ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ಇಂದು ರಾಹುವಿನ ಪ್ರಭಾವ: ಯಾರಿಗೆ ಒಳಿತು? ಯಾರಿಗೆ ಕೆಡುಕು?

ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ತ್ರಯೋದಶಿ ತಿಥಿ, ಮತ್ತು ಶತಭಿಷ ನಕ್ಷತ್ರ ಇದ್ದು ಅಕ್ಟೋಬರ್‌ 5 ನೇ ತಾರೀ‌ಖಿನ ಭಾನುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

ಬೆಂಗಳೂರು: ಇಂದು ವಿಶ್ವ ವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ತ್ರಯೋದಶಿ ತಿಥಿ, ಅಕ್ಟೋಬರ್ 5 ನೇ ತಾರೀಖಿನ ಭಾನುವಾರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾ ಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ(Daily Horoscope) ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಶತಭಿಷ ನಕ್ಷತ್ರ ಇದ್ದು ಇದರ ಅಧಿಪತಿ ರಾಹು ಆಗಿದ್ದು ಎಲ್ಲ ರಾಶಿಗೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಇಂದು ಅತ್ಯುತ್ತಮ ದಿನ ಆಗಲಿದೆ.‌ ಅತೀಯಾದ ಸಹಕಾರ ನಿಮ್ಮ ಮಿತ್ರರಿಂದ ಸಿಗಲಿದೆ. ಆದರೆ ನಾಳೆಯ ಕೆಲಸಗಳಿಗೆ ಅತೀಯಾದ ಪ್ಲಾನ್ ಮಾಡಿಕೊಳ್ಳಬೇಡಿ. ಇಂದಿನ ದಿನದ ಖುಷಿಯೊಂದಿಗೆ ಸಮಯ ಕಳೆಯಿರಿ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಕಾರ್ಯಕ್ಷೇತ್ರದಲ್ಲಿ ಅತೀ ದೊಡ್ಡದಾದ ಯಶಸ್ಸು ಸಿಗಲಿದೆ. ಇಂದು ಒಳ್ಳೆಯ ಫಲಗಳು ನಿಮಗೆ ಪ್ರಾಪ್ತಿ ಯಾಗಲಿದೆ. ಆದರೆ ಶತ್ರುಗಳ ಬಗ್ಗೆ ಜಾಗೃತ ರಾಗಿರಿ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಭಾಗ್ಯೋದಯವಾದ ದಿನವಾಗುತ್ತದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಆತ್ಮ ವಿಶ್ವಾಸ ಕೂಡ ಹೆಚ್ಚಾಗಿ ಇರಲಿದೆ. ನಿಮ್ಮ ಶುಭಕರ ಕಾರ್ಯಗಳೆಲ್ಲವೂ ಇಂದು ಬಹಳ ಸುಲಭವಾಗಿ ನಡೆಯಲಿದೆ

‌ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಕ್ಷೇಷಕರವಾದ ದಿನವಾಗುತ್ತದೆ. ಮುಖ್ಯವಾದ ನಿರ್ಧಾರಗಳನ್ನು ಇಂದು ಮಾಡಲು ಹೋಗಬೇಡಿ. ಮುಖ್ಯವಾದ ಕೆಲಸ, ಮೀಟಿಂಗ್ ಇತ್ಯಾದಿ ಗಳನ್ನು ಮುಂದಕ್ಕೆ ಹಾಕಿದರೆ ಒಳಿತು. ಇವತ್ತು ಮನಸ್ಸಿನಲ್ಲಿ ಆತಂಕ ಹೆಚ್ಚು ಇರುತ್ತದೆ.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಇಂದು ಅತ್ಯುತ್ತಮ ದಿನ ಇದ್ದು ಮುಖ್ಯವಾದ ನಿರ್ಧಾರಗಳು ನಿಮ್ಮ ಪರ ಇರುತ್ತದೆ. ಎಲ್ಲರೂ ನಿಮ್ಮ ಪರವಾಗಿ ಇರುತ್ತಾರೆ. ಅದೇ ರೀತಿ ಸ್ನೇಹಿತರ ಜೊತೆ ಸೌಹಾರ್ದ, ದಾಂಪತ್ಯ ಜೀವನದಲ್ಲೂ ನೆಮ್ಮದಿ ಇರುತ್ತದೆ. ಬಿಸೆನೆಸ್ ವ್ಯವಹಾರದಲ್ಲೂ ಯಶಸ್ಸು ಸಿಗುತ್ತದೆ.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಉತ್ತಮ ವಾದ ದಿನ. ಸಾಮಾಜಿಕ ವ್ಯವಹಾರದಲ್ಲಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಶತ್ರುಗಳಿಂದ ಜಯ ಗಳಿಸುತ್ತೀರಿ. ಎಲ್ಲವನ್ನು ಒಳ್ಳೆಯ ರೀತಿಯಲ್ಲಿ ನೀವು ಸಾಧಿಸಿಕೊಳ್ಳಬಹುದು.

