ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026

ಭಾರತ ತಂಡದಲ್ಲಿ ಮೊಹಮ್ಮದ್‌ ಶಮಿಗೆ ಸ್ಥಾನ ಸಿಗದೇ ಇರಲು ಕಾರಣ ತಿಳಿಸಿದ ಅಜಿತ್‌ ಅಗರ್ಕರ್‌!

ಮೊಹಮ್ಮದ್‌ ಶಮಿ ಬಗ್ಗೆ ಚರ್ಚೆ ನಡೆದಿಲ್ಲ ಎಂದ ಅಜಿತ್‌ ಅಗರ್ಕರ್‌!

IND vs AFG: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಮೇ 19 ರಂದು ಪ್ರಕಟಿಸಿದ್ದು. ಆದರೆ, ಹಿರಿಯ ವೇಗಿ ಮೊಹಮ್ಮದ್‌ ಶಮಿ ಅವರನ್ನು ಎರಡೂ ತಂಡಗಳಿಂದ ಕೈ ಬಿಡಲಾಗಿದೆ. ಭಾರತ ತಂಡವನ್ನು ಪ್ರಕಟಿಸಿದ ಬಳಿಕ ಬಿಸಿಸಿಐ ಚೀಫ್‌ ಸೆಲೆಕ್ಟರ್‌ ಅಜಿತ್‌ ಅಗರ್ಕರ್‌, ಶಮಿ ಆಯ್ಕೆ ಮಾಡದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

IND vs AFG: ರಿಷಭ್‌ ಪಂತ್‌ರನ್ನು ಟೆಸ್ಟ್‌ ಉಪ ನಾಯಕತ್ವದಿಂದ ಕೆಳಗಿಳಿಸಲು ಕಾರಣವೇನು?

ರಿಷಭ್‌ ಪಂತ್‌ ಟೆಸ್ಟ್‌ ಉಪ ನಾಯಕತ್ವವನ್ನು ಕಳೆದುಕೊಂಡಿದ್ದೇಕೆ?

ವಿಕೆಟ್ ಕೀಪರ್-ಬ್ಯಾಟರ್ ರಿಷಭ್‌ ಇನ್ನೂ ಭಾರತದ ಟೆಸ್ಟ್ ಯೋಜನೆಗಳಲ್ಲಿ ಪ್ರಮುಖ ಭಾಗವಾಗಿದ್ದಾರೆ ಎಂದು ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್‌ ಅಗರ್ಕರ್‌ ಸ್ಪಷ್ಟಪಡಿಸಿದ್ದಾರೆ. ಉಪನಾಯಕ ಸ್ಥಾನ ಹಾಗೂ ಏಕದಿನ ತಂಡದಲ್ಲಿನ ಸ್ಥಾನ ಕಳೆದುಕೊಂಡಿದ್ದರೂ, ಪಂತ್ ಮೇಲಿನ ತಂಡದ ವಿಶ್ವಾಸ ಅಚಲವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಭಾರತ ಟೆಸ್ಟ್‌ ತಂಡದಲ್ಲಿ ಕೆಎಲ್‌ ರಾಹುಲ್‌ಗೆ ಉಪ ನಾಯಕನ ಜವಾಬ್ದಾರಿಯನ್ನು ನೀಡಲಾಗಿದೆ.

IND vs AFG: ವಿರಾಟ್‌ ಕೊಹ್ಲಿಯನ್ನು ಕ್ಲೀನ್‌ ಬೌಲ್ಡ್‌ ಮಾಡಿದ್ದ ಪ್ರಿನ್ಸ್‌ ಯಾದವ್‌ಗೆ ಭಾರತ ತಂಡದಲ್ಲಿ ಸ್ಥಾನ!

ಕೊಹ್ಲಿಯನ್ನು ಬೌಲ್ಡ್‌ ಮಾಡಿ ಭಾರತ ತಂಡಕ್ಕೆ ಆಯ್ಕೆಯಾದ ಪ್ರಿನ್ಸ್‌ ಯಾದವ್‌!

ದೇಶಿ ಕ್ರಿಕೆಟ್‌ ಹಾಗೂ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಬಳಿಕ ಯುವ ವೇಗಿ ಪ್ರಿನ್ಸ್‌ ಯಾದವ್‌ ಅವರಿಗೆ ಭಾರತದ ಏಕದಿನ ತಂಡದಲ್ಲಿ ಚೊಚ್ಚಲ ಸ್ಥಾನ ನೀಡಲಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪಂದ್ಯದಲ್ಲಿ ವಿರಾಟ್‌ ಕೊಹ್ಲಿಯನ್ನು ಕ್ಲೀನ್‌ ಬೌಲ್ಡ್‌ ಮಾಡಿದ ಪ್ರಿನ್ಸ್‌ ಯಾದವ್‌ ಎಲ್ಲರ ಗಮನವನ್ನು ಸೆಳೆದಿದ್ದರು. ಇದಾದ ಬಳಿಕ ವಿರಾಟ್‌ ಕೊಹ್ಲಿ ಕೂಡ ಎಲ್‌ಎಸ್‌ಜಿ ವೇಗಿಯನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದರು.

