ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻ3 ವೈಫಲ್ಯದ ಬಳಿಕ ವೈಭವ್‌ ಸೂರ್ಯವಂಶಿಗೆ ಕೊಕ್‌ʼ-ಕೋಚ್‌ ಗಂಭೀರ್‌ ಮೇಲೆ ರೇಗಿದ ಕೆ ಶ್ರೀಕಾಂತ್!

ಇಂಗ್ಲೆಂಡ್‌ನಲ್ಲಿ ಮೂರು ಟಿ20ಐ ಪಂದ್ಯಗಳ ವೈಫಲ್ಯದ ಬಳಿಕ ಯುವ ಆರಂಭಿಕ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿಯನ್ನು ಕೈ ಬಿಟ್ಟ ಭಾರತ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ವಿರುದ್ದ ಮಾಜಿ ಸೆಲೆಕ್ಟರ್‌ ಕೃಷ್ಣಮಾಚಾರಿ ಶ್ರೀಕಾಂತ್‌ ಕಿಡಿಕಾರಿದ್ದಾರೆ. ಕೇವಲ 3 ಪಂದ್ಯಗಳ ವೈಫಲ್ಯದ ಬಳಿಕ ಕೈ ಬಿಟ್ಟಿರುವುದು ಅವರ ವಿಶ್ವಾಸವನ್ನು ಕುಗ್ಗಿಸಿದಂತೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗೌತಮ್‌ ಗಂಭೀರ್‌ ವಿರುದ್ಧ ಗುಡುಗಿದ ಕೆ ಶ್ರೀಕಾಂತ್‌.

ನವದೆಹಲಿ: ಇಂಗ್ಲೆಂಡ್‌ ವಿರುದ್ಧ ಟಿ20ಐ ಸರಣಿಯಲ್ಲಿ (IND vs ENG) ವೈಭವ್ ಸೂರ್ಯವಂಶಿ (Vaibhav Sooryavanshi) ಅವರನ್ನು ನಿರ್ವಹಿಸಿದ ರೀತಿಗೆ ಸಂಬಂಧಿಸಿದಂತೆ ಕೋಚ್ ಗೌತಮ್ ಗಂಭೀರ್ ವಿರುದ್ಧ ಕೃಷ್ಣಮಾಚಾರಿ ಶ್ರೀಕಾಂತ್ (K Srikkanth) ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೈಭವ್ ಇಂಗ್ಲೆಂಡ್‌ನಲ್ಲಿ ಚೊಚ್ಚಲ ಪಂದ್ಯವಾಡಿದ್ದರು. ಆದರೆ ಮೊದಲ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾದ ಬಳಿಕ ಅವರನ್ನು ತಂಡದಿಂದ ಕೈಬಿಡಲಾಯಿತು.

ಬಳಿಕ ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮತ್ತೆ ಅವಕಾಶ ಪಡೆದ ವೈಭವ್, ತಕ್ಷಣವೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಅವರು ಕೇವಲ 19 ಎಸೆತಗಳಲ್ಲಿ ಸ್ಫೋಟಕ 50 ರನ್ ಸಿಡಿಸಿದರು. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಅರ್ಧಶತಕವನ್ನು ಬಾರಿಸಿದ್ದರು.

ಮೂರು ಪಂದ್ಯಗಳಲ್ಲಿ ವಿಫಲರಾದ ಕಾರಣಕ್ಕೆ ವೈಭವ್ ಅವರನ್ನು ಕೈಬಿಟ್ಟ ಭಾರತದ ನಿರ್ಧಾರ ತಪ್ಪಾಗಿತ್ತು ಎಂದು ಶ್ರೀಕಾಂತ್ ಹೇಳಿದ್ದಾರೆ. ಅಲ್ಲದೆ, ಈ ಕ್ರಮವು ವೈಭವ್ ಅವರ ಆತ್ಮವಿಶ್ವಾಸವನ್ನು ಕುಗ್ಗಿಸಿತು ಎಂದು ಅವರು ಗೌತಮ್ ಗಂಭೀರ್ ಅವರನ್ನು ಟೀಕಿಸಿದ್ದಾರೆ.

ರೋಹಿತ್‌ ಶರ್ಮಾ ನಿವೃತ್ತಿ ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ!

