ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Astro Tips: ಗುರುವಾರ ಈ ಕ್ರಮಗಳನ್ನು ಪಾಲಿಸಿದರೆ ಶಾಂತಿ– ಸಮೃದ್ಧಿ ನಿಮ್ಮದು!

ಗುರುವಾರವನ್ನು ವಿಷ್ಣು ದೇವರು ಮತ್ತು ಗುರು ಗ್ರಹ ಬೃಹಸ್ಪತಿಗೆ ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಪೂಜೆ, ಉಪವಾಸ ಮತ್ತು ದಾನ ಧರ್ಮಗಳನ್ನು ಆಚರಿಸಿದರೆ ಮನೆಯಲ್ಲಿ ಶಾಂತಿ, ಸಂತೋಷ ಹಾಗೂ ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

ಗುರುವಾರ ಪೂಜೆ ಸಲಹೆ

ಬೆಂಗಳೂರು: ವಾರದ ಪ್ರತಿದಿನವೂ ಒಂದು ದೇವತೆಗೆ ಸಮರ್ಪಿತವಾಗಿದ್ದು, ಗುರುವಾರವನ್ನು ಭಗವಾನ್ ವಿಷ್ಣು ಹಾಗೂ ಗುರು ಗ್ರಹ ಬೃಹಸ್ಪತಿಗೆ ಸಂಬಂಧಿಸಿದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಶ್ರದ್ಧೆಯಿಂದ ಪೂಜೆ, ಉಪವಾಸ ಮತ್ತು ದಾನ ಧರ್ಮಗಳನ್ನು ಆಚರಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ. ಕುಟುಂಬದಲ್ಲಿ ಶಾಂತಿ ನೆಲೆಸಲು, ಮದುವೆ ಅಡೆತಡೆಗಳು ದೂರಾಗಲು ಹಾಗೂ ಆರ್ಥಿಕ ಸಂಕಷ್ಟ ನಿವಾರಣೆಗೆ ಗುರುವಾರ ಕೆಲವು ನಿಯಮಗಳನ್ನು ಪಾಲಿಸುವುದು ಉತ್ತಮ ಎಂದು ಜ್ಯೋತಿಷ್ಯ ಶಾಸ್ತ್ರ (Astro Tips) ಹೇಳುತ್ತವೆ.

ಹಾಗಾದ್ರೆ ಗುರುವಾರ ಯಾವ ಕಾರ್ಯಗಳನ್ನು ಮಾಡಿದ್ರೆ ಒಳಿತು ಎಂದು ಶಾಸ್ತ್ರ ಹೇಳುತ್ತದೆ..? ಅದರಿಂದ ಆಗುವ ಪ್ರಯೋಜನ ಏನು..? ಎಂಬ ಮಾಹಿತಿ ಇಲ್ಲಿದೆ.

ಮದುವೆ ಅಡೆತಡೆ ನಿವಾರಣೆಗೆ

ಗುರುವಾರ ಬಾಳೆಗಿಡಕ್ಕೆ ನೀರು ಅರ್ಪಿಸಿ, ಶುದ್ಧ ತುಪ್ಪದ ದೀಪ ಹಚ್ಚಿ ಗುರುವಿನ 108 ನಾಮಗಳನ್ನು ಜಪಿಸುವುದು ಶುಭಕರ. ಈ ವಿಧಾನದಿಂದ ವಿವಾಹದಲ್ಲಿ ಉಂಟಾಗಿರುವ ವಿಘ್ನಗಳು ದೂರಾಗಿ, ಶೀಘ್ರದಲ್ಲೇ ಕಂಕಣ ಭಾಗ್ಯ ದೊರಕುತ್ತದೆ ಎನ್ನಲಾಗಿದೆ.

ವಿಷ್ಣುವಿನ ಅನುಗ್ರಹಕ್ಕಾಗಿ

ಈ ದಿನ ಹಳದಿ ಬಣ್ಣದ ವಸ್ತ್ರ ಧರಿಸಿ, ಹಳದಿ ಆಹಾರ ಸೇವಿಸುವುದು ಒಳಿತು. ಇದರಿಂದ ವಿಷ್ಣುವಿನ ಕೃಪೆ ಲಭಿಸಿ ಮನಸ್ಸಿಗೆ ನೆಮ್ಮದಿ ಹಾಗೂ ಜೀವನದ ಸಂಕಷ್ಟಗಳಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ.

Astro Tips: ಶಿವ ಆರಾಧನೆಗೆ ಸೋಮವಾರ ಶ್ರೇಷ್ಠ; ಈ ನಿಯಮ ಪಾಲಿಸಿ ಉಪವಾಸ ವ್ರತ ಮಾಡಿದರೆ ಈಶ್ವರನ ಅನುಗ್ರಹ ಖಚಿತ!

ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿಗೆ

ವ್ಯಾಪಾರ ಸ್ಥಳದಲ್ಲಿ ಅರಿಶಿನದ ಹಳದಿ ಮಾಲೆಯನ್ನು ನೇತುಹಾಕಿ, ವಿಷ್ಣು ಹಾಗೂ ಲಕ್ಷ್ಮೀ ದೇವಿಗೆ ಲಡ್ಡುಗಳನ್ನು ನೈವೇದ್ಯವಾಗಿ ಅರ್ಪಿಸುವುದು ಲಾಭದಾಯಕ. ಹಳದಿ ವಸ್ತುಗಳನ್ನು ದಾನ ಮಾಡುವುದರಿಂದ ಉದ್ಯೋಗದಲ್ಲಿ ಬಡ್ತಿ ಸಾಧ್ಯತೆಗಳು ಹೆಚ್ಚುತ್ತವೆ ಮತ್ತು ದಾಂಪತ್ಯ ಜೀವನದ ಅಡೆತಡೆಗಳು ನಿವಾರಣೆಯಾಗುತ್ತವೆ.

ಈ ದಿನ ತಪ್ಪಿಸಬೇಕಾದ ಕಾರ್ಯಗಳು

ಗುರುವಾರ ಕೂದಲು ಅಥವಾ ಉಗುರು ಕತ್ತರಿಸುವುದನ್ನು ತಪ್ಪಿಸಬೇಕು. ಸೋಪು ಮತ್ತು ಎಣ್ಣೆಯ ಬಳಕೆ ಮಾಡಬಾರದು ಎಂದು ಹೇಳಲಾಗಿದೆ. ಮಹಿಳೆಯರು ಕೂದಲು ತೊಳೆಯುವುದನ್ನು ವಜಾಗೊಳಿಸುವುದು ಶುಭಕರ. ಇಂತಹ ನಿಯಮಗಳನ್ನು ಪಾಲಿಸದಿದ್ದರೆ ಆರ್ಥಿಕ ಸಂಕಷ್ಟ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ.

ಒಟ್ಟಿನಲ್ಲಿ, ಗುರುವಾರದಂದು ನಿಯಮಿತ ಪೂಜೆ, ಉಪವಾಸ ಮತ್ತು ದಾನ ಧರ್ಮಗಳನ್ನು ಆಚರಿಸುವುದರಿಂದ ವಿಷ್ಣುವಿನ ಅನುಗ್ರಹದೊಂದಿಗೆ ಗುರು ಗ್ರಹದ ಆಶೀರ್ವಾದವೂ ದೊರಕುತ್ತದೆ. ಇದರಿಂದ ವ್ಯಕ್ತಿಯ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸರಳತೆ ನೆಲೆಸುತ್ತದೆ ಎಂದು ಪೌರಾಣಿಕ ನಂಬಿಕೆಗಳು ತಿಳಿಸುತ್ತವೆ.