ಬೆಂಗಳೂರು: ಇಂದು ವಿಶ್ವ ವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಶುಕ್ಲ ಪಕ್ಷದ ಪಂಚಮಿ ತಿಥಿ, ಜೇಷ್ಠ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ಮೇಷ ರಾಶಿ ಅವರಿಗೆ ಕ್ಲಿಷ್ಟಕರವಾದ ದಿನವಾಗಿದೆ. ಮುಖ್ಯವಾದ ವಿಚಾರ ಗಳಿಗೆ ನಿಮಗೆ ಬೇಕಾದ ಸಹಕಾರ ಇಂದು ಸಿಗಲಾರದು. ಪ್ರೀತಿ ಪಾತ್ರರಿಂದ ನೋವು ಉಂಟಾಗಲಿದೆ. ಮನಸ್ಸಿಗೆ ಸಾಕಷ್ಟು ವಿಚಾರದಲ್ಲಿ ಕಿರಿಕಿರಿಯಾಗಲಿದೆ. ಯೋಗ, ಧ್ಯಾನ ಇತ್ಯಾದಿ ಮಾಡುವುದರ ಮೂಲಕ ನೆಮ್ಮದಿ ಕಂಡುಕೊಳ್ಳಿ.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ನಿಮಗೆ ಸಿಗಲಿದೆ. ದಾಂಪತ್ಯದಲ್ಲಿ ಹಾಗೂ ಮಿತೃತ್ವ ಸಂಬಂಧ ತುಂಬಾ ಚೆನ್ನಾಗಿ ಇರಲಿದೆ. ಅಂದುಕೊಂಡ ಬಹುತೇಕ ಕೆಲಸ ಪೂರ್ಣವಾಗಲಿದೆ. ಈ ದಿನ ಅನ್ಯರಿಂದ ನಿಮಗೆ ಬೇಕಾದ ಸಹಕಾರ ಸಿಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಈ ದಿನ ಉತ್ತಮ ಫಲ ಇರಲಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಯಶಸ್ಸು ನೆಮ್ಮದಿ ಗೌರವ ಪ್ರಾಪ್ತವಾಗಲಿದೆ. ಸಂಸಾರ ತಾಪತ್ರಯ ಇತ್ಯಾದಿ ಸಮಸ್ಯೆ ಕೂಡ , ಕುಟುಂಬದ ವ್ಯಾಜ್ಯ ಇತ್ಯಾದಿ ಬಗೆಹರಿಯಲಿದೆ. ಅನಿರೀಕ್ಷಿತ ಧನಾಗಮನ ಆಗಲಿದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಈ ದಿನ ಸ್ವಲ್ಪ ಕ್ಲಿಷ್ಟಕರವಾದ ದಿನವಾಗಿದೆ.ದಾಂಪತ್ಯ ಜೀವನ, ಪ್ರೇಮ , ಪ್ರೀತಿ ಇತ್ಯಾದಿ ವಿಚಾರದಲ್ಲಿ ಜಾಸ್ತಿ ಕಿರಿಕಿರಿ ಸಮಸ್ಯೆ ಉಂಟಾಗಲಿದೆ. ಹಿಂದೆ ಇದ್ದ ಸಮಸ್ಯೆ ಬಗೆಹರಿಯಲಿದೆ. ಸಂಸಾರ, ಪ್ರೀತಿ ,ಪ್ರೇಮ ಇತ್ಯಾದಿ ವಿಚಾರದಲ್ಲಿ ಸಾಕಷ್ಟು ಗಮನ ಹರಿಸಿ ಮುನ್ನಡೆ ದರೆ ಉತ್ತಮ. ಸಮಸ್ಯೆಗಳಿಗೆ ಕೊರಗದೆ ಮುನ್ನಡೆದರೆ ಕಠಿಣ ಸಮಸ್ಯೆಗೂ ಸುಲಭ ಪರಿಹಾರ ಸಿಗಲಿದೆ.