"ಅವರಿಗೆ ಸುಲಭವಾಗಿ ಆಡಬಹುದಾದ ಹಲವು ಶಾಟ್‌ಗಳಿವೆ. ಆದರೂ ಅವರು ಒಂದೇ ಒಂದು ಶಾಟ್‌ನ್ನು ಕ್ರಾಸ್-ಬ್ಯಾಟ್ ಮೂಲಕ ಆಡಲಿಲ್ಲ. ಈ ಹುಡುಗ ನಿಜಕ್ಕೂ ವಿಶೇಷ ಪ್ರತಿಭೆ. ಮೂರು ಪಂದ್ಯಗಳಲ್ಲಿ ವಿಫಲರಾದ ನಂತರ ವೈಭವ್ ಅವರ ಆತ್ಮವಿಶ್ವಾಸವನ್ನು ಕುಗ್ಗಿಸುವಂತೆ, ಗೌತಮ್ ಗಂಭೀರ್ ಯುವ ಆಟಗಾರನನ್ನು ಹೇಗೆ ಮೂರ್ಖತನದಿಂದ ಕೈಬಿಟ್ಟರು?" ಎಂದು ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಕುಟುಕಿದ್ದಾರೆ.

ವೈಭವ್‌ ಸೂರ್ಯವಂಶಿಯನ್ನು ಶ್ಲಾಘಿಸಿದ ಶ್ರೀಕಾಂತ್‌

ಇದರ ನಡುವೆ, ಕೆ ಶ್ರೀಕಾಂತ್ ಅವರು ವೈಭವ್ ಅವರ ಸಮರ್ಪಣಾ ಮನೋಭಾವವನ್ನೂ ಶ್ಲಾಘಿಸಿದರು. ಇಂಗ್ಲೆಂಡ್ ಪ್ರವಾಸದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗದ ಬಳಿಕವೂ ಅವರು ನೇರವಾಗಿ ರಾಜಸ್ಥಾನ್ ರಾಯಲ್ಸ್ ಶಿಬಿರಕ್ಕೆ ತೆರಳಿ ಅಭ್ಯಾಸ ಮುಂದುವರಿಸಿದ್ದರು ಎಂದು ಮಾಜಿ ಸೆಲೆಕ್ಟರ್‌ ತಿಳಿಸಿದ್ದಾರೆ.

IND vs ZIM 2nd T20I: ಟಾಸ್‌ ಗೆದ್ದು ಭಾರತ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ ಜಿಂಬಾಬ್ವೆ!

"ವೈಭವ್ ಸೂರ್ಯವಂಶಿ ಅವರ ಸಮರ್ಪಣಾ ಮನೋಭಾವಕ್ಕೆ ನಾನು ಗೌರವ ಸಲ್ಲಿಸುತ್ತೇನೆ. ಇಂಗ್ಲೆಂಡ್ ಸರಣಿಯ ಬಳಿಕ ಅವರು ಮನೆಗೆ ಹೋಗದೆ ನೇರವಾಗಿ ರಾಜಸ್ಥಾನ್ ರಾಯಲ್ಸ್ ಶಿಬಿರಕ್ಕೆ ತೆರಳಿದರು. ವಿಶ್ವದ ಎಲ್ಲರಿಗೂ ತಾನು ವಿಶೇಷ ಪ್ರತಿಭೆ ಎಂಬುದನ್ನು ಸಾಬೀತುಪಡಿಸಲು ಅವರು ಶಾರ್ಟ್ ಬಾಲ್‌ಗಳನ್ನು ಎದುರಿಸುವ ಬ್ಯಾಟಿಂಗ್‌ನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ," ಎಂದು ಶ್ರೀಕಾಂತ್ ಹೇಳಿದ್ದಾರೆ.

"250ರ ಸ್ಟ್ರೈಕ್ ರೇಟ್‌ನಲ್ಲಿ ಅವರು ಎಷ್ಟು ಸುಲಭವಾಗಿ ರನ್ ಗಳಿಸುತ್ತಾರೆ ಎಂಬುದು ಅಸಾಧಾರಣ ಸಂಗತಿ. ಸಾಮಾನ್ಯವಾಗಿ ಮೂರು ಪಂದ್ಯಗಳಲ್ಲಿ ವಿಫಲರಾದ ಬಳಿಕ ಇತರ ಆಟಗಾರರು ಭಾರತ ತಂಡದಲ್ಲಿನ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಿಂಗಲ್ಸ್ ಮತ್ತು ಡಬಲ್ಸ್‌ಗಳ ಮೂಲಕ ಸುರಕ್ಷಿತ ಆಟಕ್ಕೆ ಮುಂದಾಗುತ್ತಿದ್ದರು. ಆದರೆ ವೈಭವ್ ಯಾವುದೇ ಪರಿಣಾಮಗಳ ಬಗ್ಗೆ ಚಿಂತಿಸದೆ ನಿರ್ಭೀತಿಯಿಂದ ಆಡಿದರು. 18 ಎಸೆತಗಳಲ್ಲಿ 50 ರನ್ ಗಳಿಸುವುದು ಈಗ ಅವರಿಗೆ ಮಕ್ಕಳ ಆಟದಂತಾಗಿದೆ. ಅದೇ ಅವರ ಶ್ರೇಷ್ಠತೆ," ಎಂದು ಅವರು ಶ್ಲಾಘಿಸಿದರು.