ಮುಂಬೈ: ಕ್ರಿಕೆಟಿಗ ಯುಜ್ವೇಂದ್ರ ಚಹಲ್ (Yuzvendra Chahal) ಹಾಗೂ ಧನಶ್ರೀ ವರ್ಮ ಮದುವೆಯಾದ ಕೆಲವೇ ವರ್ಷಗಳಲ್ಲಿ ಬೇರೆಯಾಗಿದ್ದಾರೆ. ಚಹಲ್ ಅವರ ಮಾಜಿ ಪತ್ನಿ, ನೃತ್ಯ ಸಂಯೋಜಕಿ ಧನಶ್ರೀ ವರ್ಮಾ (Yuzvendra Chahal) ಪ್ರಸ್ತುತ ಅಶ್ನೀರ್ ಗ್ರೋವರ್ ನಡೆಸಿಕೊಡುವ 'ರೈಸ್ ಅಂಡ್ ಫಾಲ್' ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ, ಅವರು ಇತ್ತೀಚೆಗೆ ತಮ್ಮ ಮಾಜಿ ಪತಿ ಯುಜ್ವೇಂದ್ರ ವಿರುದ್ಧ ಆಘಾತಕಾರಿ ಆರೋಪವನ್ನು ಮಾಡಿದ್ದಾರೆ. ಚಹಲ್ ತನಗೆ ಮೋಸ ಮಾಡಿದ್ದಾರೆ ಎಂದು ಧನಶ್ರೀ ಆರೋಪಿಸಿದ್ದಾರೆ. 2020 ರಲ್ಲಿ ವಿವಾಹವಾದ ಧನಶ್ರೀ ಮತ್ತು ಯುಜ್ವೇಂದ್ರ ಈ ವರ್ಷದ ಮಾರ್ಚ್ನಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದರು.
ಮದುವೆಯಾದ ಎರಡೇ ತಿಂಗಳಿನಲ್ಲಿ ಚಹಲ್ ತನಗೆ ಮೋಸ ಮಾಡಿದ್ದ. ಆತನಿಗೆ ಬೇರೆಯೊಬ್ಬಳ ಸಂಬಂಧವಿತ್ತು ಎಂದು ಧನಶ್ರೀ ಸ್ಪೋಟಕ ಸತ್ಯವನ್ನು ತಿಳಿಸಿದ್ದಾರೆ. ರೈಸ್ ಅಂಡ್ ಫಾಲ್ ನಲ್ಲಿ, ಕುಬ್ರಾ ಸೇಠ್ ಧನಶ್ರೀಗೆ ಯುಜ್ವೇಂದ್ರ ಜೊತೆಗಿನ ಸಂಬಂಧದ ಕುರಿತು ಪ್ರಶ್ನಿಸಿದ್ದಾರೆ. ನಿಮ್ಮ ಸಂಬಂಧದಲ್ಲಿ ಇದು ಮುಂದುವರಿಯಲು ಸಾಧ್ಯವಿಲ್ಲ ಮತ್ತು ಅದು ತಪ್ಪು ಎಂದು ನೀವು ಯಾವಾಗ ಅರಿತುಕೊಂಡಿರಿ? ಎಂದು ಅವರು ಪ್ರಶ್ನಿಸಿದ್ದಾರೆ. ಇದಕ್ಕೆ ಧನಶ್ರೀ, ಮೊದಲ ವರ್ಷದಲ್ಲೇ ಗೊತ್ತಾಗಿತ್ತು. ಎರಡನೇ ತಿಂಗಳಲ್ಲಿ ಆತ ಚೀಟ್ ಮಾಡುತ್ತಾ ಇರುವುದು ತನಗೆ ಗೊತ್ತಾಯಿತು ಎಂದಿದ್ದಾರೆ.
