ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಆರ್‌ಸಿಬಿ ಕ್ಯಾಂಪ್‌ನಲ್ಲಿ ಕಠಿಣ ಪರಿಶ್ರಮಪಡುವ ವ್ಯಕ್ತಿಯನ್ನು ಹೆಸರಿಸಿದ ವೆಂಕಟೇಶ ಅಯ್ಯರ್!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಕೋಚಿಂಗ್‌ ಸಿಬ್ಬಂದಿಯನ್ನು ಆಲ್‌ರೌಂಡರ್‌ ವೆಂಕಟೇಶ ಅಯ್ಯರ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಬ್ಯಾಟಿಂಗ್‌ ಕೋಚ್‌ ದಿನೇಶ್‌ ಕಾರ್ತಿಕ್‌ ಅವರು ಆರ್‌ಸಿಬಿ ಕ್ಯಾಂಪ್‌ನಲ್ಲಿ ಸಾಕಷ್ಟು ಕಠಿಣ ಪರಿಶ್ರಮಪಡುತ್ತಾರೆಂದು ಹೇಳಿದ್ದಾರೆ.

ಆರ್‌ಸಿಬಿ ಕ್ಯಾಂಪ್‌ನಲ್ಲಿ ಕಠಿಣ ಪರಿಶ್ರಮ ಪಡುವ ವ್ಯಕ್ತಿಯನ್ನು ಆರಿಸಿದ ಅಯ್ಯರ್‌.

ನವದೆಹಲಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಚಾಂಪಿಯನ್‌ ಆದ ಬಳಿಕ ತಂಡದ ಕೋಚಿಂಗ್‌ ಸಿಬ್ಬಂದಿಯನ್ನು ಆಲ್‌ರೌಂಡರ್‌ ವೆಂಕಟೇಶ್‌ ಅಯ್ಯರ್‌(Venkatesh Iyer) ಗುಣಗಾನ ಮಾಡಿದ್ದಾರೆ. ಆರ್‌ಸಿಬಿ ಕ್ಯಾಂಪ್‌ನಲ್ಲಿ ಹೆಡ್‌ ಕೋಚ್‌ ಆಂಡಿ ಫ್ಲವರ್‌, ಬ್ಯಾಟಿಂಗ್‌ ಕೋಚ್‌ ದಿನೇಶ ಕಾರ್ತಿಕ್‌ ಸೇರಿದಂತೆ ಎಲ್ಲರೂ ನಮಗಾಗಿ ಸಾಕಷ್ಟು ಕಠಿಣ ಪರಿಶ್ರಮ ಪಟ್ಟಿದ್ದಾರೆ. ಆರ್‌ಸಿಬಿಯ ಈ ಗೆಲುವಿನ ಶ್ರೇಯ ಅವರಿಗೆ ಸಲ್ಲಬೇಕೆಂದು ಅವರು ತಿಳಿಸಿದ್ದಾರೆ.

ಈ ಸೀಸನ್‌ನಲ್ಲಿ ಆರ್‌ಸಿಬಿ ಪರ ವೆಂಕಟೇಶ ಅಯ್ಯರ್‌ ಆಡಿದ್ದು ಕೇವಲ 7 ಪಂದ್ಯಗಳಾದರೂ ಅವರು ಪ್ರಭಾವ ಬೀರಿದ್ದಾರೆ. 7 ಕೋಟಿ ರು. ಗಳ ಮೂಲಕ ಆರ್‌ಸಿಬಿಗೆ ಬಂದಿದ್ದ ವೆಂಕಟೇಶ ಅಯ್ಯರ್‌, ಟೂರ್ನಿಯ ಮೊದಲ ಅವಧಿಯಲ್ಲಿ ಬೆಂಚ್‌ ಕಾದಿದ್ದರು. ಆದರೆ, ಫಿಲ್‌ ಸಾಲ್ಟ್‌ ಹಾಗೂ ಜೇಕಬ್‌ ಬೆಥೆಲ್‌ ಗಾಯಕ್ಕೆ ತುತ್ತಾದ ಬಳಿಕ ವೆಂಕಟೇಶ ಅಯ್ಯರ್‌ಗೆ ಅಗ್ರ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಅವಕಾಶ ಲಭಿಸಿತು. ಅವರು ಆಡಿದ 7 ಇನಿಂಗ್ಸ್‌ಗಳಿಂದ 209 ರನ್‌ಗಳನ್ನು ಕಲೆ ಹಾಕಿದ್ದರು. ಅದರಲ್ಲಿಯೂ ವಿಶೇಷವಾಗಿ ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ 40 ಎಸೆತಗಳಲ್ಲಿ ಅಜೇಯ 73 ರನ್‌ಗಳನ್ನು ದಾಖಲಿಸಿದ್ದರು.

