ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಶ್ಚಿಮ ಬಂಗಾಳದಲ್ಲಿ ಸರ್ಕಾರಿ ಯೋಜನೆ ಪಡೆಯಬೇಕೆಂದರೆ ಕಟ್ಟುನಿಟ್ಟಿನ ನಿಯಮ ಜಾರಿ; ಯಾರಿಗೆ ಸೌಲಭ್ಯ ಸಿಗಲ್ಲ?

West Bengal Introduces Strict Rules: ಸರ್ಕಾರದ ಸೌಲಭ್ಯಗಳನ್ನು, ನಿಜವಾಗಿಯೂ ಅರ್ಹರು ಮತ್ತು ಅಗತ್ಯವಿರುವವರಿಗೆ ಅಥವಾ ನಿರ್ಗತಿಕರಿಗೆ ಮಾತ್ರ ನೀಡಲಾಗುತ್ತವೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಘೋಷಿಸಿದ್ದಾರೆ. ಲಕ್ಷ್ಮೀರ್ ಭಂಡಾರ್ ಯೋಜನೆಯನ್ನು ಅನ್ನಪೂರ್ಣ ಯೋಜನೆಯಿಂದ ಬದಲಿಸುವುದೂ ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (ಸಂಗ್ರಹ ಚಿತ್ರ)

ಕೋಲ್ಕತ್ತಾ, ಜು.5: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (West Bengal CM Suvendu Adhikari) ಅವರು ರಾಜ್ಯದ ಸಾಮಾಜಿಕ ಕಲ್ಯಾಣ ಯೋಜನೆಗಳ ವಿತರಣೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಕಟ್ಟುನಿಟ್ಟಿನ ಹೊರಗಿಡುವ ನಿಯಮಗಳನ್ನು ಘೋಷಿಸಿದ್ದಾರೆ. ಸರ್ಕಾರದ ಸೌಲಭ್ಯಗಳನ್ನು, ನಿಜವಾಗಿಯೂ ಅರ್ಹರು ಮತ್ತು ಅಗತ್ಯವಿರುವವರಿಗೆ ಅಥವಾ ನಿರ್ಗತಿಕರಿಗೆ ಮಾತ್ರ ನೀಡಲಾಗುತ್ತವೆ ಎಂದು ಅವರು ಘೋಷಿಸಿದ್ದಾರೆ.

ಲಕ್ಷ್ಮೀರ್ ಭಂಡಾರ್ ಯೋಜನೆಯನ್ನು ಅನ್ನಪೂರ್ಣ ಯೋಜನೆಯಿಂದ ಬದಲಿಸುವುದೂ ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡಿದೆ. ಇದರೊಂದಿಗೆ, ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆಗಾಗಿ ಕಟ್ಟುನಿಟ್ಟಿನ ಅರ್ಹತಾ ಮಾನದಂಡಗಳನ್ನು ಜಾರಿಗೆ ತಂದಿದೆ.

ರಾಜ್ಯ ಸರ್ಕಾರವು ಕೆಳಗಿನ ಯಾವುದೇ ವರ್ಗಗಳಿಗೆ ಸೇರಿದ ಅರ್ಜಿದಾರರನ್ನು ಸರ್ಕಾರಿ ಕಲ್ಯಾಣ ಯೋಜನೆಗಳ ಸೌಲಭ್ಯಗಳಿಂದ ಅನರ್ಹರು ಎಂದು ಪರಿಗಣಿಸಲಿದೆ:

ಮದುವೆ: ಎರಡಕ್ಕಿಂತ ಹೆಚ್ಚು ಬಾರಿ (ಮೂರು ಅಥವಾ ಹೆಚ್ಚಿನ ವಿವಾಹಗಳು) ವಿವಾಹವಾದ ವ್ಯಕ್ತಿಗಳು ಪ್ರಯೋಜನಗಳನ್ನು ಪಡೆಯುವುದನ್ನು ನಿಷೇಧಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ 5 ರುಪಾಯಿಗೆ ಮೀನೂಟ: ಭರ್ಜರಿ ಯೋಜನೆ ಘೋಷಿಸಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ಲಸಿಕೆ ನಿರಾಕರಣೆ: ಸರ್ಕಾರ ಆದೇಶಿಸಿದ ಅಥವಾ ತುರ್ತು ಲಸಿಕೆ ಅಭಿಯಾನಗಳ ಅಡಿಯಲ್ಲಿ ತಮ್ಮ ಮಕ್ಕಳಿಗೆ ಲಸಿಕೆ ಹಾಕಲು ನಿರಾಕರಿಸುವ ಪೋಷಕರನ್ನು ಹೊರಗಿಡಲಾಗುತ್ತದೆ.

