾಯಕತ್ವ, ಮಾನವೀಯತೆ ಹಾಗೂ ರಾಜ್ಯದೊಂದಿಗಿನ ಬಾಂಧವ್ಯವನ್ನು ಇದೇ ಅವರು ಉಲ್ಲೇಖಿಸಿದ್ದಾರೆ.

IPL 2027: ರಿಷಭ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಲು ಕಾರಣ ತಿಳಿಸಿದ ಎಬಿ ಡಿ ವಿಲಿಯರ್ಸ್‌!

ರಿಷಭ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಲು ಕಾರಣ ತಿಳಿಸಿದ ಎಬಿಡಿ!

2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ರಿಷಭ್‌ ಪಂತ್‌ ಅವರು ಲಖನೌ ಸೂಪರ್‌ ಜಯಂಟ್ಸ್‌ ತಂಡದಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಮರಳಿದ್ದಾರೆ. ಟ್ರೇಡ್‌ ಡೀಲ್‌ ಮೂಲಕ ಅವರು ತಮ್ಮ ತವರು ತಂಡಕ್ಕೆ ಮರಳಿದ್ದು, ಇದಕ್ಕೆ ಕಾರಣವೇನೆಂದು ಆರ್‌ಸಿಬಿ ದಿಗ್ಗಜ ಎಬಿ ಡಿ ವಿಲಿಯರ್ಸ್‌ ತಿಳಿಸಿದ್ದಾರೆ.

ಪಂತ್‌-ಕುಲ್ದೀಪ್‌ ಟ್ರೇಡ್‌ ಡೀಲ್‌ ಬಗ್ಗೆ ಪಾರ್ಥ್‌ ಜಿಂದಾಲ್‌ ಪೋಸ್ಟ್‌ಗೆ ಡೇವಿಡ್‌ ವಾರ್ನರ್‌ ಅಚ್ಚರಿ ಪ್ರತಿಕ್ರಿಯೆ!

ಪಾರ್ಥ್‌ ಜಿಂದಾಲ್‌ ಪೋಸ್ಟ್‌ಗೆ ಡೇವಿಡ್‌ ವಾರ್ನರ್‌ ಅಚ್ಚರಿ ಪ್ರತಿಕ್ರಿಯೆ!

ರಿಷಭ್ ಪಂತ್ ಮತ್ತು ಕುಲ್‌ದೀಪ್ ಯಾದವ್ ಅವರ ಟ್ರೇಡ್‌ ಡೀಲ್‌ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ ಪಾರ್ಥ್ ಜಿಂದಾಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಆಸ್ಟ್ರೇಲಿಯಾ ಮಾಜಿ ಆರಂಭಿಕ ಡೇವಿಡ್ ವಾರ್ನರ್ ಅವರು ನಗುವ ಎಮೋಜಿ ಹಾಕಿದ್ದಾರೆ. ಇದು ವೈರಲ್ ಆಗಿದೆ. ಅವರು ಇದಕ್ಕೆ ಕಾಮೆಂಟ್‌ ಕೂಡ ಹಾಕಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರಿದ ಬೆನ್ನಲ್ಲೆ ಎಲ್‌ಎಸ್‌ಜಿಗೆ ರಿಷಭ್‌ ಪಂತ್‌ ಕೊನೆಯ ಸಂದೇಶ!

ಎಲ್‌ಎಸ್‌ಜಿಗೆ ಕೊನೆಯ ಸಂದೇಶ ರವಾನಿಸಿದ ರಿಷಭ್‌ ಪಂತ್‌!

ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಸೇರಿದ ಬೆನ್ನಲ್ಲೆ ವಿಕೆಟ್‌ ಕೀಪರ್‌-ಬ್ಯಾಟರ್‌ ರಿಷಭ್‌ ಪಂತ್‌, ತಮ್ಮ ಮಾಜಿ ತಂಡ ಲಖನೌ ಸೂಪರ್‌ ಜಯಂಟ್ಸ್‌ ತಂಡಕ್ಕೆ ಕೊನೆಯ ಸಂದೇಶವನ್ನು ರವಾನಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಅವರು ʻಧನ್ಯವಾದ ತಂಡʼ ಎಂದು ಸ್ಟೋರಿಯನ್ನು ಹಾಕಿಕೊಂಡಿದ್ದಾರೆ.

