ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್ ಕೊಟ್ಟ ಟಾಸ್ಕ್‌ಗೆ ಕಣ್ಣೀರಿಟ್ಟ ಧನುಷ್‌! ಅಸಲಿಗೆ ಆಗಿದ್ದೇನು?

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಆರನೇ ವಾರದಲ್ಲಿ ಯಾವುದೇ ಟಾಸ್ಕ್​ಗಳು ಇರುವುದಿಲ್ಲ ಅಂತ ಸುದೀಪ್ ಅವರು ಈ ಮೊದಲೇ ಅನೌನ್ಸ್‌ ಮಾಡಿದ್ದರು. ಈಗ ಎರಡನೇ ದಿನ ಬಿಗ್ ಬಾಸ್​ನಲ್ಲಿ ಮನೆಯವರು ಕಳುಹಿಸಿದ ಪತ್ರ ಓದೋ ಸಮಯ. ಆದರೆ, ಇಲ್ಲಿ ಒಂದು ದೊಡ್ಡ ಟ್ವಿಸ್ಟ್ ಕೊಡಲಾಗಿದೆ. ಬಿಗ್ ಬಾಸ್ ಕೊಟ್ಟ ಟ್ವಿಸ್ಟ್‌ಗೆ ಸರಿಯಾದ ದಾರಿಯಲ್ಲಿ ನಡೆದ್ರಾ ಧನುಷ್‌? ಕಣ್ಣೀರಿಟ್ಟಿದ್ದೇಕೆ?

bigg boss kannada

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (Bigg Boss Kannada 12) ಆರನೇ ವಾರದಲ್ಲಿ ಯಾವುದೇ ಟಾಸ್ಕ್​ಗಳು ಇರುವುದಿಲ್ಲ ಅಂತ ಸುದೀಪ್ ಅವರು ಈ ಮೊದಲೇ ಅನೌನ್ಸ್‌ ಮಾಡಿದ್ದರು. ಈಗ ಎರಡನೇ ದಿನ ಬಿಗ್ ಬಾಸ್​ನಲ್ಲಿ ಮನೆಯವರು ಕಳುಹಿಸಿದ ಪತ್ರ ಓದೋ ಸಮಯ. ಆದರೆ, ಇಲ್ಲಿ ಒಂದು ದೊಡ್ಡ ಟ್ವಿಸ್ಟ್ ಕೊಡಲಾಗಿದೆ. ಬಿಗ್ ಬಾಸ್ ಕೊಟ್ಟ ಟ್ವಿಸ್ಟ್‌ಗೆ ಸರಿಯಾದ ದಾರಿಯಲ್ಲಿ ನಡೆದ್ರಾ ಧನುಷ್‌? ಕಣ್ಣೀರಿಟ್ಟಿದ್ದೇಕೆ?

ಬಿಗ್‌ ಬಾಸ್‌ ಕೊಟ್ಟ ಟಾಸ್ಕ್‌ ಏನು?

ಈ ಮನೆಯಲ್ಲಿ ಉಳಿಯಲು ನಿಮ್ಮ ಕುಟುಂಬದವರ ಸಹಾಯ ಪಡೆಯುವ ಸಮಯ. ಧನುಷ್‌, ಅಭಿಷೇಕ್‌ ಅವರಿಗೆ ಬಂದಿರುವ ಪತ್ರವನ್ನು ಅವರಿಗೆ ನೀವು ನೀಡಬಹುದು. ಆದರೆ ನಿಮ್ಮ ಕುಟುಂಬದವರ ಪತ್ರವನ್ನ ಬಾಟೆಲ್‌ ಸಮೇತ ಸ್ವಿಮ್ಮಿಂಗ್‌ ಫೂಲ್‌ನಲ್ಲಿ ನೀವು ಹಾಕಬೇಕು. ಪತ್ರ ಪಡೆದವರು ಇಮ್ಯುನಿಟಿ ಪಡೆಯುತ್ತಾರೆ.

ಇದನ್ನೂ ಓದಿ: BBK 12: ರೂಮ್‌ನಲ್ಲಿ ನಿನ್ನ ಥರ ಕೈ ಕೈ ಹಿಡಿದುಕೊಂಡಿಲ್ಲ, ನನ್ನಷ್ಟು ಸಿನಿಮಾ ಮಾಡಿ ತೋರಿಸು! ರಕ್ಷಿತಾಗೆ ಅಶ್ವಿನಿ ಗೌಡ ಓಪನ್‌ ಚಾಲೆಂಜ್

