ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amruthadhaare Serial : ಜಯದೇವ್‌ಗೆ ಬಕ್ರಾ ಮಾಡಿದ ಅಜ್ಜಿ! ಮುಂದೆ ಗೌತಮ್‌- ಭೂಮಿಕಾ ಕಥೆ ಏನು?

Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಹೊಸ ತಿರುವು ಪಡೆದುಕೊಂಡಿದೆ. ಆಸ್ತಿ ಲಪಟಾಯಿಸಬೇಕು ಅಂತಿದ್ದ ಜಯದೇವ್‌ಗೆ ಚಳ್ಳೆ ಹಣ್ಣು ತಿನ್ನಿಸಿದ್ದಾಳೆ ಅಜ್ಜಿ. ಭೂಮಿಕಾ ಹಾಗೂ ಗೌತಮ್‌ ಒಂದಾಗಬೇಕು ಅಂತ ಮಕ್ಕಳು ಒಂದು ಕಡೆ ಪಡದಾಡುತ್ತಿದ್ದರೆ, ಅಜ್ಜಿ ಕೂಡ ಏನೋ ಒಂದು ಸಾಹಸ ಮಾಡ್ತಾನೇ ಇದ್ದಾರೆ.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ ( Amruthadhaare Serial) ಧಾರಾವಾಹಿಯಲ್ಲಿ ಹೊಸ ತಿರುವು ಪಡೆದುಕೊಂಡಿದೆ. ಆಸ್ತಿ ಲಪಟಾಯಿಸಬೇಕು ಅಂತಿದ್ದ ಜಯದೇವ್‌ಗೆ ಚಳ್ಳೆ ಹಣ್ಣು ತಿನ್ನಿಸಿದ್ದಾಳೆ ಅಜ್ಜಿ. ಭೂಮಿಕಾ ಹಾಗೂ ಗೌತಮ್‌ (Bhoomika Goutham) ಒಂದಾಗಬೇಕು ಅಂತ ಮಕ್ಕಳು ಒಂದು ಕಡೆ ಪಡದಾಡುತ್ತಿದ್ದರೆ, ಅಜ್ಜಿ ಕೂಡ ಏನೋ ಒಂದು ಸಾಹಸ ಮಾಡ್ತಾನೇ ಇದ್ದಾರೆ. ಆಶ್ರಮಕ್ಕೆ ಬಂದ ಭೂಮಿ (Bhoomika) ಗೌತಮ್‌ ನೋಡಿ, ಒಟ್ಟಿಗೆ ಮಲಗಲು ಹೇಳಿದ್ದಾಳೆ. ಇನ್ನೊಂದು ಕಡೆ ಜೈದೇವ್‌ (Jaidev) ಮೋಸ ಹೋಗಿದ್ದಾನೆ.

ತಪ್ಪಾಗಿ ಬಲಗೈ ಹೆಬ್ಬೆಟ್ಟು

ಅಜ್ಜಿ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡು ಗೌತಮ್‌ ಮಾಡಿದ 600 ಕೋಟಿ ರೂಪಾಯಿ ಸಾಲವನ್ನು ತೀರಿಸಬೇಕು ಎಂದುಕೊಂಡಿದ್ದನು. ಅಜ್ಜಿ ಬಳಿ ಮೋಸದಿಂದ ಬಾಂಡ್‌ ಪೇಪರ್‌ಗೆ ಹೆಬ್ಬೆಟ್ಟು ಹಾಕಿಸಿಕೊಂಡಿದ್ದನು. ಆದರೆ ಅವನು ತಪ್ಪಾಗಿ ಬಲಗೈ ಹೆಬ್ಬೆಟ್ಟು ಹಾಕಿಸಿಕೊಂಡಿದ್ದು, ನೆನಪಾಗಿ ಮತ್ತೆ ಹೆಬ್ಬೆಟ್ಟು ಹಾಕಿಸಿಕೊಳ್ಳಬೇಕು ಎಂದಿದ್ದನು.

