ಲಖನೌ, ಫೆ.26: ತಂದೆಯನ್ನು ಗುಂಡಿಕ್ಕಿ ಕೊಂದು ನಂತರ ಅವರ ದೇಹವನ್ನು ಕತ್ತರಿಸಿ ವಿಕೃತಿ ಮೆರೆದಿದ್ದ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿತ್ತು. ಪುತ್ರನೇ ಈ ಕೃತ್ಯ ಎಸಗಿದ್ದ. ಪ್ರಕರಣ ಸಂಬಂಧಿಸಿದಂತೆ ಈ ತನಿಖೆಯಲ್ಲಿ ಕೆಲವು ವಿಚಾರಗಳು ಹೊರಬಿದ್ದಿವೆ. ಆರೋಪಿ ಪುತ್ರ ಅಕ್ಷತ್ ಪ್ರತಾಪ್ ಸಿಂಗ್ ತನ್ನ ತಂದೆಯನ್ನು ಕೊಂದು ದೇಹವನ್ನು ತುಂಡುಗಳಾಗಿ ಕತ್ತರಿಸಿದ ಕೆಲವು ಗಂಟೆಗಳ ಮೊದಲು, ಮದ್ಯದ ಪರವಾನಗಿ ನವೀಕರಣಕ್ಕಾಗಿ ಹಣ ಕದ್ದ ಬಗ್ಗೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ ಎಂದು ನೆರೆಹೊರೆಯವರು ಬಹಿರಂಗಪಡಿಸಿದ್ದಾರೆ (crime news).
ಫೆಬ್ರವರಿ 19ರ ರಾತ್ರಿ, ಮನ್ವೆಂದ್ರ ಸಿಂಗ್ ಮನೆಗೆ ಹಿಂತಿರುಗಿದಾಗ 50 ಲಕ್ಷ ರೂಪಾಯಿ ನಗದು ನಾಪತ್ತೆಯಾಗಿರುವುದು ಕಂಡುಬಂದಿದೆ. ಈ ಬಗ್ಗೆ ತನ್ನ ಆರೋಪಿ ಮಗನನ್ನು ವಿಚಾರಿಸಿದಾಗ, ಅಕ್ಷತ್ ಮದ್ಯ ಒಪ್ಪಂದಕ್ಕಾಗಿ ಹಣವನ್ನು ಕದ್ದಿರುವುದುಗೆ ತಿಳಿದುಬಂದಿದೆ. ಇದು ಶೀಘ್ರದಲ್ಲೇ ತೀವ್ರ ವಾಗ್ವಾದಕ್ಕೆ ತಿರುಗಿತು. ಈ ವೇಳೆ ಕೋಪಗೊಂಡ ಮನ್ವೇಂದ್ರ, ಅಕ್ಷತ್ಗೆ ಹೊಡೆದು ಅವನ ಮೇಲೆ ಬಂದೂಕಿನಿಂದ ಹೊಡೆದಿದ್ದಾರೆ.
ತಂದೆಯ ಏಟಿನಿಂದ ಕೋಪಗೊಂಡಿದ್ದ ಅಕ್ಷತ್, ಬೆಳಗ್ಗೆ 4 ಗಂಟೆ ಸುಮಾರಿಗೆ ತನ್ನ ತಂದೆಯ ಕೋಣೆಗೆ ಹೋಗಿದ್ದಾನೆ. ನಿದ್ದೆ ಮಾಡುತ್ತಿದ್ದ ತಂದೆಗೆ ಗುಂಡು ಹಾರಿಸಿದ್ದಾನೆ. ತಂದೆಯನ್ನು ಹತ್ಯೆ ಮಾಡಿದ ಬಳಿಕ ಅವನು ಶವವನ್ನು ಮನೆಯ ಮೂರನೇ ಮಹಡಿಯಿಂದ ನೆಲಮಹಡಿಯಲ್ಲಿರುವ ಖಾಲಿ ಕೋಣೆಗೆ ಸ್ಥಳಾಂತರಿಸಿದನು. ಅಲ್ಲಿ ಅವನು ದೇಹವನ್ನು ಛಿದ್ರಗೊಳಿಸಲು ಯಂತ್ರವನ್ನು ಬಳಸಿದನು.
