Viral News: ಮೃತ ಮತದಾರರನ್ನು ಭೇಟಿಯಾಗಿ ಟೀ ಕುಡಿದ ರಾಹುಲ್ ಗಾಂಧಿ; ವಿಡಿಯೋ ವೈರಲ್
ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ವಿರೋಧ ಪಕ್ಷದ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಕಾಂಗ್ರೆಸ್ ನಾಯಕ ಹಾರ ಮೂಲದ ಏಳು ಮತದಾರರು ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದು, ಈ ವೇಳೆ ತಮ್ಮನ್ನು ಮೃತಪಟ್ಟಿದ್ದಾರೆಂದು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.


ಪಾಟನಾ: ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ವಿರೋಧ ಪಕ್ಷದ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಕಾಂಗ್ರೆಸ್ ನಾಯಕ ಹಾರ ಮೂಲದ ಏಳು ಮತದಾರರು ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದು, (Viral News) ಈ ವೇಳೆ ತಮ್ಮನ್ನು (Rahul Gandhi) ಮೃತಪಟ್ಟಿದ್ದಾರೆಂದು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನು ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ 7 ಮಂದಿಯನ್ನು ರಾಹುಲ್ ಗಾಂಧಿ ಭೇಟಿ ಮಾಡಿದ್ದು, ಅವರೊಂದಿಗೆ ಚಹಾ ಸೇವಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ರಾಹುಲ್ ತಮ್ಮ ಎಕ್ಸ್ ಖಾತೆಯಲ್ಲಿ "ನನಗೆ ಅನೇಕ ಆಸಕ್ತಿದಾಯಕ ಅನುಭವಗಳಿವೆ. ಆದರೆ ನಾನು 'ಸತ್ತ ಜನರೊಂದಿಗೆ' ಹಿಂದೆಂದೂ ಚಹಾ ಸೇವಿಸಿಲ್ಲ. ಈ ವಿಶಿಷ್ಟ ಅನುಭವಕ್ಕಾಗಿ, ಚುನಾವಣಾ ಆಯೋಗಕ್ಕೆ ಧನ್ಯವಾದಗಳು!" ಎಂದು ವ್ಯಂಗ್ಯವಾಡಿದ್ದಾರೆ. ರಾಹುಲ್ ಗಾಂಧಿ 7 'ಸತ್ತ' ಮತದಾರರೊಂದಿಗೆ ನಾಲ್ಕು ನಿಮಿಷಗಳ ವೀಡಿಯೊ ಸಂವಾದವನ್ನು ಹಂಚಿಕೊಂಡರು, ಅದರಲ್ಲಿ ರಾಹುಲ್ ಗಾಂಧಿ "ಚುನಾವಣಾ ಆಯೋಗ ನಿಮ್ಮನ್ನು ಸತ್ತವರ ಪಟ್ಟಿಗೆ ಸೇರಿಸಿದೆ ಎಂಬುದನ್ನು ನೀವು ಹೇಗೆ ಕಂಡುಕೊಂಡಿರಿ?" ಎಂದು ಕೇಳಿದರು. ಈ ಪೈಕಿ ಒಬ್ಬರು ಪ್ರಕ್ರಿಯೆ ನೀಡಿ, ಚುನಾವಣಾ ಸಮಿತಿ 65 ಲಕ್ಷ ಹೆಸರುಗಳ ಕರಡು ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರವೇ ತಮಗೆ ಈ ವಿಷಯ ತಿಳಿಯಿತು ಎಂದು ಹೇಳಿದ್ದಾರೆ.
जीवन में बहुत दिलचस्प अनुभव हुए हैं,
— Rahul Gandhi (@RahulGandhi) August 13, 2025
लेकिन कभी 'मृत लोगों' के साथ चाय पीने का मौका नहीं मिला था।
इस अनोखे अनुभव के लिए, धन्यवाद चुनाव आयोग! pic.twitter.com/Rh9izqIFsD
ಮತದಾರರು ರಾಹುಲ್ ಗಾಂಧಿ ಬಳಿ ಮಾತನಾಡಿ, ನಾನು ಜೀವಂತವಾಗಿದ್ದೇನೆ, ನಾನು ಸತ್ತಿಲ್ಲ. "ಸರ್, ಒಂದು ಪಂಚಾಯತ್ನಲ್ಲಿ, ಕನಿಷ್ಠ 50 ಜನರು 'ಸತ್ತಿಲ್ಲ' ಎಂದು ತಿಳಿಸಲಾಗಿದ್ದು, ಕಾಂಗ್ರೆಸ್ ನಾಯಕರಿಗೆ ಇತರರು ಇದೇ ರೀತಿಯ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಅವರು ಇನ್ನೂ ಸಭೆಗೆ ತಲುಪಿಲ್ಲ ಎಂದು ಮಾಹಿತಿ ನೀಡಲಾಯಿತು. "ಮರು ಪರಿಶೀಲನೆಗಾಗಿ ದಾಖಲೆಗಳನ್ನು ಪೂರ್ಣಗೊಳಿಸಿದರೂ ಅವರನ್ನು ತೆಗೆದುಹಾಕಲಾಗಿದೆ," ಅವರೊಂದಿಗೆ ಬಂದ ಪಕ್ಷದ ಕಾರ್ಯಕರ್ತ ವಿವರಿಸಿದರು, "ಅವರು 'ಸತ್ತಿದ್ದಾರೆ' ಎಂದು ಘೋಷಿಸಲಾದ ಜನರ ಹೆಸರುಗಳನ್ನು ಪ್ರಕಟಿಸಿಲ್ಲ. ತಮ್ಮ ಮತದಾನದ ಹಕ್ಕನ್ನು ಮರಳಿ ಪಡೆಯಲು ಬುಧವಾರ ಸುಪ್ರೀಂ ಕೋರ್ಟ್ ಮುಂದೆ ಹಾಜರಾಗಿದ್ದೇವೆ ಎಂದು ಗುಂಪು ಗಾಂಧಿಯವರಿಗೆ ತಿಳಿಸಿದೆ. ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ ವಿರುದ್ಧದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
ಈ ಸುದ್ದಿಯನ್ನೂ ಓದಿ: Tejashwi Yadav: ಬಿಹಾರ ಮತದಾರರ ಪಟ್ಟಿಯಿಂದ ನನ್ನ ಹೆಸರೇ ನಾಪತ್ತೆ; ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಆರೋಪ
ಬಿಹಾರ ಚುನಾವಣೆಗೂ ಮುನ್ನ ವಿರೋಧ ಪಕ್ಷದ ಬಣದ ಹೋರಾಟದ ಕೂಗಾಗಿ ಮಾರ್ಪಟ್ಟಿರುವ 'ಮತ ಚೋರಿ' ಅಥವಾ ಮತಗಳ ಕಳ್ಳತನಕ್ಕೆ ಅವಕಾಶ ನೀಡದೇ ಇರುವುದನ್ನು ಖಾತ್ರಿಪಡಿಸಿಕೊಳ್ಳುವುದಾಗಿ ರಾಹುಲ್ ಗಾಂಧಿ ಎಲ್ಲರಿಗೂ ಭರವಸೆ ನೀಡಿದ್ದಾರೆ.