ಸಿಂಹ ರಾಶಿ: ಈ ದಿನ ಬಹಳ ಸಿಂಹ ರಾಶಿ ಅವರಿಗೆ ಕ್ಲಿಷ್ಟಕರವಾದ ದಿನವಾಗಿದೆ. ವ್ಯಾಪಾರ, ವ್ಯವಹಾರ , ಕುಟುಂಬ ಸಂಬಂಧ ಗಳಿಂದ ಅನೇಕ ವಿಚಾರದಲ್ಲಿ ಒತ್ತಡ ಇತರ ಸಮಸ್ಯೆ ಇರಲಿದೆ. ವ್ಯಾಪಾರ ವ್ಯವಹಾರದಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ಯಾವುದೇ ಮುಖ್ಯ ನಿರ್ಧಾರ ಕೈಗೊಳ್ಳು ವುದು ಬೇಡ. ಈ ದಿನ ಮೀಟಿಂಗ್ ಇತರ ಕೆಲಸಗಳ ಮುಖ್ಯ ನಿರ್ಣಯ ತೆಗೆದುಕೊಳ್ಳದಿರುವುದು ಉತ್ತಮ.
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಈ ದಿನ ಎಲ್ಲ ವಿಚಾರ ದಲ್ಲಿಯೂ ಯಶಸ್ಸು ಸಿಗಲಿದೆ. ಸಹೋದರಿ, ಸಹೋದರರಿಂದ ಹೆಚ್ಚಿನ ನೆಮ್ಮದಿ , ಗೌರವ ಪ್ರಾಪ್ತಿಯಾಗಲಿದೆ. ಸಂಸಾರ ತಾಪ ತ್ರಯ ಇತ್ಯಾದಿ ಸಮಸ್ಯೆ ಪರಿಹಾರವಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಅಧಿಕ ಮುತುವರ್ತಿ ವಹಿಸಿದರೆ ನಷ್ಟ ತಪ್ಪಿಸಬಹುದು.
ತುಲಾ ರಾಶಿ: ತುಲಾ ರಾಶಿ ಅವರು ಈ ದಿನ ಸಂಸಾರ ವಿಚಾರ ಗಳಿಗೆ ಅಧಿಕ ಮಹತ್ವ ನೀಡಬೇಕು. ಕಾರ್ಯಕ್ಷೇತ್ರದಲ್ಲಿ ಇಂದು ಸ್ವಲ್ಪ ಕ್ಲಿಷ್ಟಕರವಾದ ದಿನ ಎಂದು ಹೇಳಬಹುದು. ಇಂದು ಅನಿ ರೀಕ್ಷಿತ ಧನವ್ಯಯವಾಗಲಿದೆ. ವ್ಯಾಪಾರ , ವ್ಯವಹಾರ ಹಾಗೂ ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಯೋಚಿಸಬೇಕಾದ ಪರಿಸ್ಥಿತಿ ಬರಲಿದೆ. ಹಳೆ ಕಿರಿಕಿರಿ ಮಾನಸಿಕ ಸಮಸ್ಯೆ ಎಲ್ಲವೂ ಕೂಡ ಪರಿಹಾರ ಆಗಲಿದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಈ ದಿನ ಬಹಳ ಉತ್ತಮ ದಿನವಾಗಿದೆ. ಈ ಹಿಂದೆ ಇದ್ದ ಅನೇಕ ಸಮಸ್ಯೆ ಗೊಂದಲ ಎಲ್ಲವೂ ಪರಿಹಾರವಾಗಲಿದೆ. ಹೊಸ ಮಿತ್ರರಿಂದ ಸಂತಸದ ದಿನ ಕಳೆಯ ಲಿದ್ದೀರಿ. ಈ ದಿನ ಬಹಳ ಸಂತೋಷ ನೆಮ್ಮದಿ ನಿಮಗೆ ಪ್ರಾಪ್ತಿಯಾಗಲಿದೆ. ಹಬ್ಬದ ಸಮಯ ವಾದ್ದರಿಂದ ಅನಿರೀಕ್ಷಿತ ವ್ಯಕ್ತಿಗಳ ಆಗಮನ ಮನಸ್ಸಿಗೆ ಖುಷಿ ನೀಡಲಿದೆ.
