ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿಶ್ವದ ಯುದ್ಧಗಳನ್ನು ಕೊನೆಗಾಣಿಸುವ ಶಕ್ತಿ ಭಾರತಕ್ಕಿದೆ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ನಾಗಪುರದಲ್ಲಿ ಮಾತನಾಡಿದ ಮೋಹನ್ ಭಾಗವತ್ ಅವರು, ಇಸ್ರೇಲ್–ಇರಾನ್ ಸಂಘರ್ಷ ಸೇರಿದಂತೆ ಜಾಗತಿಕ ಉದ್ವಿಗ್ನತೆಯನ್ನು ಶಮನಗೊಳಿಸಲು ಭಾರತಕ್ಕೇ ವಿಶಿಷ್ಟ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ. ಧರ್ಮ, ಏಕತೆ ಮತ್ತು ಮಾನವೀಯ ಮೌಲ್ಯಗಳ ಮೂಲಕ ಜಗತ್ತಿಗೆ ಶಾಂತಿಯ ದಾರಿ ತೋರಿಸುವ ಹೊಣೆ ಭಾರತಕ್ಕಿದೆ ಎಂಬುದನ್ನು ಅವರು ಒತ್ತಿಹೇಳಿದರು.

ಮೋಹನ್ ಭಾಗವತ್

ಮುಂಬೈ: ನಾಗ್ಪುರ (Nagpur)ದಲ್ಲಿ ವಿಶ್ವ ಹಿಂದೂ ಪರಿಷತ್ತಿ (Vishwa Hindu Parishad)ನ ವಿದರ್ಭ (Vidarbha) ಪ್ರಾಂತ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಜಾಗತಿಕ ಸಂಘರ್ಷಗಳ ಕುರಿತು ಅತ್ಯಂತ ಮಹತ್ವದ ಮತ್ತು ಆಳವಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಅಮೆರಿಕ (US)-ಇಸ್ರೇಲ್ (Isreal) ಮತ್ತು ಇರಾನ್ (Iran) ನಡುವೆ ನಡೆಯುತ್ತಿರುವ ಯುದ್ಧವು ಜಾಗತಿಕ ತೈಲ ಪೂರೈಕೆಯ ಮೇಲೆ ಆತಂಕವನ್ನು ಸೃಷ್ಟಿಸಿರುವ ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ, ಈ ಸಂಘರ್ಷಗಳನ್ನು ತಣ್ಣಗಾಗಿಸುವ ಮತ್ತು ಜಗತ್ತಿಗೆ ಶಾಂತಿಯ ಮಾರ್ಗವನ್ನು ತೋರಿಸುವ ಸಾಮರ್ಥ್ಯ ಕೇವಲ ಭಾರತಕ್ಕೆ ಮಾತ್ರ ಇದೆ ಎಂದು ಅವರು ದೃಢವಾಗಿ ಪ್ರತಿಪಾದಿಸಿದರು.

