ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻತಮ್ಮ ಪಾತ್ರವನ್ನು ಪೂರ್ಣಗೊಳಿಸದ ಆಟಗಾರರನ್ನು ಬ್ಯಾನ್‌ ಮಾಡಿʼ: ಬಿಸಿಸಿಐಗೆ ಸುನೀಲ್‌ ಗವಾಸ್ಕರ್‌ ಆಗ್ರಹ!

IPL 2026: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಕಠಿಣ ನಿಯಮವನ್ನು ರೂಪಿಸಬೇಕೆಂದು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ತಿಳಿಸಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ಸಹಿ ಹಾಕುವ ಆಟಗಾರರು ತಮ್ಮ ಪಾತ್ರವನ್ನು ಪರಿಪೂರ್ಣಗೊಳಿಸಿಲ್ಲವಾದರೆ ಅಂಥಾ ಆಟಗಾರರನ್ನು ಬ್ಯಾನ್‌ ಮಾಡಬೇಕೆಂದು ಗವಾಸ್ಕರ್‌ ಆಗ್ರಗಿಸಿದ್ದಾರೆ.

ಸುನೀಲ್‌ ಗವಾಸ್ಕರ್‌ ಬಿಸಿಸಿಐಗೆ ಸಲಹೆ.

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಆಟಗಾರರ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (BCCI) ಕಠಿಣ ನಿಯಮಗಳನ್ನು ರೂಪಿಸಬೇಕೆಂದು ಭಾರತೀಯ ಕ್ರಿಕೆಟ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ (Sunil Gavaskar) ಆಗ್ರಹಿಸಿದ್ದಾರೆ. ಏಕೆಂದರೆ ಐಪಿಎಲ್‌ ಟೂರ್ನಿಯಲ್ಲಿ ವಿವಿಧ ಫ್ರಾಂಚೈಸಿಗಳ ಪರ ಸಹಿ ಹಾಕುವ ಆಟಗಾರರು ತಮ್ಮ-ತಮ್ಮ ಪಾತ್ರಗಳನ್ನು ಪರಿಪೂರ್ಣಗೊಳಿಸುವಲ್ಲಿ ವಿಫಲರಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಬಿಸಿಸಿಐಗೆ ಮಾಜಿ ನಾಯಕ ಬಿಸಿಸಿಐಗೆ ಸಲಹೆ ನೀಡಿದ್ದಾರೆ.

ಹರಾಜಿನಲ್ಲಿ ವಿವಿಧ ತಂಡಗಳಿಗೆ ಸೇರುವ ಆಟಗಾರರು ಕೊನೆಯ ಹಂತದಲ್ಲಿ ಬೇರೆ ಬೇರೆ ಕಾರಣಗಳನ್ನು ನೀಡಿ ಟೂರ್ನಿಯಿಂದ ಹೊರ ನಡೆಯುತ್ತಾರೆ. ಕೆಲವು ಆಟಗಾರರು ಎಷ್ಟು ದೊಡ್ಡ ಮೊತ್ತ ಪಡೆದರೂ ಟೂರ್ನಿಯಲ್ಲಿ ತಮ್ಮ ಪಾತ್ರವನ್ನು ಪರಿಪೂರ್ಣಗೊಳಿಸುವಲ್ಲಿ ವಿಫಲರಾಗುತ್ತಾರೆ. ಅದರಂತೆ ಕೆಕೆಆರ್‌ ಪರ ಆಡುತ್ತಿರುವ ಕ್ಯಾಮೆರಾನ್‌ ಗ್ರೀನ್‌ ಅವರು 25 ಕೋಟಿ ರು. ಗಳನ್ನು ಪಡೆದಿದ್ದಾರೆ. ಆದರೆ, ಅವರು ಐಪಿಎಲ್‌ ಟೂರ್ನಿಯಲ್ಲಿ ಬೌಲ್‌ ಮಾಡದಂತೆ ಕ್ರಿಕೆಟ್‌ ಆಸ್ಟ್ರೇಲಿಯಾ ನಿರ್ಬಂಧ ಹೇರಿದೆ. ಅದೂ ಅಲ್ಲದೆ ಅವರು ಕಳೆದ ಮೂರೂ ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದಾರೆ.

IPL 2026 ಟೂರ್ನಿಯಿಂದ ಹೊರಗುಳಿಯಿರಿ: ಎಂಎಸ್‌ ಧೋನಿಗೆ ಆರ್‌ ಅಶ್ವಿನ್‌ ಮನವಿ!