IND vs AFG: ಭಾರತ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗಿರುವ ಗುರ್ನೂರ್‌ ಬ್ರಾರ್‌ ಯಾರು?

ಭಾರತ ತಂಡಕ್ಕೆ ಆಯ್ಕೆಯಾಗಿರುವ ಗುರ್ನೂರ್‌ ಬ್ರಾರ್‌ ಯಾರು?

Who is Gurnoor Brar?: ಗುರ್ನೂರ್‌ ಬ್ರಾರ್‌ ಅವರು ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಮೊದಲ ಬಾರಿ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ದೇಶಿ ಕ್ರಿಕೆಟ್ ಹಾಗೂ ಐಪಿಎಲ್‌ ಟೂರ್ನಿಯಲ್ಲಿ ನಿರಂತರವಾಗಿ ತೋರಿದ ಉತ್ತಮ ಪ್ರದರ್ಶನದ ಫಲವಾಗಿ ಈ ಅವಕಾಶ ಅವರಿಗೆ ದೊರೆತಿದೆ. ಬಲಗೈ ವೇಗದ ಬೌಲರ್ ಆಗಿರುವ ಗುರ್ನೂರ್ ಬ್ರಾರ್ ಕಳೆದ ಎರಡು ಸೀಸನ್‌ಗಳಲ್ಲಿ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡಿದ್ದರು.

IPL 2026: ಮುಂಬೈ ಇಂಡಿಯನ್ಸ್‌ಗೆ ಗಾಯದ ಸಮಸ್ಯೆ, ಕ್ವಿಂಟನ್‌ ಡಿ ಕಾಕ್‌, ರಾಜ್‌ ಬಾವಾ ಔಟ್‌!

2026ರ ಐಪಿಎಲ್‌ ಟೂರ್ನಿಯಿಂದ ಕ್ವಿಂಟನ್‌ ಡಿ ಕಾಕ್‌, ರಾಜ್‌ ಬಾವಾ ಔಟ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಅಭಿಯಾನ ಮುಗಿಯಲು ಇನ್ನು ಕೇವಲ ಇನ್ನೆರಡು ಪಂದ್ಯಗಳು ಮಾತ್ರ ಬಾಕಿ ಇವೆ. ಆದರೆ, ಇದೀಗ ಐದು ಬಾರಿ ಚಾಂಪಿಯನ್ಸ್‌ ಗಾಯದ ಸಮಸ್ಯೆ ಎದುರಾಗಿದೆ. ಕ್ವಿಂಟನ್‌ ಡಿ ಕಾಕ್‌ ಹಾಗೂ ರಾಜ್‌ ಬಾವಾ ಅವರು ಗಾಯಕ್ಕೆ ತುತ್ತಾಗಿದ್ದು, ಟೂರ್ನಿಯ ಇನ್ನುಳಿದ ಭಾಗದಿಂದ ಹೊರಬಿದ್ದಿದ್ದಾರೆ.

2027ರ ಐಪಿಎಲ್‌ ಟೂರ್ನಿಯಲ್ಲಿ ಎಂಎಸ್‌ ಧೋನಿ ಆಡ್ತಾರಾ? ಬಿಗ್‌ ಅಪ್‌ಡೇಟ್‌ ಕೊಟ್ಟ ಸ್ಟೀಫನ್‌ ಫ್ಲೆಮಿಂಗ್‌!

ಎಂಎಸ್‌ ಧೋನಿಯ ಐಪಿಎಲ್‌ ಭವಿಷ್ಯದ ಬಗ್ಗೆ ಮಾಹಿತಿ ನೀಡಿದ ಫ್ಲೆಮಿಂಗ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ 13 ಲೀಗ್‌ ಪಂದ್ಯಗಳು ಮುಗಿದಿದ್ದು, ಇನ್ನು ಕೇವಲ ಒಂದು ಪಂದ್ಯ ಮಾತ್ರ ಬಾಕಿ ಇದೆ. ಆದರೆ, ಎಂಎಸ್‌ ಧೋನಿ ಸತತ ಗಾಯದ ಸಮಸ್ಯೆಯ ಕಾರಣ ಇನ್ನೂ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಅಂದ ಹಾಗೆ ಎಂಎಸ್‌ ಧೋನಿಯ ನಿವೃತ್ತಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಸಿಎಸ್‌ಕೆ ಹೆಡ್‌ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

