ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IRCTC ಹಗರಣ; ಲಾಲು ಕುಟುಂಬದ ವಿರುದ್ಧ ದೋಷಾರೋಪ ಹೊರಿಸಿದ ದೆಹಲಿ ಕೋರ್ಟ್‌

ಐಆರ್‌ಸಿಟಿಸಿ ಹಗರಣ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಹಾಗೂ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ದೇವಿ ಮತ್ತು ಪುತ್ರ ತೇಜಸ್ವಿ ಯಾದವ್‌ಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯವು ಮೂವರ ವಿರುದ್ಧವೂ ಆರೋಪಗಳನ್ನು ರೂಪಿಸಲು ಆದೇಶಿಸಿದೆ. ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಐಆರ್‌ಸಿಟಿಸಿ ಹೋಟೆಲ್ ಟೆಂಡರ್‌ಗೆ ಸಂಬಂಧಿಸಿದ ಅಕ್ರಮಗಳ ಆರೋಪ ಪ್ರಕರಣದಲ್ಲಿದೆ.

ಲಾಲು ಕುಟುಂಬ

ನವದೆಹಲಿ: ಆರ್‌ಜೆಡಿ (RJD) ಮುಖ್ಯಸ್ಥ ಹಾಗೂ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ಐಆರ್‌ಸಿಟಿಸಿ (IRCTC) ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಗಳನ್ನು ರೂಪಿಸಲು ದೆಹಲಿ ನ್ಯಾಯಾಲಯ ಗುರುವಾರ ಆದೇಶಿಸಿದೆ. ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಅವರ ಪತ್ನಿ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ Rabri Devi ಮತ್ತು ಪುತ್ರ Tejashwi Yadav ವಿರುದ್ಧವೂ ಆರೋಪಗಳನ್ನು ರೂಪಿಸಲು ನ್ಯಾಯಾಲಯ ಸೂಚಿಸಿದೆ.

ಮಾಜಿ ರೈಲ್ವೆ ಸಚಿವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಬಲವಾದ ಅನುಮಾನವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪ್ರಕರಣದಲ್ಲಿ ಲಾರಾ ಪ್ರಾಜೆಕ್ಟ್ಸ್, ಸರಳಾ ಗುಪ್ತಾ, ಪ್ರೇಮ್ ಚಂದ್ ಗುಪ್ತಾ, ಸುಜಾತಾ ಹೋಟೆಲ್ಸ್, ವಿನಯ್ ಕೊಚ್ಚರ್ ಮತ್ತು ವಿಜಯ್ ಕೊಚ್ಚರ್ ವಿರುದ್ಧವೂ ಆರೋಪ ನಿಗದಿಪಡಿಸಲಾಗಿದೆ.

ಇದೇ ವೇಳೆ ರಾಹುಲ್ ಯಾದವ್, ಗೌರವ್ ಗುಪ್ತಾ, ನಾಥ್ ಮಾಲ್ ಕಂಕರ್ನಿಯಾ, ವಿಜಯ್ ತ್ರಿಪಾಠಿ, ಡಿ.ಎನ್. ತುಲ್ಶ್ಯಾನ್, ರಾಜೀವ್ ರೆಲನ್ ಹಾಗೂ ಅಭಿಷೇಕ್ ಫೈನಾನ್ಸ್ ಅವರನ್ನು ನ್ಯಾಯಾಲಯ ಆರೋಪಗಳಿಂದ ಬಿಡುಗಡೆ ಮಾಡಿದೆ. ನ್ಯಾಯಾಲಯದ ವಿಚಾರಣೆ ಬಳಿಕ ಪ್ರತಿಕ್ರಿಯಿಸಿದ ತೇಜಸ್ವಿ ಯಾದವ್, “ಇದು ನ್ಯಾಯಾಲಯದ ವಿಚಾರ. ಪ್ರಕರಣವನ್ನು ನ್ಯಾಯಾಲಯದಲ್ಲೇ ತೀರ್ಮಾನಿಸಲಾಗುತ್ತದೆ. ನಾವು ನಮ್ಮ ವಾದವನ್ನು ನ್ಯಾಯಾಲಯದ ಮುಂದೆ ಬಲವಾಗಿ ಮಂಡಿಸುತ್ತೇವೆ” ಎಂದು ಪಿಟಿಐಗೆ ತಿಳಿಸಿದ್ದಾರೆ.

BJP Padayatra: ʼಬಳ್ಳಾರಿ ಚಲೋ' ಪಾದಯಾತ್ರೆ ಸಮಾರೋಪ; ಬಿಜೆಪಿಯಿಂದ 16 ನಿರ್ಣಯಗಳು


ಸಿಬಿಐ ಪ್ರಕಾರ, 2004ರಿಂದ 2014ರ ಅವಧಿಯಲ್ಲಿ ರೈಲ್ವೆ ಸಚಿವರಾಗಿದ್ದ ಲಾಲು ಪ್ರಸಾದ್ ಯಾದವ್ ಅವರು ರೈಲ್ವೆ ಅಧಿಕಾರಿಗಳು ಹಾಗೂ ಇತರರೊಂದಿಗೆ ಸೇರಿಕೊಂಡು ಅಕ್ರಮ ಆರ್ಥಿಕ ಲಾಭ ಪಡೆಯುವ ಉದ್ದೇಶದಿಂದ ಕ್ರಿಮಿನಲ್ ಸಂಚು ರೂಪಿಸಿದ್ದರು. ರೈಲ್ವೆಯ ಬಿಎನ್‌ಆರ್ ಹೋಟೆಲ್‌ಗಳನ್ನು ಸುಜಾತಾ ಹೋಟೆಲ್ಸ್‌ಗೆ ಹಸ್ತಾಂತರಿಸುವ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು, ನಂತರ ಪಾಟ್ನಾದಲ್ಲಿನ ಭೂಮಿಯನ್ನು ಲಾಲು ಯಾದವ್ ಕುಟುಂಬಕ್ಕೆ ವರ್ಗಾಯಿಸಲಾಗಿದೆ ಎಂದು ಸಿಬಿಐ ಆರೋಪಿಸಿದೆ.

ಈ ಪ್ರಕರಣದಲ್ಲಿ ಆರೋಪ ರೂಪಿಸುವುದನ್ನು ಪ್ರಶ್ನಿಸಿ ಲಾಲು ಕುಟುಂಬ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆ ಸಿಬಿಐ ಆರೋಪಗಳನ್ನು ವಿರೋಧಿಸಿ, ಹೋಟೆಲ್ ಟೆಂಡರ್ ಪ್ರಕ್ರಿಯೆಯನ್ನು “rigged and manipulated” ಮಾಡಲಾಗಿತ್ತು ಎಂದು ವಾದಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವೂ ಲಾಲು ಪ್ರಸಾದ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಿರುವುದರಿಂದ ಕಾನೂನು ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.