ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ಕಪ್ಪೆಚಿಪ್ಪು ದುರಂತ ದುಃಖಕರ

ನೀರಿನ ರಭಸಕ್ಕೆ ಸಿಲುಕಿ ಇವರೆಲ್ಲರೂ ಮುಳುಗಿದ್ದಾರೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿಗಳನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ನದಿಯಲ್ಲಿ ಇನ್ನೂ ಕೆಲವರು ಕಣ್ಮರೆ ಯಾಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯರ ಸಹಾಯದೊಂದಿಗೆ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ಕಪ್ಪೆಚಿಪ್ಪು ಆರಿಸುವುದನ್ನು ರಾಜ್ಯದ ಕರಾವಳಿಯುದ್ದಕ್ಕೂ ಸ್ಥಳೀಯ ಜನ ಮಾಡುತ್ತಿರುತ್ತಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿ ಸಮೀಪ ಭೀಕರ ದುರಂತ ಸಂಭವಿಸಿದ್ದು, ಕಪ್ಪೆಚಿಪ್ಪು ಆರಿಸಲು ನದಿಗೆ ಇಳಿದಿದ್ದ ಒಂದೇ ಕುಟುಂಬಕ್ಕೆ ಸೇರಿದ 11 ಜನ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಭಟ್ಕಳ ತಾಲೂಕಿನ ಶಿರಾಲಿಯ ಅಳ್ವೆಕೋಡಿ ಸಮೀಪವಿರುವ ತಟ್ಟಿಹಕ್ಕಲ ಕಳಿನಟ್ಟಿ ಹೊಳೆಯಲ್ಲಿ ಈ ದುರಂತ ಸಂಭವಿಸಿದೆ. ಸ್ಥಳೀಯ ನಿವಾಸಿಗಳಾದ ಇವರು ನದಿಯಲ್ಲಿ ಕಪ್ಪೆಚಿಪ್ಪುಗಳನ್ನು ಸಂಗ್ರಹಿಸಲು ತೆರಳಿದ್ದರು. ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ತೀವ್ರವಾಗಿತ್ತು. ಇದರೊಂದಿಗೆ ಸಮುದ್ರದ ಅಲೆಗಳ ಅಬ್ಬರವೂ ಹೆಚ್ಚಾಗಿದ್ದರಿಂದ ಹೊಳೆಯಲ್ಲಿ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದೆ.

ನೀರಿನ ರಭಸಕ್ಕೆ ಸಿಲುಕಿ ಇವರೆಲ್ಲರೂ ಮುಳುಗಿದ್ದಾರೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿಗಳನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ನದಿಯಲ್ಲಿ ಇನ್ನೂ ಕೆಲವರು ಕಣ್ಮರೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯರ ಸಹಾಯದೊಂದಿಗೆ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ಕಪ್ಪೆಚಿಪ್ಪು ಆರಿಸುವುದನ್ನು ರಾಜ್ಯದ ಕರಾವಳಿಯುದ್ದಕ್ಕೂ ಸ್ಥಳೀಯ ಜನ ಮಾಡುತ್ತಿರುತ್ತಾರೆ.

ಇದನ್ನೂ ಓದಿ: Bhatkal Tragedy: ಭಟ್ಕಳ ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ; ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ಘೋಷಣೆ

ಅದು ಅವರಿಗೆ ತಾತ್ಕಾಲಿಕ ಉದ್ಯೋಗವನ್ನು ಒದಗಿಸಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ, ನೀರಿನ ಪ್ರಮಾಣ ಇಳಿದಾಗ, ಈ ಕೆಲಸ ಮಾಡಲಾಗುತ್ತದೆ. ನದಿ ಬಂದು ಸಮುದ್ರವನ್ನು ಸೇರುವ ಅಳಿವೆ ಪ್ರದೇಶದಲ್ಲಿ ಹೆಚ್ಚಾಗಿ ಇದು ನಡೆಯುತ್ತದೆ. ಈ ಉದ್ಯೋಗ ಕೈಗೊಳ್ಳು ವವರಿಗೆ ಸಾಮಾನ್ಯವಾಗಿ ನದಿಯ ಉಬ್ಬರವಿಳಿತ, ಯಾವ ಹೊತ್ತಿನಲ್ಲಿ ಕಪ್ಪೆಚಿಪ್ಪು ಆರಿಸಲು ಇಳಿಯಬೇಕು ಎಂಬುದು ತಿಳಿದಿರುತ್ತದೆ. ಆದರೆ ಈ ಅಪಘಾತ ಹೇಗೆ ಸಂಭವಿಸಿತೋ ತಿಳಿಯದು.

ಅಪಘಾತದಲ್ಲಿ ಮೃತಪಟ್ಟವರ ಕುಟುಂ ಬಕ್ಕೆ ಪರಿಹಾರವನ್ನೇನೋ ನೀಡಲಾಗುತ್ತದೆ. ಆದರೆ ಕಳೆದು ಹೋದವರು ಮರಳಿ ಬರುವುದಿಲ್ಲ. ನಡುಸಮುದ್ರದ ಮೀನುಗಾರಿಕೆಗೆ ಇರುವ ಅಪಾಯಗಳಂತೆಯೇ ಕಪ್ಪೆಚಿಪ್ಪು ಆರಿಸುವು ದರಲ್ಲೂ ಅದರದೇ ಅಪಾಯ ಇದೆ ಎಂದು ಇದರಿಂದ ತಿಳಿದಂತಾಗಿದೆ. ಈ ಕಹಿ ಘಟನೆಯನ್ನು ಒಂದು ಸೂಚಿಯಾಗಿ ಪರಿಗಣಿಸಿ ಈ ಉದ್ಯೋಗದಲ್ಲಿ ತೊಡಗುವವರು ಮುಂದುವರಿಯಬೇಕಿದೆ.

ಸಾಮಾನ್ಯವಾಗಿ ಇವರು ಬಡವರು. ಕಪ್ಪೆಚಿಪ್ಪು ಹೆಕ್ಕುವ ಉದ್ಯೋಗದಲ್ಲಿ ತೊಡಗಿರು ವವರು ಯಾರು, ಅವರ ಬದುಕಿನ ಸ್ಥಿತಿಗತಿಗಳು ಏನು, ಅವರ ಬದುಕು ಹಾಗೂ ಕಾಯಕಕ್ಕೆ ನೆರವಾಗುವ ಏನನ್ನಾದರೂ ಮಾಡಲು ಸರಕಾರದಿಂದ ಸಾಧ್ಯವೇ- ಈ ಸಂಗತಿಗಳನ್ನು ಪರಿಶೀಲಿಸಬೇಕಾ ಗಿದೆ. ಹಾಗೆಯೇ ಇಂಥ ಅಪಾಯಕಾರಿ ಸನ್ನಿವೇಶಗಳ ಬಗ್ಗೆ ಎಚ್ಚರಿಕೆ ನೀಡುವ ಪ್ರಕ್ರಿಯೆಗೂ ಸರಕಾರ, ಸ್ಥಳೀಯಾಡಳಿತಗಳು ಚಾಲನೆ ನೀಡಬೇಕು.