ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Astro Tips: ಶನಿವಾರ ಈ ಸರಳ ಪರಿಹಾರಗಳಿಂದ ಶನಿ ದೋಷ- ಹಣಕಾಸಿನ ಸಮಸ್ಯೆ ದೂರ!

ಶನಿವಾರ ಶನಿದೇವರ ಪೂಜೆ ಮಾಡುವುದರಿಂದ ಶನಿ ದೋಷದ ಪರಿಣಾಮ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಕಪ್ಪು ಎಳ್ಳಿನ ಅರ್ಘ್ಯ, ಶಿವ ಪೂಜೆ ಹಾಗೂ ಹನುಮಂತನ ಆರಾಧನೆ ಮಾಡಿದರೆ ಹಣಕಾಸಿನ ಸಮಸ್ಯೆಗಳು ದೂರವಾಗಬಹುದು ಎಂದು ಧಾರ್ಮಿಕ ನಂಬಿಕೆ ಹೇಳುತ್ತದೆ.

ಶನಿವಾರ ಶನಿ ಪೂಜೆ

ಬೆಂಗಳೂರು: ಸನಾತನ ಧರ್ಮದಲ್ಲಿ(Santhana Dharma) ಶನಿವಾರವನ್ನು(Saturday) ನ್ಯಾಯದ ದೇವರಾದ ಶನಿದೇವರಿಗೆ(Shanideva) ಅರ್ಪಿಸಲಾಗಿದೆ. ಈ ದಿನ ಭಕ್ತರು ಶನಿದೇವರನ್ನು ಭಕ್ತಿಭಾವದಿಂದ ಪೂಜಿಸಿ, ಉಪವಾಸ ವ್ರತಗಳನ್ನು ಆಚರಿಸುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ(Astrology) ಶನಿದೇವರು ವ್ಯಕ್ತಿಯ ಕರ್ಮಕ್ಕೆ ಅನುಗುಣವಾಗಿ ಫಲಗಳನ್ನು ನೀಡುವ ದೇವರು. ಒಳ್ಳೆಯ ಕರ್ಮ ಮಾಡಿದವರಿಗೆ ಶುಭ ಫಲ ನೀಡುವುದರ ಜೊತೆಗೆ, ತಪ್ಪು ಕಾರ್ಯಗಳನ್ನು ಮಾಡುವವರಿಗೆ ಶಿಕ್ಷೆಯನ್ನೂ ನೀಡುತ್ತಾರೆ.

ಶನಿಯ ಅಶುಭ ದೃಷ್ಟಿ ವ್ಯಕ್ತಿಯ ಜೀವನದಲ್ಲಿ ಹಲವು ಕಷ್ಟಗಳು, ಆರ್ಥಿಕ ಸಮಸ್ಯೆಗಳು ಹಾಗೂ ಅಡೆತಡೆಗಳನ್ನು ಉಂಟುಮಾಡಬಹುದು ಎಂದು ನಂಬಲಾಗಿದೆ. ಆದ್ದರಿಂದ ಶನಿವಾರದಂದು ಶನಿದೇವರನ್ನು ನಿಯಮಿತವಾಗಿ ಪೂಜಿಸುವುದು ಉತ್ತಮ ಎಂದು ಜ್ಯೋತಿಷಿಗಳು ಸಲಹೆ(Astro Tips) ನೀಡುತ್ತಾರೆ. ಕೆಲವು ಸರಳ ಪರಿಹಾರಗಳನ್ನು ಅನುಸರಿಸಿದರೆ ಶನಿ ದೋಷದ ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ನಂಬಲಾಗಿದೆ.

ಶನಿ ದೋಷ ನಿವಾರಣೆಗೆ ಈ ಕ್ರಮಗಳು

ಶನಿವಾರ ಬೆಳಿಗ್ಗೆ ಸ್ನಾನ ಮಾಡಿದ ನಂತರ ಕಪ್ಪು ಬಟ್ಟೆಯನ್ನು ಧರಿಸಿ. ಬಳಿಕ ಅರಳಿ ಮರಕ್ಕೆ ಕಪ್ಪು ಎಳ್ಳು ಮಿಶ್ರಿತ ನೀರನ್ನು ಅರ್ಘ್ಯವಾಗಿ ಅರ್ಪಿಸಬೇಕು. ಹಿಂದೂ ನಂಬಿಕೆ ಪ್ರಕಾರ ಅರಳಿ ಮರದಲ್ಲಿ ವಿಷ್ಣು, ಲಕ್ಷ್ಮೀ ದೇವಿ ಹಾಗೂ ಪೂರ್ವಜರ ವಾಸವಿದೆ ಎಂದು ಹೇಳಲಾಗುತ್ತದೆ. ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕಿ, ದೀಪ ಬೆಳಗಿ ಶನಿದೇವರಿಗೆ ಆರತಿ ಸಲ್ಲಿಸಿದರೆ ಶನಿ ಗ್ರಹದ ಅಶುಭ ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ನಂಬಿಕೆ ಇದೆ. ಇದರಿಂದ ಲಕ್ಷ್ಮೀ ದೇವಿಯ ಕೃಪೆಯೂ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