ತುಲಾ ರಾಶಿ: ತುಲಾ ರಾಶಿಯರ ರಾಶಿಯಲ್ಲಿ ಇರುವವರಿಗೆ ಸ್ವಲ್ಪ ಕಷ್ಟಕರವಾದ ದಿನ ವಾಗುತ್ತದೆ. ಪ್ರೀತಿ,ಪ್ರೇಮ ವಿಚಾರದಲ್ಲಿ ಮನಸ್ಸಿಗೆ ಇಂದು ನೋವು ಆಗಬಹುದು.‌ ಆದರೆ ನೀವು ಅಂದು ಕೊಳ್ಳದ ಉಡುಗೊರೆ ನಿಮಗೆ ಇಂದು ಬರಬಹುದು.

ಇದನ್ನು ಓದಿ;Vastu Tips: ಮನೆಯಲ್ಲಿ ಶಕ್ತಿ, ಸಮೃದ್ಧಿಯನ್ನು ಹೆಚ್ಚಿಸುತ್ತವೆ ಈ ಬಣ್ಣಗಳು

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಸಂಸಾರದ ಬಗ್ಗೆ ಅನೇಕ ಯೋಚನೆಗಳು ಇರಬಹುದು.‌ ತಾಯಿಯ ಆರೋಗ್ಯ ಬಗ್ಗೆ ಸ್ವಲ್ಪ ತೊಂದರೆ ಉಂಟಾಗಬಹುದು.‌ ಆಸ್ತಿ ಪಾಸ್ತಿ ವಿಚಾರದಲ್ಲಿ ನಿರ್ಧಾರಗಳು ಕೈಗೊಳ್ಳಲು ಉತ್ತಮವಲ್ಲ. ಎರಡು ದಿನ‌ ಕಾಯುವುದು ಒಳ್ಳೆಯದು.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಇಂದು ಉತ್ತಮ ದಿನ ಆಗಲಿದ್ದು ಮನಸ್ಸಿಗೆ ನೆಮ್ಮದಿ ಇರುತ್ತದೆ. ಸಾಮಾಜಿಕ ವ್ಯವಹಾರದಲ್ಲಿ ಅತ್ಯುತ್ತಮವಾದ ಆತ್ಮವಿಶ್ವಾಸ ಇರುತ್ತದೆ. ಬಂಧು ಬಾಂಧವರಿಂದ ನೆರೆ ಹೊರೆಯವರಿಂದ ಅತ್ಯುತ್ತಮ ಸೌಹಾರ್ದತೆ ಪ್ರಾಪ್ತಿ ಯಾಗುತ್ತದೆ.

ಮಕರ ರಾಶಿ: ಮಕರ ರಾಶಿ ಅವರು ಕುಟುಂಬ ವಿಚಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕು.‌ ಅದೇ ರೀತಿ ಹಣಕಾಸಿನ ವ್ಯವ ಹಾರದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು. ಇಂದು ಮನೆಯವರ ಬಗ್ಗೆಯೇ ಹೆಚ್ಚಿನ ಯೋಚನೆ ಮಾಡಬೇಕಾಗುತ್ತದೆ.

ಕುಂಭರಾಶಿ: ಕುಂಭ ರಾಶಿಯವರಿಗೆ ಉತ್ತಮ ದಿನ. ಹಿಂದಿನ ಮೂರು ದಿನಗಳಲ್ಲಿ ಇದ್ದ ಮನಸ್ಸಿನ ಕ್ಲೇಷ ಎಲ್ಲವೂ ಮಯವಾಗಲಿದೆ. ನಿಮ್ಮ ನೆಮ್ಮದಿಯನ್ನು ಬೇರೆಯವರ ಜೊತೆ ಹಂಚಿಕೊಂಡು ಖುಷಿಯಿಂದ ಸಮಯ ಕಳೆಯುತ್ತೀರಿ

ಮೀನ ರಾಶಿ: ಮೀನ ರಾಶಿ ಅವರಿಗೆ ಅತ್ಯುತ್ತಮ ವಾದ ದಿನ‌ ಆಗಿದೆ. ಮನಸ್ಸಿಗೆ ನೆಮ್ಮದಿ ಆದರೆ ಇದೆ‌. ಆದರೆ ಮಧ್ಯಾಹ್ನ ಬಳಿಕ ಮಿತ್ರರು ನಿಮ್ಮಿಂದ ದೂರವಾಗಬಹುದು. ಮುಖ್ಯವಾದ ಕೆಲಸದಲ್ಲಿ ತೊಂದರೆ ಆಗಬಹುದು.‌ಹಾಗಾಗಿ ಆಧ್ಯಾತ್ಮಿಕತೆಯಿಂದ ಸಮಯ ಕಳೆದರೆ ಉತ್ತಮ.