IPL 2026: ನಾಯಕನಾಗಿ ಹಾರ್ದಿಕ್‌ ಪಾಂಡ್ಯ ವಿಶೇಷ ದಾಖಲೆ ಮುರಿದ ಪ್ಯಾಟ್ ಕಮ್ಮಿನ್ಸ್

ಸಿಎಸ್‌ಕೆ ವಿರುದ್ಧ 3 ವಿಕೆಟ್‌ ಕಿತ್ತು ಹಲವು ದಾಖಲೆ ನಿರ್ಮಿಸಿದ ಕಮ್ಮಿನ್ಸ್

Pat Cummins Creates History: ಕಮ್ಮಿನ್ಸ್ ಐಪಿಎಲ್ ವೃತ್ತಿಜೀವನದಲ್ಲಿ ನಾಯಕನಾಗಿ ಐದನೇ ಮೂರು ವಿಕೆಟ್ ಗೊಂಚಲು ಇದಾಗಿದೆ. ವಾರ್ನ್ ನಂತರ ಈ ಸಾಧನೆ ಮಾಡಿದ ಎರಡನೇ ನಾಯಕ ಮತ್ತು ಈ ಸಾಧನೆ ಮಾಡಿದ ಮೊದಲ ವೇಗಿ ಎಂಬ ಹೆಗ್ಗಳಿಕೆ ಅವರದು. ಲೀಗ್‌ನಲ್ಲಿ ತಂಡವನ್ನು ಮುನ್ನಡೆಸುವಾಗ ಇಲ್ಲಿಯವರೆಗೆ ಯಾವುದೇ ವೇಗದ ಬೌಲರ್ ನಾಲ್ಕು, ಮೂರು ವಿಕೆಟ್‌ಗಳನ್ನು ಪಡೆದಿಲ್ಲ.

CSK vs SRH: ಮೈದಾನದಲ್ಲೇ ವಾಗ್ವಾದ ನಡೆಸಿದ ಸಂಜು-ಕ್ಲಾಸೆನ್‌; ವಿಡಿಯೊ ವೈರಲ್‌

ಸ್ಟಂಪಿಂಗ್‌ ಬಳಿಕ ಮೈದಾನದಲ್ಲೇ ವಾಗ್ವಾದ ನಡೆಸಿದ ಸಂಜು-ಕ್ಲಾಸೆನ್‌

Sanju Samson and Heinrich Klaasen: ಕ್ಲಾಸೆನ್‌ ಔಟಾದರೂ ಕಿಶನ್ ತಾಳ್ಮೆಯಿಂದ ಬ್ಯಾಟಿಂಗ್‌ ಕಾಯ್ದುಕೊಂಡು. 19 ನೇ ಓವರ್‌ನಲ್ಲಿ 47 ಎಸೆತಗಳಲ್ಲಿ 70 ರನ್ ಗಳಿಸಿ ಔಟಾದರು. ಆದರೆ, ಅನ್ಶುಲ್ ಕಾಂಬೋಜ್ ಕಿಶನ್ ಅವರನ್ನು ಔಟ್ ಮಾಡುವ ಹೊತ್ತಿಗೆ, ಪಂದ್ಯವು ಆತಿಥೇಯರಿಂದ ದೂರ ಸರಿದಿತ್ತು. ಕೈಯಲ್ಲಿ ಐದು ವಿಕೆಟ್‌ಗಳು ಮತ್ತು ಇನ್ನೂ ಆರು ಎಸೆತಗಳು ಬಾಕಿ ಇರುವಾಗ ಹೈದರಾಬಾದ್‌ ಜಯ ಸಾಧಿಸಿತು.

ರಜನಿಕಾಂತ್ ಶೈಲಿಯಲ್ಲಿ ಶಿಳ್ಳೆ ಹೊಡೆದು ಸಿಎಸ್‌ಕೆ ಅಭಿಮಾನಿಗಳನ್ನು ಅಣಕಿಸಿದ ಇಶಾನ್‌ ಕಿಶನ್‌; ವಿಡಿಯೊ ವೈರಲ್‌