ರಿಷಭ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದರೆ, ಅಕ್ಷರ್‌ಗೆ ನಾಯಕತ್ವ ಕೈ ತಪ್ಪಲಿದೆಯಾ?

ರಿಷಭ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದರೆ, ನಾಯಕತ್ವ ಯಾರಿಗೆ?

ರಿಷಭ್‌ ಪಂತ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಮರಳಿದ್ದಾರೆ. ಇದೀಗ ತಂಡದ ನಾಯಕತ್ವದಲ್ಲಿ ಅಕ್ಷರ್‌ ಪಟೇಲ್‌ ಅವರನ್ನು ಮುಂದುವರಿಸಲಾಗುತ್ತಾ? ಅಥವಾ ಪಂತ್‌ಗೆ ನಾಯಕತ್ವವನ್ನು ನೀಡಲಾಗುತ್ತಾ? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.

IPL trade buzz:ಹಾರ್ದಿಕ್‌ ಪಾಂಡ್ಯಗಾಗಿ ಮುಂಬೈ ಇಂಡಿಯನ್ಸ್‌ ಜೊತೆ ಕೆಕೆಆರ್‌, ಆರ್‌ಆರ್‌ ಚರ್ಚೆ!

ಹಾರ್ದಿಕ್‌ ಪಾಂಡ್ಯಗಾಗಿ ರಾಜಸ್ಥಾನ್‌-ಕೋಲ್ಕತಾ ನಡುವೆ ಪೈಪೋಟಿ!

ಕೋಲ್ಕತಾ ನೈಟ್‌ ರೈಡರ್ಸ್ ಮತ್ತು ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಮುಂಬೈ ಇಂಡಿಯನ್ಸ್‌ ತಂಡದೊಂದಿಗೆ ಹಾರ್ದಿಕ್‌ ಪಾಂಡ್ಯ ಅವರನ್ನು ಟ್ರೇಡ್‌ ಮಾಡಿಕೊಳ್ಳಲು ಚರ್ಚೆ ನಡೆಸುತ್ತಿವೆ. ಇದೇ ವೇಳೆ ಆರ್‌ಆರ್‌ ತಂಡವು ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್‌ ಅವರನ್ನು ಒಳಗೊಂಡ ವಿನಿಮಯ ಒಪ್ಪಂದದ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ ಎಂದು ಹೇಳಾಗುತ್ತಿದೆ.

ಕಳಪೆ ಪ್ರದರ್ಶನದ ಮಧ್ಯೆಯೂ ಸಿಎಸ್‌ಕೆ ಮುಖ್ಯ ಕೋಚ್ ಆಗಿ ಸ್ಟೀಫನ್ ಫ್ಲೆಮಿಂಗ್ ಮುಂದುವರಿಕೆ

ಸಿಎಸ್‌ಕೆ ಮುಖ್ಯ ಕೋಚ್ ಆಗಿ ಸ್ಟೀಫನ್ ಫ್ಲೆಮಿಂಗ್ ಮುಂದುವರಿಕೆ

Stephen Fleming: 2025 ರ ಋತುವಿನಲ್ಲಿ CSK ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿತ್ತು ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಅಭಿಯಾನದಲ್ಲಿ ಎಂಟನೇ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಆದಾಗ್ಯೂ, ಫ್ರಾಂಚೈಸಿ ಫ್ಲೆಮಿಂಗ್‌ ಕಾರ್ಯ ವೈಕರಿಯಲ್ಲಿ ಬದ್ಧವಾಗಿದೆ, ಅವರ ಒಪ್ಪಂದವನ್ನು ವಾರ್ಷಿಕವಾಗಿ ನವೀಕರಿಸಲಾಗುತ್ತದೆ ಎನ್ನಲಾಗಿದೆ.

