ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ravi Mohan: ರವಿ ಮೋಹನ್‌ಗೆ ಖುಷ್ಬೂ ಖಡಕ್ ತಿರುಗೇಟು! ಟ್ವೀಟ್‌ನಲ್ಲಿ ಏನಿದೆ?

Ravi Mohan: ಪತ್ರಿಕಾಗೋಷ್ಠಿಯಲ್ಲಿ, ಅವರು ತಮ್ಮ ವೈವಾಹಿಕ ಜೀವನದಲ್ಲಿ ಭಾವನಾತ್ಮಕ ಯಾತನೆ ಮತ್ತು ದೀರ್ಘಕಾಲದ ಸಮಸ್ಯೆಗಳ ಬಗ್ಗೆ ಹಲವಾರು ಆರೋಪಗಳನ್ನು ಮಾಡಿದರು. ಒಬ್ಬಳು ನಟಿ ಇದ್ದಾಳೆ ಅವಳಿಂದನೇ ನನ್ನ ಕುಟುಂಬ ಛಿದ್ರ ಛಿದ್ರವಾಯ್ತು ಎಂದು ಕಿಡಿ ಕಾರಿದರು. ಜಯಂ ರವಿ ಆಡಿದ ಈ ಮಾತುಗಳನ್ನು ಕೇಳಿ ಹಲವರು ಆ 'ಇಡ್ಲಿ ನಟಿ' ಬೇರೆ ಯಾರು ಅಲ್ಲ ಬದಲಿಗೆ ಖುಷ್ಬೂ (Kushboo Sundar) ಎನ್ನುವ ತೀರ್ಮಾನಕ್ಕೆ ಬಂದರು. ಜಯಂ ರವಿ ಆಡಿದ ಇಡ್ಲಿ ಮಾತಿಗೆ ಖುಷ್ಬೂ ಈಗ ತಿರುಗೇಟು ಕೊಟ್ಟಿದ್ದಾರೆ.

ರವಿ ಮೋಹನ್‌

ನಟ ರವಿ ಮೋಹನ್ (Ravi Mohan) ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಆರತಿ ರವಿ ಅವರೊಂದಿಗಿನ ವಿವಾಹಕ್ಕೆ ಸಂಬಂಧಿಸಿದ ವೈಯಕ್ತಿಕ ತೊಂದರೆಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ ನಂತರ ಮತ್ತೊಮ್ಮೆ ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ, ಅವರು ತಮ್ಮ ವೈವಾಹಿಕ ಜೀವನದಲ್ಲಿ ಭಾವನಾತ್ಮಕ ಯಾತನೆ ಮತ್ತು ದೀರ್ಘಕಾಲದ ಸಮಸ್ಯೆಗಳ ಬಗ್ಗೆ ಹಲವಾರು ಆರೋಪಗಳನ್ನು ಮಾಡಿದರು. ಒಬ್ಬಳು ನಟಿ ಇದ್ದಾಳೆ ಅವಳಿಂದನೇ ನನ್ನ ಕುಟುಂಬ ಛಿದ್ರ ಛಿದ್ರವಾಯ್ತು ಎಂದು ಕಿಡಿ ಕಾರಿದರು. ಜಯಂ ರವಿ (Jayam Ravi) ಆಡಿದ ಈ ಮಾತುಗಳನ್ನು ಕೇಳಿ ಹಲವರು ಆ 'ಇಡ್ಲಿ ನಟಿ' ಬೇರೆ ಯಾರು ಅಲ್ಲ ಬದಲಿಗೆ ಖುಷ್ಬೂ (Kushboo Sundar) ಎನ್ನುವ ತೀರ್ಮಾನಕ್ಕೆ ಬಂದರು. ಜಯಂ ರವಿ ಆಡಿದ ಇಡ್ಲಿ ಮಾತಿಗೆ ಖುಷ್ಬೂ ಈಗ ತಿರುಗೇಟು ಕೊಟ್ಟಿದ್ದಾರೆ.

ಜಯಂ ರವಿ ಮಾತನಾಡಿ "ಆ ನಟಿ ನನ್ನ ಕುಟುಂಬವನ್ನು ಹಾಳುಮಾಡಿದರು. ಅವರಿಗೆ ನನ್ನ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ" ಎಂದು ಹೇಳಿದರು. ನನ್ನ ಬಗ್ಗೆ ಮಾತಾಡೋಕೆ ನಿನಗೆ ಯಾವ ಯೋಗ್ಯತೆ ಇದೆ..? ಇಂಥಾ ಮನುಷ್ಯರು ಇರ್ತಾರಾ..? ಎಂದು ಪ್ರಶ್ನೆ ಮಾಡಿದ್ದರು. ನನಗಿಂತ ಚೆನ್ನಾಗಿ ಆಕ್ಟಿಂಗ್ ಮಾಡ್ತೀಯಾ..? ಮಾಡು, ಬೇಕಿದ್ದರೆ ನಾನೇ ನಿನ್ನ ಕಾಲಿಗೆ ಬೀಳ್ತೀನಿ. ಅವಾರ್ಡ್ ಬೇಕಾ..? ತಗೋ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳದ್ದರು.