ಶಿಳ್ಳೆ ಹೊಡೆದು ಸಿಎಸ್‌ಕೆ ಅಭಿಮಾನಿಗಳನ್ನು ಅಣಕಿಸಿದ ಇಶಾನ್‌ ಕಿಶನ್‌

IPL 2026: ಹೆನ್ರಿಕ್ ಕ್ಲಾಸೆನ್ ಒತ್ತಡದ ಪರಿಸ್ಥಿತಿಯಲ್ಲೂ ಅದ್ಭುತ ಆಟವಾಡಿದರು ಮತ್ತು 41 ಎಸೆತಗಳಲ್ಲಿ 75 ರನ್‌ಗಳ ಪಾಲುದಾರಿಕೆಯು ಎರಡೂ ತಂಡಗಳ ನಡುವಿನ ವ್ಯತ್ಯಾಸವಾಗಿ ಪರಿಣಮಿಸಿತು. ಸನ್‌ರೈಸರ್ಸ್ ತಂಡವು ಇನ್ನೂ ಆರು ಎಸೆತಗಳು ಬಾಕಿ ಇರುವಾಗಲೇ ಜಯಗಳಿಸಿತು.

ಈ ಬಾರಿ ಕೇವಲ ಮಿಸ್ಡ್ ಕಾಲ್, 2027ರ ಐಪಿಎಲ್‌ನಲ್ಲಿ ಧೋನಿ ಆಡಲಿದ್ದಾರೆ; ಸುರೇಶ್ ರೈನಾ

2027ರ ಐಪಿಎಲ್‌ನಲ್ಲಿ ಧೋನಿ ಆಡಲಿದ್ದಾರೆ; ಸುರೇಶ್ ರೈನಾ

IPL 2026: ಇನ್ನಿಂಗ್ಸ್ ಮಧ್ಯದ ವಿರಾಮದ ಸಮಯದಲ್ಲಿ, ಧೋನಿ ತಂಡದ ಫೋಟೋಶೂಟ್ ಗಾಗಿ ಮೈದಾನಕ್ಕೆ ಬಂದರು, ಪ್ರೇಕ್ಷಕರಿಂದ ಜೋರಾಗಿ ಹರ್ಷೋದ್ಗಾರಗಳು ಕೇಳಿಬಂದವು. ಪಂದ್ಯದ ನಂತರ, CSK ಗೌರವದ ಲ್ಯಾಪ್ ಸಮಯದಲ್ಲಿ ಅವರು ಮತ್ತೊಮ್ಮೆ ಮೈದಾನಕ್ಕೆ ಮರಳಿದರು.

ಸೋಲಿಗೆ ತಂಡದ ಬೌಲರ್‌ಗಳನ್ನು ಟೀಕಿಸಿದ ಸಿಎಸ್‌ಕೆ ನಾಯಕ ಗಾಯಕ್ವಾಡ್‌

ಸೋಲಿಗೆ ತಂಡದ ಬೌಲರ್‌ಗಳನ್ನು ಟೀಕಿಸಿದ ಸಿಎಸ್‌ಕೆ ನಾಯಕ ಗಾಯಕ್ವಾಡ್‌

IPL 2026: ಪಂದ್ಯದ ಬಳಿಕ ಮಾತನಾಡಿದ ಗಾಯಕ್ವಾಡ್‌, "ವಾಸ್ತವವಾಗಿ ಏನೂ ಅಲ್ಲ ಅಂತ ನನಗನ್ನಿಸುತ್ತೆ, ವಿಕೆಟ್ ಪಡೆದ ತಕ್ಷಣ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವುದು ಅಷ್ಟೇ. ಎದುರಾಳಿ ತಂಡದ ಮೇಲೆ ಒತ್ತಡ ಹೇರುವುದು ನಮ್ಮ ಉದ್ದೇಶ. ಆದರೆ ನಮ್ಮ ತಂಡದ ಬೌಲರ್‌ಗಳು ಇದನ್ನು ಸಾಧಿಸಲು ವಿಫಲರಾದರು ಎಂದು ನನಗನ್ನಿಸುತ್ತದೆ" ಎಂದರು.