ಇದನ್ನೂ ಓದಿ: Bigg Boss Kannada 12: ಈ ವೀಕೆಂಡ್​​ನಲ್ಲಿ ಕಿಚ್ಚ ಸುದೀಪ್‌ ನಿರೂಪಣೆ ಇರಲ್ಲ; ಕಾರಣ ಇದು

ಹೀಗಾಗಿ ಅವನು ಅಜ್ಜಿ ಬಳಿ ಮತ್ತೆ ಬಂದಿದ್ದಾನೆ. ಜಯದೇವ್‌ ಈಗ ಅಜ್ಜಿ ಬಳಿ ಬಂದು, ಮತ್ತೆ ಹೆಬ್ಬೆಟ್ಟು ಹಾಕಿಸಿಕೊಳ್ಳಲು ನೋಡಿದ್ದಾನೆ. ಆಗ ಅಜ್ಜಿ ನನ್ನ ಎಲ್ಲ ಆಸ್ತಿಯನ್ನು ಗೌತಮ್‌ಗೆ ಬರೆದಾಗಿದೆ, ನೀನು ಏನೂ ಮಾಡಿಕೊಳ್ಳೋಕೆ ಆಗೋದಿಲ್ಲ ಎಂದಿದ್ದಾಳೆ.

ಆಶ್ರಮಕ್ಕೆ ಬಂದ ಭೂಮಿ ಗೌತಮ್‌

ಇನ್ನೊಂದು ಕಡೆ ಭೂಮಿಕಾ, ಶಕುಂತಲಾ ಬೆದರಿಕೆಗೆ ಮನೆ ಬಿಟ್ಟು ಹೋಗಿದ್ದಳು. ಇದು ಅಜ್ಜಿಗೆ ಗೊತ್ತಾಗಿ ಒಂದಾಗೋ ಹಾಗೇ ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದಾಳೆ. ಭೂಮಿಕಾ ಹಾಗೂ ಗೌತಮ್‌ ಒಂದಾಗಬೇಕು ಅಂತ ಮಕ್ಕಳು ಒಂದು ಕಡೆ ಪಡದಾಡುತ್ತಿದ್ದರೆ, ಅಜ್ಜಿ ಕೂಡ ಏನೋ ಒಂದು ಸಾಹಸ ಮಾಡ್ತಾನೇ ಇದ್ದಾರೆ. ಆಶ್ರಮಕ್ಕೆ ಬಂದ ಭೂಮಿ ಗೌತಮ್‌ ನೋಡಿ, ಒಟ್ಟಿಗೆ ಮಲಗಲು ಹೇಳಿದ್ದಾಳೆ.



ಶಕುಂತಲಾ ಮಲತಾಯಿಯಾದ್ರೂ ಕೂಡ ಗೌತಮ್‌ಗೆ ಅವಳೆಂದರೆ ಇಷ್ಟ. ಈ ಹಿಂದೆ ಕೂಡ ಶಕುಂತಲಾ ಮಾತು ನಂಬಿ, ಅವನು ಭೂಮಿಗೆ ಕ್ಲಾಸ್‌ ತಗೊಂಡಿದ್ದನು. ಈಗ ಅವನು ವಠಾರದಲ್ಲಿದ್ದಾನೆ, ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದಾನೆ.

ಇದನ್ನೂ ಓದಿ: Bigg Boss Kannada 12: ನಾಮಿನೇಶನ್‌ ವೇಳೆ ಗಿಲ್ಲಿ ಮಾಸ್ಟರ್‌ ಪ್ಲ್ಯಾನ್‌! ರಾಶಿಕಾ ಫುಲ್‌ ಶಾಕ್‌, ಗಿಲ್ಲಿ ಫ್ಯಾನ್ಸ್‌ ಖುಷ್‌

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ

Yashaswi Devadiga

View all posts by this author