ಬೆಂಗಳೂರು: ಹಿಂದೂ ಧರ್ಮದಲ್ಲಿ ದೇವರ ಆರಾಧನೆಯಲ್ಲಿ ಹೂವಿನ ಮಹತ್ವ ಅತ್ಯಂತ ವಿಶಿಷ್ಟವಾಗಿದೆ. ಪುಷ್ಪವು ಶುದ್ಧತೆ, ಭಕ್ತಿ, ವಿನಯ ಮತ್ತು ಪ್ರೀತಿಯ ಪ್ರತೀಕವಾಗಿದೆ. ಜ್ಯೋತಿಷ್ಯ ಶಾಸ್ತ್ರಗಳಲ್ಲಿ (Astrology) ಪುಷ್ಪಾರ್ಚನೆ (Flower Offering) ಮಾಡುವುದರಿಂದ ಭಗವಂತನು ಶೀಘ್ರ ಪ್ರಸನ್ನನಾಗುತ್ತಾನೆ ಎಂದು ಹೇಳಲಾಗಿದೆ. ಚಿನ್ನ, ಬೆಳ್ಳಿ, ವಜ್ರಾಭರಣಗಳಿಗಿಂತ ಭಕ್ತಿಯಿಂದ ಅರ್ಪಿಸಿದ ಒಂದು ಹೂವು ಹೆಚ್ಚಿನ ಫಲವನ್ನು ನೀಡುತ್ತದೆ ಎನ್ನುವುದು ನಂಬಿಕೆ.
ಪುಷ್ಪವನ್ನು ದೇವರ ತಲೆಯ ಮೇಲೆ ಅಲಂಕರಿಸುವುದು ಮತ್ತು ಪಾದಗಳಲ್ಲಿ ಅರ್ಪಿಸುವುದು ಪೂಜೆಯ ಪೂರ್ಣತೆಯನ್ನು ಸೂಚಿಸುತ್ತದೆ. ಹೂವಿನ ಸುಗಂಧವು ಹೇಗೆ ಎಲ್ಲೆಡೆ ಹರಡುತ್ತದೆಯೋ ಹಾಗೆಯೇ ಭಕ್ತನ ಕೀರ್ತಿಯು ಹರಡುತ್ತದೆ ಎಂದು ನಂಬಲಾಗುತ್ತದೆ.
ಹೂಮಾಲೆಯನ್ನು ಅರ್ಪಿಸಿದರೆ ದ್ವಿಗುಣ ಫಲ ದೊರೆಯುತ್ತದೆ ಎನ್ನುವ ಮಾತಿದೆ. ದಾರಿದ್ರ್ಯ ನಿವಾರಣೆ, ಲಕ್ಷ್ಮೀ ಕೃಪೆ, ಸೌಭಾಗ್ಯ ವೃದ್ಧಿ, ಆರೋಗ್ಯ, ಶಕ್ತಿ, ಸಂತಾನ ಪ್ರಾಪ್ತಿ ಹಾಗೂ ಕುಟುಂಬದಲ್ಲಿ ಶುಭ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಪುರಾಣಗಳು ವಿವರಿಸುತ್ತವೆ.
ಹಾಗಾದ್ರೆ ಬನ್ನಿ ಜ್ಯೋತಿಷ್ಯ ಶಾಸ್ತ್ರ ಸಲಹೆ(Astro Tips) ಪ್ರಕಾರ ಯಾವ ದೇವರಿಗೆ ಯಾವ ಹೂವನ್ನು ಅರ್ಪಿಸಿದ್ದರೆ ಒಳ್ಳೆಯದು..? ಅದರಿಂದಾಗುವ ಪ್ರಯೋಜನಗಳು ಏನು ಎಂದು ತಿಳಿದುಕೊಳ್ಳೋಣ
ಗಣಪತಿ ಪೂಜೆಯಲ್ಲಿ ಹೂವಿನ ಮಹತ್ವ
ಗಣಪತಿಗೆ ತುಳಸಿಯನ್ನು ಹೊರತುಪಡಿಸಿ ಬಹುತೇಕ ಹೂವುಗಳು ಪ್ರಿಯವಾಗಿವೆ. ವಿಶೇಷವಾಗಿ ದುರ್ವಾ ಮತ್ತು ಶಮಿ ಎಲೆಗಳು ಬಹಳ ಪ್ರಿಯ. ದುರ್ವಾ ಮೂರು ಅಥವಾ ಐದು ಎಲೆಗಳಿರುವುದನ್ನು ಅರ್ಪಿಸುವ ಪದ್ಧತಿ ಇದೆ. ದುರ್ವಾ ಅರ್ಪಿಸಿದರೆ ಆಯುಷ್ಯ, ಆರೋಗ್ಯ ಮತ್ತು ವಿಘ್ನ ನಿವಾರಣೆ ದೊರೆಯುತ್ತದೆ ಎಂದು ನಂಬಲಾಗಿದೆ.
Astro Tips: ಮಹಿಳೆಯರು ಶನಿವಾರ ಹನುಮಂತನ ಪೂಜೆ ಮಾಡಬಹುದೇ? ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಹೇಳೋದೇನು?
