ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Khushbu Sundar: ತ್ರಿಶಾ ಅತ್ಯಂತ ಸೌಮ್ಯ ಸ್ವಭಾವದವರು; ನಟಿಯ ಬೆಂಬಲಕ್ಕೆ ನಿಂತ ಖುಷ್ಬೂ ಸುಂದರ್

Vijay and Trisha Krishnan: ನಟ ಮತ್ತು ಟಿವಿಕೆ ಮುಖ್ಯಸ್ಥ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸಿದಾಗ ಇನ್ನಷ್ಟು ವದಂತಿಗಳು ಹೆಚ್ಚಾಯ್ತು. ತಮಿಳುನಾಡು ಚುನಾವಣೆ ಅನೌನ್ಸ್ ಆದ ಬೆನ್ನಲ್ಲೇ ವಿಜಯ್‌ಗೆ ಇದೆಲ್ಲ ಬೇಡವಾಗಿತ್ತು ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ತ್ರಿಶಾರನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಈಗ, ನಟಿ-ರಾಜಕಾರಣಿ ಖುಷ್ಬು ಸುಂದರ್ ನಟನ ವೈಯಕ್ತಿಕ ಜೀವನದ ಬಗ್ಗೆ ಹಾಗೂ ತ್ರಿಶಾ ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ ತ್ರಿಶಾ ಬಗ್ಗೆ ಆಗುತ್ತಿರೋ ಚರ್ಚೆ, ಹರಡುತ್ತಿರೋ ವದಂತಿಗಳನ್ನು ಗಮನಿಸಿರೋ ನಟಿ ಖುಷ್ಬೂ ಸಂದರ್ಶನವೊಂದರಲ್ಲಿ ತ್ರಿಶಾ ಸಪೋರ್ಟ್‌ಗೆ ಬಂದಿದ್ದಾರೆ.

ಖುಷ್ಬೂ ಸುಂದರ್‌

ನಟ ಮತ್ತು ಟಿವಿಕೆ ಮುಖ್ಯಸ್ಥ ವಿಜಯ್ (Vijay and Trisha Krishnan) ಮತ್ತು ನಟಿ ತ್ರಿಶಾ ಕೃಷ್ಣನ್ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸಿದಾಗ ಇನ್ನಷ್ಟು ವದಂತಿಗಳು ಹೆಚ್ಚಾಯ್ತು. ತಮಿಳುನಾಡು ಚುನಾವಣೆ ಅನೌನ್ಸ್ ಆದ ಬೆನ್ನಲ್ಲೇ ವಿಜಯ್‌ಗೆ ಇದೆಲ್ಲ ಬೇಡವಾಗಿತ್ತು ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ತ್ರಿಶಾರನ್ನು (Trisha) ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಈಗ, ನಟಿ-ರಾಜಕಾರಣಿ ಖುಷ್ಬು ಸುಂದರ್ (Khushbu Sundar) ನಟನ ವೈಯಕ್ತಿಕ ಜೀವನದ ಬಗ್ಗೆ ಹಾಗೂ ತ್ರಿಶಾ ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ ತ್ರಿಶಾ ಬಗ್ಗೆ ಆಗುತ್ತಿರೋ ಚರ್ಚೆ, ಹರಡುತ್ತಿರೋ ವದಂತಿಗಳನ್ನು ಗಮನಿಸಿರೋ ನಟಿ ಖುಷ್ಬೂ ಸಂದರ್ಶನವೊಂದರಲ್ಲಿ ತ್ರಿಶಾ ಸಪೋರ್ಟ್‌ಗೆ ಬಂದಿದ್ದಾರೆ. ಬಹಿರಂಗವಾಗಿ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಖುಷ್ಬು ಹೇಳಿದ್ದೇನು?

ಸಂದರ್ಶನವೊಂದರಲ್ಲಿ ನಟಿ ಮಾತನಾಡಿ "ದುರದೃಷ್ಟವಶಾತ್, ನೀವು ಸೀನಿದರೂ ಸಹ, ಅದನ್ನು ಬೇರೆಯವರ ಮೇಲೆ ದೂಷಿಸಲು ಬಯಸುವ ಕಾಲದಲ್ಲಿ ನಾವಿದ್ದೇವೆ. ಅವರಿಬ್ಬರ ಬಗ್ಗೆ ನನಗೆ ತಿಳಿದಿರುವಂತೆ, ಟ್ರ್ಯಾಶ್ [ತ್ರಿಶಾ] ನನಗೆ ತುಂಬಾ ಹತ್ತಿರವಾಗಿದ್ದರು, ಅವರು ನಾನು ಭೇಟಿಯಾದ ಅತ್ಯಂತ ಘನತೆವೆತ್ತ ಮಹಿಳೆಯರಲ್ಲಿ ಒಬ್ಬರು ಮತ್ತು ಅತ್ಯಂತ ಸೌಮ್ಯ ಸ್ವಭಾವದವರು."

ಇದನ್ನೂ ಓದಿ: Puneeth Birthday: ಸಹಾಯ ಮಾಡಿದ ಮೇಲೆ ಇದೊಂದು ಕಂಡಿಷನ್‌ ಹಾಕುತ್ತಿದ್ರಂತೆ ಪುನೀತ್ ! ಏನದು?