ಐಪಿಎಲ್ 2026 ಪ್ಲೇ-ಆಫ್‌ ಅರ್ಹತಾ ಸನ್ನಿವೇಶಗಳು; ಒಂದು ಸ್ಥಾನಕ್ಕೆ ಐದು ತಂಡಗಳ ಪೈಪೋಟಿ

ಒಂದು ಪ್ಲೇಆಫ್ ಸ್ಥಾನಕ್ಕೆ ಐದು ತಂಡಗಳ ಪೈಪೋಟಿ; ಹೀಗಿದೆ ಲೆಕ್ಕಾಚಾರ

IPL 2026 Qualification Scenarios: ಡೆಲ್ಲಿ ತಂಡ ಕಳಪೆ ರನ್‌ರೇಟ್‌ ಹೊಂದಿರುವ ಕಾರಣ ತಂಡಕ್ಕೆ ದೊಡ್ಡ ಗೆಲುವು ಮತ್ತು ಪಂಜಾಬ್‌, ಸಿಎಸ್‌ಕೆ ಮತ್ತು ರಾಜಸ್ಥಾನ್‌ ಮುಂದಿನ ಪಂದ್ಯಗಳಲ್ಲಿ ಹೀನಾಯ ಸೋಲು ಕಾಣಬೇಕು. ಅವರ ರನ್‌ರೇಟ್‌ ಕುಸಿದರೆ ಆಗ ತಂಡಕ್ಕೆ ಪ್ಲೇ ಆಫ್‌ ಸ್ಥಾನವೊಂದು ಸಿಗುವ ಸಾಧ್ಯತೆ ಇದೆ.

CSK vs SRH: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೋಲು, ಸನ್‌ರೈಸರ್ಸ್‌ ಹೈದರಾಬಾದ್‌, ಗುಜರಾತ್‌ ಟೈಟನ್ಸ್‌ಗೆ ಪ್ಲೇಆಫ್ಸ್‌ ಟಿಕೆಟ್‌!

ಸಿಎಸ್‌ಕೆಗೆ ಸೋಲು, ಎಸ್‌ಆರ್‌ಎಚ್‌, ಜಿಟಿಗೆ ಪ್ಲೇಆಫ್ಸ್‌ ಟಿಕೆಟ್‌!

CSK vs SRH Match Highlights: ಇಶಾನ್‌ ಕಿಶನ್‌ ಹಾಗೂ ಹೆನ್ರಿಕ್‌ ಕ್ಲಾಸೆನ್‌ ಅವರ ನಿರ್ಣಾಯಕ ಬ್ಯಾಟಿಂಗ್‌ ಬಲದಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು 5 ವಿಕೆಟ್‌ಗಳ ಗೆಲುವು ಸಾಧಿಸಿತು.ಆ ಮೂಲಕ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಿತು. ಈಗಾಗಲೇ 16 ಅಂಕಗಳನ್ನು ಕಲೆ ಹಾಕಿರುವ ಗುಜರಾತ್‌ ಟೈಟನ್ಸ್‌ ಕೂಡ ನಾಕ್‌ಔಟ್‌ಗೆ ಪ್ರವೇಶ ಮಾಡಿತು. ಸೋಲಿನೊಂದಿಗೆ ಸಿಎಸ್‌ಕೆ, ಕೊನೆಯ ಪಂದ್ಯದಲ್ಲಿ ಗೆದ್ದರೂ, ಈ ತಂಡದ ಪ್ಲೇಆಫ್ಸ್‌ಗೆ ಭವಿಷ್ಯ ಇತರೆ ತಂಡಗಳ ಫಲಿತಾಂಶವನ್ನು ಅವಲಂಬಿಸಿದೆ.

ಎಂಎಸ್‌ ಧೋನಿ ಇನ್ನೂ ಐಪಿಎಲ್‌ ಪಂದ್ಯ ಆಡದೇ ಇರಲು ಕಾರಣ ತಿಳಿಸಿದ ಋತುರಾಜ್‌ ಗಾಯಕ್ವಾಡ್‌!

IPL 2026: ಎಂಎಸ್‌ ಧೋನಿ ಆಡದೇ ಇರಲು ಕಾರಣ ತಿಳಿಸಿದ ಗಾಯಕ್ವಾಡ್‌!

CSK vs SRH: ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 63ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿಯೂ ಮಾಜಿ ನಾಯಕ ಎಂಎಸ್‌ ಧೋನಿ ಸಿಎಸ್‌ಕೆ ಪ್ಲೇಯಿಂಗ್‌ Xiನಲ್ಲಿ ಕಾಣಿಸಿಕೊಂಡಿಲ್ಲ. ಈ ಬಗ್ಗೆ ನಾಯಕ ಋತುರಾಜ್‌ ಗಾಯಕ್ವಾಡ್‌ ಪ್ರತಿಕ್ರಿಯೆ ನೀಡಿದ್ದಾರೆ.

IPL 2026: ವಿರಾಟ್‌ ಕೊಹ್ಲಿ ಅಲ್ಲ! ಆರ್‌ಸಿಬಿಗೆ ಅತ್ಯಂತ ಮೌಲ್ಯಯುತ ಆಟಗಾರನನ್ನು ಹೆಸರಿಸಿದ ಡೇಲ್‌ ಸ್ಟೇನ್‌!

ಆರ್‌ಸಿಬಿಗೆ ಅತ್ಯಂತ ಮೌಲ್ಯಯುತ ಆಟಗಾರನನ್ನು ಹೆಸರಿಸಿದ ಡೇಲ್‌ ಸ್ಟೇನ್‌!

ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೀರುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌ ಅವರನ್ನು ದಕ್ಷಿಣ ಆಫ್ರಿಕಾ ದಿಗ್ಗಜ ಡೇಲ್‌ ಸ್ಟೇನ್‌ ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ. ಭುವನೇಶ್ವರ್‌ ಆರ್‌ಸಿಬಿಗೆ ಅತ್ಯಂತ ಮೌಲ್ಯಯುತ ಆಟಗಾರ ಎಂದಿದ್ದಾರೆ.

IPL 2026: ಆರ್‌ಆರ್‌ ಎದುರು ಅರ್ಧಶತಕ ಸಿಡಿಸಿ ಎಬಿಡಿ ದಾಖಲೆ ಮುರಿದ ಕೆಎಲ್‌ ರಾಹುಲ್!

DC vs RR: ಅರ್ಧಶತಕ ಸಿಡಿಸಿ ಎಬಿಡಿ ದಾಖಲೆ ಮುರಿದ ಕೆಎಲ್‌ ರಾಹುಲ್‌!

ಕೆಎಲ್‌ ರಾಹುಲ್‌ ಅವರ ಶಾಂತ ಮತ್ತು ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 194 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಮೇ 17 ರಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಹುಲ್ ಅರ್ಧಶತಕ ಸಿಡಿಸುವ ಮೂಲಕ ಆರ್‌ಸಿಬಿ ದಿಗ್ಗಜ ಎಬಿ ಡಿ ವಿಲಿಯರ್ಸ್ ಅವರ ಸಾರ್ವಕಾಲಿಕ ದಾಖಲೆಯೊಂದನ್ನು ಮುರಿದಿದ್ದಾರೆ.

ʻಟೆಸ್ಟ್‌ ಕ್ರಿಕೆಟ್‌ಗಿಂತ ಐಪಿಎಲ್‌ ನಿಮಗೆ ಮುಖ್ಯವಾಯಿತಾ?ʼ: ಇಸಿಬಿಯನ್ನು ಜಾಡಿಸಿದ ಮೈಕಲ್‌ ವಾನ್‌!

ಟೆಸ್ಟ್‌ ಕ್ರಿಕೆಟ್‌ಗಿಂತ ಐಪಿಎಲ್‌ ಮುಖ್ಯವಾಯಿತಾ?: ಮೈಕಲ್‌ ವಾನ್‌ ಕಿಡಿ!

ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಹೊರತಾಗಿಯೂ ಇಂಗ್ಲೆಂಡ್‌ ತಂಡದ ಪ್ರಮುಖ ವೇಗಿ ಜೋಫ್ರಾ ಆರ್ಚರ್‌ ಅವರನ್ನು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮುಂದುವರಿಯಲು ಬಿಟ್ಟಿರುವ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಯನ್ನು ಮಾಜಿ ನಾಯಕ ಮೈಕಲ್‌ ವಾನ್‌ ಟೀಕಿಸಿದ್ದಾರೆ. ರಾಷ್ಟ್ರೀಯ ತಂಡದ ಟೆಸ್ಟ್‌ ಕ್ರಿಕೆಟ್‌ಗಿಂತ ಇವರಿಗೆ ಐಪಿಎಲ್‌ ತುಂಬಾ ಮುಖ್ಯವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

IPL 2026: ಪಂಜಾಬ್‌ ಕಿಂಗ್ಸ್‌ನ ಸತತ 6ನೇ ಸೋಲಿನ ಬಳಿಕ ಮೌನಕ್ಕೆ ಜಾರಿದ ಕೋಚ್‌ ರಿಕಿ ಪಾಂಟಿಂಗ್‌!

ಪಂಜಾಬ್‌ ಕಿಂಗ್ಸ್‌ ಸೋಲಿನ ಬಳಿಕ ಮೌನಕ್ಕೆ ಜಾರಿದ ರಿಕಿ ಪಾಂಟಿಂಗ್‌!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 23 ರನ್‌ಗಳ ಸೋಲಿನ ಬಳಿಕ ಪಂಜಾಬ್‌ ಕಿಂಗ್ಸ್‌ ತಂಡದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪ್ಲೇಆಫ್ಸ್‌ ಹಾದಿ ಅತ್ಯಂತ ಕಠಿಣವಾಗಿದೆ. ಸತತ ಆರನೇ ಸೋಲು ಅನುಭವಿಸಿದ ಬಳಿಕ ಪಂಜಾಬ್‌ ತಂಡದ ಡ್ರೆಸ್ಸಿಂಗ್‌ ಕೊಠಡಿ ಮೌನಕ್ಕೆ ಜಾರಿಗೆ. ಅದರಲ್ಲಿಯೂ ವಿಶೇಷವಾಗಿ ಹೆಡ್‌ ಕೋಚ್‌ ರಿಕಿ ಪಾಂಟಿಂಗ್‌ ಅವರು ತಮ್ಮ ಭಾವನೆಗಳನ್ನು ತಡೆಯಲಾಗದೆ ಮೌನಕ್ಕೆ ಜಾರಿರುವ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