IPL 2027ರ ಐಪಿಎಲ್‌ ಟೂರ್ನಿಯ ನಿಮಿತ್ತ ಕೆಎಲ್‌ ರಾಹುಲ್‌ಗೆ ದೊಡ್ಡ ಗಣೇಶ್‌ ಮಹತ್ವದ ಸಲಹೆ!

IPL 2027: ಕೆಎಲ್‌ ರಾಹುಲ್‌ಗೆ ದೊಡ್ಡ ಗಣೇಶ್‌ ಮಹತ್ವದ ಸಲಹೆ!

ರಿಷಭ್‌ ಪಂತ್‌ ಟ್ರೇಡ್‌ ಡೀಲ್‌ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದ್ದಂತೆ ಭಾರತ ತಂಡದ ಮಾಜಿ ಆಟಗಾರ ದೊಡ್ಡ ಗಣೇಶ್‌ ಅವರು, ಕೆಎಲ್‌ ರಾಹುಲ್‌ಗೆ ಮಹತ್ವದ ಸಲಹೆಯನ್ನು ನೀಡಿದ್ದಾರೆ. ಅವರು ಮುಂದಿನ ಟೂರ್ನಿಯ ಮಿನಿ ಹರಾಜಿಗೆ ಬರಬೇಕೆಂದು ಹೇಳಿದ್ದಾರೆ.

IPL 2027: ಎಲ್‌ಎಸ್‌ಜಿ ತೊರೆದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರಲು ಮುಂದಾದ ರಿಷಭ್‌ ಪಂತ್‌?

IPL 2027: ಎಲ್‌ಎಸ್‌ಜಿ ತೊರೆಯಲು ಮುಂದಾದ ರಿಷಭ್‌ ಪಂತ್‌?

2025 ಹಾಗೂ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸತತ ವೈಫಲ್ಯ ಅನುಭವಿಸಿದ ಐಪಿಎಲ್‌ ಇತಿಹಾಸದ ಅತ್ಯಂತ ದುಬಾರಿ ಆಟಗಾರ ರಿಷಭ್‌ ಪಂತ್‌ ಅವರಿಗೆ ಮುಂದಿನ ಟೂರ್ನಿಯಲ್ಲಿ ಸಂಭಾವನೆಯಲ್ಲಿ ಕಡಿತವಾಗಲಿದೆ. ಅವರು ಲಖನೌ ಸೂಪರ್‌ ಜಯಂಟ್ಸ್‌ ತೊರೆದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರ್ಪಡೆಯಾಗಲು ಮುಂದಾಗಿದ್ದಾರೆ.

2030ರವರೆಗೂ ವಿರಾಟ್‌ ಕೊಹ್ಲಿ ಆರ್‌ಸಿಬಿ ಪರ ಆಡಲಿದ್ದಾರೆಂದ ರಾಜೇಶ್‌ ಮೆನನ್‌!

2030ರವರೆಗೂ ವಿರಾಟ್‌ ಕೊಹ್ಲಿ ಆರ್‌ಸಿಬಿ ಪರ ಆಡಲಿದ್ದಾರೆ: ರಾಜೇಶ್‌ ಮೆನನ್!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ವಿರಾಟ್‌ ಕೊಹ್ಲಿ ಅವರು 2030ರವರೆಗೂ ಆಡಬಹುದೆಂದು ಬೆಂಗಳೂರು ಫ್ರಾಂಚೈಸಿ ಸಿಇಒ ರಾಜೇಶ್‌ ಮೆನನ್‌ ಹೇಳಿದ್ದಾರೆ. ಅವರು ಫಿಟ್‌ನೆಸ್‌, ಆಡಬೇಕೆಂಬ ಹಸಿವು ಹಾಗೂ ಯಶಸ್ಸಿನ ಉತ್ಸಾಹ ಇನ್ನೂ ಕಡಿಮೆಯಾಗಿಲ್ಲ ಎಂದು ತಿಳಿಸಿದ್ದಾರೆ.

Loading...