ಮಾರ್ಚ್ 19 ರಂದು ವಿಶ್ವಾದ್ಯಂತ ಬಿಡುಗಡೆಯಾದ ಚಲನಚಿತ್ರ ನಿರ್ಮಾಪಕ ಆದಿತ್ಯ ಧರ್ ಮತ್ತು ರಣವೀರ್ ಸಿಂಗ್ (Ranveer Singh) ಅವರ ಧುರಂಧರ್: ದಿ ರಿವೆಂಜ್ (Dhurandhar The Revenge) ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಬಿರುಗಾಳಿ ಎಬ್ಬಿಸಿದ್ದು, ಪ್ರಪಂಚದಾದ್ಯಂತದ ಚಿತ್ರಮಂದಿರಗಳಿಗೆ ಅಪಾರ ಜನರ ಮನಸ್ಸನ್ನು ಸೆಳೆದಿದೆ. ಅಭಿಮಾನಿಗಳು ಶಿಳ್ಳೆಗಳು, ಹರ್ಷೋದ್ಗಾರಗಳು ಮತ್ತು ತುಂಬಿದ ಪ್ರದರ್ಶನಗಳೊಂದಿಗೆ ಚಿತ್ರವನ್ನು ಆಚರಿಸುತ್ತಿದ್ದರೆ, ಪ್ರದರ್ಶನದ ವೇಳೆ ಪ್ರೇಕ್ಷಕರು ಅಕ್ಷರಶಃ ರೊಚ್ಚಿಗೆದ್ದು ಚಿತ್ರಮಂದಿರದ (Theatre) ಪರದೆಯನ್ನೇ ಹರಿದು ಹಾಕಿರುವ ಆಘಾತಕಾರಿ ಘಟನೆ ಒಂದು ನಡೆದಿದೆ.
ಇದನ್ನೂ ಓದಿ: Megha Shenoy: ‘ಅಮೃತಧಾರೆ’ಯಿಂದ ಹೊರ ಬಂದ್ರಾ ಮೇಘಾ ಶೆಣೈ? ಬಿಗ್ ಅಪ್ಡೇಟ್ ಕೊಟ್ಟೇ ಬಿಟ್ರು ನಟಿ
ವಿದೇಶದಲ್ಲೂ ಬಿಡುಗಡೆ
‘ಧುರಂಧರ್ 2’ ಸಿನಿಮಾ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಬಿಡುಗಡೆ ಆಗಿದೆ. ಕೆನಡಾನಲ್ಲಿ ಸಹ ‘ಧುರಂಧರ್ 2’ ಸಿನಿಮಾ ರಿಲೀಸ್ ಆಗಿದೆ. ಕೆನಡಾದ ಒಂದು ಚಿತ್ರಮಂದಿರದಲ್ಲಿ ಸಿನಿಮಾದ ಪ್ರದರ್ಶನದ ವೇಳೆ ಪ್ರೇಕ್ಷಕರು ಅಕ್ಷರಶಃ ರೊಚ್ಚಿಗೆದ್ದು ಚಿತ್ರಮಂದಿರದ ಪರದೆಯನ್ನೇ ಹರಿದು ಹಾಕಿರುವ ಆಘಾತಕಾರಿ ಘಟನೆ ನಡೆದಿದೆ. ಸಿನಿಮಾ ಪ್ರದರ್ಶನವಾಗುತ್ತಿದ್ದ ಪರದೆಯನ್ನೇ ಹರಿದ ಕಾರಣ ಚಿತ್ರ ಪ್ರದರ್ಶನವನ್ನು ನಿಲ್ಲಿಸಲಾಗಿದೆ. ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಪೊಲೀಸರು ಚಿತ್ರಮಂದಿರಕ್ಕೆ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ., ಘಟನೆಗೆ ಕಾರಣವೇನೆಂದು ಹಲವರು ಊಹಿಸಿದ್ದಾರೆ.
ಕೆನಡಾದ ಅನೇಕ ವೀಕ್ಷಕರು ತಮ್ಮ ಪ್ರದರ್ಶನದ ಸಮಯದಲ್ಲಿ ಇದೇ ರೀತಿಯ ಅನುಭವಗಳನ್ನು ವರದಿ ಮಾಡಿದ್ದಾರೆ, ಪರದೆಗಳು ಹಾನಿಗೊಳಗಾಗಿವೆ ಎಂದು ಆರೋಪಿಸಿದ್ದಾರೆ.
ಭಾರತೀಯ ಮೂಲದ ವ್ಯಕ್ತಿ ವಶಕ್ಕೆ
ವರದಿಗಳ ಪ್ರಕಾರ, ತಾಂತ್ರಿಕ ಕಾರಣಗಳಿಂದಾಗಿ ಸಿನಿಮಾ ಪ್ರದರ್ಶನದಲ್ಲಿ ಪದೇ ಪದೇ ಅಡಚಣೆ ಉಂಟಾದ್ದರಿಂದ ಪ್ರೇಕ್ಷಕರು ತಾಳ್ಮೆ ಕಳೆದುಕೊಂಡರು. ಆರಂಭದಲ್ಲಿ ಕಿರುಚಾಟಕ್ಕೆ ಸೀಮಿತವಾಗಿದ್ದ ಪ್ರತಿಭಟನೆ, ಕ್ರಮೇಣ ಹಿಂಸಾಚಾರಕ್ಕೆ ತಿರುಗಿತು. ಕೆಲವು ಕಿಡಿಗೇಡಿ ಪ್ರೇಕ್ಷಕರು ಚಿತ್ರಮಂದಿರದ ಒಳಗಿದ್ದ ಆಸನಗಳನ್ನು ಕಿತ್ತು ಹಾಕಿದರು. ಕೆಲವು ಭಾರತೀಯ ಮೂಲದ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: AMB Cinemas : ಸಿನಿಪ್ರೇಮಿಗಳಿಗೆ ಗುಡ್ ನ್ಯೂಸ್, ಎಎಂಬಿ ಸಿನಿಮಾಸ್ ಆಫರ್! ಮಾರ್ಚ್ 26ರವರೆಗೆ ಅನ್ವಯ
ಈ ಚಿತ್ರದಲ್ಲಿ ಐಎಸ್ಐ ಮೇಜರ್ ಇಕ್ಬಾಲ್ ಪಾತ್ರದಲ್ಲಿ ಅರ್ಜುನ್ ರಾಂಪಾಲ್, ಅಜಯ್ ಸನ್ಯಾಲ್ ಪಾತ್ರದಲ್ಲಿ ಆರ್. ಮಾಧವನ್, ಎಸ್ಪಿ ಚೌಧರಿ ಪಾತ್ರದಲ್ಲಿ ಸಂಜಯ್ ದತ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಇಲ್ಲಿಯವರೆಗೆ ದೇಶೀಯವಾಗಿ ₹ 278 ಕೋಟಿ ಮತ್ತು ವಿಶ್ವಾದ್ಯಂತ ₹ 300 ಕೋಟಿಗೂ ಹೆಚ್ಚು ಸಂಗ್ರಹಿಸಿದೆ.