ಸ್ಪೋರ್ಟ್ಸ್‌ ಸ್ಟಾರ್‌ನಲ್ಲಿ ಬರೆದ ತಮ್ಮ ಅಂಕಣದಲ್ಲಿ ಸುನೀಲ್‌ ಗವಾಸ್ಕರ್‌, "ಒಬ್ಬ ಬೌಲರ್ ಒಂದು ಪಂದ್ಯದಲ್ಲಿ ಕೇವಲ ನಾಲ್ಕು ಓವರ್‌ಗಳಷ್ಟೇ ಬೌಲ್‌ ಮಾಡಬಹುದು. ಒಂದು ಪಂದ್ಯದಲ್ಲಿ ಅದನ್ನು ಮಾಡದಿರಲು ಅವರಿಗೆ ತಡೆಯೇನು? ಟೂರ್ನಿಯ ಆರಂಭಿಕ ದಿನದಿಂದ ಫಿಟ್ ಆಗದ ಆಟಗಾರನು ವಿಥ್‌ಡ್ರಾ ಮಾಡಿಕೊಳ್ಳುವ ಮೂಲಕ ಫ್ರಾಂಚೈಸಿಗೆ ಯಾರಾದರೂ ಇತರರನ್ನು ಆಯ್ಕೆ ಮಾಡುವ ಅವಕಾಶ ನೀಡುವುದು ನ್ಯಾಯಸಮ್ಮತ. ಆದರೆ, ಫ್ರಾಂಚೈಸಿ ತಡವಾಗಿ ಇದನ್ನುಹೇಳುವುದು ಉತ್ತಮವಲ್ಲ. ಬಹುಶಃ ಮೊದಲ ಪಂದ್ಯದಿಂದ ಲಭ್ಯವಿಲ್ಲದ ಆಟಗಾರರಿಗೆ ಕಠಿಣ ನಿಯಮವನ್ನು ಪರಿಚಯಿಸಬೇಕು. ಫ್ರಾಂಚೈಸಿಗಳಿಗೆ ಪೂರ್ಣ ಬದ್ಧತೆ ಕೇಳಲು ಹಕ್ಕಿದೆಯಲ್ಲವೇ?” ಎಂದು ಪ್ರಶ್ನೆ ಮಾಡಿದ್ದಾರೆ.

ಕ್ರಿಕೆಟ್‌ ಆಸ್ಟ್ರೇಲಿಯಾ ಕ್ಯಾಮೆರಾನ್‌ ಗ್ರೀನ್‌ಗೆ ಬೌಲ್‌ ಮಾಡಲು ಅವಕಾಶ ನೀಡಲಾಗಿಲ್ಲ. ಆ ಮೂಲಕ ಮುಂದಿನ ಅಂತಾರಾಷ್ಟ್ರೀಯ ಸರಣಿಗಳಿಗೆ ಯಾವುದೇ ಅಪಾಯವನ್ನು ತಪ್ಪಿಸಿಕೊಳ್ಳುವುದು ಇದರ ಉಪಾಯವಾಗಿದೆ. ಮತ್ತೊಂದು ಕಡೆ ಲಖನೌ ಸೂಪರ್‌ ಜಯಂಟ್ಸ್‌ ತಂಡದ ಮಿಚೆಲ್‌ ಮಾರ್ಷ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡದ ಕೂಪರ್‌ ಕನೋಲಿ ಅವರು ಕೂಡ ಆಲ್‌ರೌಂಡರ್‌ಗಳಾಗಿ ತಮ್ಮ ತಂಡಗಳ ಪರ ಆಡುವುದಕ್ಕೂ ಕ್ರಿಕೆಟ್‌ ಆಸ್ಟ್ರೇಲಿಯಾ ಒಪ್ಪಿಗೆ ನೀಡಿಲ್ಲ.

IPL 2026: ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ತುಂಬಾ ಬದಲಾಗಿದೆ ಎಂದ ದೇವದತ್‌ ಪಡಿಕ್ಕಲ್‌!

ಕ್ಯಾಮೆರಾನ್‌ ಗ್ರೀನ್‌ ಅವರಿಗೆ ಕೋಲ್ಕತಾ ಫ್ರಾಂಚೈಸಿ ಮಿನಿ ಹರಾಜಿನಲ್ಲಿ 25.20 ಕೋಟಿ ರು. ಗಳನ್ನು ನೀಡಿದೆ. ಆ ಮೂಲಕ 2026ರ ಐಪಿಎಲ್‌ ಟೂರ್ನಿಗೂ ಮುನ್ನ ನಿವೃತ್ತಿ ಘೋಷಿಸಿದ ಆಂಡ್ರೆ ರಸೆಲ್‌ ಅವರ ಸ್ಥಾನಕ್ಕೆ ಕೆಕೆಆರ್‌, ಕ್ಯಾಮೆರಾನ್‌ ಗ್ರೀನ್‌ ಅವರನ್ನು ಖರೀದಿಸಿದೆ. ಆದರೆ, ಗ್ರೀನ್‌ ಆಲ್‌ರೌಂಡರ್‌ ಆಗಿ ಕಳೆದ ಮೂರು ಪಂದ್ಯಗಳಲ್ಲಿ ಆಡಲಿಲ್ಲ. ಕೇವಲ ಬ್ಯಾಟ್ಸ್‌ಮನ್‌ ಆಗಿ ಆಡಿದರೂ ಕೇವಲ 24 ರನ್‌ಗಳಿಗೆ ಸೀಮಿತರಾಗಿದ್ದಾರೆ. ಇದು ಕೆಕೆಆರ್‌ ಭಾರಿ ಭಾರಿ ಹಿನ್ನಡೆಯಾಗಿದೆ.