ಇಂದು ಜಗತ್ತಿನ ವಿವಿಧ ಪ್ರಭಾವಿ ದೇಶಗಳಿಂದ ಕೇಳಿಬರುತ್ತಿರುವ ಧ್ವನಿಗಳ ಪ್ರಕಾರ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧವನ್ನು ಕೊನೆಗಾಣಿಸುವುದು ಭಾರತದ ಸಹಜ ಗುಣ ಮತ್ತು ಸಂಸ್ಕೃತಿಯಾಗಿದೆ. ಜಗತ್ತು ಇಂದು ಅಸ್ಥಿರತೆಯತ್ತ ಮತ್ತು ಅಧರ್ಮದತ್ತ ಸಾಗುತ್ತಿದ್ದು, ಅಂತಹ ಜಗತ್ತಿಗೆ 'ಧರ್ಮ'ದ ಭದ್ರ ಅಡಿಪಾಯವನ್ನು ನೀಡುವ ಮೂಲಕ ಜಾಗತಿಕ ಸಮತೋಲನವನ್ನು ಮರುಸ್ಥಾಪಿಸುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. "ಭಾರತದ ಜನರು ಸನಾತನವಾಗಿ ಮಾನವೀಯತೆಯ ಉನ್ನತ ನಿಯಮಗಳನ್ನು ಪಾಲಿಸುತ್ತಾರೆ, ಆದರೆ ಉಳಿದ ಜಗತ್ತು ಸ್ವಾರ್ಥದ ಕಾಡಿನ ನಿಯಮವನ್ನು ಅನುಸರಿಸುತ್ತಿದೆ. ಈ ಅಸ್ಥಿರ ಜಗತ್ತನ್ನು ಮತ್ತೆ ಸರಿದಾರಿಗೆ ತರುವುದು ನಮ್ಮ ಆದ್ಯ ಕರ್ತವ್ಯವಾಗಿದೆ" ಎಂದು ಅವರು ಮಾರ್ಮಿಕವಾಗಿ ತಿಳಿಸಿದರು.

Bengaluru's Second Airport: ಬೆಂಗಳೂರಿನ 2ನೇ ಏರ್‌ಪೋರ್ಟ್‌ಗೆ ರಾಜ್ಯ ಸರ್ಕಾರದಿಂದ ಟೆಂಡರ್ ಆಹ್ವಾನ

ಇತ್ತೀಚೆಗೆ ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಮತ್ತು ಯುಎಇಯ ಮಾಜಿ ರಾಯಭಾರಿ ಹುಸೇನ್ ಹಸನ್ ಮಿರ್ಜಾ ಅವರು ಕೂಡ ಭಾರತದ ಮಧ್ಯಸ್ಥಿಕೆಯ ಕುರಿತು ಇದೇ ರೀತಿಯ ಆಶಯವನ್ನು ವ್ಯಕ್ತಪಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಒಂದು ಫೋನ್ ಕರೆ ಇಸ್ರೇಲ್ ಮತ್ತು ಇರಾನ್ ನಡುವಿನ ದಶಕಗಳ ಸಂಘರ್ಷವನ್ನು ತಡೆಯಬಲ್ಲ ಶಕ್ತಿಯನ್ನು ಹೊಂದಿದೆ ಎಂದು ಮಿರ್ಜಾ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಸ್ವಾರ್ಥ ಹಿತಾಸಕ್ತಿ ಮತ್ತು ಇತರರ ಮೇಲೆ ಪ್ರಾಬಲ್ಯ ಸ್ಥಾಪಿಸುವ ದುರಾಸೆಯೇ ಜಗತ್ತಿನ ಎಲ್ಲಾ ದೊಡ್ಡ ಸಂಘರ್ಷಗಳಿಗೆ ಮೂಲ ಕಾರಣ ಎಂದು ಭಾಗವತ್ ಬೆಟ್ಟು ಮಾಡಿದರು. ಏಕತೆ, ಶಿಸ್ತು ಮತ್ತು ಧರ್ಮದ ಪಾಲನೆಯಿಂದ ಮಾತ್ರ ಈ ಭೂಮಿಯ ಮೇಲೆ ಶಾಶ್ವತ ಶಾಂತಿ ಸಾಧ್ಯ. "ಎಲ್ಲರೂ ಒಂದೇ ಮತ್ತು ಎಲ್ಲವೂ ಪರಸ್ಪರ ಸಂಬಂಧ ಹೊಂದಿವೆ" ಎಂಬ ಭಾರತದ ಪುರಾತನ ಬುದ್ಧಿವಂತಿಕೆಯು ಸಂಘರ್ಷದಿಂದ ಸಾಮರಸ್ಯದ ಕಡೆಗೆ ಜಗತ್ತನ್ನು ಮುನ್ನಡೆಸಲು ದಾರಿದೀಪವಾಗಿದೆ ಎಂದು ಅವರು ಕರೆ ನೀಡಿದರು.