ನಟಿ ಜಾನ್ವಿ ಕಪೂರ್ ತಮ್ಮ ಮುಂಬರುವ ತೆಲುಗು ಚಿತ್ರ ಪೆದ್ದಿ ಪ್ರಚಾರದಲ್ಲಿ (Peddi Movie) ನಿರತರಾಗಿದ್ದಾರೆ. ಸೋಮವಾರ ವಿಜಯವಾಡದಲ್ಲಿ ಪ್ರಚಾರ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ರಾಮ್ ಚರಣ್ (Ram Charan) , ನಿರ್ದೇಶಕ ಬುಚಿ ಬಾಬು ಸನಾ ಮತ್ತು ಜಾನ್ವಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ, ಅಭಿಮಾನಿಯೊಬ್ಬರು ಭದ್ರತೆಯನ್ನು ಉಲ್ಲಂಘಿಸಿ ಅವರನ್ನು ಭೇಟಿ ಮಾಡಲು ಧಾವಿಸಿದರು. ಅಭಿಮಾನಿಯೊಬ್ಬನ ನಡೆಯಿಂದಾಗಿ ಸಿನಿಮಾದ ನಟಿ ಜಾನ್ವಿ ಕಪೂರ್ (Janhvi Kapoor) ಅವರು ಗಾಬರಿ ಆಗಿದ್ದಾರೆ. ರಾಮ್ಚರಣ್ (Ram charan) ರೀತಿ ಹೋಲುವ ಅಭಿಮಾನಿಯೊಬ್ಬ ದಿಢೀರನೆ ನೆಚ್ಚಿನ ನಟನ ಕಡೆ ನುಗ್ಗಿದ್ದಾರೆ. ಪಕ್ಕದಲ್ಲಿ ಇದ್ದ ಜಾನ್ವಿ ಒಂದು ಕ್ಷಣ ಶಾಕ್ ಆಗಿದ್ದಾರೆ.ಬಾಡಿಗಾರ್ಡ್ ಕೆವಿನ್ ಕುಂಟಾ ಏಕಾಏಕಿ ಆತನನ್ನು ಅನಾಯಾಸವಾಗಿ ಎತ್ತಿಕೊಂಡು ಪಕ್ಕಕ್ಕೆ ಹೋಗಿರುವುದನ್ನು ನೋಡಬಹುದು.
ವೀಡಿಯೋ ವೈರಲ್
ವೀಡಿಯೊದಲ್ಲಿ, ರಾಮ್ ಚರಣ್ನಂತೆ ಕಾಣುವ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಟನ ಕಡೆಗೆ ಓಡುತ್ತಿರುವುದು ಕಂಡುಬಂದಿದೆ. ಅಭಿಮಾನಿ ನಟನಂತೆಯೇ ಅದೇ ಕೇಶವಿನ್ಯಾಸವನ್ನು ಹೊಂದಿದ್ದರು.
ಇದನ್ನೂ ಓದಿ: Ravi Mohan: ಹೇಳಿದ್ದೇ ಒಂದು, ಮಾಡಿದ್ದೇ ಇನ್ನೊಂದು! ಉಲ್ಟಾ ಹೊಡೆದ ನಟ ಜಯಂ ರವಿ
ನಡುವೆ ಬಂದ ಬಾಡಿಗಾರ್ಡ್ ಕೆವಿನ್ ಕುಂಟಾ ಏಕಾಏಕಿ ಆತನನ್ನು ಅನಾಯಾಸವಾಗಿ ಎತ್ತಿಕೊಂಡು ಪಕ್ಕಕ್ಕೆ ಹೋಗಿರುವುದನ್ನು ನೋಡಬಹುದು. ಬಳಿಕ ರಾಮ್ಚರಣ್ ಆ ಅಭಿಮಾನಿಗಳನ್ನು ಕರೆದುಕೊಂಡು ಬರಲು ಹೇಳಿದ್ದಾರೆ. ಆತ ಬಂದು ನೆಚ್ಚಿನ ನಟನ ಜೊತೆ ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾನೆ. ಸದ್ಯ ವೀಡಿಯೋ ವೈರಲ್ ಆಗ್ತಿದೆ.
ಕಾರ್ಯಕ್ರಮದ ಮತ್ತೊಂದು ವೀಡಿಯೊದಲ್ಲಿ ಅಭಿಮಾನಿಗೆ ರಾಮ್ ಚರಣ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿತ್ತು. ಅಭಿಮಾನಿ ನಟನಿಗೆ ಧನ್ಯವಾದ ಹೇಳಿ ಕಾಲಿಗೆ ಬಿದ್ದು ಧನ್ಯವಾದ ಹೇಳುತ್ತಿರುವುದು ಕಂಡುಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಬಳಕೆದಾರರು ಕೆವಿನ್ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದಕ್ಕಾಗಿ ಶ್ಲಾಘಿಸಿದ್ದಾರೆ.
ರಾಮ್ಚರಣ್ ನಟನೆಯ 'ಪೆದ್ದಿ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲು ಸಜ್ಜಾಗಿದೆ. ಕನ್ನಡ ಸೇರಿ 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಜಾನ್ವಿ ಕಪೂರ್ ನಾಯಕಿಯಾಗಿ ರಾಮ್ಚರಣ್ಗೆ ಸಾಥ್ ಕೊಟ್ಟಿದ್ದಾರೆ. ಆತನ ಗುರುವಿನ ಪಾತ್ರದಲ್ಲಿ ಶಿವಣ್ಣ ಮಿಂಚಿದ್ದಾರೆ. ಜಗಪತಿ ಬಾಬು ಹಾಗೂ ದಿವ್ಯೇಂದು ಕೂಡ ತಾರಾಗಣದಲ್ಲಿದ್ದಾರೆ.
ಬುಚ್ಚಿ ಬಾಬು ಸನಾ ನಿರ್ದೇಶನದ ಪೆಡ್ಡಿ ಚಿತ್ರವನ್ನು ವೃದ್ಧಿ ಸಿನಿಮಾಸ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಿಸಿದ್ದಾರೆ.
ಇದನ್ನೂ ಓದಿ: Amruthadhaare Serial: ಅಪ್ಪನಾಗಿ ಸೋತೆ ಎಂದು ಭಾವುಕನಾದ ಗೌತಮ್; ಮತ್ತೆ ಜೆಡಿ ಅಟ್ಟಹಾಸ ಶುರು!
ಐವಿವೈ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಇಶಾನ್ ಸಕ್ಸೇನಾ ಸಹ-ನಿರ್ಮಾಣ ಮಾಡಿದ್ದಾರೆ ಮತ್ತು ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಪ್ರಸ್ತುತಪಡಿಸಿದ್ದಾರೆ. ಈ ಚಿತ್ರ ಜೂನ್ 4 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.