IPL 2026: ʻನಮ್ಮ ದೊಡ್ಡ ಸಿಂಹಗಳುʼ-ಪ್ಲೇಆಫ್ಸ್‌ಗೇರಿದ ಆರ್‌ಸಿಬಿಗೆ ವಿಜಯ್‌ ಮಲ್ಯ ಭಾವನಾತ್ಮಕ ಸಂದೇಶ!

ʻನಮ್ಮ ದೊಡ್ಡ ಸಿಂಹಗಳುʼ: ಆರ್‌ಸಿಬಿಗೆ ವಿಜಯ್‌ ಮಲ್ಯ ಸಂದೇಶ!

ಪಂಜಾಬ್‌ ಕಿಂಗ್ಸ್‌ ಎದುರು 23 ರನ್‌ಗಳ ಗೆಲುವು ಪಡೆದ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಿತು. ಆ ಮೂಲಕ 19ನೇ ಸೀಸನ್‌ನಲ್ಲಿ ನಾಕ್‌ಔಟ್‌ಗೆ ಪ್ರವೇಶಿಸಿದ ಮೊದಲ ತಂಡ ಎಂಬ ಕೀರ್ತಿಗೆ ಆರ್‌ಸಿಬಿ ಭಾಜನವಾಯಿತು. ಈ ಪಂದ್ಯದ ಬಳಿಕ ಆರ್‌ಸಿಬಿಗೆ ವಿಜಯ್‌ ಮಲ್ಯ ಭಾವನಾತ್ಮಕ ಸಂದೇಶವನ್ನು ರವಾನಿಸಿದ್ದಾರೆ.

IPL 2026: '49/3'ರ ಪೋಸ್ಟ್‌ ಹಾಕಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಟ್ರೋಲ್‌ ಮಾಡಿದ ಆರ್‌ಸಿಬಿ!

'49/3'ರ ಪೋಸ್ಟ್‌ ಹಾಕಿ ಪಂಜಾಬ್‌ ತಂಡವನ್ನು ಟ್ರೋಲ್‌ ಮಾಡಿದ ಆರ್‌ಸಿಬಿ

ಪಂಜಾಬ್‌ ಕಿಂಗ್ಸ್‌ ತಂಡವನ್ನು ಮಣಿಸಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪ್ಲೇಆಫ್ಸ್‌ಗೆ ಅಧಿಕೃತವಾಗಿ ಅರ್ಹತೆ ಪಡೆದಿದೆ. ಅಂದ ಹಾಗೆ ಈ ಪಂದ್ಯದ ಸಮಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಆರ್‌ಸಿಬಿ ಸೋಶಿಯಲ್‌ ಮೀಡಿಯಾದಲ್ಲಿ ʻ49/3ʼರ ಪೋಸ್ಟ್‌ ಹಾಕುವ ಮೂಲಕ ಟ್ರೋಲ್‌ ಮಾಡಿದೆ. ಈ ಹಿಂದೆಯೂ ಪಂಜಾಬ್‌, ಇದೇ ರೀತಿ ಆರ್‌ಸಿಬಿಯನ್ನು ಟ್ರೋಲ್‌ ಮಾಡಿತ್ತು.

IPL 2026: ʻಆರ್‌ಸಿಬಿ ನನಗೆ ತವರು ತಂಡದ ರೀತಿ ಭಾಸವಾಗುತ್ತಿದೆʼ-ಭಾವುಕರಾದ ವೆಂಕಟೇಶ್‌ ಅಯ್ಯರ್‌!

ಆರ್‌ಸಿಬಿ ನನಗೆ ತಂಡದ ರೀತಿ ಭಾಸವಾಗುತ್ತಿದೆ: ವೆಂಕಟೇಶ್‌ ಅಯ್ಯರ್‌!

ಪಂಜಾಬ್‌ ಕಿಂಗ್ಸ್‌ ಎದುರು ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನವನ್ನು ತೋರಿದ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಲ್‌ರೌಂಡರ್‌ ವೆಂಕಟೇಶ್‌ ಅಯ್ಯರ್‌ ಸಂತಸ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿಯಲ್ಲಿ ನನಗೆ ತವರು ತಂಡದ ಜೊತೆ ಇರುವ ರೀತಿ ಭಾಸವಾಗುತ್ತಿದೆ ಎಂದು ಹೇಳಿದ್ದಾರೆ. ಈ ಪಂದ್ಯದಲ್ಲಿ ಅವರು ಅಜೇಯ 73 ರನ್‌ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನೊಂದಿಗೆ ಆರ್‌ಸಿಬಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಿತು.

