ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

93,000 ಶಾಲೆಗಳನ್ನು ಮುಚ್ಚಿ ದೇಶ ವಿಶ್ವಗುರುವಾಗುವುದು ಹೇಗೆ? ಮೋದಿ ಸರ್ಕಾರದ ವಿರುದ್ಧ ಗಾಯಕಿ ಅನುರಾಧಾ ಪೌಡ್ವಾಲ್ ಗರಂ; ವಿಡಿಯೊ ವೈರಲ್

Anuradha Paudwal: ಭಾರತವನ್ನು ವಿಶ್ವ ಗುರು ಎಂದು ಹೇಳುವುದನ್ನು ನಿಲ್ಲಿಸಿ. ದೇಶಾದ್ಯಂತ 93,000 ಶಾಲೆಗಳು ಮುಚ್ಚಲ್ಪಟ್ಟಿವೆ. ಕೆಲವು ವರ್ಷಗಳ ಹಿಂದೆ ನಾನು ಕೂಡ ನಮ್ಮ ದೇಶ ವಿಶ್ವ ಗುರು ಆಗುತ್ತದೆ ಎಂದು ಬಲವಾಗಿ ನಂಬಿದೆ. ಆದರೆ ಈಗ ಅದು ಸುಳ್ಳಾಗುತ್ತಿದೆ ಎಂದು ಗಾಯಕಿ ಅನುರಾಧಾ ಪೌಡ್ವಾಲ್ ಹೇಳಿದರು. ಶುಭಂಕರ್ ಮಿಶ್ರಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಅವರು ಮಾತನಾಡಿದರು.

ಸಂಗ್ರಹ ಚಿತ್ರ

ನವದೆಹಲಿ: ದೇಶಾದ್ಯಂತ 93,000 ಶಾಲೆಗಳು ಮುಚ್ಚಲ್ಪಟ್ಟಿವೆ. ಭಾರತವನ್ನು ವಿಶ್ವಗುರು (Vishwaguru) ಎಂದು ಕರೆಯುವುದನ್ನು ನಿಲ್ಲಿಸಿ. ಎಲ್ಲರೂ ಭಾರತ ವಿಶ್ವ ಗುರು ಆಗುತ್ತದೆ ಎನ್ನುತ್ತಾರೆ. ಕೆಲವು ವರ್ಷಗಳ ಹಿಂದೆ ನಾನು ಕೂಡ ನಮ್ಮ ದೇಶ ವಿಶ್ವ ಗುರು ಆಗುತ್ತದೆ ಎಂದು ಬಲವಾಗಿ ನಂಬಿದ್ದೆ. ಆದರೆ ಈಗ ಅದು ಸುಳ್ಳಾಗುತ್ತಿದೆ ಎಂದು ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಾಯಕಿ (Padma Shri awardee singer) ಅನುರಾಧಾ ಪೌಡ್ವಾಲ್ (Anuradha Paudwal) ಹೇಳಿದರು. ಶುಭಂಕರ್ ಮಿಶ್ರಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ (Shubhankhar Mishra's podcast) ಇತ್ತೀಚೆಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮತ್ತು ಬಿಜೆಪಿ (BJP) ಸರ್ಕಾರವನ್ನು ಟೀಕಿಸಿದರು.

ದೇಶ ಈಗ ವಿಶ್ವ ಗುರುವಿನ ಕಲ್ಪನೆಗೆ ವಿರುದ್ಧವಾದ ದಿಕ್ಕಿನಲ್ಲಿ ಸಾಗುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಹೀಗಾದರೆ ನಾವು ವಿಶ್ವ ಗುರುಗಳಾಗುವುದು ಹೇಗೆ ಎಂದು ಪ್ರಶ್ನಿಸಿದ ಅವರು, ವಿಶ್ವಗುರುವಾಗಲು ನಾವು ವಿದ್ಯಾವಂತರಾಗಬೇಕು. ಆದರೆ ನಮ್ಮ ದೇಶದಲ್ಲಿ 93,000 ಶಾಲೆಗಳು ಮುಚ್ಚಲ್ಪಟ್ಟಿವೆ. ಹಾಗಾದರೆ ವಿಶ್ವಗುರುವಿನ ಮೂಲ ತತ್ತ್ವ ಏನು? ಕನಸುಗಳ ಮೇಲೆ ನಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ಏನಾದರೂ ಮಾಡಲೇಬೇಕು ಎಂದರು.

