ಗ್ಯಾರಂಟಿ ಅನುಷ್ಠಾನ ಸಮಿತಿ ಹೆಸರಲ್ಲಿ ತೆರಿಗೆ ಹಣ ಪೋಲು: ಎಸ್. ಪ್ರಕಾಶ್
S Prakash: ಗ್ಯಾರಂಟಿ ಅನುಷ್ಠಾನ ಸಮಿತಿಯು ಒಂದೇ ಒಂದು ಅರ್ಹ ಹೆಸರನ್ನು ಸೇರಿಸಿಲ್ಲ ಅಥವಾ ಅನರ್ಹರ ಹೆಸರನ್ನು ರದ್ದು ಮಾಡಲು ಶಿಫಾರಸು ಮಾಡಿಲ್ಲ. ಓಡಾಡಲು ಕಾರು, ಸಂಬಳ, ಆಪ್ತ ಸಹಾಯಕರನ್ನು ಹೊಂದಿದ ಇವರು ಆರಾಮವಾಗಿ ಇದ್ದಾರೆ. ಏನೂ ಕೆಲಸ ಮಾಡದ ಇವರನ್ನು ಯಾಕೆ ಸಾಕಬೇಕು? ಇವರ ಅವಶ್ಯಕತೆ ಇದೆಯೇ ಎಂದು ಬಿಜೆಪಿ ರಾಜ್ಯ ವಕ್ತಾರ ಎಸ್. ಪ್ರಕಾಶ್ ಪ್ರಶ್ನಿಸಿದ್ದಾರೆ.