ಬೇರೆಯವರ ಬಗ್ಗೆ ಕಾಮೆಂಟ್ ಮಾಡುವುದರಲ್ಲಿ ಆನಂದಿಸುತ್ತಾರೆ

"ಎಲ್ಲೆಡೆ ಫಾಲೋ ಮಾಡುವ ಪ್ಯಾಪ್‌ಗಳ ಬಗ್ಗೆ ನಾನು ಕಾಮೆಂಟ್ ಮಾಡಲು ಬಯಸುವುದಿಲ್ಲ. ಇದು ನಾವು ಮುಂಬೈನಲ್ಲಿ ನೋಡಿರುವ ರೀತಿಯ ವ್ಯವಸ್ಥೆ, ಇಲ್ಲಿ ಅಲ್ಲ. ದುರದೃಷ್ಟವಶಾತ್, ಇದು ಇಲ್ಲಿಂದ ಪ್ರಾರಂಭವಾಗುತ್ತಿದೆ. ಮತ್ತು ಕುಳಿತು ಕಾಮೆಂಟ್ ಮಾಡುವವರು ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ನೋಡುವ ಬದಲು ಯಾರೊಬ್ಬರ ಜೀವನವನ್ನು ನೋಡುವುದರಲ್ಲಿ ಸಂತೋಷಪಡುವ ಜನರು ಇದ್ದಾರೆ.

ವೈರಲ್‌ ವಿಡಿಯೋ



ಅವರು ಬೇರೆಯವರ ಬಗ್ಗೆ ಕಾಮೆಂಟ್ ಮಾಡುವುದರಲ್ಲಿ ಆನಂದಿಸುತ್ತಾರೆ. ಬೇರೆಯವರ ದುಃಖವನ್ನು ಆನಂದ ಪಡೆಯುತ್ತಾರೆ ಇಂಟರ್ನೆಟ್‌ನಲ್ಲಿ ಕುಳಿತು ಬೇರೆಯವರ ಬಗ್ಗೆ ಮಾತನಾಡುವ 99.9% ಜನರು ತಮ್ಮ ಸ್ವಂತ ಜೀವನಕ್ಕಿಂತ ಇನ್ನೊಬ್ಬರ ಬದುಕಿನ ಬಗ್ಗೆ ಚರ್ಚೆ ಮಾಡುವುದಕ್ಕೆ ಇಷ್ಟ ಪಡುತ್ತಾರೆ. ಅಂತಹವರಿಗೆ ಉತ್ತರ ಕೊಡುವ ಅಗತ್ಯವಿಲ್ಲ. ಅದಕ್ಕಾಗಿ ಸಮಯ ವ್ಯರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ," ಎಂದು ಖುಷ್ಬೂ ತ್ರಿಷಾಗೆ ಬೆಂಬಲ ಸೂಚಿಸಿದ್ದಾರೆ.

ವಿಚ್ಛೇದನಕ್ಕೆ ಅರ್ಜಿ

ನಟ ವಿಜಯ್ ಪತ್ನಿ ಸಂಗೀತಾ ಪತಿಯ ಅಕ್ರಮ ಸಂಬಂಧ ಆರೋಪಿಸಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲಿಂದ ವಿಜಯ್ ಜೊತೆ ತ್ರಿಶಾ ಹೆಸರು ತಳುಕು ಹಾಕಿಕೊಂಡಿದೆ. ಇದರ ಜೊತೆಗೆ ಎಜಿಎಸ್ ನಿರ್ಮಾಪಕರ ಮದುವೆಯಲ್ಲಿ ವಿಜಯ್-ತ್ರಿಶಾ ಒಟ್ಟಿಗೆ ಕಾಣಿಸಿಕೊಂಡಿದ್ದು ಉರಿಯುವ ತುಪ್ಪಕ್ಕೆ ಬೆಂಕಿ ಸುರಿದಂತೆ ಆಗಿತ್ತು.

ವಿಚ್ಛೇದನ ಅರ್ಜಿಯ ಜೊತೆಗೆ, ಪ್ರಕರಣವು ಅಂತಿಮ ಇತ್ಯರ್ಥವಾಗುವವರೆಗೆ ಚೆನ್ನೈನ ಕ್ಯಾಸುವಾರಿನಾ ಡ್ರೈವ್‌ನಲ್ಲಿರುವ ದಂಪತಿಗಳ ವೈವಾಹಿಕ ಮನೆಯಲ್ಲಿ ವಾಸಿಸಲು ಅವಕಾಶ ನೀಡುವಂತೆ ಸಂಗೀತಾ ಮಧ್ಯಂತರ ಆದೇಶವನ್ನು ಕೋರಿದ್ದಾರೆ.

ಇದನ್ನೂ ಓದಿ: Puneeth Rajkumar Birthday: ಇಂದು ಪುನೀತ್‌ ರಾಜ್‌ಕುಮಾರ್‌ ಜನ್ಮದಿನ; ಅಪ್ಪು ಪ್ರಯಾಣವೇ ಸ್ಫೂರ್ತಿದಾಯಕ

ಸಂಗೀತಾ ಮತ್ತು ವಿಜಯ್ ಆಗಸ್ಟ್ 1999 ರಲ್ಲಿ ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ - ಜೇಸನ್ ಸಂಜಯ್ ಮತ್ತು ದಿವ್ಯಾ ಶಶಾ. ಅವರು ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ವಿವಾಹವಾದರು.

Yashaswi Devadiga

View all posts by this author