ಶುಭಂಕರ್ ಮಿಶ್ರಾ ಪಾಡ್‌ಕ್ಯಾಸ್ಟ್‌:



ಅವರು ರಾಮರಾಜ್ಯದ ಬಗ್ಗೆ ಮಾತನಾಡುತ್ತಾರೆ. ಆದರೆ ಇಲ್ಲಿ ದೇವಾಲಯವನ್ನೇ ಲೂಟಿ ಮಾಡಲಾಗಿದೆ. ನಾನೇನು ನಾವು ವಿಶ್ವ ಗುರು ಆಗುವುದರ ವಿರೋಧಿಯಲ್ಲ. ಆದರೆ ಅದಕ್ಕೆ ಸಂಬಂಧಿಸಿದ ನಿಯಮಗಳೇನು? ಅದನ್ನು ಅನುಸರಿಸುವುದು ಯಾವ ರೀತಿ ಎಂಬುದನ್ನು ಹೇಳಬೇಕು ಎಂದು ಕೇಳಿದರು.

E20 ಪೆಟ್ರೋಲ್ ಬಳಕೆಗೆ ಎನ್‌ಡಿಎ ಬೆಂಬಲಿಗರಲ್ಲೂ ಹಿಂದೇಟು: ಸಿ-ವೋಟರ್ ಸಮೀಕ್ಷೆಯಲ್ಲಿ ಬಹಿರಂಗ

ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ನಟ ಅನುಪಮ್ ಖೇರ್ ಕೂಡ ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಹೇಳಿಕೆ ನೀಡಿದ್ದರು. ಮೊಘಲರು ನಮ್ಮ ದೇವಾಲಯಗಳನ್ನು ಲೂಟಿ ಮಾಡಿದ್ದರು. ಅವರು ಬ್ರಾಹ್ಮಣರನ್ನು ಕೊಂದು, ಅವರ ಪವಿತ್ರ ದಾರಗಳನ್ನು ತೆಗೆದು ದರೋಡೆ ಮಾಡಿದ್ದರು ಎಂದಿದ್ದರು.

ಅವರ ಬಳಿಕ ಈಗ ಗಾಯಕಿ ಅನುರಾಧಾ ಪೌಡ್ವಾಲ್ ಈ ಕುರಿತು ಹೇಳಿಕೆ ನೀಡಿದ್ದಾರೆ. ಭಾರತದ ಅತ್ಯಂತ ಜನಪ್ರಿಯ ಗಾಯಕಿಯಾಗಿರುವ ಅನುರಾಧಾ ಪೌಡ್ವಾಲ್ ಸಿನಿಮಾ, ಭಕ್ತಿ ಗೀತೆ ಸಂಬಂಧಿಸಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. 1980 ಮತ್ತು 1990 ರ ದಶಕಗಳಲ್ಲಿ ಅವರು ಆಶಿಕಿ, ದಿಲ್ ಹೈ ಕಿ ಮಂತ ನಹಿನ್, ಸಡಕ್, ಬೇಟಾ ಮತ್ತು ಹೀರೋ ಮೊದಲಾದ ಚಿತ್ರಗಳ ಹಾಡಿಗೆ ಧ್ವನಿ ನೀಡಿದ್ದರು. 2017ರ ಪದ್ಮ ಪ್ರಶಸ್ತಿ ಸೇರಿದಂತೆ ಹಲವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳು, ಹಲವಾರು ರಾಜ್ಯ ಮಟ್ಟದ ಗೌರವಗಳು ಅವರಿಗೆ ಸಂದಿವೆ.

ʼಎಲ್ ನಿನೋ' ಪರಿಣಾಮ ಎದುರಿಸಲು ಕೇಂದ್ರ ಸಜ್ಜು; ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಪ್ರಲ್ಹಾದ್‌ ಜೋಶಿ

ಅನುರಾಧಾ ಪೌಡ್ವಾಲ್ ಅವರ ಪತಿ ಅರುಣ್ ಪೌಡ್ವಾಲ್ ಸಂಗೀತಗಾರರಾಗಿದ್ದು, 1991 ರಲ್ಲಿ ನಿಧನರಾದರು. ಅವರ ಮಗಳು ಕವಿತಾ ಪೌಡ್ವಾಲ್ ಕೂಡ ಪ್ರಸಿದ್ಧ ಗಾಯಕಿಯಾಗಿದ್ದು, ಮಗ ಆದಿತ್ಯ ಪೌಡ್ವಾಲ್ ಸಂಗೀತ ಸಂಯೋಜಕರಾಗಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author