ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ಶ್ರವಣನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯ (Daily Horoscope) ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಇಂದು ಶ್ರವಣ ನಕ್ಷತ್ರ ಇದ್ದು ಇದರ ಅಧಿಪತಿ ಚಂದ್ರ ಆಗಿದ್ದಾನೆ. ಆದ್ದರಿಂದ ಇಂದು ಭಾವನೆಗಳು ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಮೇಷ ರಾಶಿಯವರು ಇಂದು ಕಾರ್ಯಕ್ಷೇತ್ರದಲ್ಲಿ ಬಹಳಷ್ಟು ಭಾವುಕರಾಗಿ ಇರುತ್ತೀರಿ. ಹಾಗಾಗಿ ಹೆಚ್ಚಿನ ಭಾವುಕತೆಯನ್ನು ತಡೆದು ಆತ್ಮವಿಶ್ವಾಸ ದಿಂದ ನೀವು ಇರಬೇಕಾಗುತ್ತದೆ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಉತ್ತಮ ದಿನವಾಗಲಿದ್ದು, ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮ ಮನೆಯಲ್ಲಿರುವ ಹಿರಿಯರ ಆಶೀರ್ವಾದವನ್ನು ನೀವು ಪಡೆಯಬೇಕಾಗುತ್ತದೆ. ಅವರ ಭಾವನೆಗಳಿಗೂ ನೀವು ಒತ್ತು ನೀಡಬೇಕಾಗುತ್ತದೆ. ಹಾಗಾಗಿ ಎಲ್ಲ ಕಡೆಯೂ ವಿನಯತೆಯಿಂದ ವರ್ತಿಸಲು ಕಲಿಯಿರಿ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಸ್ವಲ್ಪ ಕಷ್ಟದ ದಿನ ಆಗಲಿದೆ. ನಿಮ್ಮ ದಾಂಪತ್ಯದಲ್ಲಿ, ಪ್ರೀತಿ ಪಾತ್ರರಿಂದ ಕಷ್ಟ ಇರಲಿದೆ. ಮನಸ್ಸಿಗೆ ಇಂದು ಕ್ಷೇಷ ಹೆಚ್ಚಾಗುವ ಸಾಧ್ಯತೆಗಳೇ ಹೆಚ್ಚು. ಹಾಗಾಗಿ ಬಹಳ ತಾಳ್ಮೆಯಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಬೇರೆಯವರಿಂದ ನಿಮಗೆ ಎಲ್ಲ ರೀತಿಯಲ್ಲೂ ಒಳಿತಾಗಲಿದೆ. ಎಲ್ಲ ಕೆಲಸದಲ್ಲೂ ಇಂದು ಜಯವನ್ನು ಕಾಣಲಿದ್ದೀರಿ.
ಸಿಂಹ ರಾಶಿ: ಸಿಂಹ ರಾಶಿಯವರಿಗೂ ಇತರರು ನಿಮಗೆ ಕ್ಷಮೆ ಕೇಳುವ ದಿನ ಆಗಲಿದೆ. ಸಾಮಾಜಿಕ ವ್ಯವಹಾರಗಳಲ್ಲಿ ಇಂದು ಜಯ ಪ್ರಾಪ್ತಿಯಾಗಲಿದೆ. ಆರೋಗ್ಯದಲ್ಲೂ ಸುಧಾರಣೆ ಕಂಡು ಬರಲಿದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಕ್ಲಿಷ್ಟದ ದಿನವಾಗಲಿದೆ. ಪೋಷಕರಿಗೆ ಮಕ್ಕಳಿಂದ ತುಂಬಾ ಕಿರಿ ಕಿರಿಯಾಗುವ ದಿನ ಆಗಲಿದ್ದು ಬೇಜಾರು ಆಗುವ ಸುದ್ದಿ ಕೇಳಬಹುದು. ಆದರೂ ಮಕ್ಕಳಿಗೆ ಪೋಷಕರು ಇಂದು ಸರಿಯಾಗಿ ಮಾರ್ಗದರ್ಶನ ಮಾಡಬೇಕಾಗುತ್ತದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಇಂದು ಕಷ್ಟದ ದಿನ ಆಗಲಿದೆ. ಆಸ್ತಿ ಪಾಸ್ತಿ ವಿಚಾರಗಳ ಯೋಚನೆ, ತಾಯಿಯ ಆರೋಗ್ಯದ ಬಗ್ಗೆ ನಾನಾ ಯೋಚನೆಗಳು ಕಾಡಬಹುದು. ಮನೆ, ವಾಹನ, ಕೋರ್ಟ್, ಕಚೇರಿ ಇತ್ಯಾದಿ ಬಗ್ಗೆ ತೆಲೆಕೆಡಿಸಿ ಕೊಳ್ಳುವ ದಿನ ಆಗಲಿದೆ. ಸ್ವಲ್ಪ ದಿನದಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಮುಖ್ಯವಾದ ವಿಚಾರಗಳಲ್ಲಿ ಯಶಸ್ಸು ಸಿಗಲಿದೆ. ಸೋಶಿಯಲ್ ಮೀಡಿಯಾ ಬಳಕೆದಾರರು ಇತ್ಯಾದಿ ಉದ್ಯೋಗದಲ್ಲಿರುವವರಿಗೆ ಒಳ್ಳೆಯ ದಿನ ಆಗಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರು ಸಂಸಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಸಣ್ಣ ಪುಟ್ಟ ವಿಚಾರಗಳೆ ಇಂದು ನಿಮಗೆ ಬಹಳ ದೊಡ್ಡದಾಗಿ ಪರಿಣಾಮ ಬೀರಬಹುದು. ಮನಸ್ಸಿಗೆ ಕ್ಷೇಷ ಉಂಟಾಗುವ ದಿನ ಆಗಲಿದ್ದು, ಆದರೂ ಕೂಡ ಜಯವನ್ನು ಕಾಣಲಿದ್ದೀರಿ.
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನ ಆಗಲಿದೆ. ಎಲ್ಲ ಕಾರ್ಯದಲ್ಲೂ ಯಶಸ್ಸು ಪ್ರಾಪ್ತಿಯಾಗಲಿದೆ. ಎರಡು ದಿನಗಳಲ್ಲಿ ಮನಸ್ಸಿನಲ್ಲಿ ಇದ್ದ ತುಮುಲ ಮಾಯವಾಗಿ ಬೀಡಲಿದೆ. ಉತ್ತಮ ನಿಮ್ಮದಾಗಲಿದೆ.
ಇದನ್ನು ಓದಿ:Daily Horoscope: ದ್ವಾದಶಿ ತಿಥಿಯ ಈ ದಿನ ಯಾವ ರಾಶಿಗೆ ಶುಭ ಫಲವಾಗಲಿದೆ?
ಕುಂಭರಾಶಿ: ಕುಂಭ ರಾಶಿಯವರಿಗೆ ಮುಖ್ಯ ವಿಚಾರಗಳಲ್ಲಿ ಯಾವುದೇ ನಿರ್ಧಾರಗಳು ಬೇಡ. ಯಾವುದೇ ರೀತಿಯ ಸಹಕಾರಗಳು ನಿಮಗೆ ಪ್ರಾಪ್ತಿಯಾಗುವುದಿಲ್ಲ. ನಿಮ್ಮ ಪ್ರೀತಿಪಾತ್ರರೇ ನಿಮಗೆ ಸಹಕಾರ ನೀಡುವುದಿಲ್ಲ. ಅತೀ ಭಾವುಕರಾಗುವ ದಿನವಾಗಲಿದೆ. ಹಾಗಾಗಿ ಯಾವುದೇ ಮುಖ್ಯ ನಿರ್ಧಾರ ಇಂದು ಮಾಡಲು ಹೋಗಬೇಡಿ.
ಮೀನ ರಾಶಿ: ಮೀನ ರಾಶಿಯವರಿಗೆ ಕೆಲವೊಂದು ವಿಚಾರಗಳಲ್ಲಿ ಕ್ಷಿಷ್ಟದ ದಿನವಾದರೂ ಮನಸ್ಸಿಗೆ ನೆಮ್ಮದಿ ಸಿಲಿದ್ದು, ಇಷ್ಟಾರ್ಥ ಸಿದ್ದಿಯಾಗಲಿದೆ. ಮಿತ್ರರಿಂದ ಹೇರಳವಾದ ಸಹಕಾರ ನಿಮಗೆ ಪ್ರಾಪ್ತಿಯಾಗಲಿದೆ. ಇಂದು ಭಗವಂತನ ಆರಾಧನೆ, ಧ್ಯಾನ ಮಾಡುವ ಮೂಲಕ ಉತ್ತಮ ಫಲ ನೀವು ಪಡೆಯಬಹುದು. ಎಲ್ಲ ರಾಶಿಯವರು ನಿತ್ಯ ಶ್ಲೋಕ, ಪಠಣ ಅಭ್ಯಾಸ ಮಾಡುವ ಮೂಲಕ ಶುಭ ದಿನವನ್ನು ಕಳೆಯಲಿದ್ದೀರಿ.