ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal Assembly Election) ಮೊದಲನೇ ಹಂತದ ಚುನಾವನೆ ಇಂದು ನಡೆಯುತ್ತಿದೆ. ಇದೀಗ ತೃಣಮೂಲ ಕಾರ್ಯಕರ್ತರು (TMC) ಮತ್ತು ಹುಮಾಯೂನ್ ಕಬೀರ್ ಪಕ್ಷದ ನಾಯಕರ ನಡುವೆ ಘರ್ಷಣೆ ಏರ್ಪಟ್ಟಿದೆ ಎಂದು ತಿಳಿದು ಬಂದಿದೆ. ಆಮ್ ಜನತಾ ಉನ್ನಯನ್ ಪಕ್ಷದ (AUJP) ಸಂಸ್ಥಾಪಕ ಹುಮಾಯೂನ್ ಕಬೀರ್ ಇಂದು ಬೆಳಿಗ್ಗೆ ಮುರ್ಷಿದಾಬಾದ್ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾಗ ಘರ್ಷಣೆಗಳು ಭುಗಿಲೆದ್ದವು. ಮುರ್ಷಿದಾಬಾದ್ನ ನವೋಡಾದಲ್ಲಿ, ಹಿಂದಿನ ರಾತ್ರಿ ಶಿವನಗರ ಪ್ರಾಥಮಿಕ ಶಾಲೆಯ ಬಳಿ ಕಚ್ಚಾ ಬಾಂಬ್ಗಳನ್ನು ಎಸೆಯಲಾಗಿದ್ದು, ಒಬ್ಬ ಮಹಿಳೆ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯ ಹಿಂದೆ ಹುಮಾಯೂನ್ ಕಬೀರ್ ಪಕ್ಷವಿದೆ ಎಂದು ತೃಣಮೂಲ ಸಂಸದ ಅಬು ತಾಹೆರ್ ಖಾನ್ ಆರೋಪಿಸಿದ್ದಾರೆ. ಜನಸಂದಣಿಯನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಹುಮಾಯೂನ್ ಕಬೀರ್ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಶಾಂತವಾಗಿರಲು ಮನವಿ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. "ನನ್ನ ಎಲ್ಲಾ ಜನರಿಗೆ ಶಾಂತವಾಗಿರಲು ನಾನು ಹೇಳಿದೆ. ಮತದಾನ ಮತ್ತು ಚುನಾವಣೆ ಶಾಂತಿಯುತವಾಗಿ ನಡೆಯಬೇಕೆಂದು ನಾನು ಬಯಸುತ್ತೇನೆ ಮತ್ತು ಎಲ್ಲರೂ ಭಾಗವಹಿಸಬೇಕು. ನನ್ನ ಗುರಿ ಅಥವಾ ಉದ್ದೇಶ ಯಾರನ್ನೂ ಹೊಡೆಯುವುದು, ಹೆದರಿಸುವುದು ಅಥವಾ ಬೆದರಿಸುವುದು ಅಲ್ಲ" ಎಂದು ಅವರು ಹೇಳಿದ್ದಾರೆ.
ವಿಡಿಯೋ ನೋಡಿ
ಡೊಮ್ಕಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರಾಯ್ಪುರ ಗ್ರಾಮದಲ್ಲಿ, ಮುಂಜಾನೆಯಿಂದಲೇ ಶಸ್ತ್ರಸಜ್ಜಿತ ಜನರು ಈ ಪ್ರದೇಶದಲ್ಲಿ ತಂಗಿದ್ದು, ಭಯದ ವಾತಾವರಣವನ್ನು ಸೃಷ್ಟಿಸಿದ್ದಾರೆ ಎಂದು ಹಲವಾರು ಜನರು ಹೇಳಿದ್ದಾರೆ. ಮುರ್ಷಿದಾಬಾದ್ ಜಿಲ್ಲೆಯ ಡೊಮ್ಕಲ್ನಲ್ಲಿ ಹಲವಾರು ಜನರು ಮತ ಚಲಾಯಿಸದಂತೆ ತಡೆಯಲ್ಪಟ್ಟ ಆರೋಪದ ಮೇಲೆ ಚುನಾವಣಾ ಆಯೋಗವು ಅಧಿಕಾರಿಗಳಿಂದ ವರದಿ ಕೇಳಿದೆ.
ಬಂಗಾಳದ ಗದ್ದುಗೆ ಯಾರಿಗೆ? ಪಶ್ಚಿಮ ಬಂಗಾಳ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದ್ದೇನು?
ಉತ್ತರ ಬಂಗಾಳದ ಎಂಟು, ದಕ್ಷಿಣ ಬಂಗಾಳದ ಮೂರು ಮತ್ತು ಜಂಗಲ್ಮಹಲ್ ಪ್ರದೇಶದ ಐದು ಸ್ಥಾನಗಳು ಸೇರಿದಂತೆ 16 ಜಿಲ್ಲೆಗಳ 152 ಸ್ಥಾನಗಳಲ್ಲಿ ಅಭೂತಪೂರ್ವ ಭದ್ರತೆಯ ನಡುವೆ ಗುರುವಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದೆ. ಕೆಲವು ಸ್ಥಳಗಳಲ್ಲಿ ಇವಿಎಂ ದೋಷದಿಂದಾಗಿ ಮತದಾನಕ್ಕೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.