ಹಣಕಾಸಿನ ಸಮಸ್ಯೆ ನಿವಾರಣೆಗೆ ಶಿವ ಪೂಜೆ

ಧರ್ಮಗ್ರಂಥಗಳ ಪ್ರಕಾರ ಶನಿದೇವರು ಶಿವ ಹಾಗೂ ಶ್ರೀಕೃಷ್ಣರ ಪರಮ ಭಕ್ತ. ಆದ್ದರಿಂದ ಶನಿವಾರ ಶಿವನ ಪೂಜೆ ಮಾಡಿದರೆ ಶನಿದೇವರು ಸಂತೋಷಪಟ್ಟು ಅನುಗ್ರಹ ನೀಡುತ್ತಾರೆ ಎಂದು ನಂಬಲಾಗಿದೆ. ಶನಿವಾರ ಸ್ನಾನ ಮಾಡಿದ ಬಳಿಕ ಗಂಗಾಜಲದಲ್ಲಿ ಕಪ್ಪು ಎಳ್ಳು ಮತ್ತು ಬಿಲ್ವಪತ್ರೆಗಳನ್ನು ಬೆರೆಸಿ ಶಿವಲಿಂಗಕ್ಕೆ ಅಭಿಷೇಕ ಮಾಡಿದರೆ ಜಾತಕದಲ್ಲಿನ ಅಶುಭ ಗ್ರಹಗಳ ಪರಿಣಾಮ ಕಡಿಮೆಯಾಗುತ್ತದೆ. ಇದರಿಂದ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗುತ್ತದೆ.

Astro Tips: ಲಕ್ಷ್ಮಿ ಕೃಪೆ ಬೇಕೇ? ಹಾಗಾದ್ರೆ ಶುಕ್ರವಾರ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ಹನುಮಂತನ ಪೂಜೆಯ ಮಹತ್ವ

ಪುರಾಣಗಳ ಪ್ರಕಾರ ಹನುಮಂತನು ಶನಿದೇವರನ್ನು ರಾವಣನ ಬಂಧನದಿಂದ ಮುಕ್ತಗೊಳಿಸಿದ್ದಾನೆ ಎಂದು ಹೇಳಲಾಗುತ್ತದೆ. ಆ ಸಂದರ್ಭದಲ್ಲಿ ಹನುಮಂತನ ಭಕ್ತರಿಗೆ ಶನಿದೇವರು ತೊಂದರೆ ಕೊಡಬಾರದು ಎಂದು ವಾಗ್ದಾನ ಮಾಡಿದ್ದಾನೆ ಎಂಬ ನಂಬಿಕೆ ಇದೆ.

ಆದ್ದರಿಂದ ಶನಿವಾರ ಹನುಮಂತನನ್ನು ಪೂಜಿಸಿ, ಹನುಮಾನ್ ಚಾಲೀಸಾ ಪಠಿಸುವುದು ಉತ್ತಮ. ಹನುಮಂತನಿಗೆ ಕೆಂಪು ಹೂವು, ಹಣ್ಣು ಹಾಗೂ ಲಡ್ಡುಗಳನ್ನು ಅರ್ಪಿಸುವುದರಿಂದ ಶನಿ ದೋಷದ ಪರಿಣಾಮ ಕಡಿಮೆಯಾಗುತ್ತದೆ ಎಂದು ಭಕ್ತರು ನಂಬುತ್ತಾರೆ.

ಶನಿವಾರ ಶನಿದೇವರ ಪೂಜೆಯ ಸಮಯದಲ್ಲಿ ಈ ಪರಿಹಾರಗಳನ್ನು ಪಾಲಿಸಿದರೆ ಜೀವನದಲ್ಲಿ ಶಾಂತಿ, ಸಮೃದ್ಧಿ ಹಾಗೂ ಸಂತೋಷ ದೊರೆಯುತ್ತದೆ ಎಂದು ಧಾರ್ಮಿಕ ನಂಬಿಕೆ ಇದೆ.