ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿರಾಟ್‌ ಕೊಹ್ಲಿ ಅಲ್ಲವೇ ಅಲ್ಲ! ಭಾರತ ತಂಡದಲ್ಲಿ ಸ್ಲೆಡ್ಜಿಂಗ್‌ ಶುರು ಮಾಡಿದ್ದು ಯಾರೆಂದು ತಿಳಿಸಿದ ದೀಪ್‌ ದಾಸ್‌ಗುಪ್ತಾ!

ಭಾರತ ತಂಡದಲ್ಲಿ ಮಾಜಿ ನಾಯಕ ಸೌರವ್ ಗಂಗೂಲಿ ಸ್ಲೆಡ್ಜಿಂಗ್‌ ಎದುರಿಸುವ ವಿಧಾನವನ್ನೇ ಬದಲಿಸಿದ್ದರು ಎಂದು ಮಾಜಿ ಕ್ರಿಕೆಟಿಗ ದೀಪ್‌ ದಾಸ್‌ಗುಪ್ತಾ ನೆನಪಿಸಿಕೊಂಡಿದ್ದಾರೆ. ಗಂಗೂಲಿ ನಾಯಕತ್ವದಲ್ಲಿ ಭಾರತ ತಂಡ ಎದುರಾಳಿ ಆಟಗಾರರ ಸ್ಲೆಡ್ಜಿಂಗ್‌ಗೆ ಸುಮ್ಮನೆ ಪ್ರತಿಕ್ರಿಯಿಸದೆ, ಅವರಿಗೂ ತಿರುಗೇಟು ನೀಡಲು ಆರಂಭಿಸಿತು ಎಂದು ಅವರು ಹೇಳಿದ್ದಾರೆ.

ಭಾರತ ತಂಡದಲ್ಲಿ ಸ್ಲೆಡ್ಜಿಂಗ್‌ ಆರಂಭವಾಗಿದ್ದೇಗೆಂದು ತಿಳಿಸಿದ ದಾಸ್‌ಗುಪ್ತಾ.

ನವದೆಹಲಿ: ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ನಾಯಕತ್ವದಲ್ಲಿ ಭಾರತ ತಂಡದ ಮನೋಭಾವದಲ್ಲಿ ದೊಡ್ಡ ಬದಲಾವಣೆ ಕಂಡುಬಂದಿತ್ತು ಎಂದು ಭಾರತದ ಮಾಜಿ ಕ್ರಿಕೆಟಿಗ ದೀಪ್ ದಾಸ್‌ಗುಪ್ತಾ (Deep Dasgupta) ಹೇಳಿದ್ದಾರೆ. ಎದುರಾಳಿ ಆಟಗಾರರು ಸ್ಲೆಡ್ಜಿಂಗ್ ಮಾಡಿದರೆ ಅದನ್ನು ಸಹಿಸಿಕೊಂಡು ಸುಮ್ಮನಿರದೆ, ಅವರಿಗೂ ತಿರುಗೇಟು ನೀಡಲು ತಂಡ ಆರಂಭಿಸಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.

ದೂರದರ್ಶನದ ‘ದಿ ಗ್ರೇಟ್ ಇಂಡಿಯನ್ ಕ್ರಿಕೆಟ್ ಶೋ’ನಲ್ಲಿ ಮಾತನಾಡಿದ ಅವರು, ಗಂಗೂಲಿ ನಾಯಕತ್ವದ ಅವಧಿಯಲ್ಲಿ ಭಾರತ ತಂಡದ ಸಂಸ್ಕೃತಿ ಮತ್ತು ಮನೋಭಾವ ಹೇಗೆ ಬದಲಾಯಿತು ಎಂಬುದನ್ನು ವಿವರಿಸಿದ್ದಾರೆ. ದಾಸ್‌ಗುಪ್ತಾ ಅವರು ಭಾರತ ಪರ 8 ಟೆಸ್ಟ್ ಮತ್ತು 5 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಗಂಗೂಲಿ ಒಟ್ಟು 196 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು, 97 ಪಂದ್ಯಗಳಲ್ಲಿ ಗೆಲುವು, 79ರಲ್ಲಿ ಸೋಲು ಮತ್ತು 15 ಪಂದ್ಯಗಳಲ್ಲಿ ಡ್ರಾ ದಾಖಲಿಸಿದ್ದಾರೆ. ಟೆಸ್ಟ್ ನಾಯಕನಾಗಿ 49 ಪಂದ್ಯಗಳಲ್ಲಿ 21 ಗೆಲುವು, 13 ಸೋಲು ಮತ್ತು 15 ಡ್ರಾಗಳನ್ನು ದಾಖಲಿಸಿದ್ದರು. ತಮ್ಮ ನಂತರ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರಂತಹ ನಾಯಕರು ಭಾರತ ಟೆಸ್ಟ್ ತಂಡವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಅಗತ್ಯವಾದ ತಂಡದ ಬುನಾದಿಯನ್ನು ಗಂಗೂಲಿ ಹಾಕಿಕೊಟ್ಟಿದ್ದರು.

ಭಾರತ ಅಂಡರ್‌-19 ತಂಡದಲ್ಲಿ ವೈಭವ್‌ ಸೂರ್ಯವಂಶಿ ಸ್ಥಾನ ಕಳೆದುಕೊಳ್ಳಲು ಕಾರಣವೇನು?