ಶಿವ ಪೂಜೆಯಲ್ಲಿ ಪುಷ್ಪಾರ್ಚನೆ
ಶಿವನಿಗೆ ಬಿಲ್ವಪತ್ರೆ ಮತ್ತು ಧತ್ತೂರಾ ಅತ್ಯಂತ ಪ್ರಿಯ. ಅಗಸ್ತ್ಯ, ಕೆಂಪು ಗುಲಾಬಿ, ಶಂಖಪುಷ್ಪ, ನಾಗಚಂಪಾ, ದಾಸವಾಳ, ನೀಲಕಮಲ, ಕಮಲ ಇತ್ಯಾದಿ ಹೂವುಗಳನ್ನು ಅರ್ಪಿಸಬಹುದು. ಆದರೆ ಕುಂದ ಮತ್ತು ಕೇದಿಗೆ ಹೂವನ್ನು ಅರ್ಪಿಸಬಾರದು ಎಂದು ಹೇಳಲಾಗಿದೆ. ಬಿಲ್ವಪತ್ರೆಯನ್ನು ತಲೆಕೆಳಗಾಗಿ ಅರ್ಪಿಸುವ ವಿಶೇಷ ಪದ್ಧತಿ ಶಿವಪೂಜೆಯಲ್ಲಿ ಮಾತ್ರ ಇದೆ.
ವಿಷ್ಣು ಮತ್ತು ಕೃಷ್ಣನಿಗೆ ಅರ್ಪಿಸಬೇಕಾದ ಹೂವು
ವಿಷ್ಣುಗೆ ತುಳಸಿ ಅತ್ಯಂತ ಪ್ರಿಯ. ರಾಮ ತುಳಸಿ, ಶ್ಯಾಮ ತುಳಸಿ ಎರಡೂ ಸಮಾನವಾಗಿ ಪ್ರೀತಿಯವು. ಕಮಲ, ಪಾರಿಜಾತ, ಚಂಪಾ, ಕನೇರ ಹೂವುಗಳನ್ನು ಅರ್ಪಿಸಬಹುದು. ಆದರೆ ಎಕ್ಕದ ಹೂವು ಮತ್ತು ಧತ್ತೂರಾ ಬಳಸಬಾರದು.
ಕೃಷ್ಣನಿಗೆ ಕುಮುದ, ಮಲ್ಲಿಗೆ, ಜಾಜಿ, ಚಂಪಾ, ಪಲಾಶ, ದುರ್ವಾ ಮತ್ತು ವನಮಾಲೆ ಪ್ರಿಯವೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ದೇವಿ ಆರಾಧನೆಗೆ ಹೂವು
ದುರ್ಗಾ ಹಾಗೂ ಲಕ್ಷ್ಮೀಗೆ ಕೆಂಪು ಹೂವುಗಳು ವಿಶೇಷ ಪ್ರಿಯ. ಗುಲಾಬಿ, ಜಪಕುಸುಮ, ಕೆಂಪು ಕನೇರ, ಸುಗಂಧಯುಕ್ತ ಬಿಳಿ ಹೂವುಗಳನ್ನು ಅರ್ಪಿಸಬಹುದು. ಲಕ್ಷ್ಮಿಗೆ ಕಮಲ ಅತ್ಯಂತ ಪ್ರಿಯ. ದೇವಿಗೆ ಎಕ್ಕದ ಹೂವು ಮತ್ತು ದುರ್ವಾವನ್ನು ಅರ್ಪಿಸಬಾರದು ಎಂದು ಹೇಳಲಾಗಿದೆ.
ಪುಷ್ಪಾರ್ಚನೆ ಮಾಡುವಾಗ ಗಮನಿಸಬೇಕಾದ ನಿಯಮಗಳು
ಹೂವುಗಳನ್ನು ಮಧ್ಯಾಹ್ನದ ನಂತರ ಕೀಳಬಾರದು. ಭಾನುವಾರ ಹಾಗೂ ದ್ವಾದಶಿಯಂದು ತುಳಸಿಯನ್ನು ಮುರಿಯಬಾರದು.
ಯಾವುದೇ ಹೂ ಅಥವಾ ಎಲೆಯನ್ನು ಹಿಮ್ಮುಖವಾಗಿ ಅರ್ಪಿಸಬಾರದು.
ಚಂಪಾ ಮೊಗ್ಗು ಹೊರತುಪಡಿಸಿ ಇತರ ಹೂವಿನ ಮೊಗ್ಗುಗಳನ್ನು ಅರ್ಪಿಸಬಾರದು.
ಒಟ್ಟಿನಲ್ಲಿ, ಭಕ್ತಿ, ಶುದ್ಧ ಮನಸ್ಸು ಮತ್ತು ನಿಯಮ ಪಾಲನೆ ಇವೆಲ್ಲವೂ ಪುಷ್ಪಾರ್ಚನೆಯ ಮುಖ್ಯ ಅಂಶಗಳಾಗಿವೆ. ಭಗವಂತನಿಗೆ ಹೃದಯಪೂರ್ವಕವಾಗಿ ಅರ್ಪಿಸಿದ ಒಂದು ಹೂವು ಸಹ ಅನಂತ ಪುಣ್ಯಫಲವನ್ನು ನೀಡುತ್ತದೆ ಎನ್ನುವುದು ಹಿಂದೂ ಧರ್ಮದ ಆಳವಾದ ನಂಬಿಕೆ.