ರಾಜಸ್ಥಾನ: ಕಾಂಗ್ರೆಸ್ ಅಧ್ಯಕ್ಷ (Rajasthan Congress president) ಗೋವಿಂದ್ ಸಿಂಗ್ ದೋಟಾಸಾರ (Govind Singh Dotasara) ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ರಾಜಸ್ಥಾನ ಶಿಕ್ಷಣ ಸಚಿವ (Rajasthan Education Minister) ಮದನ್ ದಿಲಾವರ್ (Madan Dilawar) ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಪ್ರತಿಪಕ್ಷಗಳು ಕೃಷಿ ಸಚಿವ ಕಿರೋಡಿ ಲಾಲ್ ಮೀನಾ (Agriculture Minister Kirodi Lal Meena) ವಿರುದ್ಧ ಭ್ರಷ್ಟಾಚಾರದ ಆರೋಪ (corruption allegations) ಹೊರಿಸಿದ್ದು, ಇದಕ್ಕೆ ಸಮರ್ಥನೆ ನೀಡುವ ಭರದಲ್ಲಿ ಮದನ್ ದಿಲಾವರ್ ಅವರು ಗುರುವಾರ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಾಸಾರ ಅವರ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಕೆ ಮಾಡಿದ್ದಾರೆ. ಇದು ಈಗ ವಿವಾದಕ್ಕೆ ಗುರಿಯಾಗಿದೆ.
ಕೃಷಿ ಸಚಿವ ಕಿರೋಡಿ ಲಾಲ್ ಮೀನಾ ಅವರ ವಿರುದ್ಧ ಗೋವಿಂದ್ ಸಿಂಗ್ ದೋಟಾಸಾರ ಅವರು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ದಿಲಾವರ್, ಪವಿತ್ರ ಮಹಿಳೆಯ ಮೇಲೆ ವೇಶ್ಯೆ ಆರೋಪ ಮಾಡಿದಂತಾಗಿದೆ ಎಂದು ಹೇಳಿದರು.
Chikkaballapur News: ಯುವಜನರು ಮಾದಕ ವಸ್ತುಗಳ ಸೇವನೆ ಮತ್ತು ದುಷ್ಟಜಾಲದಿಂದ ದೂರವಿರಬೇಕು
ಭ್ರಷ್ಟಾಚಾರದಲ್ಲಿ ತೊಡಗಿಕೊಂಡವರು ಇತರರ ವಿರುದ್ಧ ಆರೋಪಗಳನ್ನು ಮಾಡುತ್ತಾರೆ. ದೋಟಾಸಾರ ಅವರು ಅಪ್ರಾಮಾಣಿಕ ಮತ್ತು ನಾಚಿಕೆಯಿಲ್ಲದವರು ಎಂದು ನಾನು ಪುನರುಚ್ಚರಿಸುತ್ತೇನೆ. ಕಿರೋಡಿ ಲಾಲ್ ಮೀನಾ ಅವರು ಚಿನ್ನದಂತೆ ಶುದ್ಧವಾಗಿದ್ದಾರೆ ಎಂದು ತಿಳಿಸಿದರು.
ಮೀನಾ ವಿರುದ್ಧದ ಯಾವುದೇ ಆರೋಪವನ್ನು ಸಹಿಸಲಾಗುವುದಿಲ್ಲ. ದೋಟಸಾರ ಅವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಅಗ್ಗದ ತಂತ್ರಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದರು.
ಗೋವಿಂದ್ ಸಿಂಗ್ ದೋಟಾಸಾರ ವಿರುದ್ಧ ರಾಜಸ್ಥಾನ ಶಿಕ್ಷಣ ಸಚಿವ ಮದನ್ ದಿಲಾವರ್ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕಿ ಸ್ವರ್ಣಿಮ್ ಚತುರ್ವೇದಿ, ಶಿಕ್ಷಣ ಸಚಿವರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ಹೇಳಿಕೆಗಳು ಅವರ ಹುದ್ದೆಗೆ ತಕ್ಕದ್ದಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಶಿಕ್ಷಣ ಸಚಿವರಾಗಿ ತಮ್ಮ ಅಸಂಸದೀಯ, ಆಕ್ಷೇಪಾರ್ಹ ಮತ್ತು ಬೇಜವಾಬ್ದಾರಿ ಹೇಳಿಕೆಗಳಿಗೆ ಮಾತ್ರ ಹೆಸರುವಾಸಿಯಾಗಿದ್ದಾರೆ. ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನು ಗುರಿಯಾಗಿಸಿಕೊಂಡು ಅವರು ನೀಡುವ ಕೀಳು ಮಟ್ಟದ ಹೇಳಿಕೆಗಳು ಅವರ ಕಚೇರಿಯ ಘನತೆಗೆ ಶೋಭೆ ತರುವುದಿಲ್ಲ. ಆ ಹೇಳಿಕೆಗಳನ್ನು ನೀಡುವಾಗ ಒಬ್ಬ ಮಹಿಳೆ ತನ್ನ ಪಕ್ಕದಲ್ಲಿ ಕುಳಿತಿದ್ದರು ಎಂಬುದನ್ನು ಅವರು ಮರೆತಂತೆ ತೋರುತ್ತದೆ ಎಂದರು.
ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಾಸಾರ ಅವರು ಮೀನಾ ಅವರನ್ನು ಗುರಿಯಾಗಿಸಿಕೊಂಡು ಬುಧವಾರ ಪತ್ರಿಕಾಗೋಷ್ಠಿ ನಡೆಸಿ, ಕೃಷಿ ಸಚಿವರೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾದ ವ್ಯಕ್ತಿಗಳಿಂದ 2.43 ಕೋಟಿ ರೂ.ಗಳನ್ನು ವಶಪಡಿಸಿಕೊಂಡ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಈ ಹಣವನ್ನು ಹೇಗೆ ಸಂಗ್ರಹಿಸಲಾಗಿದೆ ಎಂದು ಪ್ರಶ್ನಿಸಿದ ದೋಟಸಾರ, ಬಂಧಿತರು ತನಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಮೀನಾ ಅವರು ಸ್ವತಃ ಹೇಳಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳ ಅಥವಾ ವಿಶೇಷ ಕಾರ್ಯಾಚರಣೆ ತಂಡ ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲಿ ಎಂದು ಹೇಳಿದರು.