ರಾಯ್ಪುರ, ಏ. 6: ಛತ್ತೀಸ್ಗಢ ಹೈಕೋರ್ಟ್ (High Court) ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ (Former CM Ajit Jogi) ಅವರ ಪುತ್ರ ಅಮಿತ್ ಜೋಗಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಭಾರಿ ಸಂಚಲನ ಮೂಡಿಸಿದ್ದ ಜಗ್ಗಿ ಹತ್ಯೆ ಪ್ರಕರಣದಲ್ಲಿ ಈ ತೀರ್ಪು ಹೊರ ಬಿದ್ದಿದೆ. ಈ ಮೂಲಕ ಹೂಕೋರ್ಟ್ ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ, ರಾಜ್ಯದ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ವರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠವು, ಜನತಾ ಕಾಂಗ್ರೆಸ್ ಛತ್ತೀಸ್ಗಢ (ಜೆ) ಅಧ್ಯಕ್ಷ ಜೋಗಿ ಅವರಿಗೆ ವಿಚಾರಣಾ ನ್ಯಾಯಾಲಯವು 2007ರಲ್ಲಿ ನೀಡಿದ ಕ್ಲೀನ್ ಚಿಟ್ ಕಾನೂನುಬದ್ಧವಾಗಿ ಸಮಂಜಸವಲ್ಲ ಎಂದು ಮಹತ್ವದ ತೀರ್ಪು ನೀಡಿದೆ.
ತೀರ್ಪಿನ ಬಗ್ಗೆ ಸತೀಶ್ ಮ್ಯಾಗಿ ಅವರ ಪ್ರತಿಕ್ರಿಯೆ:
ಇತರ 28 ಆರೋಪಿಗಳು ಈಗಾಗಲೇ ಅದೇ ಸಾಕ್ಷ್ಯದ ಮೇಲೆ ಶಿಕ್ಷೆಗೊಳಗಾಗಿದ್ದರೂ, ಆಪಾದಿತ ಮುಖ್ಯ ಸಂಚುಕೋರನನ್ನು ಖುಲಾಸೆಗೊಳಿಸುವುದು ನ್ಯಾಯಸಮ್ಮತವಲ್ಲ ಎಂದು ಕೋರ್ಟ್ ಹೇಳಿದೆ. ಅಮಿತ್ ಜೋಗಿ ಅವರಿಗೆ ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಶಿಕ್ಷೆ ವಿಧಿಸಲಾಗಿದೆ. ಜತೆಗೆ 1,000 ರುಪಾಯಿ ದಂಡವೂ ಇದೆ.
ವಿವಾಹಿತ ಪುರುಷ ಸಮ್ಮತಿಯ ಲಿವ್-ಇನ್ ಸಂಬಂಧ ಹೊಂದಿದ್ದರೆ ಅಪರಾಧವಲ್ಲ: ಹೈಕೋರ್ಟ್ ತೀರ್ಪು
ಈ ಪ್ರಕರಣವು 2003ರ ಜೂನ್ 4ರಂದು ನಡೆದಿತ್ತು. ಅಂದು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (NCP) ನಾಯಕ ಮತ್ತು ವಿದ್ಯಾಚರಣ್ ಶುಕ್ಲಾ ಅವರ ಆಪ್ತ ಸಹಾಯಕ ರಾಮಾವತಾರ್ ಜಗ್ಗಿ ಅವರನ್ನು ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದು ದೊಡ್ಡ ರಾಜಕೀಯ ಕೋಲಾಹಲಕ್ಕೆ ಕಾರಣವಾಯಿತು. ಪೊಲೀಸರು 31 ವ್ಯಕ್ತಿಗಳನ್ನುಆರೋಪ ಪಟ್ಟಿಗೆ ಸೇರಿಸಿದ್ದರು. 2007ರಲ್ಲಿ ರಾಯ್ಪುರ ನ್ಯಾಯಾಲಯವು ಅವರಲ್ಲಿ 28 ಜನರನ್ನು ದೋಷಿಗಳೆಂದು ಘೋಷಿಸಿತು.
ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅಮಿತ್ ಜೋಗಿ ಅವರನ್ನು ಖುಲಾಸೆಗೊಳಿಸಿತು. ಜಗ್ಗಿ ಅವರ ಮಗ ಸತೀಶ್ ಜಗ್ಗಿ ಕಾನೂನು ಹೋರಾಟವನ್ನು ಮುಂದುವರಿಸಿದರು. ಅಂತಿಮವಾಗಿ ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಇದು ಹೈಕೋರ್ಟ್ ಪ್ರಕರಣವನ್ನು ಮತ್ತೆ ತೆರೆಯಲು ಕಾರಣವಾಯಿತು.
ಅಮಿತ್ ಜೋಗಿ ಜತೆಗೆ, ಯಾಹ್ಯಾ ಧೇಬರ್, ಅಭಯ್ ಗೋಯಲ್, ಫಿರೋಜ್ ಸಿದ್ದಿಕಿ, ವಿಕೆ ಪಾಂಡೆ ಮತ್ತು ಚಿಮನ್ ಸಿಂಗ್ ಸೇರಿ ಆರೋಪಿಗಳಿಗೆ ಶಿಕ್ಷೆಯನ್ನು ನ್ಯಾಯಾಲಯವು ಪುನರುಚ್ಚರಿಸಿತು. ಅಮಿತ್ ಜೋಗಿ ಅವರ ಕಾನೂನು ತಂಡವು ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ರಜೆ ಅರ್ಜಿ (SLP) ಸಲ್ಲಿಸಿದೆ.
ಕಳೆದ ವಾರ ಆರೋಪಿಗಳನ್ನು ದೋಷಿಗಳು ಎಂದು ಘೋಷಿಸಿ, ಛತ್ತೀಸ್ಗಢ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ವರ್ಮಾ ಅವರ ವಿಭಾಗೀಯ ಪೀಠ ಶರಣಾಗತಿಗೆ ನಿರ್ದೇಶನ ನೀಡಿತ್ತು.
AI ದುರುಪಯೋಗದ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಗೌತಮ್ ಗಂಭೀರ್!
ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿದ ಅಮಿತ್ ಜೋಗಿ, ನಾನು ಅನ್ಯಾಯವನ್ನು ಎದುರಿಸಿದ್ದೇನೆ. ಈ ಹಿಂದೆ ಖುಲಾಸೆಗೊಂಡು ಈಗ ನನ್ನ ಪರವಾಗಿ ಮಂಡಿಸಲು ಅವಕಾಶವಿಲ್ಲದೆ ಶಿಕ್ಷೆಗೊಳಗಾಗಿದ್ದೇನೆ ಎಂದು ಹೇಳಿದರು. ಸುಪ್ರೀಂ ಕೋರ್ಟ್ನಲ್ಲಿ ನ್ಯಾಯ ಸಿಗುವ ಬಗ್ಗೆ ಅವರು ಭರವಸೆ ವ್ಯಕ್ತಪಡಿಸಿದರು.
ಈ ಮಧ್ಯೆ ಸತೀಶ್ ಮ್ಯಾಗಿ ಹೈಕೋರ್ಟ್ ತೀರ್ಪನ್ನು ಸ್ವಾಗತಿಸುತ್ತಾ, ಸತ್ಯ ಗೆದ್ದಿದೆ ಎಂದು ಹೇಳಿದ್ದಾರೆ. ಇಂದು ಹನುಮ ಜಯಂತಿ. ನಾನು ಹನುಮಂತನಿಗೆ ನಮಸ್ಕರಿಸುತ್ತೇನೆ. ಅವರ ವಿಶೇಷ ಆಶೀರ್ವಾದ ನನಗೆ ಸಿಕ್ಕಿದೆ. ನನ್ನ ಕುಟುಂಬದ 20 ವರ್ಷಗಳ ತಪಸ್ಸು ಇಂದು ಫಲ ನೀಡಿದೆ. ನ್ಯಾಯಾಂಗದ ಮೇಲಿನ ನನ್ನ ನಂಬಿಕೆಗೆ ಇಂದು ಫಲ ಸಿಕ್ಕಿದೆ. ಸತ್ಯ ಜಯಗಳಿಸಿದೆ ಮತ್ತು ನನ್ನ ತಂದೆಗೆ ಕೊನೆಗೂ ನ್ಯಾಯ ಸಿಕ್ಕಿದೆ ಎಂದು ಅವರು ಹೇಳಿದರು.