IPL 2026: ವೈಭವ್‌ ಸೂರ್ಯವಂಶಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಸುನೀಲ್‌ ಗವಾಸ್ಕರ್‌!

ಎರಡನೇ ಐಪಿಎಲ್‌ ಟ್ರೋಫಿ ಗೆಲುವಿನ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ವೆಂಕಟೇಶ್‌ ಅಯ್ಯರ್‌, ಆರ್‌ಸಿಬಿಯ ಹೆಡ್‌ ಕೋಚ್‌ ಆಂಡಿ ಫ್ಲವರ್‌ ಮತ್ತು ಸಹಾಯಕ ಸಿಬ್ಬಂದಿಯನ್ನು ಮುಕ್ತಕಂಠದಿಂದ ಗುಣಗಾನ ಮಾಡಿದರು.

"ಉತ್ತಮ, ಉತ್ತಮ. ಪಾತ್ರದ ಸ್ಪಷ್ಟತೆ ಮತ್ತು ಸಂವಹನದ ವಿಷಯದಲ್ಲಿ ನಾನು ಇಲ್ಲಿಯವರೆಗೂ ನೋಡಿದ ಅತ್ಯುತ್ತಮ ಸಹಾಯಕ ಸಿಬ್ಬಂದಿ. ಆಟಗಾರರನ್ನು ನಿರ್ವಹಿಸುವುದು ಹಾಗೂ ಸನ್ನಿವೇಶಗಳನ್ನು ನಿರ್ವಹಿಸುವುದು. ಇದರ ಜತೆಗೆ ಆಟಗಾರರೇ ನಿರ್ಧಾರ ತೆಗೆದುಕೊಳ್ಳುವಂತೆ ಇವರು ಮಾಡುತ್ತಾರೆ," ಎಂದು ತಿಳಿಸಿದ್ದಾರೆ.

IPL 2026: ಈ ಬಾರಿಯ ಐಪಿಎಲ್‌ನಲ್ಲಿ ಸೃಷ್ಟಿಯಾದ 5 ಪ್ರಮುಖ ದಾಖಲೆಗಳಿವು

ಆರ್‌ಸಿಬಿ ಕ್ಯಾಂಪ್‌ನಲ್ಲಿ ದಿನೇಶ ಕಾರ್ತಿಕ್‌ ಕಠಿಣ ಪರಿಶ್ರಮದ ವ್ಯಕ್ತಿ

31ರ ವಯಸ್ಸಿನ ವೆಂಕಟೇಶ್, ಆರ್‌ಸಿಬಿಯ ಬ್ಯಾಟಿಂಗ್ ಕೋಚ್ ಮತ್ತು ಮಾರ್ಗದರ್ಶಕ ದಿನೇಶ್ ಕಾರ್ತಿಕ್ ಅವರನ್ನು ತಂಡದಲ್ಲಿ ಅತ್ಯಂತ ಕಠಿಣ ಪರಿಶ್ರಮದ ವ್ಯಕ್ತಿ ಎಂದು ಕರೆದಿದ್ದಾರೆ. ಕಾರ್ತಿಕ್ ಅವರ ವಿವರಗಳಿಗೆ ಗಮನ ಮತ್ತು ನೆಟ್ ಸೆಷನ್‌ಗಳಲ್ಲಿ ಆಟಗಾರರೊಂದಿಗೆ ನಿರಂತರ ಸಂಭಾಷಣೆಗಳಿಂದ ವೆಂಕಟೇಶ್ ಅಯ್ಯರ್ ವಿಶೇಷವಾಗಿ ಪ್ರಭಾವಿತರಾಗಿದ್ದಾರೆ.