Rowdy Sheeter murder case: ತಾಯಿಯ ಕಣ್ಣೆದುರೇ ರೌಡಿಶೀಟರ್ ಮಗನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ
ಮೂಲಗಳು ಹೇಳುವಂತೆ, ಕಾಲುಗಳನ್ನು ಕತ್ತರಿಸಿ, ಎರಡೂ ಕೈಗಳನ್ನು ಕತ್ತರಿಸಿ, ನಂತರ ತಂದೆಯ ಶಿರಚ್ಛೇದ ಮಾಡಿದನು. ನಂತರ ಅವನು ತನ್ನ ಮನೆಯಿಂದ ಸುಮಾರು 21 ಕಿಲೋಮೀಟರ್ ದೂರದಲ್ಲಿರುವ ಲಖನೌದ ಹೊರವಲಯದಲ್ಲಿರುವ ಸದ್ರೌನಾ ಬಳಿ ಕತ್ತರಿಸಿದ ಭಾಗಗಳನ್ನು ಎರಡು ದಿನಗಳಲ್ಲಿ ವಿಲೇವಾರಿ ಮಾಡಿದನು.
ಆರೋಪಿಯು ತನ್ನ ತಂದೆಯ ದೇಹವನ್ನು ನೀಲಿ ಬಣ್ಣದ ಡ್ರಮ್ನಲ್ಲಿ ಸ್ಲೀಪಿಂಗ್ ಬ್ಯಾಗ್ನಲ್ಲಿ ಸುತ್ತಿ ತನ್ನ ಕಾರಿನೊಳಗೆ ಇಟ್ಟಿದ್ದ. ಫೆಬ್ರವರಿ 22 ರಂದು ಅದನ್ನು ವಿಲೇವಾರಿ ಮಾಡಲು ಹೊರಡುವಾಗ, ಮದ್ಯದ ಅಂಗಡಿಯ ಅಕೌಂಟೆಟ್ ಅವನ ಮನೆಗೆ ಬಂದನು. ಹೀಗಾಗಿ ಶವವನ್ನು ವಿಲೇವಾರಿ ಮಾಡುವ ಆತನ ಯೋಜನೆ ರದ್ದಾಯಿತು.
ದುರ್ವಾಸನೆ ಬರದಂತೆ ಆರೋಪಿ ರೂಮ್ ಫ್ರೆಶ್ನರ್ ಅನ್ನು ಬಳಸಿದ್ದ ಎಂದು ತಿಳಿದುಬಂದಿದೆ. ಈ ಭೀಕರ ಅಪರಾಧವನ್ನು ಆರೋಪಿಯ ಸಹೋದರಿ ಕಣ್ಣಾರೆ ಕಂಡಿದ್ದಳು. ಆಕೆಯನ್ನು ಮೌನವಾಗಿರುವಂತೆ ಆತ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಪೊಲೀಸ್ ಠಾಣೆಗೆ ತೆರಳಿ ತನ್ನ ತಂದೆ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಾನೆ.
ತಂದೆಯಿಂದ ನಗದು, ಆಭರಣ ಕದ್ದಿದ್ದ ಆರೋಪಿ
ಕೊಲೆಗೆ ಕೆಲವು ದಿನಗಳ ಮೊದಲು, ಅಕ್ಷತ್ ಮನೆಯಿಂದ ಆಭರಣ ಮತ್ತು ಹಣವನ್ನು ಕದ್ದಿದ್ದ. ಅಲ್ಲದೆ ಈ ಕಳ್ಳತನವನ್ನು ಕೆಲಸದಾಕೆಯ ಮೇಲೆ ಹೊರಿಸಿದ್ದ. ಆರೋಪಿಯ ನೆರೆಹೊರೆಯವರ ಪ್ರಕಾರ, ಅವನು ತನ್ನ ಗೆಳತಿಗೆ ದುಬಾರಿ ಉಡುಗೊರೆಗಳನ್ನು ಖರೀದಿಸಲು ಮತ್ತು ದುಷ್ಕೃತ್ಯದಲ್ಲಿ ತೊಡಗಿಸಿಕೊಳ್ಳಲು ಅದನ್ನು ಕದ್ದಿದ್ದನು. ಅಕ್ಷತ್ನ ಪ್ರೇಮ ಸಂಬಂಧದ ಬಗ್ಗೆ ಅವನ ತಂದೆಗೆ ತಿಳಿದಿತ್ತು. ಅಷ್ಟೇ ಅಲ್ಲ, ಅವನು ಮಾದಕ ದ್ರವ್ಯಗಳ ವ್ಯಸನಿಯಾಗಿದ್ದ ಎಂದು ತಿಳಿದುಬಂದಿದೆ.