ಪತ್ರ ಕಳೆದುಕೊಂಡವರು ನಾಮಿನೇಟ್‌ ಆಗ್ತಾರೆ ಎಂದು ಬಿಗ್‌ ಬಾಸ್‌ ಹೇಳಿದರು. ಇನ್ನು ಧನುಷ್‌ ಕೂಡ ಬಾಟೆಲ್‌ವನ್ನು ಸ್ವಿಮ್ಮಿಂಗ್‌ ಫೂಲ್‌ಗೆ ಹಾಕಿದ್ದಾರೆ. ಹಾಕಿ ಕಣ್ಣೀರಿಟ್ಟಿದ್ದಾರೆ. ಆದರೆ ಯಾರ ಬಾಟೆಲ್‌ ಹಾಕಿದ್ದಾರೆ ಎಂದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ. ಕ್ಯಾಪ್ಟನ್ ಧನುಷ್ ತಪ್ಪು ಮಾಡಿದ್ರಾ? ಸರಿಯಾದ ದಾರಿಯಲ್ಲಿ ನಡೆದ್ರಾ? ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಬಿಗ್‌ಬಾಸ್‌ ಮನೆಯಲ್ಲಿರುವ ಸ್ಪರ್ಧಿಗಳು ಭಾವನಾತ್ಮಕವಾಗಿ ಎಷ್ಟೇ ಸ್ಟ್ರಾಂಗ್ ಆಗಿದ್ರೂ ದಿನಗಳು ಕಳೆದಂತೆ ಕುಟುಂಬದ ನೆನಪಿನಲ್ಲಿ ಕಣ್ಣೀರು ಹಾಕುತ್ತಾರೆ. ಅದೇ ಪರಿಸ್ಥಿತಿ ಧನುಷ್‌ ಅವರಿಗೆ ಎದುರಾಗಿದೆ.



ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 12) ಸ್ಪರ್ಧಿಗಳಿಗೆ ಅರ್ಹರಲ್ಲದ ಇಬ್ಬರು ವ್ಯಕ್ತಿಗಳಿಗೂ ಮಸಿ ಬಳೆಯುವ ಟಾಸ್ಕ್ ನೀಡಲಾಗಿತ್ತು. ಇನ್ನು ಈ ಟಾಸ್ಕ್‌ನಲ್ಲಿ ಎಲ್ಲ ಸ್ಪರ್ಧಿಗಳು ಖಡಕ್‌ ಆಗಿಯೇ ಕಾರಣವನ್ನು ನೀಡಿದ್ದರು. ಹೆಚ್ಚಾಗಿ ರಿಷಾ (Risha) ಅವರು ಮಸಿ ಬಳಿಸಿಕೊಂಡವರು. ಅದರಲ್ಲೂ ಅಶ್ವಿನಿ ಅವರು ಸಖತ್‌ ಖಾರವಾಗಿಯೇ ಉತ್ತರ ನೀಡಿದ್ದಾರೆ. ರಕ್ಷಿತಾ ಅವರನ್ನು ಆಯ್ಕೆ ಮಾಡಿ ಬೇಕಾ ಬಿಟ್ಟಿ ಮಾತನಾಡಿದ್ದಾರೆ ಅಶ್ವಿನಿ (Ashwini).

ಇದನ್ನೂ ಓದಿ: BBK 12: ಬಿಗ್ ಬಾಸ್ ಕನ್ನಡ 12 ಗ್ರ್ಯಾಂಡ್ ಓಪನಿಂಗ್ ಆರಂಭ: ಸ್ಟೈಲಿಶ್ ಲುಕ್ನಲ್ಲಿ ಕಿಚ್ಚ ಮಿಂಚಿಂಗ್

ರಕ್ಷಿತಾ ಮುಗ್ದೆ ಅಲ್ಲ

ಅಶ್ವಿನಿ ಮಾತನಾಡಿ, `ರಕ್ಷಿತಾ ಮುಗ್ದೆ ಅಲ್ಲ. ಡ್ರಾಮಾ ಕಂಪನಿಗೆ ಅಪ್ಪ ಅಲ್ಲ, ಮುತ್ತಾತ ಇವರು. ಅಷ್ಟು ಡ್ರಾಮಾ ಮಾಡಿಕೊಂಡು ಬಂದಿದ್ದಾರೆ. ಅಲ್ಲಿ ಹೋಗಿ ಅವರ ಕೈ ಹಿಡಿದುಕೊಳ್ಳುವುದು ಮಾಡ್ತಾರೆ. ನಾವು ಯಾರೂ 25ನೇ ವಯಸ್ಸಿಗೆ ಯಾರಿಗೂ ಅಂಟಿಕೊಂಡು ಮಕ್ಕಳ ಥರ ಆಡಲಿಲ್ಲ. ದಯವಿಟ್ಟು ಅದನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮಷ್ಟೇ ವಯಸ್ಸಿನವರು ಹೊರಗಡೆ ನೋಡುತ್ತಾರೆ.’ ಎಂದು ಅಶ್ವಿನಿ ಗೌಡ ಅವರು ಹೇಳಿದರು.

Yashaswi Devadiga

View all posts by this author