ಇದನ್ನೂ ಓದಿ:Vastu Tips: ಅದೃಷ್ಟ, ಸಮೃದ್ಧಿಯನ್ನು ಆಹ್ವಾನಿಸುತ್ತದೆ ಬಿದಿರು
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಈ ದಿನ ಕಷ್ಟಕರವಾದ ದಿನವಾಗಿದೆ. ಈ ದಿನ ಯಾವುದೇ ಮುಖ್ಯ ವಿಚಾರಗಳ ನಿರ್ಣಯ ತೆಗೆದುಕೊಳ್ಳುವುದು ಬೇಡ. ಆದರೆ ಕೆಲವು ಮಿತ್ರ ರಿಂದ ಸಂಬಂದ ಹಾಳಾಗಿ ವೈಮನಸ್ಸು ಉಂಟಾಗಲಿದೆ. ವ್ಯಾಪಾರ ವ್ಯವಹಾರ, ಪ್ರೀತಿ ಸಂಬಂಧದಲ್ಲಿ ಜಗಳ, ಮನಸ್ಥಾಪ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಆದಷ್ಟು ಜಾಗರೂಕತೆಯಿಂದ ಈ ದಿನ ಇರಬೇಕು.
ಮಕರ ರಾಶಿ: ಮಕರ ರಾಶಿ ಅವರಿಗೆ ಈ ದಿನ ಅತ್ಯುತ್ತಮವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಬುದ್ಧಿ ಶಕ್ತಿ ಅತ್ಯಂತ ಚುರುಕಾಗಿ ಇರಲಿದೆ. ಅದೇ ರೀತಿ ಧನಾಗಮನ ವಾಗಲಿದೆ. ಕೆಲಸ ಕಾರ್ಯ ಎಲ್ಲವೂ ಈಗ ಸರಾಗವಾಗಿ ಆಗಲಿದೆ. ಹಳೆಯ ವೈಮನಸ್ಸು ಎಲ್ಲವೂ ದೂರಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ದಾಂಪತ್ಯ, ಸ್ನೇಹ ಸಂಬಂಧಗಳು ಇಂದು ಬಹಳ ಚೆನ್ನಾಗಿ ಇರಲಿದೆ. ನಿಮ್ಮ ಮಿತ್ರರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಕುಂಭರಾಶಿ: ಕುಂಭ ರಾಶಿ ಅವರಿಗೆ ಈ ದಿನ ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚಾಗುವ ದಿನವಾಗಿದೆ. ಈ ದಿನ ನಿಮ್ಮ ಆಪ್ತರ ಸಹಕಾರ ಸಿಗಲಿದ್ದು, ಭಾಗ್ಯೋದಯವಾಗಲಿದೆ. ಅನಗತ್ಯ ವೈಮನಸ್ಸುಗಳು ಉಂಟಾಗಿ ಕುಟುಂಬ , ಸ್ನೇಹಿತರಿಂದ ಅನಗತ್ಯ ಮಾನಸಿಕ ಹಿಂಸೆ ಆಗಬಹುದು. ಹೀಗಾಗಿ ವ್ಯಾಪಾರ ವ್ಯವಹಾರ ಎಲ್ಲ ವಿಚಾರದಲ್ಲೂ ಆದಷ್ಟು ಜಾಗೃತೆಯಿಂದ ವ್ಯವಹರಿಸಬೇಕು.
ಮೀನ ರಾಶಿ: ಮೀನ ರಾಶಿ ಅವರಿಗೆ ಈ ದಿನ ಬಹಳ ಉತ್ತಮ ಫಲ ಇರಲಿದೆ. ಮನಸ್ಸಿಗೆ ಸಾಕಷ್ಟು ಗೊಂದಲಗಳು ದೂರಾಗಲಿದೆ. ಈ ದಿನನ ಮೀನ ರಾಶಿಗೆ ಭಗ್ಯೋದಯವಾಗಲಿದೆ. ಹಿರಿಯರ ಆಶೀರ್ವಾದ ಬಹಳ ಮುಖ್ಯ. ಯಾವುದೆ ಮುಖ್ಯ ನಿರ್ಧಾರ ಕೈಗೊಳ್ಳುವುದು ಬೇಡ. ವ್ಯಾಪಾರ ವ್ಯವಹಾರ ಇತರ ಮಾತುಕತೆಯಲ್ಲಿ ತುಂಬಾ ಜಾಗರೂಕತೆಯಿಂದ, ವೀವೆಕಯುತವಾಗಿ ವ್ಯವಹರಿಸಬೇಕು.