ಅತ್ಯುತ್ತಮ ತರಬೇತಿ ಸಲಹೆಗಳನ್ನು ನೀಡಿದ್ದಕ್ಕಾಗಿ ಭಾರತದ ಮಾಜಿ ವಿಕೆಟ್ ಕೀಪರ್‌ಗೆ ಇತ್ತೀಚೆಗೆ ಫಿಲ್‌ ಸಾಲ್ಟ್‌ ಕೃತಜ್ಞತೆ ಸಲ್ಲಿಸುತ್ತಿರುವ ವಿಡಿಯೊ ಹೊರಬಂದಿತು. ಇದು ಡ್ರೆಸ್ಸಿಂಗ್ ಕೋಣೆಯಲ್ಲಿ ದಿನೇಶ್ ಕಾರ್ತಿಕ್ ಅವರ ಪ್ರಭಾವ ಮತ್ತು ಆಟಗಾರರಲ್ಲಿ ಅವರು ಎಷ್ಟು ವಿಶ್ವಾಸಾರ್ಹರು ಎಂಬುದರ ಬಗ್ಗೆ ಬಹಳಷ್ಟು ಹೇಳುತ್ತದೆ.

IPL 2026: ಆರ್‌ಸಿಬಿಯ ಎರಡನೇ ಕಪ್‌ ಗೆಲುವನ್ನು ಸಂಭ್ರಮಿಸಿದ ಪಾಕಿಸ್ತಾನಿ ಫ್ಯಾನ್ಸ್‌! ವಿಡಿಯೊ

"ನಮ್ಮ ಲಾಜಿಸ್ಟಿಕ್ಸ್ ಹುಡುಗರನ್ನು ಹೊರತುಪಡಿಸಿ, ಅತ್ಯಂತ ಶ್ರಮಶೀಲ ವ್ಯಕ್ತಿ ಯಾರು ಎಂದು ನಾನು ಸೂಚಿಸಬೇಕಾದರೆ, ಅದು ದಿನೇಶ್ ಕಾರ್ತಿಕ್ ಎಂದು ನಾನು ಭಾವಿಸುತ್ತೇನೆ. ಹೊರಗಿನ ನೆಟ್ಸ್‌ನಲ್ಲಿ ಹೋಗುವುದು, ಬ್ಯಾಟರ್‌ಗಳೊಂದಿಗೆ ಕೆಲಸ ಮಾಡುವುದು, ನಂತರ ಸೆಂಟರ್ ನೆಟ್ಸ್‌ಗೆ ಹಿಂತಿರುಗುವುದು, ಬ್ಯಾಟರ್‌ಗಳೊಂದಿಗೆ ಮಾತನಾಡುವುದು, ಡ್ರಿಲ್‌ಗಳಿಗಾಗಿ ಅವರ ಮೇಲೆ ಚೆಂಡುಗಳನ್ನು ಎಸೆಯುವುದು... ಡಿಕೆಗಿಂತ ಹೆಚ್ಚು ಶ್ರಮವಹಿಸುವ ಬ್ಯಾಟಿಂಗ್ ಕೋಚ್ ಅನ್ನು ನಾನು ಎಂದಿಗೂ ನೋಡಿಲ್ಲ," ಅಯ್ಯರ್ ಬಣ್ಣಿಸಿದ್ದಾರೆ.