ವಿದೇಶ ಪ್ರವಾಸಗಳಲ್ಲಿ ನಿರ್ಭೀತ ಮತ್ತು ಆಕ್ರಮಣಕಾರಿ ಆಟ ಆಡುತ್ತಿರುವ ಇಂದಿನ ಭಾರತ ತಂಡದ ಮನೋಭಾವದ ಮೂಲ ಗಂಗೂಲಿ ಯುಗದಲ್ಲೇ ಆರಂಭವಾಗಿತ್ತು ಎಂದು ದಾಸ್‌ಗುಪ್ತ ಹೇಳಿದ್ದಾರೆ. 2001ರ ತಂಡ ಮತ್ತು 2003-04ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ತಂಡದ ನಡುವಿನ ಮನೋಭಾವದ ಬದಲಾವಣೆ ಸ್ಪಷ್ಟವಾಗಿ ಕಾಣುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

“ಗಂಗೂಲಿ ನಾಯಕತ್ವದಲ್ಲಿ ಯಾರಾದರೂ ಸ್ಲೆಡ್ಜಿಂಗ್ ಮಾಡಿದರೆ, ನಾವು ಕೂಡ ಅವರಿಗೆ ತಿರುಗೇಟು ನೀಡಲು ಆರಂಭಿಸಿದೆವು. ಹಿಂದೆ ಅದನ್ನು ನಮ್ಮ ಆಟದ ಮೇಲೆ ಕೇಂದ್ರೀಕರಿಸುತ್ತಿದ್ದೆವು. ಆದರೆ ನಂತರ ಅವರಿಗೆ ತಿರುಗೇಟು ನೀಡುವುದನ್ನೂ ಆರಂಭಿಸಿದೆವು. ಅವರ ಅಡ್ಡಹೆಸರು ‘ಮಹಾರಾಜ’. ಹಾಗಾಗಿ ‘ನಾನೇ ರಾಜ’ ಎಂಬ ಮನೋಭಾವ ಅವರಲ್ಲಿತ್ತು. ಅದು ತಂಡದ ಮೇಲೂ ಪರಿಣಾಮ ಬೀರಿತು,” ಎಂದು ದಾಸ್‌ಗುಪ್ತಾ ವಿವರಿಸಿದ್ದಾರೆ.

“ನಾವು ಅದನ್ನೇ ಮುಂದುವರಿಸಿದ್ದರೂ, ಅದನ್ನು ಹೊರಗೆ ವ್ಯಕ್ತಪಡಿಸಲೂ ಆರಂಭಿಸಿದೆವು. ಆಸ್ಟ್ರೇಲಿಯಾದಲ್ಲಿ ನನ್ನ ಮೊದಲ ಪ್ರವಾಸ ಮತ್ತು 2003ರ ಕೊನೆಯ ಪ್ರವಾಸದ ನಡುವೆ ಈ ಬದಲಾವಣೆ ಸ್ಪಷ್ಟವಾಗಿ ಕಾಣಿಸಿತ್ತು. ಹಿಂದೆ ಎಲ್ಲವೂ ನಿಯಂತ್ರಿತವಾಗಿತ್ತು ಮತ್ತು ನಮ್ಮೊಳಗೇ ಇರುತ್ತಿತ್ತು. ಆದರೆ 2003ರ ವೇಳೆಗೆ ಯಾರಾದರೂ ಏನಾದರೂ ಹೇಳಿದರೆ, ನಾವು ಕೂಡ ಅವರಿಗೆ ತಿರುಗೇಟು ನೀಡುತ್ತಿದ್ದೆವು,” ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಸಿ ಕ್ರಿಕೆಟ್‌ ಅಭಿಮಾನಿಗಳ ಹೃದಯ ಗೆದ್ದ ಜಾವಗಲ್‌ ಶ್ರೀನಾಥ್‌!

ಗಂಗೂಲಿ ನಾಯಕತ್ವದ ಪ್ರಮುಖ ಸಾಧನೆಗಳು

ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ತಂಡ ಹಲವು ಪ್ರಮುಖ ಸಾಧನೆಗಳನ್ನು ಮಾಡಿತ್ತು. 2003ರ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ರನ್ನರ್‌ಅಪ್ ಆಗಿತ್ತು. ಇಂಗ್ಲೆಂಡ್‌ನಲ್ಲಿ ನಡೆದ ಪ್ರಸಿದ್ಧ ನ್ಯಾಟ್‌ವೆಸ್ಟ್ ಟ್ರೋಫಿಯನ್ನು ಭಾರತ ಗೆದ್ದಿತ್ತು. 2002ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೀಲಂಕಾ ಜೊತೆ ಭಾರತ ಜಂಟಿ ಚಾಂಪಿಯನ್ ಆಗಿತ್ತು. ಫೈನಲ್ ಪಂದ್ಯ ಮಳೆಯಿಂದ ರದ್ದಾದ ಹಿನ್ನೆಲೆಯಲ್ಲಿ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗಿತ್ತು.

ಅವರ ನಾಯಕತ್ವದಲ್ಲಿ ಭಾರತ ತವರಿನಲ್ಲಿ 2001ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಸರಣಿ ಗೆಲುವು ಸಾಧಿಸಿತ್ತು. 2002ರಲ್ಲಿ ಲೀಡ್ಸ್ ಮತ್ತು 2003ರಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಾಖಲಿಸಿದ ಗೆಲುವುಗಳೂ ಗಂಗೂಲಿ ನಾಯಕತ್ವದ ಪ್ರಮುಖ ಸಾಧನೆಗಳಾಗಿವೆ.