DC vs RR: ರಾಜಸ್ಥಾನ್‌ ರಾಯಲ್ಸ್‌ ಎದುರು ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಪ್ಲೇಆಫ್ಸ್‌ ಆಸೆ ಜೀವಂತ!

ರಾಜಸ್ಥಾನ್‌ ಎದುರು ಗೆದ್ದ ಡೆಲ್ಲಿ ಪ್ಲೇಆಫ್ಸ್‌ ಆಸೆ ಜೀವಂತ!

DC vs RR Match Highlights: ಮಿಚೆಲ್‌ ಸ್ಟಾರ್ಕ್‌ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಎದುರು 5 ವಿಕೆಟ್‌ ಗೆಲುವು ಪಡೆಯಿತು. ಆ ಮೂಲಕ 12 ಅಂಕಗಳಿಂದ ಟೂರ್ನಿಯ ಪ್ಲೇಆಫ್ಸ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನು ಸೋಲು ಅನುಭವಿಸಿದ ರಾಜಸ್ಥಾನ ತಂಡಕ್ಕೆ ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆಲುವು ಅಗತ್ಯವಾಗಿದೆ.

IPL 2026: ಆರ್‌ಸಿಬಿ ಎದುರು ಸೋತ ಪಂಜಾಬ್‌ ಕಿಂಗ್ಸ್‌ಗೆ ಪ್ಲೇಆಫ್ಸ್‌ಗೆ ಚಾನ್ಸ್‌ ಇದೆಯಾ? ಇಲ್ಲಿದೆ ಲೆಕ್ಕಾಚಾರ!

ಆರ್‌ಸಿಬಿ ಎದುರು ಸೋತ ಪಂಜಾಬ್‌ ಕಿಂಗ್ಸ್‌ಗೆ ಪ್ಲೇಆಫ್ಸ್‌ಗೆ ಚಾನ್ಸ್‌ ಇದೆಯಾ?

PBKS Playoffs Scenario: ರಾಯಲ್‌ ಚಾಲೆಂಜರ್ಸ್‌ ಎದುರು 23 ರನ್‌ಗಳ ಸೋಲಿನ ಬಳಿಕ ಪಂಜಾಬ್‌ ಕಿಂಗ್ಸ್‌ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸತತ ಆರನೇ ಸೋಲು ಅನುಭವಿಸಿದಂತಾಗಿದೆ. ಇದೀಗ ಪಂಜಾಬ್‌ ತಂಡದ ಪ್ಲೇಆಫ್ಸ್‌ ಹಾದಿ ಅತ್ಯಂತ ಕಠಿಣವಾಗಿದೆ. ಇನ್ನುಳಿದ ಒಂದು ಪಂದ್ಯವನ್ನು ಗೆದ್ದರೂ ಪಂಜಾಬ್‌ಗೆ ಅಂತಿಮ ನಾಲ್ಕರ ಸ್ಥಾನ ಕಷ್ಟ.

DC vs RR: 43ನೇ ಸಿಕ್ಸರ್‌ ಬಾರಿಸಿ ಅಭಿಷೇಕ್‌ ಶರ್ಮಾ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ!

43ನೇ ಸಿಕ್ಸರ್‌ ಸಿಡಿಸಿ ನೂತನ ಮೈಲುಗಲ್ಲು ತಲುಪಿದ ವೈಭವ್‌ ಸೂರ್ಯವಂಶಿ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ವೈಭವ್‌ ಸೂರ್ಯವಂಶಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯದಲ್ಲಿ ಅವರು ಈ ಸೀಸನ್‌ನ ತಮ್ಮ 43ನೇ ಸಿಕ್ಸರ್‌ನ್ನು ಸಿಡಿಸಿದರು. ಕೇವಲ 15 ವರ್ಷದ ವಯಸ್ಸಿನಲ್ಲಿ ವೈಭವ್, ಭಾರತೀಯ ಆಟಗಾರರ ದಾಖಲೆಯನ್ನು ಮರು ಸ್ಥಾಪಿಸಿದ್ದಾರೆ ಹಾಗೂ ಕ್ರಿಸ್‌ ಗೇಲ್‌ ದಾಖಲೆಗೆ ಸನಿಹವಾಗಿದ್ದಾರೆ.

Loading...