ಕಾರ್ಯಕ್ರಮದ ಆರಂಭದಲ್ಲಿ, ಧನಶ್ರೀ ಯುಜ್ವೇಂದ್ರ ಚಾಹಲ್ ಅವರೊಂದಿಗಿನ ತನ್ನ ಬೇರ್ಪಡುವಿಕೆಯನ್ನು ಮತ್ತೊಮ್ಮೆ ಪ್ರಸ್ತಾಪಿಸಿದರು. ಜೀವನಾಂಶದ ಬಗ್ಗೆ ವದಂತಿಗಳು ಹರಿದಾಡುತ್ತಿರುವುದು ಸುಳ್ಳು ಎಂದು ಹೇಳಿದ್ದಾರೆ. ನಾನು ಏನನ್ನೂ ಹೇಳುತ್ತಿಲ್ಲ ಎಂಬ ಕಾರಣಕ್ಕಾಗಿ, ನೀವು ಏನು ಬೇಕಾದರೂ ಹೇಳುತ್ತಲೇ ಇರುತ್ತೀರಿ. ನನ್ನ ಪೋಷಕರು ನನಗೆ ಕಾಳಜಿ ವಹಿಸುವ ಜನರಿಗೆ ಮಾತ್ರ ಸಮರ್ಥನೆ ನೀಡಲು ಕಲಿಸಿದ್ದಾರೆ. ನಿಮ್ಮನ್ನು ತಿಳಿದಿಲ್ಲದವರಿಗೆ ವಿವರಿಸಲು ಸಮಯ ವ್ಯರ್ಥ ಮಾಡುವುದು ಏಕೆ? ಎಂದು ಕೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: 'ಲಕ್ಷಾಂತರ ಭಾವನೆಗಳು, ಪದಗಳಿಲ್ಲ'; ಮಾಜಿ ಪತ್ನಿಗೆ ಟಕ್ಕರ್ ಕೊಟ್ಟ ಚಹಲ್
ಕೆಲವು ತಿಂಗಳ ಹಿಂದೆ ರಾಜ್ ಶಮಾನಿ ಅವರ ಪಾಡ್ಕ್ಯಾಸ್ಟ್ನಲ್ಲಿ ಕಾಣಿಸಿಕೊಂಡಾಗ, ಚಾಹಲ್ ವಿಚ್ಛೇದನ ಪ್ರಕ್ರಿಯೆಯ ಸಮಯದಲ್ಲಿ "ವಂಚಕ" ಎಂದು ಧನಶ್ರಿ ಕರೆದಿದ್ದಳು ಎಂದಿದ್ದರು. "ನನ್ನ ವಿಚ್ಛೇದನ ನಡೆದಾಗ, ಜನರು ನನ್ನನ್ನು ಮೋಸಗಾರ ಎಂದು ಆರೋಪಿಸಿದರು. ನಾನು ನನ್ನ ಜೀವನದಲ್ಲಿ ಎಂದಿಗೂ ಮೋಸ ಮಾಡಿಲ್ಲ. ನಾನು ಆ ರೀತಿಯ ವ್ಯಕ್ತಿಯಲ್ಲ. ನೀವು ನನಗಿಂತ ಹೆಚ್ಚು ನಿಷ್ಠಾವಂತ ವ್ಯಕ್ತಿಯನ್ನು ಕಾಣಲು ಸಾಧ್ಯವಿಲ್ಲ. ನಾನು ಯಾವಾಗಲೂ ನನ್ನ ಆತ್ಮೀಯರಿಗಾಗಿ ನನ್ನ ಹೃದಯದಿಂದ ಯೋಚಿಸುತ್ತೇನೆ. ನಾನು ಬೇಡುವುದಿಲ್ಲ, ನಾನು ಯಾವಾಗಲೂ ಕೊಡುತ್ತೇನೆ. ಜನರಿಗೆ ಏನೂ ತಿಳಿದಿಲ್ಲದಿದ್ದಾಗ, ಆದರೆ ಅವರು ನನ್ನನ್ನು ದೂಷಿಸುತ್ತಲೇ ಇರುತ್ತಾರೆ, ಆದ್ದರಿಂದ ನೀವು [ಇಲ್ಲದಿದ್ದರೆ] ಯೋಚಿಸಲು ಪ್ರಾರಂಭಿಸುತ್ತೀರಿ" ಎಂದು ಚಾಹಲ್ ಹೇಳಿದ್ದರು.