ಇದನ್ನೂ ಓದಿ: Ravi Mohan: ರವಿ ಮೋಹನ್ ವಿವಾದ; ಮಗಳನ್ನು ಸಮರ್ಥಿಸಿಕೊಂಡ ಸುಜಾತಾ ವಿಜಯಕುಮಾರ್

ಪರೋಕ್ಷವಾಗಿ ಖುಷ್ಬು ಸುಂದರ್‌ ಟಾಂಟ್‌!

ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಕಾಮೆಂಟ್ ಪರೋಕ್ಷವಾಗಿ ಖುಷ್ಬು ಸುಂದರ್ ಅವರನ್ನು ಗುರಿಯಾಗಿರಿಸಿಕೊಂಡಿದೆ ಎಂದು ಊಹಿಸಿದ್ದಾರೆ.ಖುಷ್ಬು ಸುಂದರ್ ಈ ಹಿಂದೆ ಸಾರ್ವಜನಿಕ ಚರ್ಚೆಗಳಲ್ಲಿ ಆರತಿ ರವಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯಿಸುತ್ತಾ, ಖುಷ್ಬು ಸುಂದರ್ ತಮ್ಮ ಅಧಿಕೃತ ಎಕ್ಸ್ ಖಾತೆಯ ಮೂಲಕ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ತಮ್ಮ ಹೆಸರಿನ ಸುತ್ತಲಿನ ಆರೋಪಗಳು ಮತ್ತು ವ್ಯಾಖ್ಯಾನಗಳಿಗೆ ಅವರು ಪರೋಕ್ಷವಾಗಿ ಪ್ರತಿಕ್ರಿಯಿಸಿದಂತೆ ಕಂಡುಬಂದಿದೆ.



ತಮ್ಮ ಪೋಸ್ಟ್‌ನಲ್ಲಿ, "ಕೆಲವರು ತಮ್ಮ ಡಿಎನ್‌ಎಯನ್ನು ಸಾಬೀತುಪಡಿಸಲು ತುಂಬಾ ಕಷ್ಟಪಡುತ್ತಾರೆ. ನಾನು ಸರಿ ಎಂದು ಸಾಬೀತುಪಡಿಸಿದ್ದಕ್ಕಾಗಿ ಧನ್ಯವಾದಗಳು" ಎಂದು ಅವರು ಬರೆದಿದ್ದಾರೆ.ಖುಷ್ಬು ಸುಂದರ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆಖುಷ್ಬು ಅವರ ಪ್ರತಿಕ್ರಿಯೆ ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯಿತು, ಬಳಕೆದಾರರ ಪ್ರತಿಕ್ರಿಯೆಗಳು ಭಿನ್ನವಾಗಿವೆ.

ಇದನ್ನೂ ಓದಿ: Annayya Serial: ರಶ್ಮಿ ತಂಟೆಗೆ ಬಂದ ಪಿಂಕಿಗೆ ನಾರಿಮಣಿಯರಿಂದ ಸನ್ಮಾನ! ಸೀನನ ಕಥೆ ಏನಾಯ್ತು?

ಕೆಲವರು ನಡೆಯುತ್ತಿರುವ ವಿವಾದದಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಪ್ರಶ್ನಿಸಿದರೆ, ಇತರರು ಅವರ ಹೇಳಿಕೆಯ ಟೀಕಿಸಿದರು. ಖುಷ್ಬೂ ಅವರ ಈ ಪೋಸ್ಟ್ ಈಗ ಮತ್ತೊಂದು ಹಂತದ ಸೋಶಿಯಲ್ ಮೀಡಿಯಾ ಸಮರಕ್ಕೆ ನಾಂದಿ ಹಾಡಿದೆ. ಕೆಲಸದ ವಿಚಾರಕ್ಕೆ ಬಂದರೆ, ರವಿ ಮೋಹನ್ ಕೊನೆಯ ಬಾರಿಗೆ 'ಪರಾಶಕ್ತಿ' ಚಿತ್ರದಲ್ಲಿ ಕಾಣಿಸಿಕೊಂಡರು.

Yashaswi Devadiga

View all posts by this author