ಶಾಲೆ ತೊರೆದವರು: ಸರ್ಕಾರಿ ಶಾಲೆಗಳಿಂದ ಹೊರಗುಳಿದ ಮಕ್ಕಳು, ಕೆಲವು ಧಾರ್ಮಿಕ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾಗಿದ್ದರೆ, ಅಂತಹ ಫಲಾನುಭವಿಗಳು ಯೋಜನೆಯಿಂದ ಹೊರಗುಳಿಯಬೇಕಾಗುತ್ತದೆ.

ನಾಗರಿಕರಲ್ಲದವರು: ಭಾರತೀಯರಲ್ಲದ ನಾಗರಿಕರೆಂದು ದೃಢೀಕರಿಸಲ್ಪಟ್ಟ ವ್ಯಕ್ತಿಗಳು ರಾಜ್ಯ ಕಲ್ಯಾಣ ಸೌಲಭ್ಯಗಳಿಗೆ ಅನರ್ಹರಾಗಿರುತ್ತಾರೆ.

ಜಾರಿ ಮತ್ತು ಅನುಷ್ಠಾನ

11 ಪುಟಗಳ ಅನ್ನಪೂರ್ಣ ಯೋಜನೆ ಅರ್ಜಿ ನಮೂನೆಯ 8ನೇ ಪುಟದಲ್ಲಿ, ಅರ್ಜಿದಾರರು ತಮ್ಮ ನಾಲ್ಕು ಮಕ್ಕಳವರೆಗೆ ಅವರ ಲಸಿಕಾ (ಇಮ್ಯುನೈಸೇಷನ್) ಸ್ಥಿತಿಯನ್ನು ಕಡ್ಡಾಯವಾಗಿ ಘೋಷಿಸಬೇಕು ಎಂದು ಸೂಚಿಸಲಾಗಿದೆ. ಜೊತೆಗೆ, ಅವರು ಓದುತ್ತಿರುವ ಶಾಲೆಯ ಪ್ರಕಾರ- ಸರ್ಕಾರಿ ಅನುದಾನಿತ, ಖಾಸಗಿ ಅಥವಾ ಮದರಸಾ- ಇದರ ವಿವರಗಳನ್ನೂ ನೀಡಬೇಕು.

ಕಡ್ಡಾಯ ಲಸಿಕೆಗಳು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಅಡಿಯಲ್ಲಿ ನೀಡಲಾಗುತ್ತಿದ್ದು, ಈ ಯೋಜನೆಯ ಮೂಲಕ 12 ರೋಗಗಳ ವಿರುದ್ಧ ಉಚಿತ ಲಸಿಕೆಗಳನ್ನು ಒದಗಿಸಲಾಗುತ್ತದೆ.

ಈ ನಿರ್ದಿಷ್ಟ ಮಾನದಂಡಗಳ ಜೊತೆಗೆ, ನೂತನ ಸರ್ಕಾರವು ರಾಜ್ಯದ ಕಲ್ಯಾಣ ವ್ಯವಸ್ಥೆಯಾದ್ಯಂತ ವ್ಯಾಪಕವಾದ ನೀತಿ ಬದಲಾವಣೆಗಳನ್ನು ಜಾರಿಗೆ ತಂದಿದೆ. ರಾಜ್ಯ ಸಚಿವ ಸಂಪುಟವು ಧರ್ಮದ ಆಧಾರದ ಮೇಲೆ ನೀಡಲಾಗುತ್ತಿದ್ದ ಎಲ್ಲಾ ಹಣಕಾಸು ನೆರವು ಯೋಜನೆಗಳನ್ನು ಅಧಿಕೃತವಾಗಿ ರದ್ದುಗೊಳಿಸಿದೆ. ಇದರಲ್ಲಿ ಮದರಸಾ ಇಲಾಖೆ ಹಾಗೂ ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಗಳ ಅಡಿಯಲ್ಲಿ ಜಾರಿಯಲ್ಲಿದ್ದ ಯೋಜನೆಗಳೂ ಸೇರಿವೆ.

ಸರ್ಕಾರವು ಸುಮಾರು 30 ಲಕ್ಷ ಅನರ್ಹ ಫಲಾನುಭವಿಗಳನ್ನು ಗುರುತಿಸಲು ಪರಿಶೀಲನಾ ಅಭಿಯಾನವನ್ನು ನಡೆಸುತ್ತಿದೆ. ಹೊಸ ಅರ್ಜಿ ನಮೂನೆಗಳಲ್ಲಿ ಆಧಾರ್, ಪಡಿತರ ಚೀಟಿಗಳು, ಆಸ್ತಿ ಮಾಲೀಕತ್ವ (ಭೂಮಿ, ಮನೆ ಮತ್ತು ಕಾರು) ಮತ್ತು ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಉದ್ಯೋಗವನ್ನು ಹೊಂದಿದ್ದಾರೆಯೇ ಎಂಬುದನ್ನು ಒಳಗೊಂಡ ವಿವರವಾದ ಘೋಷಣೆಗಳು ಬೇಕಾಗುತ್ತವೆ.